Monday, January 12, 2015

ಇದ್ಯಾರು ಬಂದರು

!!ಇದ್ಯಾರು ಬಂದರು
ಬೆಳಗಿತು ಸಭೆ ಯಾರ ಹೆಸರಿಂದ
ನನ್ನ ಮನೆಯಲಿ ಸೂರ್ಯ ಮೂಡಿದಂತಾಗಿದೆ ಸಂಜೆಯಿಂದ!!

!!ನೆನಪು ಕೆಲವು ಬಂದಂತೆ
ಅಥವಾ ಕಿರಣ ಬೆಳಗಿದಂತೆ
ಹೃದಯದಲಿ ನಿದ್ರಿಸಿದ ಗೀತೆಗಳು
ಪುನಃ ಎಚ್ಚರವಾದಂತೆ
ಬಯಕೆಗಳ ಮದ್ಯ ಸೋರಿತು
ಕಣ್ಣ ಲೋಟೆಯಿಂದ!!
ಇದ್ಯಾರು ಬಂದರು...

!!ಧ್ವನಿಯಿಂದ ಮೆಲ್ಲ ಮೆಲ್ಲನೆಯ
ಎದೆ ಬಡಿಯುತ್ತಿದೆ ಗೆಜ್ಜೆಯ
ಪ್ರತಿಯೊಂದು ಚೆಲುವೆಯಿಂದ ಹೆಸರವನ
ಕೇಳುತ್ತಿದೆ ತರಂಗ ಸೆರಗಿನ
ಗೌಪ್ಯವಾಗಿ ಯಾರೋ ರಾಧೆ
ಕೇಳುವಳು ತನ್ನ ಶ್ಯಾಮನಿಂದ!!
ಇದ್ಯಾರು ಬಂದರು...

!!ಏನೇಳಲಿ ಈ ಬರುವಿಕೆಗೆ
ಬಂದಿದ್ದಾನೆ ಪೀಡಿಸಲು ನನಗೆ
ನೋಡಿದನವನು ನಗು ನಗುತ
ಪ್ರತಿಯೊಂದು ಪರಿಚಿತ ಅಪರಿಚಿತನಿಗೆ
ಆದರೆ ಎಷ್ಟು ಅಸಡ್ಡೆಯಲ್ಲಿದ್ದಾನೆ
ನನ್ನದೇ ಅಭಿವಂದನೆಯಿಂದ!!
ಇದ್ಯಾರು ಬಂದರು..

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ನೌಶಾದ್
ಚಿತ್ರ : ಸಾಥಿ

ये कौन आया, रोशन हो गयी
महफ़िल किस के नाम से
मेरे घर में जैसे सूरज निकला हैं शाम से

यादे हैं कुछ आयी सी, या किरनें लहराईसी
दिल में सोये गीतों ने, ली हैं फिर अंगडाईसी
अरमानों की मदिरा छलकी, आखियों के जाम से

आहट पे हलकी हलकी, छाती धड़के पायल की
हर गोरी से ना मुसका, लहरें पूछे आँचल की
चूपके चूपके राधा कोई पूछे अपने शाम से

क्या कहीये इस आने को, आया हैं तरसाने को
देखा उस ने हस हस के, हर अपने बेगाने को
लेकिन कितना बेपरवाह हैं, मेरे ही सलाम से
http://www.youtube.com/watch?v=vM-djzXi9sk

Sunday, January 11, 2015

ಪ್ರತಿಭೆ

ಬೆಣ್ಣೆ ಕರಗ ಬೇಕೆಂದರೆ
ಬಿಸಿ ಸೋಕಲೇ ಬೇಕು,
ಪ್ರತಿಭೆ ಹೊರ ಹೊಮ್ಮ ಬೇಕೆಂದರೆ
ಪ್ರಯತ್ನದ ಬಿಸುಪಲ್ಲಿ ಉರಿಯಲೆ ಬೇಕು.
ಹರೀಶ್ ಶೆಟ್ಟಿ, ಶಿರ್ವ

