Wednesday, May 14, 2014

ಗೌತಮ್ ಬುದ್ಧ (೨)

ಗೌತಮ್ ಬುದ್ಧ (೨)

ಶಾಕ್ಯ ಕುಲದಲ್ಲಿ ಜನ್ಮ ಪಡೆದ ಸಿದ್ಧಾರ್ಥನ ಮದುವೆ ಹದಿನಾರನೇ ವಯಸ್ಸಲ್ಲಿ ದಂಡಪಾನಿ ಶಾಕ್ಯನ ಮಗಳು ಯಶೋಧರೆಯ ಒಟ್ಟಿಗೆ ಆಯಿತು, ರಾಜ ಶುದ್ಧೋದನ ಸಿದ್ಧಾರ್ಥನಿಗಾಗಿ ಐಷಾರಾಮಿಯ ಎಲ್ಲ ವ್ಯವಸ್ಥೆ ಮಾಡಿದರು, ಮೂರು ಋತು ಪ್ರಕಾರ ಮೂರು ಅರಮನೆ ನಿರ್ಮಿಸಿದರು, ಅಲ್ಲಿ ನೃತ್ಯ ಮನೋರಂಜನೆಯ ಎಲ್ಲ ಸಾಮಗ್ರಿ ಒಟ್ಟುಗೂಡಿಸಿದರು, ದಾಸ ದಾಸಿಯರನ್ನು ಸೇವೆಗಾಗಿ ನೇಮಿಸಿದರು, ಆದರೆ ಈ ಎಲ್ಲ ಸುಖಗಳು ಸಿದ್ಧಾರ್ಥನನ್ನು ಸಂಸಾರದ ಮೋಹದಲ್ಲಿ  ಬಂಧಿಸಲು ಸಾಧ್ಯವಾಗಲಿಲ್ಲ.

ವಸಂತ ಋತುವಿನಲ್ಲಿ ಒಂದು ದಿನ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೋಗಿದ್ದಾಗ ಅವನಿಗೆ ರಸ್ತೆಯಲ್ಲಿ ಒಬ್ಬ ಮುದುಕ ಕಂಡು ಬಂದ, ಅವನ ಹಲ್ಲುಗಳೆಲ್ಲ ಉದುರಿ ಹೋಗಿತ್ತು, ಕೂದಲೆಲ್ಲ ಬಿಳಿಯಾಗಿತ್ತು ಹಾಗು ಶರೀರ ಜರ್ಜರಿತವಾಗಿತ್ತು, ಕೈಯಲ್ಲಿ ಕೋಲು ಹಿಡಿದು ಅವನು ಮೆಲ್ಲ ಮೆಲ್ಲನೆ ನಡುಗುತ ನಡೆಯುತ್ತಿದ್ದ.

ಸಿದ್ಧಾರ್ಥ ತನ್ನ ಸಾರಥಿ ಸೌಮ್ಯನಿಂದ "ಇವನು ಯಾರು ಪುರುಷ, ಇವರ ಕೂದಲು ಸಹ ವಿಚಿತ್ರವಾಗಿದೆ?".

ಸೌಮ್ಯ "ಕುಮಾರ, ಇವನು ಒಂದು ದಿನ ತುಂಬಾ ಸುಂದರ ಯುವಕನಾಗಿದ್ದ ಹಾಗು ಇವನ ಕೂದಲು ಸಹ ಕಪ್ಪಾಗಿತ್ತು, ಇವನ ಶರೀರ ಸಹ ಆರೋಗ್ಯಕರವಾಗಿತ್ತು, ಆದರೆ ಈಗ ವೃದ್ಧಾಪ್ಯ, ಮುಪ್ಪು ಇವನಿಗೆ ಹಿಡಿದಿದೆ".

ಸಿದ್ಧಾರ್ಥ "ಸೌಮ್ಯ, ವೃದ್ಧಾಪ್ಯ ಕೇವಲ ಇವನಿಗೆ ಹಿಡಿದಿದೆಯಾ ಅಥವಾ ಎಲ್ಲರಿಗೂ ಬರುತ್ತದೆಯಾ?

ಸೌಮ್ಯ "ಕುಮಾರ, ವೃದ್ಧಾಪ್ಯ ಎಲ್ಲರಿಗೂ ಬರುತ್ತದೆ, ಒಂದು ದಿನ ಎಲ್ಲರ ಯೌವನ ಹೋಗುತ್ತದೆ?

ಸಿದ್ಧಾರ್ಥ "ಸೌಮ್ಯ, ನನ್ನ ಸಹ ಈ ಅವಸ್ಥೆ ಆಗುತ್ತದೆಯಾ?"

ಸೌಮ್ಯ "ಖಂಡಿತ ಕುಮಾರ".

ಸಿದ್ಧಾರ್ಥ ವಿಚಲಿತನಾಗಿ " ಮನುಷ್ಯನ ಈ ಅವಸ್ಥೆ ಆಗುತ್ತದೆ ಅಂದರೆ ಯಾಕೆ ಬೇಕು ಈ ಜನ್ಮ, ಛೆ, ಹಾಳು ಈ ಜನ್ಮ".

