Saturday, October 15, 2011

ಮನಸ್ಸು

ಸುತ್ತ ಮುತ್ತ ಯಾರೂ ಇಲ್ಲ
ಮುನಿದಿದೆ ನನ್ನ ಕನಸು
ಭಾವನೆಗಳ ಸಂಚಾರವಿಲ್ಲ
ಅಳುತ್ತಿದೆ ಮನಸ್ಸು

ಜೀವಗಳು ಓಡಾಡುತ್ತಿವೆ
ಕಣ್ಣ ಮುಂದೆ ನಲಿದಾಡುತ್ತಿವೆ
ಅವರ ಸ್ಪರ್ಷದಲಿ ಸೆಳೆತನವಿಲ್ಲ
ಸುಪ್ತವಾಗಿದೆ ಮನಸ್ಸು

ನಿಸರ್ಗ ತನ್ನ ಗತಿಯಲ್ಲಿದೆ
ಸೂರ್ಯ ಚಂದ್ರ ನಿಯಮಿತವಾಗಿದೆ
ನನ್ನ ಭಾವಗಳು ಎಲ್ಲಿ ಅಡಗಿದೆ
ಹುಡುಕುತ್ತಿದೆ ಮನಸ್ಸು
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...