Friday, October 9, 2020

ಅಮ್ಮ ನೀನು


ಅಮ್ಮ ನೀನು ಕಣ್ಣು ತೆರೆದು ನೋಡು,

ಬದುಕನ್ನು ಪುನಃ ಸಾಮಾನ್ಯವಾಗಿ ಸಾಗಿಸುವಂತೆ ಮಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಜೀವನದಲಿ ತಿಳಿಯದ ಸಂಕಟ ಬಂದು ಒದಗಿದೆ,

ಬದುಕು ನಿಂತೋಗಿದಂತೆ ಆಗಿದೆ,

ಯಾರು ಹೊಣೆಗಾರ ಗೊತ್ತಿಲ್ಲ ಎನಗೆ,

ಜನರ ಅವಸ್ಥೆ ತಿಳಿದಿದ್ದೆ ನಿನಗೆ, 

ಕ್ಷಮಿಸಿ ನಮ್ಮ ತಪ್ಪನ್ನು ದಯವನ್ನು ತೋರು,

ಅಮ್ಮ ನೀನು ಕಣ್ಣು ತೆರೆದು ನೋಡು,


ಕಷ್ಟದಲ್ಲಿ ನೀನೆ ನಮ್ಮ ಆಧಾರ,

ಪೂಜಿಸಿವರು ನಿನ್ನನ್ನು ದಿನ ನಿತ್ಯ ನೀನೆ ಮಾಡು ನಮ್ಮ ಉದ್ಧಾರ,

ಭಕ್ತರು ಮಾಡುವರು ನಿನಗೆ ವಿಶೇಷ ಪೂಜೆ ಪ್ರತಿ ಶುಕ್ರವಾರ,

ಕೈ ಮುಗಿದು ಮಾಡುವರು ನಿನ್ನ ಸಾಕ್ಷಾತ್ಕಾರ,

ನಂಬಿಕೆಯನ್ನು ನಮ್ಮ ನೀನೆ ಇನ್ನು ಕಾಪಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಹೂ ಹಣ್ಣು ನಿನಗೆ ಅರ್ಪಣೆ,

ಅಮ್ಮ ನಿನಗೆ ಮಲ್ಲಿಗೆ ಹೂವಿನ ಸಿಂಗಾರ ಸಮರ್ಪಣೆ,

ನಿನ್ನ ದೀಪದಿಂದ ಬೆಳಗಲಿ ಮನೆ ಮನೆ,

ಭಕ್ತಿ ಭಾವದಿಂದ ಬೇಡುವರು ಸುಖ ಶಾಂತಿಯನ್ನೇ,

ನಿನ್ನ ಒಲವಿನ ಆಸೆಯಲ್ಲಿದ್ದೇವೆ ನಾವು ನೋಡು,

ಅಮ್ಮ ನೀನು ಕಣ್ಣು ತೆರೆದು ನೋಡು.


by ಹರೀಶ್ ಶೆಟ್ಟಿ,ಶಿರ್ವ


Wednesday, October 7, 2020

ಬಾಲ್ಯದ ದಿನ






ಹೇಗೆ ಮರೆಯಲಿ ಆ ದಿನ,

ಸರಳ ಮುಗ್ಧ ಬಾಲ್ಯದ ದಿನ,


ಮಾವಿನ ಮರದ ಅಡಿಯಲ್ಲಿ ಆಡುತ್ತಿದ್ದ ದಿನ,

ಸಮುದ್ರದ ತೀರದಲ್ಲಿ ಮರಳು ಮನೆ ಕಟ್ಟುತ್ತಿದ್ದ ದಿನ,

ಅಳುತ ನಗುತ ಮುನಿಸಿ ಶಾಲೆಗೆ ಹೋಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಸಾಬೂನಿನ ನೀರಿನ ಗುಳ್ಳೆ ಬಿಡುವ ದಿನ,

ಕ್ಲಾಸ್ಸಲ್ಲಿ ಕಾಗದದ ವಿಮಾನ ಮಾಡಿ ಎಸೆಯುವ ದಿನ,

ತೆಂಗಿನ ಮರದ ಎಲೆಯಿಂದ ವಿವಿಧ ಆಟಿಕೆ ಮಾಡುವ ದಿನ,

ಹೇಗೆ ಮರೆಯಲಿ ಆ ದಿನ,


ಸೈಕಲ್ ಟೈಯರ್ ಚಡಿಯಿಂದ ಓಡಿಸುತ್ತಿದ್ದ ದಿನ,

ತೆಂಗಿನ ಕೊಂಬೆಯಲ್ಲಿ ಕುಳಿತು ಸವಾರಿ ಮಾಡಿದ ದಿನ,

ಮರದ ಮೇಲೆ ಹತ್ತಿ ಹಣ್ಣು ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಅಮ್ಮನ ಸೆರಗಿನಲಿ ನಾಚುತ ಅಡಗುತ್ತಿದ್ದ ದಿನ,

