Thursday, January 29, 2015

ಅನುಭೂತಿ

ಇಂದು ಸ್ವಲ್ಪ ಹೆಚ್ಚು ಸಮಯ
ನಾನಲ್ಲಿ ಕಳೆದೆ
ಆ ನೀಲ ಪರ್ವತ
ಅದೇಕೋ ಇಂದು ಬಹಳ ಸುಂದರವಾಗಿ ಕಂಡು ಬರುತ್ತಿತ್ತು
ಏಕಾಂತದಲಿ ಆ ತಂಪು ಪವನ
ಅದೇಕೋ ಇಂದು ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡುತ್ತಿತ್ತು
ಇದು ಅವಳ ಸ್ಪರ್ಶವೇ?
ಅಥವಾ ನನ್ನ ಭ್ರಮೆಯೆ?
ಏನಿದು?
ಏಕಾಂತದ ಅಭ್ಯಾಸ ಮಾಡಿಕೊಂಡಿದ
ನನಗೆ
ಇಂದು ಯಾಕೆ ಎಲ್ಲವೂ
ಸುಂದರವಾಗಿ ಕಾಣುತ್ತಿತ್ತು
ಒಹ್! ಹೌದು
ಇಂದು ಅವಳ ಮತ್ತು ನನ್ನ
ಮೊದಲ ಭೇಟಿಯ ದಿನ ತಾನೇ
ಅದಕ್ಕೆ ಈ ರೀತಿಯ ಅನುಭೂತಿ ಆಗುತ್ತಿದೆ
ಈ ಏಕಾಂತದಲ್ಲೂ
ನಾನು ಏಕಾಂಗಿಯಾಗಿ ಇರಲಿಲ್ಲ
ಎಂಬ ಸಂದೇಶ ನೀಡುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ  

Wednesday, January 28, 2015

ಒಂದು ಅಪಚರಿತ ಸುಂದರಿ ಜೊತೆ

ಒಂದು ಅಪರಿಚಿತ ಸುಂದರಿ ಜೊತೆ
ಹೀಗೆಯೇ ಭೇಟಿಯಾಯಿತು
ಮತ್ತೇನಾಯಿತು
ಇದು ಕೇಳದಿರಿ
ಹೀಗೊಂದು ಸಂಗತಿ ನಡೆಯಿತು
ಒಂದು ಅಪರಿಚಿತ....

ಅವಳು ಇದ್ದಕಿದ್ದಂತೆ ಬಂದಳು
ಹೀಗೆ ಕಣ್ಣ ಮುಂದೆ ಅಂದರೆ
ಮೇಘಗಳ ಮರೆಯಿಂದ ಚಂದಿರ ಬಂದಂತೆ
ಚಹರೆಯಲಿ ಕೇಶ ಹರಡಿಕೊಂಡಿತ್ತು
ಹಗಲಲಿ ರಾತ್ರಿಯಾಯಿತು
ಒಂದು ಅಪರಿಚಿತ....

ಓ ಪ್ರೀಯತೆಮೆ, ಓ ನನ್ನವಳೇ
ಕವಿಯಾಗಿದ್ದರೆ ನಾನೊಂದು ವೇಳೆ
ಹಾಡುತ್ತಿದ್ದೆ ಘಜಲ್ ನಿನ್ನ ಸೌಂದರ್ಯದ ಕುರಿತು
ನಾನಿದನ್ನು ಹೇಳಿದಾಗ ನನ್ನಿಂದ
ನನ್ನೊಲವು ಮುನಿಸಿಕೊಂಡಾಯಿತು
ಒಂದು ಅಪರಿಚಿತ....

ಸುಂದರ ವಿಷಯ ಇದು
ನಾಲ್ಕು ಕ್ಷಣದ ಜೊತೆ ಇದು
ಇಡೀ ಜೀವನ ನನ್ನ ನೆನಪಲ್ಲಿರುವುದು
ಏಕಾಂಗಿ ನಾನಿದ್ದೆ ಸಂಗಾತಿ ಅವಳಾದಳು
ಅವಳ ನನ್ನ ಜೊತೆಯಾಯಿತು
ಒಂದು ಅಪರಿಚಿತ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಜ್ನಬಿ

एक अजनबी हसीना से, यूँ मुलाक़ात हो गई
फिर क्या हुआ, ये ना पूछो, कुछ ऐसी बात हो गई

वो अचानक आ गई, यूँ नजर के सामने
जैसे निकल आया घटा से चाँद
चेहरे पे जुल्फे बिखरी हुई थी, दिन में रात हो गई

जान-ए-मन, जान-ए-जिगर, होता मैं शायर अगर
कहता गज़ल तेरी अदाओं पर
मैंने ये कहा तो, मुझको से खफा वो, जान-ए-हयात हो गई

खुबसूरत बात ये, चार पल का साथ ये
सारी उमर मुझको रहेगा याद
मैं अकेला था मगर, बन गई वो हमसफ़र, वो मेरे साथ हो गई
https://www.youtube.com/watch?v=QaXUGcJs8Mg

