Saturday, September 3, 2011

ಹೊಸ ಜೀವನ

ಮನಸ್ಸಲಿ ತಂಗಾಳಿ ಬೀಸಿದಂತಾಯಿತು
ಹೊಸ ಜೀವನದ ಶುಭಾರಂಭವಾಯಿತು

ಅಂಧಕಾರದಲ್ಲಿತ್ತು ನನ್ನ ಜೀವನ
ಕಣ್ಣಿರಿನಿಂದ ಕರಗುತ್ತಿತ್ತು ನನ್ನ ಯೌವನ
ಎಲ್ಲ ದ್ವಾರ ಮುಚ್ಚಿ ಹೋಗಿತ್ತು ನನ್ನ ಬದುಕಿನ

ಸೋತು ಹೋಗಿದೆ ಮನಸ್ಸು ನೊಂದು ನೊಂದು
ಅರಳಿತು ಆಸೆ ಆಕಾಂಕ್ಷೆಯ ಹೂವೊಂದು  
ಅವನು ದೇವರಂತೆ ನನ್ನ ಜೀವನದಲ್ಲಿ ಬಂದು

ಭಯ ,ಶಂಕೆ, ಹರ್ಷದ ಭಾವನೆ ಮನಸ್ಸಲಿ
ಕಾಲಿಟ್ಟೆ ಭಕ್ತಿಯಿಂದ ಅವನ ಮನೆಯ ಬಾಗಿಲಲಿ
ಪಡೆದೆ ಆಶೀರ್ವಾದ ನನ್ನ ಬಾಳಿನ ದೇವರಲಿ

ಮರೆಯುವೆ ಇನ್ನೂ ಕಳೆದ ದಿವಸಗಳ
ಒಬ್ಬಂಟಿಯಾಗಿ ಬದುಕಿ ಪಡೆದ ಕಷ್ಟಗಳ
ವಿಧವೆ ಎಂಬ ನೋವು ತರುವ ಕರೆಗಳ 

ಕನಸುಗಳೆಲ್ಲ ಪುನರ್ಜೀವಿತ ಆಯಿತು
ಬದುಕು ಒಂದು ಹಾದಿಗೆ ತಲುಪಿತು
ಹೊಸ ಜೀವನದ ಶುಭಾರಂಭವಾಯಿತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