Tuesday, October 4, 2011

ವಿಷ ಅಮೃತ

ಕಾಣದ ಕುರುಡರ
ಜಗ ಕತ್ತಲೆ
ಕಾಣುವ ಕುರುಡರ
ಮನಸ್ಸು ಬೆತ್ತಲೆ

ಮುದ್ದು ಮೂರ್ಖರ 
ದಯನೀಯ ಸ್ಥಿತಿ
ಮೂರ್ಖ ಜಾಣರ
ಗಂಭೀರ ಸ್ಥಿತಿ

ಶೀಘ್ರ  ಕೋಪಿಯ
ಕೋಪ ಕ್ಷಣ ಕಾಲ 
ಉಗ್ರ ಕೋಪಿಯ
ಕೋಪ ಕೆಟ್ಟ ಕಾಲ

ಸಜ್ಜನರು ಕೊಟ್ಟ ಭಾಷೆ
ಕೊನೆಯ ಉಸಿರು ತನಕ
ದುರ್ಜನರು ಕೊಟ್ಟ ಭಾಷೆ
ಮರಳಿ ಹೋಗುವ ತನಕ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...