ಸಿದ್ಧಾರ್ಥ ಮನಸ್ಸು ನಿರಾಸೆಯಿಂದ ತುಂಬಿತು, ಅವನು ಬೇಗನೆ ಅಲ್ಲಿಂದ ತೆರಳಿದ, ರಾಜನಿಗೆ ಈ ವಿಷಯ ತಿಳಿದ ನಂತರ ಅವರು ಅವನಿಗಾಗಿ ಇನ್ನು ಹೆಚ್ಚು ಮನೋರಂಜನೆಯ ಸಾಧನೆಗಳನ್ನು ಒಟ್ಟುಗೂಡಿಸಿದರು, ಯಾವುದೇ ಹಾಳು ದೃಶ್ಯ ಅವನು ಕಾಣದಿರಲಿ ಎಂದು ಅರಮನೆಯ ಸುತ್ತ ಮುತ್ತ ಕಾವಲು ಏರಿಸಿದರು, ಎರಡನೇ ಸಲ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೋದಾಗ ಅವನು ಒಂದು ರೋಗಿಯನ್ನು ಕಂಡ, ಅವನು ತುಂಬಾ ಜೋರು ಜೋರಿನಿಂದ ಉಸಿರಾಡುತ್ತಿದ್ದ, ಅವನ ಶರೀರ ದುರ್ಬಲವಾಗಿತ್ತು, ಹೊಟ್ಟೆ ಬಾತು ಹೋಗಿತ್ತು, ಮುಖವೆಲ್ಲ ಹಳದಿ ಬಣ್ಣ ಏರಿ ಬೆವರುತ್ತಿತ್ತು, ಬೇರೊಬ್ಬನ ಸಹಾಯದಿಂದ ಅವನು ತುಂಬಾ ಕಷ್ಟದಿಂದ ನಡೆಯುತ್ತಿದ್ದ.

ಮತ್ತೊಮ್ಮೆ ಸಿದ್ಧಾರ್ಥ ಸೌಮ್ಯನಿಗೆ ಕೇಳಿದ "ಇವನು ಯಾರು ಸೌಮ್ಯ?".

ಸೌಮ್ಯ "ಇವನಿಗೆ ಹುಷಾರಿಲ್ಲ ಕುಮಾರ, ಇವನಿಗೆ ಜ್ವರ ಬರುತ್ತಿದೆ".

ಸಿದ್ಧಾರ್ಥ "ಈ ಜ್ವರ ಹೇಗಿರುತ್ತದೆ ಸೌಮ್ಯ?".

ಸೌಮ್ಯ "ಜ್ವರ, ರೋಗ ಶರೀರಕ್ಕೆ ಯಾವುದೇ ಸೋಂಕು ಬಂದಾಗ ಬರುತ್ತದೆ ಕುಮಾರ, ಇದರ ಪರಿಣಾಮವಾಗಿ ದೇಹದ ಉಷ್ಣತೆಯ ಮಟ್ಟ ಏರುತ್ತದೆ ಹಾಗು ಶರೀರ ಕ್ಷೀಣವಾಗುತ್ತದೆ".

ಸಿದ್ಧಾರ್ಥ "ಜ್ವರ, ರೋಗ  ಬಂದರೆ ನನ್ನ ಶರೀರವೂ ಹೀಗೆ ಆಗಬಹುದೇ?"

ಸೌಮ್ಯ " ಹೌದು ಕುಮಾರ, ಶರೀರ ವ್ಯಾಧಿ ಮಂದಿರ".

ಸಿದ್ಧಾರ್ಥನಿಗೆ ಇನ್ನೊಂದು ಆಘಾತವಾಯಿತು "ಒಂದು ವೇಳೆ ಆರೋಗ್ಯ ಕನಸು ಎಂದಾದರೆ, ಯಾರು ಹೇಗೆ  ಈ ದೇಹದ ಸುಖ ಆನಂದ ಪಡೆಯಬಹುದು, ಸೌಮ್ಯ ರಥವನ್ನು ಅರಮನೆಯತ್ತ ತಿರುಗಿಸು" ಎಂದು ಹೇಳಿ ದುಃಖಿ ಮನಸ್ಸಿನಿಂದ ಸಿದ್ಧಾರ್ಥ ಅರಮನೆ ಹಿಂತಿರುಗಿದ.

ಇದರ ನಂತರ ತಂದೆ ರಾಜ ಶುದ್ಧೋದನ ಇನ್ನು ಹೆಚ್ಚು ಕಾವಲು ಏರಿಸಿದ.