ಹಗೆತನ

ಗೊತ್ತಿಲ್ಲ ಹೇಗೆ
ಮನಸ್ಸಲ್ಲಿ ಹಗೆತನ
ಇಟ್ಟುಕೊಂಡಿರುತ್ತಾರೆ ಜನರು!
ನನಗಂತೂ ಪ್ರೀತಿಯಿಂದಲೇ
ಬಿಡುವಿಲ್ಲ.
ಹರೀಶ್ ಶೆಟ್ಟಿ, ಶಿರ್ವ

ಬೆಂಗಳೂರು

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಅನುಭವ.
೧. ಹೆಚ್ಚು ಆಂಧ್ರ, ತಮಿಳ್ನಾಡಿನ ಜನರೇ ಸಿಕ್ಕಿದ್ದು, ಕನ್ನಡಿಗರು ಸಿಕ್ಕಿದ್ದು ಕಡಿಮೆ.
೨. ಬಸ್ಸಲ್ಲಿ ಯಾತ್ರೆ ಮಾಡುವುದು ಸುಲಭ ಅಲ್ಲ ಎಂದು ಮೊದಲೇ ದಿನ ತಿಳಿಯಿತು, ಜನರ ಗುಂಪು ಗುಂಪು, ಒಬ್ಬಾತನಿಗೆ ನನ್ನ ಬ್ಯಾಗ್ ತಾಗಿದಕ್ಕೆ, ಅವನು ಬ್ಯಾಗ್ ಸಮೇತ ನನ್ನನ್ನು ಆಚೆಗೆ ದೂಡಿ ಬಿಟ್ಟ, ಬಸ್ಸಿನ ಕಂಡಕ್ಟರ್ ಜೊತೆ ನಾನು ಕನ್ನಡ ಮಾತನಾಡಿದಾಗ, ಟೋಪಿ,ಸನ್ ಗ್ಲಾಸ್ ಧರಿಸಿದ ನನ್ನನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡಿ ನನಗೆ ಉತ್ತರ ನೀಡಿದ್ದು ಹಿಂದಿಯಲ್ಲಿ.
೩. ಬಸ್ಸಲ್ಲಿ ಹಚ್ಚಿದ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೪. ರೈಲ್ವೆ ನಿಲ್ದಾಣದಲ್ಲಿಯೂ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೫. ಬೆಂಗಳೂರಿನ ಹವಾಮಾನ, ದಿನಾಲೂ ಮಳೆಗಾಲದ ಹಾಗೆ, ಮೋಡ ಕವಿದ ವಾತಾವರಣ.
೬. ದಿನನಿತ್ಯ ಹೋಟೆಲಲ್ಲಿ ದೋಸೆ, ವಡ ಸಾಂಭಾರ್ ತಿಂದು ಬೋರು.
೭. ಮಾಲ್'ಗಳಲ್ಲಿ ಜನಜಂಗುಳಿ, ಗುಂಪು ಗುಂಪು ಜನರ ಸಮೂಹ, ಆದರೆ ಕನ್ನಡ ಮಾತನಾಡಿದರೆ ಜನರು ಉತ್ತರ ನೀಡುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ.
೮. ಕನ್ನಡ ಚಲನಚಿತ್ರಗಳ ಜಾಹಿರಾತು ಹಾಗು ಹೆಸರು ನೋಡಿ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ, ವಿಚಿತ್ರ ವಿಚಿತ್ರ ಹೆಸರು.
೯. ರಿಕ್ಷಾ ಅಂದರೆ ಅವರಿಗೆ ಸಣ್ಣ ಲೆಕ್ಕ ಗೊತ್ತೇ ಇಲ್ಲ, ೧೦೦/೨೦೦/೨೫೦ ಬಾಡಿಗೆ,ಕನಿಷ್ಠ ಬಾಡಿಗೆ ಅಂದರೆ ನಾನು ನೀಡಿದ್ದು ೩೦ ರೂಪಾಯಿ,ಆದರೆ ನಂತರ ನನಗೆ ತಿಳಿದದ್ದು ಆ ಸ್ಥಾನ ಅಲ್ಲಿಯೇ ಇತ್ತು, ಕ್ರಾಸ್ ಮಾಡಿ ಹೋಗಬಹುದಿತ್ತು.
೧೦. ಒಟ್ಟಾರೆ ಸಿಹಿ ಕಹಿ ಅನುಭವ, ಕೇವಲ ದೂರುವುದೇ ಸರಿಯಲ್ಲ, ಕೆಲವು ಒಳ್ಳೆಯ ಜನರೂ ಸಿಕ್ಕಿದರು ಹಾಗು ತನ್ನ ಸಹಾಯ ಹಸ್ತವನ್ನು ನೀಡಿದರು.
ಹರೀಶ್ ಶೆಟ್ಟಿ, ಶಿರ್ವ.

