ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !
ಕಲ್ಲು ಮುಳ್ಳು
ಗುಡ್ಡೆ ಪರ್ವತ
ಏರು ಪೇರು
ಜೀವನದಲಿ ಇಂಥ ಅಡಚಣೆ ಬರಲೇ ಬೇಕು!
ಸೋಲು ಸಮಸ್ಯೆ
ನೋವು ವೇದನೆ
ಪೀಡೆ ಹತಾಶೆ
ಸಹಿಸುವ ಅವಕಾಶ ಸಿಗಲೇ ಬೇಕು!
ಮಳೆ ಬಿರುಗಾಳಿ
ಪ್ರವಾಹ ಸುನಾಮಿ
ಬೆಂಕಿ ಭೂಕಂಪವೆಂಬ
ಪ್ರಾಕೃತಿಕ ವಿಕೋಪ ಎದುರಿಸಲೇ ಬೇಕು !
ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment