Sunday, January 11, 2015

ಬೆಂಗಳೂರು

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಅನುಭವ.
೧. ಹೆಚ್ಚು ಆಂಧ್ರ, ತಮಿಳ್ನಾಡಿನ ಜನರೇ ಸಿಕ್ಕಿದ್ದು, ಕನ್ನಡಿಗರು ಸಿಕ್ಕಿದ್ದು ಕಡಿಮೆ.
೨. ಬಸ್ಸಲ್ಲಿ ಯಾತ್ರೆ ಮಾಡುವುದು ಸುಲಭ ಅಲ್ಲ ಎಂದು ಮೊದಲೇ ದಿನ ತಿಳಿಯಿತು, ಜನರ ಗುಂಪು ಗುಂಪು, ಒಬ್ಬಾತನಿಗೆ ನನ್ನ ಬ್ಯಾಗ್ ತಾಗಿದಕ್ಕೆ, ಅವನು ಬ್ಯಾಗ್ ಸಮೇತ ನನ್ನನ್ನು ಆಚೆಗೆ ದೂಡಿ ಬಿಟ್ಟ, ಬಸ್ಸಿನ ಕಂಡಕ್ಟರ್ ಜೊತೆ ನಾನು ಕನ್ನಡ ಮಾತನಾಡಿದಾಗ, ಟೋಪಿ,ಸನ್ ಗ್ಲಾಸ್ ಧರಿಸಿದ ನನ್ನನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡಿ ನನಗೆ ಉತ್ತರ ನೀಡಿದ್ದು ಹಿಂದಿಯಲ್ಲಿ.
೩. ಬಸ್ಸಲ್ಲಿ ಹಚ್ಚಿದ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೪. ರೈಲ್ವೆ ನಿಲ್ದಾಣದಲ್ಲಿಯೂ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೫. ಬೆಂಗಳೂರಿನ ಹವಾಮಾನ, ದಿನಾಲೂ ಮಳೆಗಾಲದ ಹಾಗೆ, ಮೋಡ ಕವಿದ ವಾತಾವರಣ.
೬. ದಿನನಿತ್ಯ ಹೋಟೆಲಲ್ಲಿ ದೋಸೆ, ವಡ ಸಾಂಭಾರ್ ತಿಂದು ಬೋರು.
೭. ಮಾಲ್'ಗಳಲ್ಲಿ ಜನಜಂಗುಳಿ, ಗುಂಪು ಗುಂಪು ಜನರ ಸಮೂಹ, ಆದರೆ ಕನ್ನಡ ಮಾತನಾಡಿದರೆ ಜನರು ಉತ್ತರ ನೀಡುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ.
೮. ಕನ್ನಡ ಚಲನಚಿತ್ರಗಳ ಜಾಹಿರಾತು ಹಾಗು ಹೆಸರು ನೋಡಿ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ, ವಿಚಿತ್ರ ವಿಚಿತ್ರ ಹೆಸರು.
೯. ರಿಕ್ಷಾ ಅಂದರೆ ಅವರಿಗೆ ಸಣ್ಣ ಲೆಕ್ಕ ಗೊತ್ತೇ ಇಲ್ಲ, ೧೦೦/೨೦೦/೨೫೦ ಬಾಡಿಗೆ,ಕನಿಷ್ಠ ಬಾಡಿಗೆ ಅಂದರೆ ನಾನು ನೀಡಿದ್ದು ೩೦ ರೂಪಾಯಿ,ಆದರೆ ನಂತರ ನನಗೆ ತಿಳಿದದ್ದು ಆ ಸ್ಥಾನ ಅಲ್ಲಿಯೇ ಇತ್ತು, ಕ್ರಾಸ್ ಮಾಡಿ ಹೋಗಬಹುದಿತ್ತು.
೧೦. ಒಟ್ಟಾರೆ ಸಿಹಿ ಕಹಿ ಅನುಭವ, ಕೇವಲ ದೂರುವುದೇ ಸರಿಯಲ್ಲ, ಕೆಲವು ಒಳ್ಳೆಯ ಜನರೂ ಸಿಕ್ಕಿದರು ಹಾಗು ತನ್ನ ಸಹಾಯ ಹಸ್ತವನ್ನು ನೀಡಿದರು.
ಹರೀಶ್ ಶೆಟ್ಟಿ, ಶಿರ್ವ.

2 comments:

  1. ಅದ್ಸರಿ, ಏಕ್ ಫೋನ್ ಚೇಸಿಂಟೆ ನಾಂಗಳ್ ಮೀಟ್ ಕರ್ಸಕ್ತಾತಾ ನಾ ಜೀ? ಅಡತ ಟೈಂ ಫೋನ್ ಚೇಯಂಡಾ, ಮನಸಿಲಾಯೀ!

    ReplyDelete
  2. ಹ ಹ ಹಃ, ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...