Tuesday, November 18, 2014

ಒರೆಸಿ ಕಣ್ಣೀರನ್ನು

ಒರೆಸಿ ಕಣ್ಣೀರನ್ನು
ತನ್ನ ಕಣ್ಣಿಂದ
ನಗು ಬೀರಿದರೆ ಚೆನ್ನ
ತಲೆ ತಗ್ಗಿಸುವುದರಿಂದ
ಏನಾಗುವುದಿಲ್ಲ
ತಲೆ ಎತ್ತಿಕೊಂಡರೆ ಚೆನ್ನ

ಜೀವನ ಭಿಕ್ಷೆಯಲಿ ಸಿಗುವುದಿಲ್ಲ
ಜೀವನ ಮುಂದೆ ಬಂದು
ಕಸಿದು ಕೊಳ್ಳಬೇಕಾಗುತ್ತದೆ
ತನ್ನ ಹಕ್ಕನ್ನು
ಆತ್ಮರಹಿತ ಜಗತ್ತಿಂದ
ಕಸಿದುಕೊಂಡರೆ ಚೆನ್ನ
ತಲೆ ತಗ್ಗಿಸುವುದರಿಂದ...

ವರ್ಣ ಮತ್ತು ಭೇದ
ಜಾತಿ ಮತ್ತು ಧರ್ಮ
ಯಾವುದೇ ಇರಲಿ
ಮನುಷ್ಯನಿಂದ ಕಡಿಮೆಯೇ
ಈ ಸತ್ಯವನ್ನು ನೀನೂ ನನ್ನ ಹಾಗೆ
ಒಪ್ಪಿಕೊಂಡರೆ ಚೆನ್ನ
ತಲೆ ತಗ್ಗಿಸುವುದರಿಂದ...

ದ್ವೇಷದ ಪ್ರಪಂಚದಲಿ ನಮಗೆ
ಪ್ರೀತಿಯ ನಗರ ನೆಲೆಸಲಿದೆ
ದೂರ ಇರುವುದರಲ್ಲಿ
ಯಾವುದೇ ಚಾತುರ್ಯ ಇಲ್ಲ
ಸನಿಹ ಬಂದರೆ ಚೆನ್ನ
ತಲೆ ತಗ್ಗಿಸುವುದರಿಂದ...

ಮೂಲ : ಸಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಏನ್ .ದತ್ತ
ಚಿತ್ರ : ನಯ ರಾಸ್ತ

ponchh kar ashq apni aankhon se
ponchh kar ashq apni aankhon se
muskuraao to koyi baat bane
sar jhukaane se kuchh nahin hoga
sar uthaao to koyi baat bane
ponchh kar ashq apni aankhon se
muskuraao to koyi baat bane

zindagi bheekh mein nahin milti
zindagi bheekh mein nahin milti
zindagi badh ke chheeni jaati hai
zindagi badh ke chheeni jaati hai
apnaa haq sangdil zamaane se
cheen paao to koyi baat bane
sar jhukaane se kuchh nahin hogaa
sar uthaao to koyi baat bane