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು


by ಹರೀಶ್ ಶೆಟ್ಟಿ ,ಶಿರ್ವ

Tuesday, May 13, 2014

ಗೌತಮ್ ಬುದ್ಧ (೧)

ಗೌತಮ್ ಬುದ್ಧ (೧)

ನೇಪಾಳದ ಕೆಳನಾಡಿನ ಕ್ಷೇತ್ರದಲ್ಲಿ ಕಪಿಲವಸ್ತು ಮತ್ತು ದೇವದಾಃ ಇದರ ನಡುವಿನಲ್ಲಿ ನೌತನ್ವ ಸ್ಟೇಷನ್'ನಿಂದ ೮ ಮೈಲ್ ದೂರ ಪಶ್ಚಿಮದಲ್ಲಿ ರುಖ್ಮಂದೇಯಿ ಎಂಬ ಸ್ಥಾನ ಇದೆ. ಅಲ್ಲಿ ಒಂದು ಲುಂಬಿನಿ ಎಂಬ ಕಾಡು ಇತ್ತು, ಗೌತಮ್ ಬುದ್ಧನ ಜನ್ಮ ಕ್ರಿಸ್ತ ಪೂರ್ವ ೫೬೩ ವರ್ಷ ಮೊದಲು ಕಪಿಲವಸ್ತುವಿನ ಮಹಾರಾಣಿ ಮಹಾಮಾಯ ದೇವಿ ತನ್ನ  ತಾಯ್ನಾಡು ದೇವದಾಃ ಹೋಗುವಾಗ ಮಧ್ಯೆ ರಸ್ತೆಯಲ್ಲಿ ಲುಂಬಿನಿ ಕಾಡಲ್ಲಿ ಆಯಿತು, ಆವಾಗ ಅವರ ಹೆಸರು ಸಿದ್ಧಾರ್ಥ್ ಎಂದು ಇಡಲಾಯಿತು, ಇವರ ತಂದೆಯ ಹೆಸರು ಶುದ್ಧೋದನ್ ಎಂದಿತ್ತು, ಜನ್ಮದ ಏಳು ದಿನದ ನಂತರವೇ ಇವರ ತಾಯಿಯ ಮೃತ್ಯು ಆಯಿತು, ಇದರ ನಂತರ ಸಿದ್ಧಾರ್ಥನ ಚಿಕ್ಕಮ ಗೌತಮಿ ಅವರನ್ನು ಸಾಕಿದ್ದರು.

ಸಿದ್ಧಾರ್ಥ್ ಗುರು ವಿಶ್ವಮಿತ್ರರಿಂದ ವೇದ ಹಾಗು ಉಪನಿಷದ್ ಕಲಿತ, ಜೊತೆಗೆ ರಾಜ್ಯ ಆಡಳಿತ ಮತ್ತು ಯುದ್ಧ ಸಿದ್ಧಾಂತವನ್ನು ಕಲಿತ, ಕುಸ್ತಿ,ಕುದುರೆ ಓಟ, ಬಿಲ್ಲು ಬಾಣ ಹಾಗು ರಥ ಓಟದಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ, ಸಣ್ಣ ವಯಸ್ಸಿನಿಂದಲೂ ಸಿದ್ಧಾರ್ಥನ ಮನಸ್ಸಲ್ಲಿ ಕರುಣೆ ತುಂಬಿತ್ತು, ಅವನಿಂದ ಯಾವ ಪ್ರಾಣಿಯ ಕಷ್ಟ ದುಃಖ ನೋಡಲಾಗುತ್ತಿರಲಿಲ್ಲ, ಈ ಮಾತು ಈ ಎಲ್ಲಾ ಉದಾಹರಣೆಯಿಂದ ಗೊತ್ತಾಗುತ್ತದೆ, ಓಟದ ಮಧ್ಯೆದಲ್ಲಿ ಕುದುರೆಯ ಬಾಯಿಂದ ನೊರೆ ಬಂದರೆ ಕುದುರೆ ಆಯಾಸಗೊಂಡಿದೆ ಎಂದು ತಿಳಿದು ಅವನು ಅಲ್ಲೇ ಕುದುರೆ ನಿಲ್ಲಿಸುತ್ತಿದ್ದ, ಆಟದಲ್ಲೂ ಅವನಿಗೆ ಸ್ವತಃ ಸೋಲುವುದು ಇಷ್ಟವಿತ್ತು ಯಾಕೆಂದರೆ ಯಾರನ್ನೂ ಸೋಲಿಸುವುದು ಹಾಗು ಅವರ ದುಃಖ ಅವನಿಂದ ನೋಡಲಾಗುತ್ತಿರಲಿಲ್ಲ. 

ಒಂದು ದಿನ ಸಿದ್ಧಾರ್ಥನಿಗೆ ಕಾಡಲ್ಲಿ ಯಾವುದೇ ಬೇಟೆಗಾರನ ಬಾಣದಿಂದ ಗಾಯಗೊಂಡ ಹೆಬ್ಬಾತು ಸಿಕ್ಕಿತು,  ಸಿದ್ಧಾರ್ಥ್ ಅದರ ಶರೀರದಿಂದ ಬಾಣ ತೆಗೆದು, ನೀರು ಕುಡಿಸಿ ಅದರ ಉಪಚಾರ ಮಾಡಿದ ಹಾಗು ಅದರ ಜೀವ ಉಳಿಸಿದ, ಆವಾಗ ಅಲ್ಲಿಗೆ ಸಿದ್ಧಾರ್ಥನ  ಸೋದರ ದೇವದತ್ (ಸಿದ್ಧಾರ್ಥನ ಚಿಕ್ಕಪ್ಪನ ಮಗ) ಬಂದ ಹಾಗು "ಇದು ನನ್ನ ಬೇಟೆ, ನನಗೆ ಕೊಡು" ಎಂದ, ಸಿದ್ಧಾರ್ಥ್ ಹೆಬ್ಬಾತು ಕೊಡಲು ನಿರಾಕರಿಸಿದ ಹಾಗು ಹೇಳಿದ "ನೀನು ಇದನ್ನು ಕೊಲ್ಲಲು ಯತ್ನಿಸಿದೆ ಆದರೆ ನಾನು ಇದರ ಜೀವ ಉಳಿಸಿದೆ, ಈಗ ನೀನೆ ಹೇಳು ಇದರ ಮೇಲೆ ಜೀವ ತೆಗೆಯುವವರ ಹಕ್ಕು ಇದೆಯಾ ಅಥವಾ ಜೀವ ಉಳಿಸುವವರ?".