ನೆಂಟರನ್ನು ನೋಡಿ ಕೋಣೆಯೊಳಗೆ ಓಡಿ ಹೋಗುತ್ತಿದ್ದ ದಿನ,

ಅಡುಗೆ ಮನೆಯಿಂದ ಬೆಲ್ಲ ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಕಾರಣವಿಲ್ಲದೆ ಮುನಿಸಿ ಕುಳಿಯುತ್ತಿದ್ದ ದಿನ,

ಬಾಡಿಗೆ ಸೈಕಲ್ ಬಿಡಲು ಹಣ ಸೇರಿಸುತ್ತಿದ್ದ ದಿನ,

ಆಡಿ ಓಡಿ ದಣಿದು ಮನೆಗೆ ಬಂದು ಸುಸ್ತಾಗಿ ಮಲಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಖುಷಿ ಪಡುತ್ತಿದ್ದ ದಿನ,

ಮಳೆಯಲ್ಲಿ ನೆನೆದು ನಲಿಯುತ್ತಿದ್ದ ದಿನ,

ಕೆಸರಲ್ಲಿ ಮುಳುಗಿ ಬಂದಾಗ ಅಮ್ಮನ ಬೈಗುಳ ಕೇಳುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮುಗಿಯದ ಅಜ್ಜಿಯ ಕಥೆ ಕೇಳುತ್ತಿದ್ದ ದಿನ,

ಚಂದಮಾಮ, ಬಾಲಮಿತ್ರ, ಪುಟಾಣಿ ಓದುತ್ತಿದ್ದ ದಿನ,

ರಾಮಾಯಣ ಮಹಾಭಾರತ ಪಾತ್ರದ ವೇಷ ಧರಿಸಿ ಆಡುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಬೇಸಿಗೆಯಲ್ಲಿ ಒಟ್ಟುಗೂಡಿ ಟೆರೇಸ್ ಹೋಗಿ ಮಲಗುವ ದಿನ,

ಮಧ್ಯಾಹ್ನ ಪರ್ಯಂತ ಮಲಗುವ ದಿನ,

ಅಮ್ಮ ಎಸೆದ ನೀರಿನಲ್ಲಿ ಒದ್ದೆಯಾಗಿ ಎದ್ದೇಳುವ ದಿನ,

ಹೇಗೆ ಮರೆಯಲಿ ಆ ದಿನ,


ಸುಂದರ, ಅಮೂಲ್ಯ, ಪಾವನ ಆ ದಿನ,

ಮರೆಯಲಾಗದ ಅದ್ಭುತ ದಿನ,

ಸರಳ ಮುಗ್ಧ ಬಾಲ್ಯದ ದಿನ,

ಹೇಗೆ ಮರೆಯಲಿ ಆ ದಿನ


by ಹರೀಶ್ ಶೆಟ್ಟಿ, ಶಿರ್ವ

Photo courtesy:paperboat, google 🙏



Tuesday, October 6, 2020

ಬದುಕು ಬಣ್ಣ

 


ಬದುಕಿನಲ್ಲಿ 
ಎಷ್ಟೊಂದು ಬಣ್ಣಗಳು,

ಪ್ರತಿಯೊಂದು ಬಣ್ಣದ 

ಅದರದ್ದೇ ವಿಶಿಷ್ಟತೆ,

ಪ್ರತಿಯೊಂದು ಬಣ್ಣದ 

ವಿವಿಧ ಮಹತ್ವ,

ಒಂದೊಂದಂತೆ 

ಎಲ್ಲಾ ಬಣ್ಣಗಳು ನಮ್ಮ

ಜೀವನದಲ್ಲಿ ಬರುತ್ತವೆ,

ಆದರೆ ಮುಖ್ಯವಾಗಿ 

ಎರಡು ಬಣ್ಣದ 

ನಮ್ಮ ಜೀವನದಲ್ಲಿ 

ವಿಶಿಷ್ಟ ಮಹತ್ವ ಇದೆ,

ಒಂದು ಸುಖದ ಬಣ್ಣ,

ಇನ್ನೊಂದು ದುಃಖದ ಬಣ್ಣ,

ಈ ಎರಡು ಬಣ್ಣಗಳು 

ನಮ್ಮ ಜೀವನದಲ್ಲಿ  

ಒಟ್ಟೊಟ್ಟಿಗೇ ಸಾಗುತ್ತವೆ,

ಸುಖದ ಬಣ್ಣ ಬಂದಂತೆ 

ನಾವು ಸಂತೋಷದ 

ಕಡಲಲ್ಲಿ ತೇಲುತ್ತೇವೆ,

ಆದರೆ ದುಃಖದ ಬಣ್ಣ ಬಂದಾಗ

ನಾವು ಕಣ್ಣೀರ ಸಾಗರದಲ್ಲಿ ಮುಳುಗುತ್ತೇವೆ.

