Wednesday, June 10, 2015

ಅಹಂ ಅನುರಾಗ

ಹೆಜ್ಜೆ ಆ ತಿರುವಿನಲ್ಲಿಯೇ
ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು
ನಿಂತಿದ್ದೇನೆ
ಅನುರಾಗ ನನ್ನನ್ನು
ಒತ್ತಾಯಿಸುತ್ತಿದೆ
ಹಿಂತಿರುಗಿ ನೋಡು ಎಂದು
ಅಹಂ ಹೇಳುತ್ತಿದೆ
ತಿರುವು ದಾಟಿ ಬಿಡು ಎಂದು
ಆದರೆ ಅಂತರಂಗ ಹೇಳುತ್ತಿದೆ 
ತೆರೆದ ಕಿಟಕಿಯ ಹಿಂದೆ 

ಎರಡು ಕಣ್ಣು ಇಣುಕುತ್ತಿದೆ ಎಂದು
ಈಗಲೂ ನನ್ನ ನಿರೀಕ್ಷೆಯಲ್ಲಿ 

ಅವಳೂ ಎಚ್ಚರದಲ್ಲಿ ಇರುತ್ತಾಳೆ ಎಂದು
ಎಲ್ಲಿಯಾದರೂ ಅವಳ 

ಹೃದಯ ಮೂಲೆಯಲಿ 
ವೇದನೆ ಇರಬೇಕಲ್ಲವೇ
ಅವಳಿಗೆ ಹಠ ನಾನು ಕರೆಯಬೇಕೆಂದು
ನನ್ನ ಬೇಡಿಕೆ ಅವಳು ಕರೆಯಲೆಂದು
ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
क़दम उसी मोड़ पर जमे हैं
नज़र समेटे हुए खड़ा हूँ
जुनूँ ये मजबूर कर रहा है पलट के देखूँ
ख़ुदी ये कहती है मोड़ मुड़ जा
अगरचे एहसास कह रहा है
खुले दरीचे के पीछे दो आँखें झाँकती हैं
अभी मेरे इंतज़ार में वो भी जागती है
कहीं तो उस के गोशा-ए-दिल में दर्द होगा
उसे ये ज़िद है कि मैं पुकारूँ
मुझे तक़ाज़ा है वो बुला ले
क़दम उसी मोड़ पर जमे हैं
नज़र समेटे हुए खड़ा हूँ

Tuesday, June 2, 2015

ಘನಶ್ಯಾಮ ಸುಂದರ ಶ್ರೀಧರ

ಘನಶ್ಯಾಮ ಸುಂದರ ಶ್ರೀಧರ
ಅರುಣೋದಯವಾಯಿತು
ಎದ್ದೇಳು ಬೇಗ ವನಮಾಲಿ
ಮುಂಜಾವಿನ ಸ್ನೇಹಿತ ಬಂದಾಯಿತು

ನಂದನ ಕಂದನೇ ಸೂರ್ಯೋದಯವಾಯಿತು 
ರಾತ್ರಿಯ ಆಟ ಮುಗಿದಾಯಿತು
ಕ್ಷೀರವನು ತುಂಬಿ ಮೊಲೆಯಲಿ
ಹಸು ಕರೆಯುತ್ತಿದೆ ಕೂಗಿ ಕೂಗಿ
ಹರೆಯ ಹಸಿದ ಕರುಗಳು
ಇಣುಕುತ್ತಿದೆ ಬಾಗಿ ಬಾಗಿ
ಸ್ತನಪಾನ ಮಾಡುವ ಹಂಬಲದಲಿ

ಸಂಧ್ಯಾ ಮರದಲಿ ಆಶ್ರಯ ಪಡೆದ ಹಕ್ಕಿಗಳೆಲ್ಲ
ಅರುಣೋದಯಾದಂತೆ
ಹೊಟ್ಟೆ ಪಾಡಿಗಾಗಿ ಹಾರಿ ಹೋಯಿತೆಲ್ಲ
ಜೀವನೋಪಾಯಗೋಸ್ಕರ
ಮುಂಜಾವ ಹಿಡಿದು ನೇಗಿಲನು
ಹೊಲವೆಂಬ ತಿರ್ಥಸ್ಥಾನಕ್ಕೆ  ನಡೆದರು ರೈತರೆಲ್ಲ
ಹರಟೆ ಹೊಡೆಯುತ ಗೋಪಿಯರೆಲ್ಲ 
ಸೊಂಟಸುತ್ತ ಮಡಕೆ ಹಿಡಿದು
ಭಕ್ಷಿಸಲು ಮೊಸರನ್ನ ಮುಕುಂದನಿಗೆ
ಯಮುನಾ ತೀರಕ್ಕೆ ನಡೆದರೆಲ್ಲ

ತೇಜಸ್ಸು ನಿನ್ನಲ್ಲಿ ಪ್ರಜ್ವಲಿಸುತ್ತಿದೆ
ಕೋಟಿ ಸೂರ್ಯನ
ಹೋನಾಜಿ ನಮಿಸುವನು ದಿನನಿತ್ಯ
ಹೃದಯದಿಂದ ನಿನ್ನನ

ಅನುವಾದ : ಹರೀಶ್ ಶೆಟ್ಟಿ, ಶಿರ್ವ


ಮೂಲ : ಹೋನಾಜಿ ಬಾಳ
ಹಾಡಿದವರು : ಪಂಡಿತರಾವ್ ನಾಗರ್ಕರ್ /ಲತಾ ಮಂಗೇಶ್ಕರ್
ಸಂಗೀತ : ವಸಂತ್ ದೇಸಾಯಿ
ಮರಾಠಿ ಚಿತ್ರ :ಅಮರ್ ಭೂಪಾಲಿ

घनश्याम सुंदरा श्रीधरा अरुणोदय झाला
उठिं लवकरि वनमाळी उदयाचळी मित्र आला

आनंदकंदा प्रभात झाली उठी सरली राती
काढी धार क्षीरपात्र घेउनी धेनु हंबरती
लक्षिताती वासुरें हरी धेनु स्तनपानाला

सायंकाळीं एके मेळीं द्विजगण अवघे वृक्षीं
अरुणोदय होताच उडाले चरावया पक्षी
प्रभातकाळी उठुनि कावडी तीर्थ पथ लक्षी
करुनि सडासंमार्जन गोपी कुंभ घेऊनी कुक्षीं
यमुनाजळासि जाति मुकुंदा दध्योदन भक्षी

कोटी रवीहून तेज आगळें तुझिया वदनाला
होनाजी हा नित्य ध्यातसे हृदयी नाम माला
https://www.youtube.com/watch?v=LQWSzQcOTGs



ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...