Wednesday, October 12, 2011

ಮಣ್ಣಿನ ಮೂರ್ತಿ

ಒಂದು ಮಣ್ಣಿನ ಮೂರ್ತಿ
ಮೂರ್ತಿಯಲಿ ಒಂದು ಅಕ್ಷರ
ಪರಿಸೀಲನೆ ನಡೆಯಿತು
ಬಂದರು ಜ್ಞಾನಿ ವಿಧ್ವಾಂಸರು

ಒಬ್ಬರು ಇದು ಶಿವನ ಮೂರ್ತಿ
ಬರೆದ ಅಕ್ಷರ ಓಂ
ಇನ್ನೊಬ್ಬರು ಇದು ಅಲ್ಲಾನ ಚಿನ್ಹೆ
ಬರೆದ ಅಕ್ಷರ ಅಲ್ಲಾ 
ಮತ್ತೊಬ್ಬರು ಇದು ಜೆಸಸ್ ಅವರ ಮೂರ್ತಿ
ಬರೆದ ಅಕ್ಷರ ಕ್ರಾಸ್
ಹೀಗೆಯ ಹಲವು ಧರ್ಮ ಗುರುಗಳು ಬಂದರು
ತನ್ನ ಧರ್ಮ ಅನುಸಾರ ಮತ ಇಟ್ಟರು

ಒಂದು ಚೆಂಡು ಹಾರುತಾ ಬಂತು
ಮೂರ್ತಿಗೆ ತಾಗಿ ಮೂರ್ತಿ ಒಡೆದು ಹೋಯಿತು
ಮಣ್ಣ ಮೂರ್ತಿ ಮಣ್ಣು ಪಾಲಾಯಿತು
ಎಲ್ಲರು ಸ್ತಬ್ದರಾದರು
ಮಗು ಒಂದು ಬಂದು ಕೇಳಿದ
"ನನ್ನ ಚೆಂಡು ನೋಡಿದಿರಾ"
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...