Tuesday, January 13, 2015

ಸಂಕ್ರಾಂತಿ

ಗೆಳತಿ,
ಅದೆಷ್ಟೋ ಸಂಕ್ರಾಂತಿ
ಬಂದೋಯಿತು
ಆದರೆ ಎಷ್ಟೋ ವರ್ಷ ಮುಂಚೆ
ನೀ ಕೊಟ್ಟ
ಸಿಹಿ ಎಳ್ಳಿನ ರುಚಿ ಇನ್ನೂ ಸಿಗಲಿಲ್ಲ

ಹರೀಶ್ ಶೆಟ್ಟಿ, ಶಿರ್ವ  

ಶಾಯರಿ

ಒಳ್ಳೆಯವರು ಒಳ್ಳೆತನ
ಕೆಟ್ಟವರು ಕೆಟ್ಟತನ ಕಂಡರು ನನ್ನ
ಯಾಕೆಂದರೆ
ಯಾರಿಗೆ ಎಷ್ಟು ಅವಶ್ಯಕತೆ ಇತ್ತು
ಅಷ್ಟೇ ಅವರು ಗುರುತಿಸಿದರು ನನ್ನನ್ನ
(ಒಂದು ಉರ್ದು ಶಾಯರಿಯ ಅನುವಾದ)
ಹರೀಶ್ ಶೆಟ್ಟಿ, ಶಿರ್ವ

ದೇವ ನಕ್ಕ

ಕಲ್ಲಿಗೆ ಕೈ ಮುಗಿದ
ಮನಸ್ಸಲ್ಲಿದ್ದ ದೇವ ನಕ್ಕ
ಹರೀಶ್ ಶೆಟ್ಟಿ, ಶಿರ್ವ

Monday, January 12, 2015

ಇದ್ಯಾರು ಬಂದರು

!!ಇದ್ಯಾರು ಬಂದರು
ಬೆಳಗಿತು ಸಭೆ ಯಾರ ಹೆಸರಿಂದ
ನನ್ನ ಮನೆಯಲಿ ಸೂರ್ಯ ಮೂಡಿದಂತಾಗಿದೆ ಸಂಜೆಯಿಂದ!!

!!ನೆನಪು ಕೆಲವು ಬಂದಂತೆ
ಅಥವಾ ಕಿರಣ ಬೆಳಗಿದಂತೆ
ಹೃದಯದಲಿ ನಿದ್ರಿಸಿದ ಗೀತೆಗಳು
ಪುನಃ ಎಚ್ಚರವಾದಂತೆ
ಬಯಕೆಗಳ ಮದ್ಯ ಸೋರಿತು
ಕಣ್ಣ ಲೋಟೆಯಿಂದ!!
ಇದ್ಯಾರು ಬಂದರು...

!!ಧ್ವನಿಯಿಂದ ಮೆಲ್ಲ ಮೆಲ್ಲನೆಯ
ಎದೆ ಬಡಿಯುತ್ತಿದೆ ಗೆಜ್ಜೆಯ
ಪ್ರತಿಯೊಂದು ಚೆಲುವೆಯಿಂದ ಹೆಸರವನ
ಕೇಳುತ್ತಿದೆ ತರಂಗ ಸೆರಗಿನ
ಗೌಪ್ಯವಾಗಿ ಯಾರೋ ರಾಧೆ
ಕೇಳುವಳು ತನ್ನ ಶ್ಯಾಮನಿಂದ!!
ಇದ್ಯಾರು ಬಂದರು...

!!ಏನೇಳಲಿ ಈ ಬರುವಿಕೆಗೆ
ಬಂದಿದ್ದಾನೆ ಪೀಡಿಸಲು ನನಗೆ
ನೋಡಿದನವನು ನಗು ನಗುತ
ಪ್ರತಿಯೊಂದು ಪರಿಚಿತ ಅಪರಿಚಿತನಿಗೆ
ಆದರೆ ಎಷ್ಟು ಅಸಡ್ಡೆಯಲ್ಲಿದ್ದಾನೆ
ನನ್ನದೇ ಅಭಿವಂದನೆಯಿಂದ!!
ಇದ್ಯಾರು ಬಂದರು..

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ನೌಶಾದ್
ಚಿತ್ರ : ಸಾಥಿ

ये कौन आया, रोशन हो गयी
महफ़िल किस के नाम से
मेरे घर में जैसे सूरज निकला हैं शाम से

यादे हैं कुछ आयी सी, या किरनें लहराईसी
दिल में सोये गीतों ने, ली हैं फिर अंगडाईसी
अरमानों की मदिरा छलकी, आखियों के जाम से

आहट पे हलकी हलकी, छाती धड़के पायल की
हर गोरी से ना मुसका, लहरें पूछे आँचल की
चूपके चूपके राधा कोई पूछे अपने शाम से

क्या कहीये इस आने को, आया हैं तरसाने को
देखा उस ने हस हस के, हर अपने बेगाने को
लेकिन कितना बेपरवाह हैं, मेरे ही सलाम से
http://www.youtube.com/watch?v=vM-djzXi9sk

