Sunday, March 11, 2012

ಉಪಕಾರಕ್ಕೆ ಅಪಕಾರ

ನನ್ನ ಜೀವನ ನೀಡಿ
ಬದುಕು ಕೊಟ್ಟೆ ಅವಳಿಗೆ
ಈಗ ನನ್ನ ಜೀವನವೇ
ಜಿಗುಪ್ಸೆ ತಂದಿತು ಅವಳಿಗೆ!

ಸ್ವಂತ ರಕ್ತ ನೀಡಿ
ಉಳಿಸಿದೆ ಅವಳಿಗೆ
ಈಗ ನನ್ನ ರಕ್ತದಲ್ಲಿಯೇ
ರೋಗಾಣು ಕಂಡಿತು ಅವಳಿಗೆ !

ಮಾನ ಉಳಿಸಿ
ಆಶ್ರಯ ಕೊಟ್ಟೆ ಅವಳಿಗೆ
ಈಗ ನನ್ನನ್ನೆ ನಿರಾಶ್ರಿತ ಮಾಡುವುದರಲ್ಲಿ
ಅವಳ ಸುಖ ಕಂಡಿತು ಅವಳಿಗೆ !

ದೇವರಲ್ಲ ನಾನು
ಆದರೆ ರಕ್ಷಕನಾಗಿ ಕಾಪಾಡಿದೆ ಅವಳಿಗೆ
ನನ್ನನ್ನೆ ಅರಕ್ಷಿತ ಮಾಡುವುದರಲ್ಲಿ
ಅವಳ ಸುರಕ್ಷತೆ ಕಂಡಿತು ಅವಳಿಗೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...