ದೇವದತ್ ಸಿದ್ಧಾರ್ಥನ ತಂದೆ ರಾಜ ಶುದ್ಧೋದನನವರಿಗೆ ಇದರ ದೂರು ನೀಡಿದ. ರಾಜ   ಶುದ್ಧೋದನನವರು ಸಿದ್ಧಾರ್ಥನಿಗೆ "ನೀನೇಕೆ ಇವನ ಹೆಬ್ಬಾತು ಕೊಡುವುದಿಲ್ಲ?" ಎಂದು ಕೇಳಿದರು, ಇದಕ್ಕೆ ಉತ್ತರವಾಗಿ ಸಿದ್ಧಾರ್ಥ್ "ಅಪ್ಪ, ನನಗೆ ಹೇಳಿ ಇವನಿಗೆ ಆಕಾಶದಲ್ಲಿ ಸ್ವಚ್ಚಂದ ಹಾರುವ ಈ ಮುಗ್ಧ ಪಕ್ಷಿಗೆ ಬಾಣ ಬಿಡುವ ಏನು ಅಧಿಕಾರ ಇತ್ತು? ಈ  ಹೆಬ್ಬಾತು ದೇವದತ್'ನ ಏನು ಹಾನಿ ಮಾಡಿದೆ? ಯಾಕೆ ಇದನ್ನು ಗಾಯಗೊಳಿಸಿದ? ನನ್ನಿಂದ ಈ ಪಕ್ಷಿಯ ಕಷ್ಟ ನೋಡಲಾಗಲಿಲ್ಲ, ಅದಕ್ಕೆ ನಾನು ಇದರ ಶರೀರದಿಂದ ಬಾಣ ತೆಗೆದು, ನೀರು ಕುಡಿಸಿ ಇದರ ಉಪಚಾರ ಮಾಡಿದೆ ಹಾಗು ಇದರ ಜೀವ ಉಳಿಸಿದೆ. ಇದರ ಮೇಲೆ ಅಧಿಕಾರ ನನ್ನದೇ ಇರಬೇಕು".

ರಾಜ ಶುದ್ಧೋದನ್'ನವರಿಗೆ ಸಿದ್ಧಾರ್ಥನ ಮಾತು ಸರಿ ತೋರಿತು, ಅವರು ಹೇಳಿದರು "ನೀನು ಹೇಳುವುದು ಸರಿ, ಜೀವ ತೆಗೆಯುವವರಿಂದ ಜೀವ ಉಳಿಸುವವರೆ ದೊಡ್ಡವರು, ಇದರ ಮೇಲೆ ನಿನ್ನದೇ ಅಧಿಕಾರ". 

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು
by ಹರೀಶ್ ಶೆಟ್ಟಿ ,ಶಿರ್ವ

Monday, May 12, 2014

ಹೊಸ ದಾರಿ (೩ ಅಂತಿಮ )

ಹೊಸ ದಾರಿ (೩ ಅಂತಿಮ  )

ಸುಮೇಶ್ "ಆ ದಾರಿ ಏನು ಎಂದು ತಿಳಿಸುವ ಮುಂಚೆ ನನಗೆ ಒಂದು ಗ್ಲಾಸ್ ನೀರು ಸಿಗಬಹುದೇ"?

ಅಜ್ಜ "ಸುಮಾ, ಇವನಿಗೆ ಒಂದು ಗ್ಲಾಸ್ ನೀರು ತಂದು ಕೊಡು."

ಸುಮೇಶ್ ನೀರು ಕುಡಿದ ನಂತರ "ನನ್ನ ಜಾತಿ ಬೇರೆ, ನಿಮ್ಮ ಜಾತಿ ಬೇರೆ , ಅದಕ್ಕಾಗಿ ನಮ್ಮ ಮದುವೆಗೆ ನಿಮ್ಮ ಒಪ್ಪಿಗೆಯಿಲ್ಲ, ನಾನು ಈ ಜಾತಿಯನ್ನೆಲ್ಲ ನಂಬುವುದಿಲ್ಲ ಅದಕ್ಕೆ ನಾನು ನಿಮ್ಮ ಜಾತಿಗೆ ಸೇರುವೆ ಎಂದರು ನಿಮಗೆ ಒಪ್ಪಿಗೆ ಇಲ್ಲ, ಇರಲಿ ಇದೆಲ್ಲ ಹಳೆ ವಿಷಯ, ಇದನ್ನು ಪುನಃ ಹೇಳಿ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥ ಇಲ್ಲ".