Saturday, January 24, 2015

ಮೊನಿಫಾ

ಮೊನಿಫಾ
-------------
ಇಲ್ಲ, ಅವಳು ಇಂದೂ ಕಾಣಲಿಲ್ಲ, ಮನಸ್ಸಿನಲ್ಲಿ ಕಳವಳ.
ಯಾಕೆ ಬರಲಿಲ್ಲ? ಅವಳಿಗೆ ಏನು ಆಗಲಿಲ್ಲ ತಾನೇ?
ಛೇ ಛೇ, ಬೇಡದ ವಿಷಯ ಯಾಕೆ ಈ ಹಾಳು ಮನಸ್ಸಿನಲ್ಲಿ ಬರುತ್ತದೆ.
ದಿನಾ ಜಾಗಿಂಗ್ ಮಾಡಲು ಬರುತ್ತಿದ ಅವಳು ನಾಲ್ಕು ದಿನದಿಂದ ಯಾಕೆ ಬರಲಿಲ್ಲ, ಚಿಂತೆ ಉಂಟಾಯಿತು, ಯಾಕೆ ಗೊತ್ತಿಲ್ಲ, ಛೇ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲು ಮರೆತು ಹೋದೆ.
ಇದ್ದಕಿದ್ದಂತೆ ಸ್ವಲ್ಪ ದಿವಸ ಮುಂಚೆ ನಡೆದ ಘಟನೆ ಮನಪಟಲದಲ್ಲಿ ಓಡಲಾರಂಭಿಸಿತು.
ಪತ್ನಿ ಸುಮಾಳ ಒತ್ತಾಯಕ್ಕೆ ದಿನಾ ೫ ಗಂಟೆಗೆ ಎದ್ದು ಬದಿಯ ಪಾರ್ಕಿಗೆ ಜಾಗಿಂಗ್ ಹೋಗುತ್ತಿದ್ದ ನಾನು ಒಂದು ದಿನ ಮನಸಿಲ್ಲದ್ದೆ ಓಟ ನಿಲ್ಲಿಸಿ ಹಾಗೆಯೇ ಪಾರ್ಕಲ್ಲಿ ಇದ್ದ ಬೆಂಚಲ್ಲಿ ಸುಸ್ತಾಯಿಸುತ್ತಿದ್ದೆ. ಆಗ ಓಡುತ್ತಿದ್ದ ಅವಳು......
ಅವಳು ೨೦/೨೧ ಹರೆಯದ ಆಫ್ರಿಕನ್ ಹುಡುಗಿ, ದಿನನಿತ್ಯ ಅದೇ ವೇಳೆಗೆ ಜಾಗಿಂಗ್ ಮಾಡಲು ಬರುವ ಅವಳ ಮತ್ತು ನನ್ನ ಸಮಾಗಮವಾಗುತ್ತಿತ್ತು, ಆದರೆ ನಾನಾಗಲಿ, ಅವಳಾಗಲಿ ಯಾವಾಗಲು ಪರಸ್ಪರ ಮಾತನಾಡಲಿಲ್ಲ.
ಆದರೆ ಅಂದು ನಾನು ಕುಳಿತ್ತಿದ್ದುದನ್ನು ನೋಡಿ ಅವಳು ಇಂಗ್ಲಿಷಲ್ಲಿ
"ಹ್ಯೇ ಅಂಕಲ್, ಟೈರ್ಡ್?" (ಹ್ಯೇ ಅಂಕಲ್ ಸುಸ್ತಾಯಿತಾ?).
ನಾನು ನಗು ಬೀರಿ "ನೋ, ಜಸ್ಟ್ ರಿಲೆಕ್ಷಿಂಗ್" (ಇಲ್ಲ, ಸ್ವಲ್ಪ ವಿಶ್ರಮಿಸುತ್ತಿದ್ದೇನೆ).
ಅವಳು ನಕ್ಕು "ಒಹ್, ಒಳ್ಳೆಯದು, ಆದರೆ ನಿಮಗೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಬಹುದಲ್ಲ?"
ನಾನು "ಬೇಗ ಮನೆಗೆ ಹೋದರೆ ಹೆಂಡತಿ ಮನೆಯೊಳಗೆ ನುಗ್ಗಲು ಬಿಡಲ್ಲಿಕ್ಕಿಲ್ಲ" ಎಂದು ತಮಾಷೆಯಿಂದ ಹೇಳಿದೆ.
ಅವಳು "ಒಹ್, ಹಾಗೆಯ" ಎಂದು ನಕ್ಕಳು, ಕರಿ ಬಣ್ಣದ ಆ ಮುದ್ದು ಹುಡುಗಿ ನಕ್ಕಾಗ ನನಗೆ ಸುಂದರ ದೇವದೂತೆಯಂತೆ ಕಂಡು ಬಂದಳು.
ಇದು ನನ್ನ ಮತ್ತು ಅವಳ ಮೊದಲ ಪರಿಚಯ, ಈ ಮೊದಲ ಪರಿಚಯದಲ್ಲಿ ಅವಳು ತನ್ನ ಹೆಸರು "ಮೊನಿಫಾ" ಅಂತ ಹಾಗು ಆಫ್ರಿಕಾದಿಂದ ಬಂದವರು, ಇಲ್ಲಿ ಅವಳು ತನ್ನ ತಂದೆಯ ಜೊತೆ ಇರುವುದು ಎಂದು ತಿಳಿಯಿತು.