ಸುಖದ ಬಣ್ಣ ಬದುಕಲ್ಲಿ 

ನಮಗೆ ವಿವಿಧ  ಸೌಲಭ್ಯ 

ನೀಡುತ್ತದೆ,

ಸುಖದ ಬಣ್ಣದ 

ಎಲ್ಲಾ ಕೊಡುಗೆ 

ನಮಗೆ ಆನಂದ ನೀಡುತ್ತದೆ,

ದುಃಖದ ಬಣ್ಣ 

ನಮ್ಮನ್ನು ಪೀಡಿಸುತ್ತದೆ, 

ನಮಗೆ ತುಂಬಾ ವ್ಯಥೆ ನೀಡುತ್ತದೆ, 

ಆದರೆ ಈ ಬಣ್ಣ ನಮಗೆ 

ಸತ್ಯದ ಅರಿವು ನೀಡಿ ಹೋಗುತ್ತದೆ, 

ನಮ್ಮನ್ನು ಗಟ್ಟಿಗನಾಗಿ ಮಾಡುತ್ತದೆ,

ನಮ್ಮ ಶಕ್ತಿ ಪ್ರಭಲ ಮಾಡುತ್ತದೆ, 

ಪ್ರತಿಯೊಂದು ಬಣ್ಣ 

ನಮಗೆ ಒಂದು 

ಹೊಸ ಪಾಠ 

ಕಲಿಸಿ ಹೋಗುತ್ತದೆ, 

ಹೊಸ ಪ್ರೇರಣೆ 

ನೀಡಿ ಹೋಗುತ್ತದೆ.

ನಾವು ಬದುಕಲ್ಲಿ 

ಎಲ್ಲಾ ಬಣ್ಣದ ಸ್ವಾಗತ 

ಆಧಾರ ಸತ್ಕಾರ, 

ಧೈರ್ಯದಿಂದ ಮಾಡಿದರೆ, 

ನಮ್ಮ ಜೀವನ 

ವಿವಿಧ ಸುಂದರ ಬಣ್ಣದಿಂದ 

ವರ್ಣಮಯವಾಗಬಹುದು.


by ಹರೀಶ್ ಶೆಟ್ಟಿ, ಶಿರ್ವ

Monday, October 5, 2020

ಪಾದ ಸೇರುವೆ ನಿನ್ನ


ಪಾದ ಸೇರುವೆ ನಿನ್ನ,

ಭಕ್ತನನ್ನು ಕಳಿಸು,

ಪಾದ ಸೇರುವೆ ನಿನ್ನ,


ಅಂದವಾಗಿ ಅರಳಿದ್ದೇನೆ ನಾನು,

ಎಲ್ಲರ  ಸೆಳೆಯುತ್ತಿದ್ದೇನೆ ಮನವನ್ನು,

ನಿನ್ನನ್ನು ಸೌಂದರಿಯಿಸಲು ಕಾಯುತ್ತಿದ್ದೆ ಮನ,

ಕೃಪೆ ತೋರು ದೇವಾ ನನ್ನ,

ಪಾದ ಸೇರುವೆ ನಿನ್ನ...


ಸುಂದರಿ ಮುಡಿಯಬೇಕಂತ ಆಸೆ ಇಲ್ಲ,

ಕಿತ್ತು ಬಿಳಲು ಮನ ಇಲ್ಲ,

ಹಂಬಲಿಸುವೆ ಕೊರಳ ಮಾಲೆ ಆಗಲು ನಿನ್ನ,

ಪಾದ ಸೇರುವೆ ನಿನ್ನ...


ಅಲ್ಪ ದಿನದ ಈ ಬದುಕು,

ಸೌಂದರ್ಯದ ಮಾಡುವುದಿಲ್ಲ ನಾನು ಸೊಕ್ಕು,

ನಿನ್ನ ಪಾದ ಸೇರಿ ಈ ಜೀವನ ಮಾಡುವೆ ಧನ್ಯ,

ಪಾದ ಸೇರುವೆ ನಿನ್ನ...