Sunday, January 11, 2015

ಪ್ರತಿಭೆ

ಬೆಣ್ಣೆ ಕರಗ ಬೇಕೆಂದರೆ
ಬಿಸಿ ಸೋಕಲೇ ಬೇಕು,
ಪ್ರತಿಭೆ ಹೊರ ಹೊಮ್ಮ ಬೇಕೆಂದರೆ
ಪ್ರಯತ್ನದ ಬಿಸುಪಲ್ಲಿ ಉರಿಯಲೆ ಬೇಕು.
ಹರೀಶ್ ಶೆಟ್ಟಿ, ಶಿರ್ವ

ಹಗೆತನ

ಗೊತ್ತಿಲ್ಲ ಹೇಗೆ
ಮನಸ್ಸಲ್ಲಿ ಹಗೆತನ
ಇಟ್ಟುಕೊಂಡಿರುತ್ತಾರೆ ಜನರು!
ನನಗಂತೂ ಪ್ರೀತಿಯಿಂದಲೇ
ಬಿಡುವಿಲ್ಲ.
ಹರೀಶ್ ಶೆಟ್ಟಿ, ಶಿರ್ವ

ಬೆಂಗಳೂರು

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಅನುಭವ.
೧. ಹೆಚ್ಚು ಆಂಧ್ರ, ತಮಿಳ್ನಾಡಿನ ಜನರೇ ಸಿಕ್ಕಿದ್ದು, ಕನ್ನಡಿಗರು ಸಿಕ್ಕಿದ್ದು ಕಡಿಮೆ.
೨. ಬಸ್ಸಲ್ಲಿ ಯಾತ್ರೆ ಮಾಡುವುದು ಸುಲಭ ಅಲ್ಲ ಎಂದು ಮೊದಲೇ ದಿನ ತಿಳಿಯಿತು, ಜನರ ಗುಂಪು ಗುಂಪು, ಒಬ್ಬಾತನಿಗೆ ನನ್ನ ಬ್ಯಾಗ್ ತಾಗಿದಕ್ಕೆ, ಅವನು ಬ್ಯಾಗ್ ಸಮೇತ ನನ್ನನ್ನು ಆಚೆಗೆ ದೂಡಿ ಬಿಟ್ಟ, ಬಸ್ಸಿನ ಕಂಡಕ್ಟರ್ ಜೊತೆ ನಾನು ಕನ್ನಡ ಮಾತನಾಡಿದಾಗ, ಟೋಪಿ,ಸನ್ ಗ್ಲಾಸ್ ಧರಿಸಿದ ನನ್ನನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡಿ ನನಗೆ ಉತ್ತರ ನೀಡಿದ್ದು ಹಿಂದಿಯಲ್ಲಿ.
೩. ಬಸ್ಸಲ್ಲಿ ಹಚ್ಚಿದ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೪. ರೈಲ್ವೆ ನಿಲ್ದಾಣದಲ್ಲಿಯೂ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೫. ಬೆಂಗಳೂರಿನ ಹವಾಮಾನ, ದಿನಾಲೂ ಮಳೆಗಾಲದ ಹಾಗೆ, ಮೋಡ ಕವಿದ ವಾತಾವರಣ.
೬. ದಿನನಿತ್ಯ ಹೋಟೆಲಲ್ಲಿ ದೋಸೆ, ವಡ ಸಾಂಭಾರ್ ತಿಂದು ಬೋರು.
೭. ಮಾಲ್'ಗಳಲ್ಲಿ ಜನಜಂಗುಳಿ, ಗುಂಪು ಗುಂಪು ಜನರ ಸಮೂಹ, ಆದರೆ ಕನ್ನಡ ಮಾತನಾಡಿದರೆ ಜನರು ಉತ್ತರ ನೀಡುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ.
೮. ಕನ್ನಡ ಚಲನಚಿತ್ರಗಳ ಜಾಹಿರಾತು ಹಾಗು ಹೆಸರು ನೋಡಿ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ, ವಿಚಿತ್ರ ವಿಚಿತ್ರ ಹೆಸರು.
೯. ರಿಕ್ಷಾ ಅಂದರೆ ಅವರಿಗೆ ಸಣ್ಣ ಲೆಕ್ಕ ಗೊತ್ತೇ ಇಲ್ಲ, ೧೦೦/೨೦೦/೨೫೦ ಬಾಡಿಗೆ,ಕನಿಷ್ಠ ಬಾಡಿಗೆ ಅಂದರೆ ನಾನು ನೀಡಿದ್ದು ೩೦ ರೂಪಾಯಿ,ಆದರೆ ನಂತರ ನನಗೆ ತಿಳಿದದ್ದು ಆ ಸ್ಥಾನ ಅಲ್ಲಿಯೇ ಇತ್ತು, ಕ್ರಾಸ್ ಮಾಡಿ ಹೋಗಬಹುದಿತ್ತು.
೧೦. ಒಟ್ಟಾರೆ ಸಿಹಿ ಕಹಿ ಅನುಭವ, ಕೇವಲ ದೂರುವುದೇ ಸರಿಯಲ್ಲ, ಕೆಲವು ಒಳ್ಳೆಯ ಜನರೂ ಸಿಕ್ಕಿದರು ಹಾಗು ತನ್ನ ಸಹಾಯ ಹಸ್ತವನ್ನು ನೀಡಿದರು.
ಹರೀಶ್ ಶೆಟ್ಟಿ, ಶಿರ್ವ.

ಸಿದ್ಧಿದಾತ್ರಿ