ನಾನು ಅವಳ ಹೆಸರ ಅರ್ಥ ಕೇಳಿದಕ್ಕೆ ಅವಳು ಅದರ ಅರ್ಥ "ನಾನು ತುಂಬಾ ಭಾಗ್ಯಶಾಲಿ" ಎಂದು ಹೇಳಿ ನಕ್ಕಳು.
ಇದರ ನಂತರ ಹೀಗೆಯೇ ಏನಾದರು ಒಂದು ವಿಷಯದ ಬಗ್ಗೆ ನಾವು ಜಾಗಿಂಗ್ ಮಾಡುವ ಮಧ್ಯೆ ಸ್ವಲ್ಪ ಕುಳಿತು ಮಾತನಾಡುತ್ತಿದ್ದೆವು.
ಒಂದು ದಿನ ನನಗೆ ಅವಳು ಸ್ವಲ್ಪ ಬೇಸರದಲ್ಲಿ ಇದ್ದಂತೆ ಕಂಡು ಬಂತು, ನಾನು ಕೇಳಿದಕ್ಕೆ....
ಅವಳು " ನಿಮಗೆ ತಿಳಿದಿದೆಯ ಅಂಕಲ್, ನನಗೆ ನನ್ನ ಅಪ್ಪನ ಬಗ್ಗೆ ತುಂಬಾ ಬೇಜಾರಾಗುತ್ತಿದೆ."
ನಾನು "ಯಾಕೆ, ಏನಾಯಿತು, ಯಾಕೆ ನೀನಿಷ್ಟು ಅಸಮಾಧಾನದಲ್ಲಿ ಇರುವೆ?"
ಅವಳು "ನನ್ನ ಅಪ್ಪ ಏಕಾಂತದಲ್ಲಿ ತುಂಬಾ ಅಳುತ್ತಾರೆ, ನಾನು ಹಲವು ಸಲ ನೋಡಿದೆ ಅವರನ್ನು ಅವರ ಬೆಡ್ರೂಮಿನಲ್ಲಿ ಅಳುವುದನ್ನು".
ನಾನು ಆಶ್ಚರ್ಯದಿಂದ " ಆದರೆ ಯಾಕೆ? ಯಾಕೆ ಅವರು ಅಳುತ್ತಾರೆ?"
ಅವಳು ಸಹಜವಾಗಿ "ನನಗೆ ಕ್ಯಾನ್ಸರ್ ಕಾಯಿಲೆ ಇದೆಯಲ್ಲ, ಅದಕ್ಕೆ...."
ನನಗೆ ತೀವ್ರ ಆಘಾತವಾಯಿತು "ಏನು?"
ಅವಳು ನಿರಾಸೆಯಲ್ಲಿ "ಹೌದು ಅಂಕಲ್, ನನಗೆ ಕ್ಯಾನ್ಸರ್ ಆಗಿದೆ ಹಾಗು ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಡಾಕ್ಟರ ಹೇಳಿದ್ದಾರೆ."
ನಾನು ಸ್ತಬ್ದಗೊಂಡು ಅವಳನ್ನು ನೋಡಿದೆ.
ಅವಳು ಮುಂದುವರಿಸಿದಳು "ನನ್ನ ಮುಂದೆ ನನ್ನಪ್ಪ ತುಂಬಾ ಖುಷಿಯಲ್ಲಿರುತ್ತಾರೆ, ನನ್ನನ್ನು ಸಂತೋಷಗೊಳಿಸಲು ಯಾವಗಲು ನನ್ನ ಮುಂದೆ ನಗುತ್ತಲೇ ಇರುತ್ತಾರೆ, ಆದರೆ ಅವರು ಏಕಾಂತದಲ್ಲಿ ತುಂಬಾ ಅಳುತ್ತಾರೆ, ಅವರನ್ನು ನೋಡಿ ನನ್ನ ಹೃದಯಕ್ಕೆ ತುಂಬಾ ನೋವಾಗುತ್ತದೆ, ಪಾಪ, ಅಮ್ಮ ತೀರಿ ಹೋದ ನಂತರ ಎಷ್ಟು ಕಾಳಜಿಯಿಂದ ನನ್ನನ್ನು ಸಾಕಿದರು, ಆದರೆ ಈಗ ನಾನು ಕೇವಲ ಸ್ವಲ್ಪ ದಿನವೇ ಈ ಜಗದಲ್ಲಿ ಇರುವೆ ಎಂದು ಗೊತ್ತಾದ ನಂತರ ಅವರು ತುಂಬಾ ಅಶಕ್ತರಾಗಿದ್ದಾರೆ, ಕೇವಲ ನನ್ನ ಮುಂದೆ ನಗುತ ಇರುತ್ತಾರೆ, ಆದರೆ...."
ಇದನ್ನು ಕೇಳಿ ನನ್ನ ಅವಸ್ಥೆ ಹಾಳಾಯಿತು, ನನಗೆ ಅವಳಿಗೆ ಹೇಗೆ ಸಮಾಧಾನ ನೀಡುವುದು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಆಘಾತದಲ್ಲಿ ಕುಳಿತು ನಾನು ಅವಳಿಗೆ "ಚಿಂತಿಸ ಬೇಡ, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಅವಳ ಹತ್ತಿರ ಬೇರೆ ವಿಷಯ ಮಾತಾಡಿ ಅವಳನ್ನು ಸ್ವಲ್ಪ ನಗಿಸಿ ಅಂದು ಕಳಿಸಿದೆ.
ಮಾರನೆ ದಿವಸ ನಾನು ಅವಳಿಗೆ "ಡಿಯರ್, ನನ್ನ ಹೆಂಡತಿಯ ಊರಿನಲ್ಲಿ ಒಂದು ಸ್ವಾಮೀಜಿ ಇದ್ದಾರಂತೆ, ಅವರು ಈ ಕ್ಯಾನ್ಸರ್ ಕಾಯಿಲೆಗೆ ಮದ್ದು ಕೊಡುತ್ತಾರಂತೆ, ಆ ಮದ್ದಿನಿಂದ ತುಂಬಾ ಜನರ ಕಾಯಿಲೆ ನಿವಾರಣ ಆಗಿದೆಯಂತೆ".
ಅವಳು ಕ್ಷೀಣ ನಗು ಬೀರಿ "ನಿಜವಾಗಿಯೂ."
ನಾನು " ಎಸ್ ಡಿಯರ್, ಬಹುಶಃ ಆ ಮದ್ದಿನಲ್ಲಿ ದೈವಿಕ ಶಕ್ತಿ ಇರಬೇಕು, ನಾನು ನಾಳೆ ಇಂಡಿಯಾ ಹೋಗಿ ಊರಿನಿಂದ ನಿನಗೋಸ್ಕರ ಆ ಮದ್ದು ತರುತ್ತೇನೆ".
ಅವಳು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
ನಾನು ಕೋಪದಿಂದ "ನೋ, ನಥಿಂಗ್ ವಿಲ್ ಹ್ಯಾಪ್ಪೆನ್ ಟು ಯು" ("ಇಲ್ಲ, ನಿನಗೆ ಏನ್ ಆಗಲ್ಲ"), ನೀನು ಒಂದು ವಾರ ನನ್ನ ವೇಟ್ ಮಾಡು, ನಾನು ಬೇಗನೆ ಇಂಡಿಯಾ ಹೋಗಿ ಬರುತ್ತೇನೆ".
ಅವಳು "ನೋ ಅಂಕಲ್, ಯಾಕೆ ನೀವು ಇಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದಿರಿ, ಪ್ಲೀಸ್ ಡೊಂಟ್ ಗೋ"
ನಾನು " ನೋ , ಐ ವಿಲ್ ಗೋ, ಈ ವಾಂಟ್ ಯು ಟು ಬಿ ಪರ್ಫೆಕ್ಟ್" (ಇಲ್ಲ, ನಾನು ಹೋಗುವೆ, ನನಗೆ ನೀನು ಸರಿಯಾಗಬೇಕು)".
ಅವಳ ಕಣ್ಣಿಂದ ಕಣ್ಣೀರು ಹರಿಯಿತು "ಯು ಆರ್ ಲೈಕ್ ಏಂಜಲ್ ಫಾರ್ ಮಿ ಅಂಕಲ್" ( ನೀವು ನನಗೆ ದೇವದೂತರಂತೆ ಅಂಕಲ್").
ನಾನು "ನೋ ಡಿಯರ್, ಯು ಆರ್ ಅ ಏಂಜಲ್ ಬೇಬಿ, ವೇಟ್ ಫಾರ್ ಮಿ " (ಇಲ್ಲ ಡಿಯರ್, ನೀನು ದೇವದೂತೆ ಮಗು, ನನ್ನನ್ನು ಕಾಯು).
ಅಂದು ಅವಳು ಕಣ್ಣಲ್ಲಿ ಕಣ್ಣೀರು ತುಂಬಿ ನನಗೆ ವಿದಾಯ ಹೇಳಿದಳು.
ಆದರೆ ನಾನು ಹಿಂತಿರುಗಿ ನಾಲ್ಕು ದಿನವಾದರೂ ಅವಳು ಕಾಣದ ಕಾರಣ ನನಗೆ ಅವಳ ಬಗ್ಗೆ ಚಿಂತೆ ಮೂಡಿತು. ಅವಳಿಗೋಸ್ಕರ ತಂದ ಮದ್ದು ಕೈಯಲ್ಲಿ ಹಿಡಿದು ದಿನಾ ಬೆಳಿಗ್ಗೆ ಹುಚ್ಚನಂತೆ ಪಾರ್ಕಲ್ಲಿ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳು ಸಿಗಲಿಲ್ಲ. ಮನಸ್ಸಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿತು.
ಎಲ್ಲಿ ಹೋದಳು? ಮರಳಿ ಆಫ್ರಿಕಾ ಹೋದಳ? ಅಯ್ಯೋ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲಿಲ್ಲ.
ಹೇಗೋ ತನ್ನನು ತಾನು ಸಾವರಿಸಿದೆ, ಆದರೆ ದಿನನಿತ್ಯದ ಕೆಲಸದ ಮಧ್ಯೆ ಸಹ ಅವಳ ಯೋಚನೆ ಬರುತ್ತಿತ್ತು.
ಆ ದಿನ ಬೆಳಿಗ್ಗೆ ಆಫೀಸ್ ಬಂದು ಕೂತು ದಿನಪತ್ರಿಕೆ ನೋಡುತ್ತಿದ್ದಾಗ, ಹೀಗೆಯೇ ಒಂದು ಕಡೆ ನನ್ನ ಗಮನ ಹೋಯಿತು.
Sad demise (ದುಖಃ)
ಕೆಳಗೆ ಆ ಮುದ್ದು ಹುಡುಗಿಯ ಚಿತ್ರ ಇತ್ತು.
ನನ್ನ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿದು ಅವಳ ಚಿತ್ರದ ಮೇಲೆ ಬೀಳಲಾರಂಭಿಸಿತು, ದಿನಪತ್ರಿಕೆ ಹಿಡಿದು ಬ್ಯಾಗಲ್ಲಿ ಇಟ್ಟಿದ ಅವಳ ಮದ್ದು ಕಟ್ಟು ಕೈಯಿಂದ ತೆಗೆದೆ, ಅವಳು ಹೇಳಿದ ಮಾತು ನೆನಪಾಯಿತು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
by ಹರೀಶ್ ಶೆಟ್ಟಿ, ಶಿರ್ವ