by ಹರೀಶ್ ಶೆಟ್ಟಿ, ಶಿರ್ವ

Sunday, October 4, 2020

ಸಂಬಂಧ



ಸಂಬಂಧ, 
ಬಂಧುತ್ವ, ಬಾಂಧವ್ಯ 
ಸದಾ ಹಸಿರಾಗಿರಬೇಕು,
ಉಸಿರು 
ಕಟ್ಟುವಂತಾಗಬಾರದು,
ಪ್ರೀತಿ ವಿಶ್ವಾಸ 
ಸ್ಥಿರವಾಗಿರಬೇಕು,
ಪದೇ ಪದೇ 
ವಿಚಲಿಸಬಾರದು,
ಸಹಾಯ, 
ಉಪಕಾರ, ನೆರವು 
ಕೇಳುವುದಕ್ಕೆ 
ಒಂದು ಮಿತಿ ಇರಬೇಕು,
ಇನ್ನೊಬ್ಬರ ಮೇಲೆ 
ಆಶ್ರಿತವಾಗಿರಬಾರದು,
ಸ್ವಾಭಿಮಾನ, ಆತ್ಮ ಗೌರವ 
ತುಂಬಿ ಇರಬೇಕು,
ಅನ್ಯರ ಮೇಲೆ
ಭಾರವಾಗಬಾರದು,
ಸ್ವತಃ
ಕಷ್ಟಪಟ್ಟು ದುಡಿದು,
ತನ್ನ ಜೀವನ 
ಸುಧಾರಿಸಿಕೊಳ್ಳಬೇಕು,
ಬದುಕು 
ಅರ್ಥಪೂರ್ಣವಾಗಿರಬೇಕು,
ಸ್ವತಃ ದುಡಿಯದೇ, 
ಇನ್ನೊಬ್ಬರ ನೆರವಿಗೆ 
ಕಾಯುತ್ತಿರಬಾರದು,
ಬದುಕು
ಅರ್ಥಹೀನವಾಗಿ
ಮಾಡಿಕೊಳ್ಳಬಾರದು

by ಹರೀಶ್ ಶೆಟ್ಟಿ,ಶಿರ್ವ

Saturday, October 3, 2020

ಬಾಡಿದ ಚಹರೆ




ಆ ಇಳಿಸಂಜೆಯಲಿ

ಏಕಾಂಗಿ ನಾನು,

ನದಿಯ ತೀರ,

ಬಂಡೆಯ ಹತ್ತಿರದಿಂದ

ಏನೋ ಯೋಚನೆಯಲಿ,

ಸಾಗುತ್ತಿದ್ದಂತೆ,

ಸ್ಮರಿಸಿತು

ಅವಳ

ಬಾಡಿದ ಚಹರೆ,

ಹೆಜ್ಜೆ ತನ್ನಿಂತಾನೆ

ಮಲ್ಲಿಗೆ ಹೂವಿನ

ಅಂಗಡಿಯತ್ತ

ಸಾಗಿತು.

by ಹರೀಶ್ ಶೆಟ್ಟಿ, ಶಿರ್ವ


Friday, October 2, 2020

ಗಾಂಧೀಜಿ ಮತ್ತು ಶಾಸ್ತ್ರೀಜಿ

 



ಗಾಂಧೀಜಿಯವರ

ಆದರ್ಶ,

ಶಾಸ್ತ್ರೀಜಿಯವರ 

ಸರಳ ವ್ಯಕ್ತಿತ್ವ,

ಗಾಂಧೀಜಿಯವರ

ಅಹಿಂಸಾ ಪರಮ ಧರ್ಮ,

ಶಾಸ್ತ್ರೀಜಿಯವರ

ಸೌಮ್ಯ ನಡೆ ನುಡಿ,

ಇಬ್ಬರೂ ನಮಗೆ ಮಾದರಿಯಾಗಿ

ದಾರಿ ತೋರಿಸಿದವರು, 

ಆದರೆ,

ಇಂದಿನ ಸಾಮಾಜಿಕ ಸಬಲೀಕರಣ 

ಹಾಗೂ 

ಜಗತ್ತಿನ ವೇಗದ ಬೆಳವಣಿಗೆಯ 

ಸಂದರ್ಭದಲ್ಲಿ 

ಇವರ ಬೋಧನೆಗಳ ಬಗ್ಗೆ ಯೋಚಿಸಿದರೆ,

ವಿರೋಧಾಭಾಸವಾಗಿ 

ಮಾನವೀಯ ಮೌಲ್ಯಗಳು 

ಕ್ರಮೇಣ 

ಲುಪ್ತವಾಗುತ್ತಿದ್ದಂತೆ 

ಭಾಸವಾಗುತ್ತಿದೆ.


ಮತ್ತೊಮ್ಮೆ ಗಾಂಧೀಜಿ ಹಾಗು ಶಾಸ್ತ್ರೀಜಿಯವರಿಗೆ

ನಮನ ಸಲ್ಲಿಸೋಣ🙏


ಜೈ ಹಿಂದ್🙏


by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