Saturday, July 21, 2012

ಭರವಸೆ

ನಾನು ಒಂಟಿ

ಕರ್ತವ್ಯ

ಮನುಜ...
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಕೋಪ

ಗೆಳತಿ
ನೀನಲ್ಲವೆ ನನಗೆ ಕಲಿಸಿದು
ಕೋಪ ನಿಯಂತ್ರಿಸಲು
ಇಂದು ನೀನೆ
ಮುನಿಸಿ ಕುಳಿತುಕೊಂಡಿದೆ ಅಲ್ಲವೇ ..
by ಹರೀಶ್ ಶೆಟ್ಟಿ, ಶಿರ್ವ

Friday, July 20, 2012

ಸ್ವಾಭಾವಿಕ ಪ್ರಕೃತಿ

ಮನುಜ...
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಅಮಾವಾಸ್ಯೆ

ಇಂದು ಅಮಾವಾಸ್ಯೆ
ಚಂದಿರ ರವಿಯ ಹಿಂದೆ ಕುಳಿತ್ತಿದ್ದಾನೆ ಅಡಗಿ
ಇಬ್ಬರು ಒಂದೇ ಸ್ಥಾನದಲಿ ಇಂದು
ಸುತ್ತ ಮುತ್ತ ಕತ್ತಲ ಸಾಮ್ರಾಜ್ಯ
ಆಕಾಶ ಕಂಗಾಲು
ನಕ್ಷತ್ರಗಳ ಸಾಲು
ಕೆಲವು ಮಿನುಗುತಿದೆ
ಪುಟ್ಟ ಪ್ರಕಾಶ
ಕೊಡುತ್ತಿದೆ ಅವಕಾಶ
ಕನಸು ಕಟ್ಟಲೆಂದು
ಕಾಯುತ್ತಿದ್ದೇನೆ
ನಿದ್ದೆ ಬರಲೆಂದು
by ಹರೀಶ್ ಶೆಟ್ಟಿ, ಶಿರ್ವ

Thursday, July 19, 2012

ಜೀವನ ಮರಣ

ಮನುಜ...
ಜೀವನ ಮರಣ
ಇದರ ಮದ್ಯೆ ಕಾಲಹರಣ
ಜೀವನ ಸುಂದರ ಪ್ರಯಾಣ
ಮಾಡು ಪ್ರಣ
ಆನಂದಿಸು ಜೀವನದ ಕಣ ಕಣ
ಮುಗಿಯದಿರಲಿ ನಿನ್ನ ತ್ರಾಣ
ಪ್ರಯತ್ನಿಸಿದರೆ ಸಿಗುವುದು ನಿನಗೆ ಬೇಕಾದ ತಾಣ
ಜೀವನವನ್ನು ಸಂತೋಷದಿಂದ ಕಳೆ ಶರೀರದಲ್ಲಿ ಇರುವ ತನಕ ಪ್ರಾಣ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