Thursday, January 22, 2015

ಯಾರು ನನ್ನ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಬಿಟ್ಟು ಎಲ್ಲಿಯೋ ದೂರ ಈಗ ಹೋಗಬೇಡ ನೀನು
ನಿನಗೆ ನನ್ನಾಣೆ
ಜೊತೆಯಲ್ಲಿರು ಯಾರೆ ಆಗಲಿ ನೀನು
ಸುಳ್ಳೋ ಸತ್ಯನೋ ಅಥವಾ ಇದು ಭ್ರಮೆಯೋ
ನನ್ನವನಾಗಿ ಮಾಡಲು ಮನಸ್ಸನು
ಗಟ್ಟಿ ಮಾಡಿರುವೆ ಈಗಂತೂ
ಕೈಯನ್ನಿಡಿದು ನಡೆ ಇಂದಿನಿಂದ
ನಾನೇಳುವೆ ಎಲ್ಲರಿಂದ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಹುಡುಕಿ ಕೊಳ್ಳುವೆ ಎಲ್ಲ ಕಡೆ ಈಗಂತೂ ನೀನು
ತಿಳಿದಿರುವೆ ನಾನಿದು
ನಿನ್ನಾಗಿದ್ದೇನೆ ಎಂದಿನಿಂದ ತೇಲುತ್ತಿರುವೆ ನಾನು
ನಿನ್ನದೇ ಪ್ರಭಾವ ಇದು
ಸನಿಹ ಇರುವೆ ಪ್ರಜ್ಞೆಯಲಿ
ನೆನಪಲಿ ನಾನು ನಿನ್ನ
ನನ್ನ ನೆಲೆಯಾಗಿದೆ ಉಸಿರಲಿ ನಿನ್ನ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಮೂಲ : ಇರ್ಶಾದ್ ಕಾಮೀಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಚೈತ್ರ ಅಂಬಡಿಪುಡಿ, ಪಪೋನ್, ಸುನಿಧಿ ಚೌಹನ್
ಸಂಗೀತ : ಎಂ  ಎಂ ಕ್ರೀಮ್
ಚಿತ್ರ : ಸ್ಪೆಷಲ್ ೨೬

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Chhod kar na tu kahin bhi door ab jaana
Tujhko kasam hai
Saath rehna jo bhi hai tu
Jhooth ya sach hai, ya bharam hai
Apna banaane ka jatan kar hi chuke ab to
Baiyan pakad kar aaj chal
Main du bata sabko

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Dhoond hi loge mujhe tum har jagah ab to
Mujhko khabar hai
Ho gaya hun tera jab se Main hawa mein hoon
Tera asar hai
Tere paas hoon, ehsaas mein, main yaad mein teri
Tera thikana ban gaya ab saans mein meri

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Wednesday, January 21, 2015

ಜೀವನದ ತಿರುವು

ಜೀವನದ ತಿರುವು
------------------

ಯಾವಾಗಲೊಮ್ಮೆ ಈಗಲೂ ನಗುತ್ತಿದ್ದ ಅವನು, ಆದರೆ ಹೆಚ್ಚಾಗಿ ಈಗ ಅವನ ಮುಖದಲ್ಲಿ ಗಂಭೀರತೆ ಕಂಡು ಬರುತಿತ್ತು.  

