Thursday, February 23, 2012

ಅಜ್ಞಾತ

ಅವನು ಮೌನ
ಎಲ್ಲಿಂದಲೋ ಬಂದಿದ
ಕುರಚಲು ಗಡ್ಡ
ಹರಿದ ಬಟ್ಟೆ
ಕೆಂಪು ಕಣ್ಣು
ಅದರಿಂದ ಹರಿಯುವ ಕಣ್ಣೀರು

ಅವನು ಅಲ್ಲೇ ಬಿದ್ದಿದ್ದ
ಆ ಕಲ್ಲ ಹಾಸಿಗೆಯಲಿ
ಬಿಸಿಲು ನೆರಳು
ಯಾವುದರ ಚಿಂತೆ ಇಲ್ಲ
ಬರು ಹೋಗುವವರ ಗೋಚರ ಇಲ್ಲ
ಹಸಿವೆ ಬಾಯಾರಿಕೆ ಏನೂ ಇಲ್ಲ
ಅವನ ಪರಿಚಿತರಿಲ್ಲ ಯಾರೂ

ಅಲ್ಲೇ ಬಿದ್ದು ಸತ್ತ
ಮುಗಿಯಿತು ಅವನ ಜೀವನ ಲೀಲೆ
ಯಾರಿಗೂ ತಿಳಿಯಲಿಲ್ಲ
ತಿಳಿಯುವ ಆಸಕ್ತಿಯು ಇಲ್ಲ
ಅವನ ಕಣ್ಣೀರ ವ್ಯಥೆ
ಅವನ ವೇದನೆ
ರಹಸ್ಯವಾಗಿ ಉಳಿಯಿತು ಅವನ ಜೀವನದ ಕಥೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...