Wednesday, June 18, 2014

ಗೌತಮ್ ಬುದ್ಧ (೪)

ಗೌತಮ್ ಬುದ್ಧ (೪)

ಸುಂದರ ಪತ್ನಿ ಹಾಗು ನವ ಜನಿತ ಮಗು ಹಾಗು ಕಪಿಲವಸ್ತು ಎಂಬ ರಾಜ್ಯದ ಮೋಹ ಬಿಟ್ಟು ಸಿದ್ಧಾರ್ಥ ತಪ್ಪಸ್ಸು ಮಾಡಲು ಹೊರಟ, ಅವನು ರಾಜಗೃಹಕ್ಕೆ ಬಂದ, ಅಲ್ಲಿ ಅವನು ಭಿಕ್ಷೆ ಬೇಡಿದ, ಹಾಗೆಯೇ ಅವನು ತಿರುಗುತ ತಿರುಗುತ ಅಲಾರ್ ಕಾಲಂ ಮತ್ತು ಉದ್ದಕ್ ರಾಮಪುತ್ರದ ಹತ್ತಿರ ಮುಟ್ಟಿದ, ಅಲ್ಲಿ ಅವನು ಯೋಗ ಸಾಧನೆ ಕಲಿತ, ಧ್ಯಾನದಲ್ಲಿ ಏಕಾಗ್ರತೆ ಹೇಗೆ ಪಡೆಯುವುದು ಅದೂ ಕಲಿತ, ಆದರೆ ಅವನಿಗೆ ಸಂತೋಷ ಸಿಗಲಿಲ್ಲ, ಅವನು ನಂತರ ಉರುವೇಲಾ ಮುಟ್ಟಿದ, ಅಲ್ಲಿ ಹೋಗಿ ಅನೇಕ ವಿಧದ ತಪ್ಪಸ್ಸು ಮಾಡಲಾರಂಭಿಸಿದ.

ಸಿದ್ಧಾರ್ಥ ಮೊದಲಂತೂ ಕೇವಲ ಎಳ್ಳು ಅನ್ನ ತಿಂದು ತಪ್ಪಸ್ಸು ಮಾಡುತ್ತಿದ್ದ, ಆದರೆ ನಂತರ ಅವನು ಯಾವುದೇ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ, ಅವನ ಶರೀರ ಕ್ಷೀಣವಾಯಿತು, ಸತತ ಆರು ವರ್ಷ ತಪ್ಪಸ್ಸು ಮಾಡಿ ಸಹ ಅವನು ಯಶಸ್ಸು ಪಡೆಯಲಿಲ್ಲ,  ಅವನ ತಪಸ್ಸು ಸಫಲವಾಗಲಿಲ್ಲ.

ಒಂದು ದಿನ ಕೆಲವು ಸ್ತ್ರೀಯರು ಯಾವುದೇ ನಗರದಿಂದ ಬರುವಾಗ ಸಿದ್ಧಾರ್ಥ ತಪ್ಪಸ್ಸು ಮಾಡುವ ಸ್ಥಾನದಿಂದ ದಾಟಿ ಹೋಗುತ್ತಿದ್ದರು, ಅವರ ಯಾವುದೇ ಪದ್ಯ ಹಾಡುತ್ತಿದ್ದರು, ಅವರ ಒಂದು ಗೀತೆ ಸಿದ್ಧಾರ್ಥನ ಕಿವಿಗೆ ಬಿತ್ತು, ಅದರ ಅರ್ಥ ಹೀಗಿತ್ತು "ವೀಣೆಯ ತಂತಿಯನ್ನು ಸಡಿಲು ಬಿಡಬೇಡ, ಸಡಿಲು ಬಿಟ್ಟರೆ ಅದರಿಂದ ಶ್ರುತಿಬದ್ಧ ಧ್ವನಿ ಬಾರದು, ಆದರೆ ತಂತಿಯನ್ನು ಇಷ್ಟು ಸಹ ಬಿಗಿಯಬೇಡಿ, ಇಲ್ಲಾದರೆ ಅದು ಮುರಿಯಬಹುದು." ಸಿದ್ಧಾರ್ಥನಿಗೆ ಅವರ ಮಾತು ಹಿಡಿಸಿತು, ಅವನಿಗೆ ತಿಳಿಯಿತು ನಿಯಮಿತ ಆಹಾರ ಪೋಷಣ ಹಾಗು ಸಂತೃಪ್ತಿಯಿಂದಲೇ ಯೋಗ ಧೃಢವಾಗುತ್ತದೆ, ಅತಿ ಯಾವುದರಲ್ಲೂ ಒಳ್ಳೆಯದಲ್ಲ,ಮಧ್ಯಮ ಮಾರ್ಗವೇ ಯಾವುದೇ ಸಿದ್ಧಿ ಪಡೆಯಲು ಉತ್ತಮವೆಂದು.