ಗತಕಾಲವನ್ನು ನೆನೆದು ದುಖಃ ಉಮ್ಮಳಿಸಿ ಬರುತಿತ್ತು ಅವನಿಗೆ, ಜೀವನದ ಸ್ವರ್ಣಕಾಲವನ್ನು ಹೀಗೆಯೇ ವ್ಯರ್ಥ ಅಲೆದು ಕಳೆದದ್ದಕ್ಕೆ. 

ಅಮ್ಮ ತಮ್ಮ, ಅವರ ಇವರ ಸಹಾಯದಿಂದ ಹೇಗೋ ತನ್ನ ಕುಟುಂಬದ ಭಾರವನ್ನು ವಹಿಸಿಕೊಂಡಿದ್ದ ಅವನ ಮಕ್ಕಳೂ ದೊಡ್ಡವರಾಗಿದ್ದರು, ಹೇಗೋ ಜೀವನದ ಬಂಡಿ ಮೆಲ್ಲ ಮೆಲ್ಲನೆ ನಡೆಯುತ್ತಿತ್ತು. 

"ಆದರೆ ಇನ್ನೆನು......ಈ ಹಾಳು ರೋಗ ಹೇಗೆ ನನಗೆ ಬಂತು" ಎಂದು ಯೋಚಿಸಿ ಯೋಚಿಸಿ ಅವನಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು.

ತುಂಬಾ ಯೋಚಿಸಿ ತಮ್ಮನನ್ನು ಸಂಪರ್ಕಿಸಿದ, ಎಲ್ಲವನ್ನು ಬೇಗನೆ ಹೇಳಿ ಮುಗಿಸಿ ಬಿಟ್ಟ. ತಮ್ಮ ಇವನಿಂದ ಕೋಪಗೊಂಡಿದ್ದರೂ, ವಿಷಯ ಕೇಳಿ ತಮ್ಮನಿಗೆ ತೀವ್ರ ಆಘಾತವಾಯಿತು. 

ಯಾವಾಗಲು ಅವನಿಗೆ ಬುದ್ದಿ ಹೇಳಿ ಬೈಯ್ಯುತ್ತಿದ್ದ ತಮ್ಮ ಅವನ ಕಾಯಿಲೆಯ ಬಗ್ಗೆ ಕೇಳಿ ಸ್ತಬ್ದನಾದ, ಒಂದು ಧೀರ್ಘ ಉಸಿರೆಳೆದು ಅವನಿಗೆ ಸಮಾಧಾನದಿಂದ ಧೈರ್ಯ ಇಟ್ಟುಕೊಳ್ಳಲು ಹೇಳಿದ.

"ನಾನೀಗ ಎಲ್ಲ ಹಾಳು ಅಭ್ಯಾಸ ಬಿಟ್ಟು ಬಿಟ್ಟಿದ್ದೇನೆ" ಎಂದು ಹೇಳಿ ಅತ್ತ ಅವನು.

ತಮ್ಮ "ಏನು ಪ್ರಯೋಜನ, ಈಗ ತಡವಾಯಿತಲ್ಲ" ಎಂದು ಹೇಳಬೇಕೆಂದು ಬಯಸಿದ ಆದರೆ ಹೇಳಲಿಲ್ಲ.

"ಅಯ್ಯೋ, ಯಾಕೆ ಇಂತಹ ಕಾಯಿಲೆ ಅವನಿಗೆ ಬಂತು!"

"ಇನ್ನು ಆಯಿತಲ್ಲ ಬಿಡು, ಆಗುವುದೆಲ್ಲ ಆಗಿ ಹೋಯಿತು, ಇನ್ನು ಉಳಿದ ಜೀವನ ವ್ಯರ್ಥ ಮಾಡಬೇಡ, ಎಲ್ಲಾದರೂ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಳ್ಳು,ಆದಷ್ಟು ಸಹಾಯ ನಾನು ಮಾಡುವೆ, ಹೇಗಾದರೂ  ಕಷ್ಟಪಟ್ಟು ಇನ್ನಾದರು ನಿನ್ನ ಕುಟುಂಬವನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳು, ಧೈರ್ಯ ಇಡು, ನಾನಿದ್ದೇನೆ" ಎಂದು ಹೇಳಿ ಅಳು ತಾಳಲಾರದೆ ತಮ್ಮ ಫೋನ್ ಇಟ್ಟು ಬಿಟ್ಟ.

ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದ ಅವನು ಧೈರ್ಯ ಇಟ್ಟುಕೊಂಡು ನಡೆದ ಜೀವನದ ಹೊಸ ಹಾದಿಯನ್ನು ಹುಡುಕಲು, ತನ್ನ ಜೀವನಕ್ಕೆ ಒಂದು ಅರ್ಥ ಕೊಡಲು, ಒಂದು ಹೊಸ ಅಧ್ಯಾಯ ಬರೆಯಲು.

by ಹರೀಶ್ ಶೆಟ್ಟಿ, ಶಿರ್ವ 

Tuesday, January 20, 2015

ಓ ನನ್ನೊಲವೆ, ಓ ನನ್ನೊಲವೆ

!!ಓ ನನ್ನೊಲವೆ, ಓ ನನ್ನೊಲವೆ
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು!!

!!ದೇಹವನ್ನರ್ಪಿಸಿದೆ
ಮನಸ್ಸನ್ನರ್ಪಿಸಿದೆ
ಬೇರೇನೂ ನನ್ನಲಿಲ್ಲ
ನಿನ್ನಿಂದ ಇಟ್ಟಿದ ಭರವಸೆಯ ಪ್ರಿಯೆ
ದೇವರಿಂದಲೂ ಅದರ ಬಯಕೆಯಿಲ್ಲ
ಎಂದಿನಿಂದ ಒಂದಾದೆವು ನಾವು
ಈ ಜಗತ್ತಿಂದ ಅಪರಿಚಿತರಾದೆವು ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

!!ಪ್ರೀತಿಯ ಜಗತ್ತಲ್ಲಿ ಹೀಗೆ ಹೇಳುತ್ತಾರೆ
ಎರಡು ಹೃದಯ ಕಷ್ಟದಿಂದ ಸೇರುತ್ತದೆಯೆಂದು
ಅನ್ಯರ ಬಗ್ಗೆ ಏನನ್ನೂ ಹೇಳಲಿ
ಅಲ್ಲಿ ನಮ್ಮವರ ಸಹ ನೆರಳು ಬರಲು ಸಾಧ್ಯವಿಲ್ಲ
ಹಾಗೇನು ನೋಡಿ ಬಿಟ್ಟೆವು ನಾವು
ಏನು ವಿಷಯ, ಯಾಕೆ ಆಶ್ಚರ್ಯದಲ್ಲಿದ್ದೇವೆ ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

