Tuesday, October 11, 2011

ಪ್ರೀತಿ ಮತ್ತು ವಂಚನೆ

ಅಂದು ನೀ ಹೇಳಿದಿ ಅಲ್ಲವೇ ನಿನ್ನನ್ನು ಬಿಟ್ಟು ಹೋಗುದಿಲ್ಲವೆಂದು
ನನ್ನಲ್ಲಿರುವ ಹೃದಯ ನಿನ್ನದಲ್ಲ ನನ್ನದೆಂದು

ಇಂದು ನೀ ಏಕೆ ಹೀಗೆ ಮಾಡಿದೆ ?
ನನ್ನ ಹೃದಯ ಚೂರು ಚೂರು ಮಾಡಿ ಏಕೆ ನನಗೆ ನೀಡಿದೆ ?

ಅಂದು ನೀ ಕೊಟ್ಟ ಹೂವನ್ನು ಜೋಪಾನವಾಗಿ ಪುಸ್ತಕದಲಿ ಇಟ್ಟಿದೆ
ಇಂದು ಆ ಒಣಗಿದ ಹೂವು ನನಗೆ ರಕ್ತದ ಕಣದಂತೆ ಕಾಣುತ್ತಿದೆ

ನಿನ್ನನ್ನು ಪ್ರೀತಿಸಿ ನಾ ಎಲ್ಲವನ್ನೂ ಕಳೆದೆ
ನಿನ್ನಿಂದ ಏಕಾಂತ ಜೀವನದ  ಕೊಡುಗೆಯ ಪಡೆದೆ

ನನ್ನನ್ನು ವಿರಹದ ಬೆಂಕಿಯ ಹಾದಿಯಲಿ ಬಿಟ್ಟು ನೀ ಏಕೆ ಓಡಿ ಹೋದೆ ?
ಪ್ರೀತಿಯಲಿ ನನ್ನನ್ನು ವಂಚಿಸಿ ನೀ ಎನನ್ನು ಪಡೆದೆ ?

ಇಂದು ನನ್ನ ಅಸ್ತಿತ್ವ ಮರಣ ಹೊಂದಿದೆ
ಜೀವ ಇದ್ದು ನಾ ಮೌನ ಶವ ರೂಪ ಪಡೆದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...