ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, September 6, 2011
ಸಮಯ
ಅವನಲ್ಲಿ ದೋಷ ಕಾಣುವುದೇ ?
ಅವನು ಗತದಲಿ
ಮಾಡಿದ
ಉಪಕಾರ
ನೆನಪಿಲ್ಲವೇ
ಹೂವು ತನ್ನ ಸುಗಂಧ ಬಿಡುವುದೇ?
ಅವನು ನೀಡಿದ
ಭರವಸೆಯ
ಸುಗಂಧದ ಪರಿಮಳ
ನೆನಪಿಲ್ಲವೇ
ಕಷ್ಟ ಸಮಯ ಇಷ್ಟು ಬೇಗ ಮರೆಯುವುದೇ ?
ನಮ್ಮ
ಕಷ್ಟದಲಿ ಸಹಾಯ ಮಾಡಿದ
ಆತನ
ಉದಾರ ಹೃದಯವನ್ನು
ಕೆಣಕುವುದೇ
ಒಳ್ಳೆ ಸಮಯ ಸದಾ ಉಳಿಯುವುದೇ ?
ಅವನ
ಒಳ್ಳೆ ಸಮಯದಲಿ
ನಮ್ಮ ದುಃಖವನ್ನು ಅಳಿಸಿ
ಸುಖ ಕೊಟ್ಟ
ಆ ಮಹಾನುಭಾವನಿಗೆ
ಕಷ್ಟ ಬಂದಾಗ
ನಾವು ಮುಖ ತಿರುಗಿಸುವುದೇ
ಉಪಕಾರ ಮಾಡಿದವರ ಋಣ ತೀರಿಸುವುದು ಬೇಡವೇ ?
ಉಪಕಾರ ಮಾಡಿದವರಿಗೆ
ಈ ತರಹ
ಅಪಕಾರ ಮಾಡುವುದು
ಸರಿಯೇ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ನೀಲ ಗಗನದ ನೆರಳಲಿ
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
No comments:
Post a Comment