!!ನನ್ನವನೇ, ನಮ್ಮ ಈ ಮಿಲನ
ಸಂಗಮವಾಗಿದೆ ಗಂಗೆ ಜಮುನೆಯ
ಸತ್ಯ ಇದ್ದದ್ದು ಬಯಲಿಗೆ ಬಂದಿದೆ
ಕಳೆದದ್ದು ಒಂದು ಸ್ವಪ್ನವಾಗಿತ್ತು
ಇದು ಧರತಿ ಮನುಷ್ಯರ
ಬೇರೇನಲ್ಲ ಮನುಷ್ಯರು ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸಂಗಮ್

O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam

Tan saup diyaa, man saup diyaa
Kuchh aur to mere paas nahi
Jo tum se hai mere hamadam
Bhagavaan se bhi vo aas nahi
Bhagavaan se bhi vo aas nahi
Jis din se hue ek duje ke
Is duniya se anajaan hai ham
Ek dil ke do aramaan hai ham
O mere sanam o mere sanam

Sunate hai pyaar ki duniya me
Do dil mushkil se samaate hai
Kya gair vahaa apano tak ke
Saye bhi na aane paate hai
Saye bhi na aane paate hai
Hamane aakhir kya dekh liyaa
Kya baat hai kyo hairaan hai ham
Ek dil ke do aramaan hai ham
O mere sanam o mere sanam

Mere apane, apna ye milan
Sagam hai ye gaga jamunaa ka
Jo sach hai saamane aya hai
Jo bit gayaa ek sapanaa tha
Jo bit gayaa ek sapanaa tha
Ye dharati hai insaano ki
Kuchh aur nahi insaan hai ham
Ek dil ke do aramaan hai ham
O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam.
http://www.youtube.com/watch?v=EagBXY4TqKI

Sunday, January 18, 2015

ಪರುಷಮಣಿ

ಇಲ್ಲ ಈಗ
ಆ ಪರುಷಮಣಿ ನನ್ನತ್ತಿರ
ಕಳೆದು ಹೋಗಿದೆ ನನ್ನಿಂದ
ಕಷ್ಟ ಎಂಬುದು
ಬರಲೇ ಇಲ್ಲ ಎಂದು ಹೇಳಲಾರೆ
ಆದರೆ
ಒಳ್ಳೆ ರೀತಿಯಲ್ಲಿ
ಸಾಗುತ್ತಿತ್ತು ಈ ಬದುಕು
ಆ ಪರುಷಮಣಿಯ ಮಾಯೆಯಿಂದ

ಬದುಕು ಈಗಲೂ ಸಾಗುತ್ತಿದೆ
ಆದರೆ
ನೀರಸ
ಕೇವಲ ಪ್ರಾಯೋಗಿಕ
ಒಮ್ಮೆ ಒಮ್ಮೆ
ಸ್ವತಃ ತನ್ನನ್ನೇ ತೆಗಳಬೇಕೆಂದಾಗುತ್ತದೆ
ಛೇ...!
ಯಾಕೆ ಕಳೆದುಕೊಂಡೆ
ಆ ಪರುಷಮಣಿಯನ್ನು

ಕಷ್ಟ ಈಗಲೂ
ಅಷ್ಟೇನಿಲ್ಲ
ಆದರೆ ಜೀವನದಲಿ
ಒಂದು ಖಾಲಿತನ ತುಂಬಿದೆ
ಆ ಪರುಷಮಣಿಯನ್ನು
ಹುಡುಕಲಿಲ್ಲ ವೆಂದೆನಿಲ್ಲ
ಹುಡುಕಿದೆ
ಆದರೆ ಸ್ವತಹ ಕಳೆದುಕೊಂಡ
ಬಹುಮೂಲ್ಯ ವಸ್ತು
ಎಲ್ಲಿ ಪುನಃ ಪಡೆಯಲಾಗುತ್ತದೆ

ಸಾಗಿದೆ ಬದುಕು
ಒಂದೇ ದಾಟಿಯಲಿ
ಗುರಿ ಎಂಬದು ಯಾವುದೇ ಇಲ್ಲ
ಕೇವಲ ಕೆಲವು
ಜವಾಬ್ದಾರಿ ಇದೆ
ಅದನ್ನು ಒಳ್ಳೆಯ
ರೀತಿಯಿಂದ ನಿಭಾಯಿಸಿದರೆ ಆಯಿತು
ಇನ್ನೊಬ್ಬರ ಜೀವನಕ್ಕೆ
ನಾನೊಂದು ಪರುಷಮಣಿ ಆಗಿ
ಬದುಕಿಗೆ ಒಂದು ಅರ್ಥ
ನೀಡಿದರೆ ಸಾಕು
ಜೀವನ ಸಫಲ

by ಹರೀಶ್ ಶೆಟ್ಟಿ, ಶಿರ್ವ  

Saturday, January 17, 2015

ಕವಿ

ಒಬ್ಬ ಬರಹಗಾರನಿದ್ದ ನನ್ನೊಳಗೆ
ಆದರೆ ಇತ್ತೀಚಿನ ದಿನಗಳಲ್ಲಿ
ಅವನು ಕಾಣುವುದಿಲ್ಲ

ಸರಿ, ಇರಲಿ
ಕಂಡು ಬಂದು ಸಹ
ಕೇವಲ ಉಪದ್ರವ
ಬೇರೇನಿಲ್ಲ
ಅದೇ ದಿನನಿತ್ಯ
ಬೇಡಾದ ಕವಿತೆ ಕಟ್ಟುವುದು
ಅದೇ ನೆನಪಿನ ಕಥೆ
ಅದೇ ಬದುಕಿನ ಪಾಠ
ಅದೇ ಸತ್ಯದ ಅನಾವರಣ