ವೈಶಾಖ ಹುಣ್ಣಿಮೆಯ ಘಟನೆ ಇದು, ಸುಜಾತ ಎಂಬ ಹೆಂಗಸಿಗೆ ಪುತ್ರ ರತ್ನ ಪ್ರಾಪ್ತಿಯಾಯಿತು, ಪುತ್ರ ಪ್ರಾಪ್ತಿಗಾಗಿ ಅವಳು ಆಲದಮರ ಪೂಜೆಯ ಸಂಕಲ್ಪ ಮಾಡಿಕೊಂಡಿದ್ದಳು, ಅವಳು ಸಂಕಲ್ಪ ಪೂರ್ಣಗೊಳಿಸಲು ಚಿನ್ನದ ಬಟ್ಟಲಲ್ಲಿ ಹಾಲಿನ ಪಾಯಸ ಇಟ್ಟು ಆಲದಮರದ ಬಳಿ ಬಂದಳು, ಸಿದ್ಧಾರ್ಥ ಅಲ್ಲಿಯೇ ಧ್ಯಾನದಲ್ಲಿ ಕುಳಿತ್ತಿದ್ದ, ಸುಜಾತಳಿಗೆ ಅನಿಸಿತು ಇದು ವೃಕ್ಷ ದೇವತೆಯೇ ಅವಳಿಗೆ ದರ್ಶನೆ ನೀಡಲು ಶರೀರ ರೂಪದಲ್ಲಿ ಬಂದಿದ್ದಾರೆ ಎಂದು, ಸುಜಾತ ತುಂಬಾ ಗೌರವ ನಿಷ್ಠೆಯಿಂದ ಸಿದ್ಧಾರ್ಥನಿಗೆ ಪಾಯಸ ಕೊಟ್ಟಳು ಹಾಗು ಹೇಳಿದಳು "ನನ್ನ ಬಯಕೆ ಪೂರ್ಣವಾದಂತೆ ನಿಮ್ಮ ಸಹ ಬಯಕೆ ಪೂರ್ಣವಾಗಲಿ."

ಅದೇ ರಾತ್ರಿ ಸಿದ್ಧಾರ್ಥ ಧ್ಯಾನದಲ್ಲಿದ್ದಾಗ ಅವನಿಗೆ ಸತ್ಯದ ಅರಿವಾಯಿತು, ಅವನು ಪ್ರಜ್ಞಾಶೂನ್ಯ ಅವಸ್ಥೆಗೆ  ತಲುಪಿದ ಹಾಗು ತನ್ನ ತಪ್ಪಸ್ಸಿನಲ್ಲಿ ಯಶಸ್ವಿಯಾದ, ಯಾವ ವೃಕ್ಷದ ಅಡಿಯಲ್ಲಿ ಸಿದ್ಧಾರ್ಥನಿಗೆ ಜ್ಞಾನೋದಯ ಆಯಿತೋ ಆ ವೃಕ್ಷದ ಹೆಸರು ಭೋಧಿ ವೃಕ್ಷ  ಎಂದು ಹಾಗು ಈ ಘಟನೆ ನಡೆದ ಆ ಸ್ಥಾನದ ಹೆಸರು ಭೋದಗಯಾ ಎಂದು, ಇದು ಕ್ರಿಸ್ತ ಪೂರ್ವ ೫೨೮ ವರ್ಷದ ಮುಂಚಿನ ಘಟನೆ, ಆ ಸಮಯ ಸಿದ್ಧಾರ್ಥ ೩೫ ವಯಸ್ಸಿನ ಯುವಕನಾಗಿದ್ದ, ಬುದ್ಧ ದೇವರು ೪ ವಾರ ತನಕ ಆ ಭೋಧಿ ವೃಕ್ಷದ ಕೆಳಗೆ ಧ್ಯಾನಸ್ಥರಾಗಿ ಕುಳಿತ್ತಿದ್ದರು, ಅವರು ಧರ್ಮ ಸ್ವರೂಪದ ಬಗ್ಗೆ ಚಿಂತನೆ ಮಾಡುತ್ತಾ ಇದ್ದರು ಹಾಗು ಇದರ ನಂತರ ಅವರು ಧರ್ಮೋಪದೇಶ ನೀಡಲು ಹೊರಟರು.