rang aur nasl jaat aur mazhab
rang aur nasl jaat aur mazhab
jo bhi ho aadmi se kamtar hai
jo bhi ho aadmi se kamtar hai
is haqeeqat ko tum bhi meri tarah
maan jaao to koyi baat bane
sar jhukaane se kuchh nahin hoga
sar uthaao to koyi baat bane

nafraton ke jahaan mein hamko
nafraton ke jahaan mein hamko
pyaar ki bastiyaan basaani hain
pyaar ki bastiyaan basaani hain
door rahnaa koyi kamaal nahin
paas aao to koyi baat bane
ponchh kar ashq apni aankhon se
muskuraao to koyi baat bane
sar jhukaane se kuchh nahin hogaa
sar uthaao to koyi baat bane
http://www.youtube.com/watch?v=cShR7ArQRTU

Thursday, November 13, 2014

ಅಮ್ಮ

ದೊಡ್ಡವನಾಗಿದ್ದ ಅವನು,
ಮುದಿ ಅಮ್ಮನ
ಮಾತು
ಅರ್ಥವಾಗಲಿಲ್ಲ
ಆ ಮಗನಿಗೆ
ಅರ್ಥೈಸಲು
ಪ್ರಯತ್ನ ಸಹ ಮಾಡಲಿಲ್ಲ

ಪುಟ್ಟ ಮಗುವಿದ್ದಾಗ
ಅವನ
ತೊದಲು ನುಡಿಗಳನ್ನು
ಸರಿಯಾಗಿ
ಅರ್ಥ ಮಾಡಿಕೊಳ್ಳುತ್ತಿದ್ದಳು
ಆ ಅಮ್ಮ

by ಹರೀಶ್ ಶೆಟ್ಟಿ, ಶಿರ್ವ 

Monday, November 3, 2014

ಧಿಕ್ಕಾರ

ಏನೆಲ್ಲಾ ನಡೆಯುತ್ತಿದೆ ಈ ದೇಶದಲಿ
ಮಾನವ ಕಾಣುತ್ತಿದ್ದಾನೆ ವಿಧ ವಿಧದ ವೇಷದಲಿ
ಪುಟ್ಟ ಬಾಲಕಿಯರು ಬಲಿಯಾಗುತ್ತಿದ್ದಾರೆ
ಕಾಮ ಕುರುಡರ ಈ ಹೀನ ವಿಕೃತಿಯಲಿ
ಜನಸಾಮಾನ್ಯರು ಭಯದಲಿ
ಪೋಷಕರು ಆಘಾತದಲಿ
ವಿದೂಷಕರು ಕುಳಿತ್ತಿದ್ದಾರೆ ಅಧಿಕಾರದಲಿ
ಭಕ್ಷಕರಾಗಿದ್ದಾರೆ ರಕ್ಷಕರು ಇಲ್ಲಿ
ಕಪ್ಪು ಪಟ್ಟಿ ನ್ಯಾಯ ದೇವಿಯ ಕಣ್ಣಲ್ಲಿ
ಎಲ್ಲಿ ಕಳೆದುಕೊಂಡಿದ್ದಾರೆ ಮಾನವೀಯತೆಯನ್ನು ಇವರು
ಹೇಗೆ ಮರೆಯುತ್ತಾರೆ ತನ್ನ ಕರ್ತವ್ಯವನ್ನು ಇವರು
ನನ್ನ ಲೇಖನಿಯೂ ಕಂಪಿಸುತ್ತಿದೆ
ಇಂತಹ ನತದೃಷ್ಟರಿಗೆ ನನ್ನ  
ಧಿಕ್ಕಾರ ಧಿಕ್ಕಾರ ಧಿಕ್ಕಾರ
ಎಂದು ಕಣ್ಣೀರು ಹಾಕುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ 

ಸಿದ್ಧಿದಾತ್ರಿ