Wednesday, January 21, 2015

ಜೀವನದ ತಿರುವು

ಜೀವನದ ತಿರುವು
------------------

ಯಾವಾಗಲೊಮ್ಮೆ ಈಗಲೂ ನಗುತ್ತಿದ್ದ ಅವನು, ಆದರೆ ಹೆಚ್ಚಾಗಿ ಈಗ ಅವನ ಮುಖದಲ್ಲಿ ಗಂಭೀರತೆ ಕಂಡು ಬರುತಿತ್ತು.  

ಗತಕಾಲವನ್ನು ನೆನೆದು ದುಖಃ ಉಮ್ಮಳಿಸಿ ಬರುತಿತ್ತು ಅವನಿಗೆ, ಜೀವನದ ಸ್ವರ್ಣಕಾಲವನ್ನು ಹೀಗೆಯೇ ವ್ಯರ್ಥ ಅಲೆದು ಕಳೆದದ್ದಕ್ಕೆ. 

ಅಮ್ಮ ತಮ್ಮ, ಅವರ ಇವರ ಸಹಾಯದಿಂದ ಹೇಗೋ ತನ್ನ ಕುಟುಂಬದ ಭಾರವನ್ನು ವಹಿಸಿಕೊಂಡಿದ್ದ ಅವನ ಮಕ್ಕಳೂ ದೊಡ್ಡವರಾಗಿದ್ದರು, ಹೇಗೋ ಜೀವನದ ಬಂಡಿ ಮೆಲ್ಲ ಮೆಲ್ಲನೆ ನಡೆಯುತ್ತಿತ್ತು. 

"ಆದರೆ ಇನ್ನೆನು......ಈ ಹಾಳು ರೋಗ ಹೇಗೆ ನನಗೆ ಬಂತು" ಎಂದು ಯೋಚಿಸಿ ಯೋಚಿಸಿ ಅವನಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು.

ತುಂಬಾ ಯೋಚಿಸಿ ತಮ್ಮನನ್ನು ಸಂಪರ್ಕಿಸಿದ, ಎಲ್ಲವನ್ನು ಬೇಗನೆ ಹೇಳಿ ಮುಗಿಸಿ ಬಿಟ್ಟ. ತಮ್ಮ ಇವನಿಂದ ಕೋಪಗೊಂಡಿದ್ದರೂ, ವಿಷಯ ಕೇಳಿ ತಮ್ಮನಿಗೆ ತೀವ್ರ ಆಘಾತವಾಯಿತು. 

ಯಾವಾಗಲು ಅವನಿಗೆ ಬುದ್ದಿ ಹೇಳಿ ಬೈಯ್ಯುತ್ತಿದ್ದ ತಮ್ಮ ಅವನ ಕಾಯಿಲೆಯ ಬಗ್ಗೆ ಕೇಳಿ ಸ್ತಬ್ದನಾದ, ಒಂದು ಧೀರ್ಘ ಉಸಿರೆಳೆದು ಅವನಿಗೆ ಸಮಾಧಾನದಿಂದ ಧೈರ್ಯ ಇಟ್ಟುಕೊಳ್ಳಲು ಹೇಳಿದ.

"ನಾನೀಗ ಎಲ್ಲ ಹಾಳು ಅಭ್ಯಾಸ ಬಿಟ್ಟು ಬಿಟ್ಟಿದ್ದೇನೆ" ಎಂದು ಹೇಳಿ ಅತ್ತ ಅವನು.

ತಮ್ಮ "ಏನು ಪ್ರಯೋಜನ, ಈಗ ತಡವಾಯಿತಲ್ಲ" ಎಂದು ಹೇಳಬೇಕೆಂದು ಬಯಸಿದ ಆದರೆ ಹೇಳಲಿಲ್ಲ.

"ಅಯ್ಯೋ, ಯಾಕೆ ಇಂತಹ ಕಾಯಿಲೆ ಅವನಿಗೆ ಬಂತು!"

"ಇನ್ನು ಆಯಿತಲ್ಲ ಬಿಡು, ಆಗುವುದೆಲ್ಲ ಆಗಿ ಹೋಯಿತು, ಇನ್ನು ಉಳಿದ ಜೀವನ ವ್ಯರ್ಥ ಮಾಡಬೇಡ, ಎಲ್ಲಾದರೂ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಳ್ಳು,ಆದಷ್ಟು ಸಹಾಯ ನಾನು ಮಾಡುವೆ, ಹೇಗಾದರೂ  ಕಷ್ಟಪಟ್ಟು ಇನ್ನಾದರು ನಿನ್ನ ಕುಟುಂಬವನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳು, ಧೈರ್ಯ ಇಡು, ನಾನಿದ್ದೇನೆ" ಎಂದು ಹೇಳಿ ಅಳು ತಾಳಲಾರದೆ ತಮ್ಮ ಫೋನ್ ಇಟ್ಟು ಬಿಟ್ಟ.

ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದ ಅವನು ಧೈರ್ಯ ಇಟ್ಟುಕೊಂಡು ನಡೆದ ಜೀವನದ ಹೊಸ ಹಾದಿಯನ್ನು ಹುಡುಕಲು, ತನ್ನ ಜೀವನಕ್ಕೆ ಒಂದು ಅರ್ಥ ಕೊಡಲು, ಒಂದು ಹೊಸ ಅಧ್ಯಾಯ ಬರೆಯಲು.

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ತಪ್ಪು ಮಾಡದವರು ಯಾರಿಹರಯ್ಯ ಜಗದೀ?
    ಅಂತಹವರ ಪುನರೋದ್ಧಾರಕರು ಸಿಗುವುದೂ ಅಪರೂಪವಲ್ಲವೇ?
    ಮುಂದಿನ ಬಾಳಾದರೂ ಸಹ್ಯವಾಗಲಿ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...