Saturday, September 1, 2012

ಹೊಸ ಬೆಳಕು


ಹಲವು ಮುಂಜಾನೆಯ ನಂತರ
ಇಂದು ನಾನು ಎಚ್ಚರವಾಗಿದ್ದೇನೆ
ಸತ್ಯದ ಬೆಳಕು ಕಣ್ಣು ಕುಕ್ಕುತಿತ್ತು
ಭಯದ ಚಳಿ ಆವರಿಸಿತು
ಸುಳ್ಳ ಮಬ್ಬು ಕವಿದಿತ್ತು
ವಾಸ್ತವದ ಸೂರ್ಯ ಬೇರೆಯೇ ಕಾಣುತ್ತಿದ್ದ
ತೆರೆದ ಕಣ್ಣಲ್ಲಿ ಸಂತಾಪ ಇತ್ತು
ಜೀವನದ ಬಹುಮೂಲ್ಯ ಸಮಯ ವ್ಯರ್ಥ ಮಾಡಿದ್ದಕ್ಕೆ
ಹೃದಯ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿತ್ತು
ಅದರೂ ಆಶಾದಾಯಕ ಹೊಸ ಬೆಳಕು
ಒಂದು ಅವಕಾಶ ನೀಡುತ್ತಿತ್ತು
ತನ್ನನ್ನು ಸಾವರಿಸಲು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...