Monday, September 26, 2011

ಶಾಂತಿ

ನಾನು ಕೇಳಿದೆ ಶಾಂತಿಗೆ
" ಎಲ್ಲಿ ಹೋದರು ನಿನ್ನ ವಾಸ ಕಾಣುದಿಲ್ಲ
ನಿನ್ನನ್ನು ಹುಡುಕಲು ಹಲವರು ಅಲ್ಲಿ ಇಲ್ಲಿ ಅಲೆದರು
ನಿನಗಾಗಿ ತಪ್ಪಸ್ಸು ಮಾಡಿ ಸೋತರು
ನಿನ್ನ ನೆಲೆ ಎಲ್ಲಿ?
ಶಾಂತಿ ಹೇಳಿತು ನಕ್ಕು
"ನನ್ನ ನೆಲೆ ನಿನ್ನಲ್ಲಿಯೇ
ನಿನ್ನ  ಹೃದಯದಲ್ಲಿ
ನಿನ್ನ ಅಹಂ ಅಳಿಸಿದರೆ 
ನಿನ್ನ ಆಸೆ ನಿಲ್ಲಿಸಿದರೆ
ನಿನ್ನ ಹೃದಯದಲಿ ಪ್ರೀತಿಯನ್ನು ನೆಲೆಸಿದರೆ
ನಿನ್ನ ಆತ್ಮದಲಿ ಸಂತೋಷ ತುಂಬಿಸಿದರೆ
ನನ್ನನ್ನು ನೀನು ನಿನ್ನಲ್ಲಿಯೇ ಕಾಣುವೆ
ನಿನ್ನ ಮನೆಯಲ್ಲಿಯೇ ನಾ ನೆಲೆಸುವೆ"
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...