Saturday, December 31, 2011

ಹೊಸ ವರುಷ

ಜೀವನದ ಇನ್ನೊಂದು ಅಧ್ಯಾಯ ಮುಗಿಯಿತು
ಹೊಸ ವರುಷದ ಆಗಮನ ಆಯಿತು
ಹಾಳು ಪ್ರಸಂಗಗಳನ್ನು ಮರೆತು ಆಯಿತು
ಒಳ್ಳೆಯ ನೆನಪಿನೊಂದಿಗೆ ಜೀವನ ಮುಂದುವರಿಸಲಾಯಿತು

ಇನ್ನೂ ಬೇಡ ದ್ರೋಹ, ಹಗರಣ
ಬೇಡ ಅನಾವಶ್ಯಕ ರಕ್ತ ಪಾತ
ಇನ್ನೂ ಬೇಡ ಭ್ರಷ್ಟಾಚಾರದ ಕಾಟ
ಹೊಸ ವರುಷದಲಿ ಮುಗಿಯಲಿ ದುಷ್ಟರ ಆಟ

ಹಸಿವೆಯಿಂದ ನರಳುವ ಮಕ್ಕಳಿಗೆ ಸಿಗಲಿ ಆಹಾರ 
ಸಿಗಲಿ ಅನಾಥ ಮಕ್ಕಳಿಗೆ ವಿದ್ಯೆಯ ದಾನ
ಮುಗಿಯಲಿ ಸ್ತ್ರೀಯರ ಮೇಲೆ ಆಗುವ ಅತ್ಯಾಚಾರ
ಹೊಸ ವರುಷದಲಿ ಆಗಲಿ ದುಷ್ಟರ ಸಂಹಾರ

ಬನ್ನಿ ಹೊಸ ವರುಷದಲಿ ಸಂಕಲ್ಪ ಮಾಡೋಣ
ಹೊಟ್ಟೆ ಪಾಡಿಗಾಗಿ ಕಷ್ಟಪಟ್ಟು ದುಡಿಯೋಣ
ನಿರುದ್ಯೋಗವನ್ನು ಆಚೆ ದೂಡೋಣ
ಹೊಸ ವರುಷದಲಿ ಹೊಸ ಭಾರತ ನಿರ್ಮಾಣ ಮಾಡೋಣ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...