ಸುಮಾಳ ತಂದೆ ಕೋಪದಿಂದ "ನೇರ ವಿಷಯಕ್ಕೆ ಬಾ ,ಆ ಹೊಸ ದಾರಿ ಏನು?"

ಸುಮೇಶ "ತುಂಬಾ ಯೋಚಿಸಿದ ನಂತರ  ನಾವಿಬ್ಬರು ಈ ನಿರ್ಧಾರಕ್ಕೆ ಬಂದಿದ್ದೇವೆ ಅಂದರೆ ನಾವಿಬ್ಬರು  ಅಗಲಿ ಬದುಕಲಾರೆವು ಹಾಗು ವಿನಃ ಕಾರಣ ಸಾಯುವ ಇಚ್ಛೆ ನಮಗಿಲ್ಲ ಆದುದರಿಂದ ನಾವಿಬ್ಬರು ಈ ಹೊಸ ದಾರಿಯಲ್ಲಿ ನಡೆಯಲು ನಿಶ್ಚಯಿಸಿದ್ದೇವೆ".

ಸುಮಾಳ ತಂದೆ "ಇದು ಸಾಧ್ಯವಿಲ್ಲ".

ಸುಮೇಶ್ "ಗೊತ್ತು, ನಮಗೆ ಗೊತ್ತು ನೀವು ಒಪ್ಪುವುದಿಲ್ಲವೆಂದು, ಅದಕ್ಕೆ ತಾನೇ ನಿಮಗೆ ಈ ಹೊಸ ದಾರಿ ಸೂಚಿಸಲು ಬಂದಿದ್ದೇನೆ".

ಸುಮಾಳ ಅಣ್ಣ "ಬೇಗ ಬೊಗುಳು ಆ ದಾರಿ ಏನೆಂದು".

ಸುಮೇಶ್ ಕೈಯಲ್ಲಿದ್ದ ಕಾಗದದ ಬಂಡಲ್ ತೆಗೆದು ಅಲ್ಲಿದ್ದ ಮೇಜಲ್ಲಿ ಇಟ್ಟು "ಇಲ್ಲಿ ಎರಡು ದಸ್ತಾವೇಜುಗಳ ಜೆರಾಕ್ಸ್ ಕಾಪಿ ಇದೆ, ಇದರಲ್ಲಿ ನಾವು ಒಂದು ಪೋಲಿಸ್ ಸ್ಟೇಷನಲ್ಲಿ  ಕೊಟ್ಟು ಬಂದಿದ್ದೇವೆ ಹಾಗು ಇನ್ನೊಂದನ್ನು ಕೋರ್ಟಲ್ಲಿ ಮದುವೆಯ ಅರ್ಜಿ ಸಲ್ಲಿಸಿ ಬಂದಿದ್ದೇವೆ, ಆರು ತಿಂಗಳ ನಂತರ ನಮ್ಮ ಮದುವೆ ಜರುಗಲಿದೆ ನಿಮ್ಮೆಲ್ಲರ ಆಶಿರ್ವಾದದಿಂದ".

ಸುಮಾಳ ತಂದೆ ಗರ್ಜಿಸಿದ "ಇದು ಎಂದಿಗೂ ಸಾಧ್ಯವಿಲ್ಲ".

ಸುಮೇಶ "ಹೀಗೆ ಹೇಳಬೇಡಿ ಮಾವಯ್ಯ, ಪೋಲಿಸ್ ಸ್ಟೇಷನ್ ಕೊಟ್ಟ ಪತ್ರದಲ್ಲಿ ನಾವು ಸ್ಪಷ್ಟವಾಗಿ ಬರೆದಿದ್ದೇವೆ ನಾವು ವಯಸ್ಕರು ಹಾಗು ವಿವಾಹಯೋಗ್ಯ ಆಗಿದ್ದೇವೆ, ನಾವಿಬ್ಬರು ಮದುವೆಯಾಗಲು ಬಯಸಿದ್ದೇವೆ, ಪರಿವಾರದ ವಿರೋಧದ ಕಾರಣ ಇದರಲ್ಲಿ ಅಡಚಣೆ ನಿರ್ಮಾಣವಾಗುತ್ತಿದೆ ಮತ್ತು ಓಡಿ ಹೋಗಿ ಮದುವೆಯಾಗಲು ನಾವು ಬಯಸುದಿಲ್ಲ, ನಾವು ಕೋರ್ಟಲ್ಲಿ  ಮದುವೆ ಅರ್ಜಿ ಸಲ್ಲಿಸಿದ್ದೇವೆ, ಅದರ ಜೆರಾಕ್ಸ್ ಕಾಪಿ ಈ ಪತ್ರದ ಜೊತೆಯಲ್ಲೂ ಇದೆ, ನಮ್ಮ ಈ ಮದುವೆ ಪರಿವಾರದ ಒಪ್ಪಿಗೆಯೊಂದಿಗೆ ಗುರುಹಿರಿಯರ ಆಶಿರ್ವಾದದೊಂದಿಗೆ ಜರುಗುತ್ತದೆ ಎಂದು ಆಶಿಸುತ್ತೇವೆ, ಈ ಮಧ್ಯೆ ಏನೋ ಕಾರಣದಿಂದ ನಮ್ಮ ಜೀವಕ್ಕೆ ಹಾನಿಯಾದರೆ ನಮ್ಮ ಶರೀರದ ಪ್ರತಿಯೊಂದು ಅಂಗವನ್ನು ದಾನ ಮಾಡಬೇಕೆಂದು ಹಾಗು ನಮ್ಮ ಪ್ರೀತಿಯನ್ನು ಅಮರ ಮಾಡಬೇಕೆಂದು ನಾವು ಈ ದೇಶದ ಕಾನೂನಿನಿಂದ ಬೇಡುತ್ತೇವೆ". 