ಸಿದ್ಧಾರ್ಥನಿಗೆ ನಿಜ ಜ್ಞಾನೋದಯ ಆದಾಗ ಅದೇ ವರ್ಷ ಆಷಾಡದ ಹುಣ್ಣಿಮೆಯ ದಿವಸ ಬುದ್ಧ ದೇವರು ಮೃಗದಾವಕ್ಕೆ (ವರ್ತಮಾನದಲ್ಲಿ ಸಾರನಾಥ) ತಲುಪಿದರು, ಅಲ್ಲಿಯೇ ಅವರು ತನ್ನ ಪ್ರಥಮ ಧರ್ಮೋಪದೇಶ ನೀಡಿದ್ದರು,  ಬುದ್ಧ ದೇವರು ಜನರಿಗೆ ಮಧ್ಯಮ ಮಾರ್ಗ ಅಳವಡಿಸಿಕೊಳ್ಳಲು ಹೇಳಿದ್ದರು, ದುಃಖ, ಅದರ ಕಾರಣ ಹಾಗು ಅದರ ನಿವಾರಣೆ ಗೋಸ್ಕರ ಅಷ್ಟಾಂಗಿಕ ಮಾರ್ಗ ಸೂಚಿಸಿದ್ದರು, ಅಹಿಂಸೆಯ ಮೌಲ್ಯ ತಿಳಿಸಿದ್ದರು, ಯಜ್ಞ ಹಾಗು ಪಶು ಬಲಿಯ ನಿಂದನೆ ಮಾಡಿದ್ದರು.

೮೦ ನೇ ವಯಸ್ಸಿನ ತನಕ ಬುದ್ಧ ದೇವರು ತನ್ನ ಧರ್ಮದ ಸ್ಪಷ್ಟ ಸರಳ ಲೋಕಭಾಷೆಯಲ್ಲಿ ಪಾಲಿಯಲ್ಲಿ ಪ್ರಚಾರ ಮಾಡಿದ್ದರು, ಅವರ ನೇರ ಸತ್ಯ ನುಡಿ ಜನರನ್ನು ಸೆಳೆಯುತ್ತಿತ್ತುಜನರು ಬಂದು ಅವರಿಂದ ದೀಕ್ಷೆ ಪಡೆಯಲು ಬರಲಾರಂಭಿಸಿದ್ದರು.

ಬೌದ್ಧ ಧರ್ಮ ಎಲ್ಲರ ಗೋಸ್ಕರ ತೆರೆದಿತ್ತು, ಅಲ್ಲಿ ಎಲ್ಲ ರೀತಿಯ ಮನುಷ್ಯರಿಗೆ ಸ್ವಾಗತವಿತ್ತು, ಪುಣ್ಯಾತ್ಮ , ಪಾಪಿ, ಗೃಹಸ್ಥ, ಬ್ರಾಹ್ಮಣ, ಬ್ರಹ್ಮಚಾರಿ ಎಲ್ಲರಿಗೂ ಅಲ್ಲಿಯ ದ್ವಾರ ತೆರೆದಿತ್ತು. ಜಾತಿ ಪಂಥ, ಮೇಲು ಕೀಳು ಯಾವುದೇ ಭೇದ ಭಾವ ಇರಲಿಲ್ಲ ಅವರಲ್ಲಿ.

(ಮುಗಿಯಿತು)

ಆಧಾರ : ಕೇಳಿದ್ದು/ಓದಿದ್ದು


by ಹರೀಶ್ ಶೆಟ್ಟಿ ,ಶಿರ್ವ

2 comments:

  1. ಬುದ್ಧ ಧಾರವಾಹಿ ಮುಂದುವರಿಸಿದಕ್ಕಾಗಿ ಧನ್ಯವಾದಗಳು.
    ಬೋಧಿ ವೃಕ್ಷ ಮತ್ತು ಬುದ್ಧನ ಕುರಿತಂತೆ ಹಲವು ಸಂಗತಿಗಳು ಇದೀಗ ಅರಿವಿಗೆ ಬಂದವು.
    ದಯಮಾಡಿ ಮುಂದುವರೆಸಿರಿ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್,ನಿಮ್ಮ ಮೆಚ್ಚುಗೆಗೆ ನಮನಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...