ಇತರರಿಗೆ ಏನಾಗಬೇಕು
ಈ ಕವಿಯ ಗೋಳು ಕೇಳಿ
ಸುಮ್ಮನೆ ಇರಬಾರದೆ

ಈಗ ಅಡಗಿ ಕೂತಿದ್ದಾನೆ
ಹೊರ ಬರಲು ಇಚ್ಛೆ ಇಲ್ಲ ಬಹುಶಃ
ನನಗಂತೂ  ಖುಷಿ
ಸುಮ್ಮನೆ ಸ್ವಲ್ಪ ಸಮಯದ ಉಳಿತಾಯ
ಮನೆಯಲ್ಲಿ ಸಹ ಸಂತೋಷ
ಈಗ ಸ್ವಲ್ಪ ಅವರ ಮಾತೂ ಕೇಳುತ್ತೇನೆ ಎಂದು
ಇಲ್ಲಾದರೆ ನನ್ನಲ್ಲಿ ಕವಿ ನಿರತ ಇದ್ದರೆ
ಮನೆಯಲ್ಲಿ ಇದ್ದು ಸಹ ಇಲ್ಲದಂತೆ

ಆದರೆ ಕೆಲವೊಮ್ಮೆ
ಸಮಾಜದ ಕೆಲವು ದುರಂತ
ಜಗತ್ತಿನಲ್ಲಿ ನಡೆಯುವ
ಆಸಾಧಾರಣ ಘಟನೆ
ವಿಚಿತ್ರ ಆಗು ಹೋಗುಗಳನ್ನು ನೋಡಿ
ಕವಿ ಹೊರ ಬರಲು ಬಯಸುತ್ತಾನೆ
ಆದರೆ ಪುನಃ ನಿಲ್ಲುತ್ತಾನೆ
ಹೊರಗೆ ಬರುವುದಿಲ್ಲ
ಒಳಗೆ ಕೂತು ಕಣ್ಣೀರಿಡುತ್ತಾನೆ
ಬಹುಶಃ ಕವಿ ಒಳಗೆ ಬಂಧಿಯಾಗಿದ್ದಾನೆ
by ಹರೀಶ್ ಶೆಟ್ಟಿ,ಶಿರ್ವ

Tuesday, January 13, 2015

ಸಂಕ್ರಾಂತಿ

ಗೆಳತಿ,
ಅದೆಷ್ಟೋ ಸಂಕ್ರಾಂತಿ
ಬಂದೋಯಿತು
ಆದರೆ ಎಷ್ಟೋ ವರ್ಷ ಮುಂಚೆ
ನೀ ಕೊಟ್ಟ
ಸಿಹಿ ಎಳ್ಳಿನ ರುಚಿ ಇನ್ನೂ ಸಿಗಲಿಲ್ಲ

ಹರೀಶ್ ಶೆಟ್ಟಿ, ಶಿರ್ವ  

ಶಾಯರಿ

ಒಳ್ಳೆಯವರು ಒಳ್ಳೆತನ
ಕೆಟ್ಟವರು ಕೆಟ್ಟತನ ಕಂಡರು ನನ್ನ
ಯಾಕೆಂದರೆ
ಯಾರಿಗೆ ಎಷ್ಟು ಅವಶ್ಯಕತೆ ಇತ್ತು
ಅಷ್ಟೇ ಅವರು ಗುರುತಿಸಿದರು ನನ್ನನ್ನ
(ಒಂದು ಉರ್ದು ಶಾಯರಿಯ ಅನುವಾದ)
ಹರೀಶ್ ಶೆಟ್ಟಿ, ಶಿರ್ವ

ದೇವ ನಕ್ಕ

ಕಲ್ಲಿಗೆ ಕೈ ಮುಗಿದ
ಮನಸ್ಸಲ್ಲಿದ್ದ ದೇವ ನಕ್ಕ
ಹರೀಶ್ ಶೆಟ್ಟಿ, ಶಿರ್ವ

Monday, January 12, 2015

ಇದ್ಯಾರು ಬಂದರು

!!ಇದ್ಯಾರು ಬಂದರು
ಬೆಳಗಿತು ಸಭೆ ಯಾರ ಹೆಸರಿಂದ
ನನ್ನ ಮನೆಯಲಿ ಸೂರ್ಯ ಮೂಡಿದಂತಾಗಿದೆ ಸಂಜೆಯಿಂದ!!

!!ನೆನಪು ಕೆಲವು ಬಂದಂತೆ
ಅಥವಾ ಕಿರಣ ಬೆಳಗಿದಂತೆ
ಹೃದಯದಲಿ ನಿದ್ರಿಸಿದ ಗೀತೆಗಳು
ಪುನಃ ಎಚ್ಚರವಾದಂತೆ
ಬಯಕೆಗಳ ಮದ್ಯ ಸೋರಿತು
ಕಣ್ಣ ಲೋಟೆಯಿಂದ!!
ಇದ್ಯಾರು ಬಂದರು...

!!ಧ್ವನಿಯಿಂದ ಮೆಲ್ಲ ಮೆಲ್ಲನೆಯ
ಎದೆ ಬಡಿಯುತ್ತಿದೆ ಗೆಜ್ಜೆಯ
ಪ್ರತಿಯೊಂದು ಚೆಲುವೆಯಿಂದ ಹೆಸರವನ
ಕೇಳುತ್ತಿದೆ ತರಂಗ ಸೆರಗಿನ
ಗೌಪ್ಯವಾಗಿ ಯಾರೋ ರಾಧೆ
ಕೇಳುವಳು ತನ್ನ ಶ್ಯಾಮನಿಂದ!!
ಇದ್ಯಾರು ಬಂದರು...

!!ಏನೇಳಲಿ ಈ ಬರುವಿಕೆಗೆ
ಬಂದಿದ್ದಾನೆ ಪೀಡಿಸಲು ನನಗೆ
ನೋಡಿದನವನು ನಗು ನಗುತ
ಪ್ರತಿಯೊಂದು ಪರಿಚಿತ ಅಪರಿಚಿತನಿಗೆ
ಆದರೆ ಎಷ್ಟು ಅಸಡ್ಡೆಯಲ್ಲಿದ್ದಾನೆ
ನನ್ನದೇ ಅಭಿವಂದನೆಯಿಂದ!!
ಇದ್ಯಾರು ಬಂದರು..