ಅಲ್ಲಿದ್ದ ಸುಮಾಳ ಪರಿವಾರದವರು ಸ್ತಬ್ಧರಾದರು, ಅವರ ಬಾಯಿಂದ ಮಾತೆ ಹೊರಡಲಿಲ್ಲ. 

ಸುಮೇಶ್ " ಆರು ತಿಂಗಳ ಸಮಯ ಇದೆ ಸರ್, ನಾನು ನಿಮ್ಮ ಉತ್ತರಕ್ಕಾಗಿ ಕಾಯುವೆ" ಎಂದು ಹೇಳಿ ಸುಮೇಶ್ ಆ  ಎರಡು ದಸ್ತಾವೇಜುಗಳನ್ನು ಮೇಜಲ್ಲಿ ಬಿಟ್ಟು ಮನೆಯಿಂದ ಹೊರ ನಡೆದ.


by ಹರೀಶ್ ಶೆಟ್ಟಿ, ಶಿರ್ವ 
(ಮುಗಿಯಿತು )

ನದಿಯ ಕಿನಾರೆ

ನದಿಯ ಕಿನಾರೆ
ಕಳೆದುಕೊಂಡು ಬಂದೆ ನನ್ನ ಬಳೆಯ
ಹೀಗೆ ಸಿಕ್ಕಿಕೊಂಡರು
ಅನನುಭವಿ ಇನಿಯ

ಯಾಕೆ ನೀರ ಬಾವಿಗೆ
ನಡೆದುಕೊಂಡು ಹೋಗಿದೆ ಏಕಾಕಿ
ನಗು ನಗುತ ಕೀಟಲೆ ಮಾಡುವರು
ಎಲ್ಲಾ ಗೆಳತಿಯರು ಸಖಿ
ಸುಂದರಿ ಇನ್ನು ಸಾಗುತ್ತಿರು
ಯಾರದ್ದೂ ಕೇಳಬೇಡ ನೀನಯ್ಯ
ನದಿಯ ಕಿನಾರೆ....

ಈಗ ನಿಂತು ನಿಂತು ಯೋಚಿಸುವೆ
ಒಂದು ವೇಳೆ ನೋಡುತ್ತಿದ್ದರೆ
ಅತ್ತೆ ಸೋದರಿಯರು
ಆಗ ಏನು ನೆಪ ಹೂಡಲಿ
ಈಗಂತೂ ಖಾಲಿ ಕೈಗಳನ್ನಡಗಿಸಿ
ಮೆಲ್ಲ ಮೆಲ್ಲನೆ ತೆರಳು
ನಲ್ಲನನ್ನು ಭೇಟಿ ಮಾಡಿದ್ದು ಕಷ್ಟವಾಯಿತಯ್ಯ
ನದಿಯ ಕಿನಾರೆ....

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಎಸ್ . ಡೀ, ಬರ್ಮನ್
ಚಿತ್ರ : ಅಭಿಮಾನ್

नदियाँ किनारे हेराये आयी कंगना
ऐसे उलझ गये अनाड़ी सजना

काहे पनघट उपर, गयी थी चलके अकेली
मारे हँस हँस ताना, सारी सखियाँ सहेली
गोरी और जाओ, ना मानो कहना

अब खड़ी खड़ी सोचू, देखे हैं सांस ननदिया
तब का करी हो बहाना
अब तो सुनी कलाई, लईके चोरी चोरी जाना
भारी पड़ा रे पिया से मिलना
http://www.youtube.com/watch?v=R6Rq9TPK3Po

