Saturday, December 24, 2011

ಕನಸಲ್ಲಿ ಸಂತ ಕ್ಲೋಸ್

ಒಂದು ಮಗು ಚರ್ಚ್ ಗೆ ಬಂದ, ಚರ್ಚ್ ಲ್ಲಿ ತುಂಬಾ ಜನರಿದ್ದರು.
ಮಗು ಬಂದು ಪಾದ್ರಿ ಹತ್ತಿರ ಕೇಳಿದ"ಫಾದರ್ ....ನನಗೆ ಸಂತ ಕ್ಲೋಸ್ ಅವರನ್ನು ಬೇಟಿ ಮಾಡಲಿಕ್ಕಿದೆ".

ಪಾದ್ರಿ ಚರ್ಚಲ್ಲಿ ತುಂಬಾ ಜನರು ಇದ್ದುದ್ದನ್ನು ಕಂಡು  "ಮಗು ....ಅವರು ನಿನ್ನ ಕನಸಲ್ಲಿ ಬರುತ್ತಾರೆ, ಈಗ ನೀನು ಹೋಗು" ಎಂದು ಹೇಳಿ ಅವನನ್ನು ರವಾನಿಸಿದರು. 

ಆ ಮಗು ಪುನಃ ಮರುದಿನ ಚರ್ಚ್ ಬಂದ.

ಪಾದ್ರಿ ಅವನಿಗೆ " ಸಂತ ಬಂದಿದ್ದಾರಾ  ಕನಸಲಿ "?.
ಮಗು "ಹೌದು ಅವರು ಬಂದಿದ್ದರು, ಅವರು ನಿಮ್ಮ ಹತ್ತಿರ ೫೦೦೦೦ ರೂಪಾಯಿ ತೆಗೆದು ಕೊಳ್ಳಬೇಕೆಂದು ಹೇಳಿದ್ದಾರೆ " .

ಈಗ ಪಾದ್ರಿಗೆ ಏನು ಮಾಡ ಬೇಕೆಂದು ಅರ್ಥ ಆಗಲಿಲ್ಲ .

ಹಣ ಕೊಡದ್ದಿದ್ದರೆ ಅವರು ಮಗುವಿಗೆ ಹೀಗೆಯೇ ಲುಭಾಯಿಸಿದು ಎಂದು ಬಯಲಾಗುತ್ತದೆ ಹಾಗು ಎಲ್ಲರ ಎದುರು ಫಜೀತಿ ಆಗುತ್ತದೆ.

ಹಣ ಕೊಟ್ಟರೆ ಅವರ ಹೇಳಿದ ಮಾತಿನ ಮಾನ ಉಳಿಯುತ್ತದೆ.

ಅವರು ಸುಮ್ಮನೆ ಒಳಗೆ ಹೋಗಿ ೫೦೦೦೦ ರುಪಾಯಿ ತಂದು ಮಗುವಿನ ಕೈಯಲ್ಲಿ ಇಟ್ಟರು. ಮಗು ನಗು ನಗುತಲೇ ಅಲ್ಲಿಂದ ಹೊರಟು  ಹೋದ.

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...