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ನೌಶಾದ್
ಚಿತ್ರ : ಸಾಥಿ

ये कौन आया, रोशन हो गयी
महफ़िल किस के नाम से
मेरे घर में जैसे सूरज निकला हैं शाम से

यादे हैं कुछ आयी सी, या किरनें लहराईसी
दिल में सोये गीतों ने, ली हैं फिर अंगडाईसी
अरमानों की मदिरा छलकी, आखियों के जाम से

आहट पे हलकी हलकी, छाती धड़के पायल की
हर गोरी से ना मुसका, लहरें पूछे आँचल की
चूपके चूपके राधा कोई पूछे अपने शाम से

क्या कहीये इस आने को, आया हैं तरसाने को
देखा उस ने हस हस के, हर अपने बेगाने को
लेकिन कितना बेपरवाह हैं, मेरे ही सलाम से
http://www.youtube.com/watch?v=vM-djzXi9sk

Sunday, January 11, 2015

ಪ್ರತಿಭೆ

ಬೆಣ್ಣೆ ಕರಗ ಬೇಕೆಂದರೆ
ಬಿಸಿ ಸೋಕಲೇ ಬೇಕು,
ಪ್ರತಿಭೆ ಹೊರ ಹೊಮ್ಮ ಬೇಕೆಂದರೆ
ಪ್ರಯತ್ನದ ಬಿಸುಪಲ್ಲಿ ಉರಿಯಲೆ ಬೇಕು.
ಹರೀಶ್ ಶೆಟ್ಟಿ, ಶಿರ್ವ

ಹಗೆತನ

ಗೊತ್ತಿಲ್ಲ ಹೇಗೆ
ಮನಸ್ಸಲ್ಲಿ ಹಗೆತನ
ಇಟ್ಟುಕೊಂಡಿರುತ್ತಾರೆ ಜನರು!
ನನಗಂತೂ ಪ್ರೀತಿಯಿಂದಲೇ
ಬಿಡುವಿಲ್ಲ.
ಹರೀಶ್ ಶೆಟ್ಟಿ, ಶಿರ್ವ

ಬೆಂಗಳೂರು

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳ ಅನುಭವ.
೧. ಹೆಚ್ಚು ಆಂಧ್ರ, ತಮಿಳ್ನಾಡಿನ ಜನರೇ ಸಿಕ್ಕಿದ್ದು, ಕನ್ನಡಿಗರು ಸಿಕ್ಕಿದ್ದು ಕಡಿಮೆ.
೨. ಬಸ್ಸಲ್ಲಿ ಯಾತ್ರೆ ಮಾಡುವುದು ಸುಲಭ ಅಲ್ಲ ಎಂದು ಮೊದಲೇ ದಿನ ತಿಳಿಯಿತು, ಜನರ ಗುಂಪು ಗುಂಪು, ಒಬ್ಬಾತನಿಗೆ ನನ್ನ ಬ್ಯಾಗ್ ತಾಗಿದಕ್ಕೆ, ಅವನು ಬ್ಯಾಗ್ ಸಮೇತ ನನ್ನನ್ನು ಆಚೆಗೆ ದೂಡಿ ಬಿಟ್ಟ, ಬಸ್ಸಿನ ಕಂಡಕ್ಟರ್ ಜೊತೆ ನಾನು ಕನ್ನಡ ಮಾತನಾಡಿದಾಗ, ಟೋಪಿ,ಸನ್ ಗ್ಲಾಸ್ ಧರಿಸಿದ ನನ್ನನ್ನು ಒಂದು ವಿಚಿತ್ರ ದೃಷ್ಟಿಯಿಂದ ನೋಡಿ ನನಗೆ ಉತ್ತರ ನೀಡಿದ್ದು ಹಿಂದಿಯಲ್ಲಿ.
೩. ಬಸ್ಸಲ್ಲಿ ಹಚ್ಚಿದ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೪. ರೈಲ್ವೆ ನಿಲ್ದಾಣದಲ್ಲಿಯೂ ಹೆಚ್ಚಿನ ಜಾಹಿರಾತುಗಳಲ್ಲಿ ತಪ್ಪು ಕನ್ನಡ.
೫. ಬೆಂಗಳೂರಿನ ಹವಾಮಾನ, ದಿನಾಲೂ ಮಳೆಗಾಲದ ಹಾಗೆ, ಮೋಡ ಕವಿದ ವಾತಾವರಣ.
೬. ದಿನನಿತ್ಯ ಹೋಟೆಲಲ್ಲಿ ದೋಸೆ, ವಡ ಸಾಂಭಾರ್ ತಿಂದು ಬೋರು.
೭. ಮಾಲ್'ಗಳಲ್ಲಿ ಜನಜಂಗುಳಿ, ಗುಂಪು ಗುಂಪು ಜನರ ಸಮೂಹ, ಆದರೆ ಕನ್ನಡ ಮಾತನಾಡಿದರೆ ಜನರು ಉತ್ತರ ನೀಡುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ.
೮. ಕನ್ನಡ ಚಲನಚಿತ್ರಗಳ ಜಾಹಿರಾತು ಹಾಗು ಹೆಸರು ನೋಡಿ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ, ವಿಚಿತ್ರ ವಿಚಿತ್ರ ಹೆಸರು.
೯. ರಿಕ್ಷಾ ಅಂದರೆ ಅವರಿಗೆ ಸಣ್ಣ ಲೆಕ್ಕ ಗೊತ್ತೇ ಇಲ್ಲ, ೧೦೦/೨೦೦/೨೫೦ ಬಾಡಿಗೆ,ಕನಿಷ್ಠ ಬಾಡಿಗೆ ಅಂದರೆ ನಾನು ನೀಡಿದ್ದು ೩೦ ರೂಪಾಯಿ,ಆದರೆ ನಂತರ ನನಗೆ ತಿಳಿದದ್ದು ಆ ಸ್ಥಾನ ಅಲ್ಲಿಯೇ ಇತ್ತು, ಕ್ರಾಸ್ ಮಾಡಿ ಹೋಗಬಹುದಿತ್ತು.
೧೦. ಒಟ್ಟಾರೆ ಸಿಹಿ ಕಹಿ ಅನುಭವ, ಕೇವಲ ದೂರುವುದೇ ಸರಿಯಲ್ಲ, ಕೆಲವು ಒಳ್ಳೆಯ ಜನರೂ ಸಿಕ್ಕಿದರು ಹಾಗು ತನ್ನ ಸಹಾಯ ಹಸ್ತವನ್ನು ನೀಡಿದರು.
ಹರೀಶ್ ಶೆಟ್ಟಿ, ಶಿರ್ವ.

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...