Sunday, May 11, 2014

ಅವನನ್ನು ನೋಡಲಿಲ್ಲ ನಾವೆಂದು

ಅವನನ್ನು ನೋಡಲಿಲ್ಲ ನಾವೆಂದು
ಆದರೆ ಅದರ ಅಗತ್ಯವೇ ನಮಗಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಮಾನವರೇ ಅಲ್ಲ ದೇವರು ಸಹ
ಸೆರಗಲ್ಲಿ ಬೆಳೆಯುವರು ನಿನ್ನ
ಸ್ವರ್ಗವಿದೆ ಈ ಜಗತ್ತಲ್ಲಿಯೇ
ಚರಣದ ಅಡಿಯಲ್ಲಿ ನಿನ್ನ
ಕೇವಲ ಮಮತೆ ಸುರಿಸುತ್ತಿರುವ ಆ ನಯನ
ಅಂತಹ ಯಾವುದೇ ಮೂರ್ತಿ ಜಗತ್ತಲ್ಲಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಯಾಕೆ ಬಿಸಿಲು ದುಃಖದ ಉರಿಸುವುದು
ಯಾಕೆ ಕಷ್ಟದ ಮುಗಿಲು ಸುರಿಯುವುದು
ಈ ಹರಸುವ ಕೈಗಳು
ಶಿರದ ಮೇಲೆ ಸದಾ ಇರುವುದು
ನೀನಿದ್ದರೆ ಕತ್ತಲ ಪಥದಲಿ ನಮಗೆ
ಸೂರ್ಯನ ಅಗತ್ಯವೇನಿಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಹೇಳುತ್ತಾರೆ ನಿನ್ನ ಪ್ರತಿಷ್ಠೆಗೆ
ಯಾವುದೇ ದೊಡ್ಡ ಮಾತುಗಳಿಲ್ಲ
ದೇವರ ಬಳಿಯೂ ಮಾತೆ
ನಿನ್ನ ಪ್ರೀತಿಯ ಮೂಲ್ಯವಿಲ್ಲ
ನಮಗಂತೂ ಇಷ್ಟೇ ತಿಳಿದಿದೆ
ಈ ಜಗತ್ತಲ್ಲಿ ನಿನ್ನಿಂದ ದೊಡ್ಡ ಸಂಪತ್ತೆ ಇಲ್ಲ
ಹೇ ಅಮ್ಮ ಹೇ ಅಮ್ಮ
ನಿನ್ನ ಮುಖ ದೇವರ ಮುಖಕ್ಕಿಂತ ಭಿನ್ನವೇನಿಲ್ಲ

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ , ಮಹಿಂದ್ರ ಕಪೂರ್
ಸಂಗೀತ : ರೋಶನ್
ಚಿತ್ರ: ದಾದಿ ಮಾ
us ko nahi dekha humne kabhi
par iski zarurat kya hogi ai maan
ai ma teri surat se alag
bhagavan ki surat kya hogi, kya hogi
us ko nahi dekha humne kabhi

insan to kya devata bhi aanchal me pale tere
hai swarg isi duniya me kadamo ke tale tere
mamata hi lutaye jiske nayan, ho
mamata hi lutaye jiske nayan
aisi koi murat kya hogi
ai ma, ai ma teri surat se alag
bhagavan ki surat kya hogi, kya hogi
us ko nahi dekha humne kabhi

kyo dhup jalaye dukho ki kyo gam ki ghata barase
ye hath duao vale rahte hai sada sar pe
tu hai to andhere path me hume, ho
tu hai to andhere path me hume
suraj ki zarurat kya hogi
ai maan, ai maan teri surat se alag
bhagavan ki surat kya hogi, kya hogi
us ko nahi dekha humne kabhi

kahate hai teri shan me jo koi unche bol nahi
bhagavan ke pas bhi mata tere pyar ka mol nahi
hum to yahi jane tujhse badi, ho
hum to yahi jane tujhse badi
sansar ki dolat kya hogi
ai maan, ai maan teri surat se alag
bhagavan ki surat kya hogi, kya hogi
us ko nahi dekha humne kabhi
par iski zarurat kya hogi ai maan
ai ma teri surat se alag
bhagavan ki surat kya hogi, kya hogi
us ko nahi dekha humne kabhi
http://www.youtube.com/watch?v=-YRa6t7lb0I

Saturday, May 10, 2014

ತೆರೆದ ಪುಸ್ತಕ ನಾನು

ತೆರೆದ ಪುಸ್ತಕ ನಾನು
ಕವಿಯತ್ರಿ ಆಗಿ ಬಾ ನೀನು
ಬರೆ ಒಂದೆರಡು ಸುಖ ಕವಿತೆ
ನನ್ನ ಹೃದಯವನ್ನು ರಮಿಸು ನೀನು

ತೆರೆದ ಪುಸ್ತಕ ನಾನು
ಚೆಲ್ಲು ನಿನ್ನ ಲೇಖನಿಯ ಮಸಿಯನ್ನು
ಅಲಂಕರಿಸು ನನ್ನ ಜೀವನವನ್ನು
ಸ್ವರ್ಗವನ್ನಾಗಿ ಮಾಡು ನನ್ನ ಬಾಳನ್ನು

ತೆರೆದ ಪುಸ್ತಕ ನಾನು
ಹರಿಯ ಬಿಡು ನಿನ್ನ ಭಾವಗಳ ಲಹರಿಯನ್ನು
ವಿಹರಿಸುವೆ ಅದರ ತರಂಗದಲಿ ನಾನು
ತೇಲಿಸು ಆನಂದ ಲೋಕದಲಿ ನನ್ನನ್ನು

