Tuesday, April 28, 2015

ಪ್ರಕೃತಿ

ನಾಶವಾಯಿತು ನಗರ
ಅಲ್ಲಲ್ಲಿ ನಡೆಯುತ್ತಿದೆ ಶವ ಸಂಸ್ಕಾರ
ಬೆಂಕಿಯ ಜ್ವಾಲೆ ಏರಿದೆ ಆಕಾಶ ಎತ್ತರ
ಭೂಮಿಗೆ ಇಂದು ಬೂದಿ ಸಿಂಗಾರ
---
ಭಾವರಹಿತ ಮುಖ
ಸೋತು ಹೋದ ಕಂಗಳು
ಜೀವರಹಿತ ದೇಹ
ಹೋದರು ನನ್ನವರೆನ್ನುವವರೆಲ್ಲ
ಅಯ್ಯೋ
ಆದರೆ ಬದುಕು ಬಾಕಿ ಇದೆಯಲ್ಲ
---
ಅನಾಥ ನಯನ
ಏನಾಯಿತು ಎಂದು ಅರಿವಿಲ್ಲ
ಅಮ್ಮ ಇಲ್ಲ ಅಪ್ಪನೂ ಇಲ್ಲ
ಅಲ್ಲಲ್ಲಿ ಓಡುತ್ತಿದ್ದಾರೆ ಎಲ್ಲ
ಯಾರಿಗೂ ಮುದ್ದು ಕೂಸಿನ ಗೋಚರವಿಲ್ಲ
---
ಪ್ರಕೃತಿ ಮೌನವಾಗಿದೆ
ಅಲ್ಲೆಲ್ಲೋ ಹಕ್ಕಿಯ ಕಲರವ ಕೇಳುತ್ತಿದೆ
ಗಗನ ಕೆಂಪೇರಿದೆ
ಪುನಃ ಹೊಸ ಸೂರ್ಯ ಮೂಡಿ ಬಂದಿದೆ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಪ್ರಕೃತಿ ವಿಕೋಪಾನಂತರದ ನೋವಿನ ಚಿತ್ರಗಳ ಅನಾವರಣ ಕಣ್ಣೀರು ತರಿಸುವಂತಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...