ತೆರೆದ ಪುಸ್ತಕ ನಾನು
ಚಿತ್ರಿಸು ಒಂದು ಬೆಳುಗುವ ದೀಪವನ್ನ
ತೇಜಸ್ಸು ಹೊಮ್ಮಲಿ ನನ್ನ ಬದುಕಲಿ
ನನ್ನ ಭಾಗ್ಯ ಬೆಳಗಿಸು ನೀನು

ತೆರೆದ ಪುಸ್ತಕ ನಾನು
ಅದರಲಿ ಇಡು ಒಂದು ಗುಲಾಬಿ ಹೂವನ್ನು
ನೆನಪ ಪರಿಮಳ ಸದಾ ಹರಡುತ್ತಿರಲಿ
ನನ್ನ ಬಾಳ್ಮೆಯನ್ನು ಸುಗಂಧಿಸು ನೀನು

by ಹರೀಶ್ ಶೆಟ್ಟಿ, ಶಿರ್ವ 

Thursday, May 8, 2014

ಚಂದ್ರ ನಿಟ್ಟುಸಿರು ಬಿಡಬಹುದು

!!ಚಂದ್ರ ನಿಟ್ಟುಸಿರು ಬಿಡಬಹುದು
ಹೂವಿನ ಹೃದಯ ಮಿಡಿಯಬಹುದು
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು!!

!!ಹೀಗಿದೆ ನಿನ್ನಯ ರೂಪು
ಮುಂಜಾನೆಯ ಬೆಳಕಿನ ಹೊಳಪು
ಯಾವ ಸ್ಥಳದಲಿ ನೀನಿಲ್ಲವೋ
ಆ ಸ್ಥಳದಲಿ ಕತ್ತಲು ಕಪ್ಪು
ಹೇಗೆ ನೆಮ್ಮದಿ ನಿನ್ನ ವಿನಾಃ
ನಿನ್ನನ್ನು ಇಷ್ಟಪಡುವವರು ಪಡೆಯಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

!!ಕಂಗಳು ನಾಜೂಕು ಮೊಗ್ಗಿನಂತೆ
ಮಾತು ಸಿಹಿ ಸಕ್ಕರೆಯಂತೆ
ಅಧರ ಗಂಗೆಯ ತಟದಂತೆ
ಕೇಶ ಸ್ವರ್ಗದ ಹಾದಿಯಂತೆ
ನಿನಗಾಗಿ ದೇವಲೋಕದವರೂ
ತನ್ನ ಮೇಲೆ ಆಪಾದನೆ ಹೊರಿಸಿಕೊಳ್ಳಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

!!ಸುಮ್ಮನಿರಲಿಕ್ಕಿಲ್ಲ ಈ ಪವನ
ಏನಾದರೂ ಹೇಳಬಹುದು ಈ ಮುಗಿಲ
ಇದರ ಸಾಧ್ಯತೆಯೂ ಇದೆ
ದೇವರೂ ನಿನ್ನ ಉಲ್ಲೇಖ ಮಾಡಬಹುದು
ಇದರ ನಂತರ ಕಲ್ಲೇ ಬಹುಶಃ
ತನ್ನಲ್ಲಿ ಸಂಯಮ ಇಡಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

ಮೂಲ : ಆನಂದ್ ಬಕ್ಷಿ
ಮೂಲ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ :ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಫೂಲ್ ಬನೇ ಅಂಗಾರೆ

chand aahen bharega
phool dil thaam lenge
chand aahen bharega
phool dil thaam lenge
husn ki baat chali to
sab tera naam lenge
chand aahen bharega

aisa chehra hai tera jaisa roshan sawera
jis jagah tu nahin hai us jagah hai andhera
aisa chehra hai tera jaisa roshan sawera
jis jagah tu nahin hai us jagah hai andhera
kaise phir chain tujh bin tere badnaam lenge
kaise phir chain tujh bin tere badnaam lenge
husn ki baat chali to
sab tera naam lenge
chand aahen bharega

aankh naazuk si kaliyan
baat misri ki daliyan
honth ganga ke saahil
zulfen jannat ki galiyan
aankh naazuk si kaliyan
baat misri ki daliyan
honth ganga ke saahil
zulfen jannat ki galiyan
teri khatir farishte sar pe ilzaam lenge
teri khatir farishte sar pe ilzaam lenge
husn ki baat chali to sab tera naam lenge
chand aahen bharega

chup na hogi hawa bhi
kuch kahegi ghata bhi
aur mumkin hai tera
jikr kar de khuda bhi
chup na hogi hawa bhi
kuch kahegi ghata bhi
aur mumkin hai tera
jikr kar de khuda bhi
phir to patthar hi shaayad jabt se kaam lenge
phir to patthar hi shaayad jabt se kaam lenge
husn ki baat chali to sab tera naam lenge
chand aahen bharega
phool dil thaam lenge
husn ki baat chali to sab tera naam lenge
chand aahen bharega
http://www.youtube.com/watch?v=ZdGsYnl4fL8

ಸಿದ್ಧಿದಾತ್ರಿ