Wednesday, June 10, 2015

ಅಹಂ ಅನುರಾಗ

ಹೆಜ್ಜೆ ಆ ತಿರುವಿನಲ್ಲಿಯೇ
ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು
ನಿಂತಿದ್ದೇನೆ
ಅನುರಾಗ ನನ್ನನ್ನು
ಒತ್ತಾಯಿಸುತ್ತಿದೆ
ಹಿಂತಿರುಗಿ ನೋಡು ಎಂದು
ಅಹಂ ಹೇಳುತ್ತಿದೆ
ತಿರುವು ದಾಟಿ ಬಿಡು ಎಂದು
ಆದರೆ ಅಂತರಂಗ ಹೇಳುತ್ತಿದೆ 
ತೆರೆದ ಕಿಟಕಿಯ ಹಿಂದೆ 

ಎರಡು ಕಣ್ಣು ಇಣುಕುತ್ತಿದೆ ಎಂದು
ಈಗಲೂ ನನ್ನ ನಿರೀಕ್ಷೆಯಲ್ಲಿ 

ಅವಳೂ ಎಚ್ಚರದಲ್ಲಿ ಇರುತ್ತಾಳೆ ಎಂದು
ಎಲ್ಲಿಯಾದರೂ ಅವಳ 

ಹೃದಯ ಮೂಲೆಯಲಿ 
ವೇದನೆ ಇರಬೇಕಲ್ಲವೇ
ಅವಳಿಗೆ ಹಠ ನಾನು ಕರೆಯಬೇಕೆಂದು
ನನ್ನ ಬೇಡಿಕೆ ಅವಳು ಕರೆಯಲೆಂದು
ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
क़दम उसी मोड़ पर जमे हैं
नज़र समेटे हुए खड़ा हूँ
जुनूँ ये मजबूर कर रहा है पलट के देखूँ
ख़ुदी ये कहती है मोड़ मुड़ जा
अगरचे एहसास कह रहा है
खुले दरीचे के पीछे दो आँखें झाँकती हैं
अभी मेरे इंतज़ार में वो भी जागती है
कहीं तो उस के गोशा-ए-दिल में दर्द होगा
उसे ये ज़िद है कि मैं पुकारूँ
मुझे तक़ाज़ा है वो बुला ले
क़दम उसी मोड़ पर जमे हैं
नज़र समेटे हुए खड़ा हूँ

Tuesday, June 2, 2015

ಘನಶ್ಯಾಮ ಸುಂದರ ಶ್ರೀಧರ

ಘನಶ್ಯಾಮ ಸುಂದರ ಶ್ರೀಧರ
ಅರುಣೋದಯವಾಯಿತು
ಎದ್ದೇಳು ಬೇಗ ವನಮಾಲಿ
ಮುಂಜಾವಿನ ಸ್ನೇಹಿತ ಬಂದಾಯಿತು

ನಂದನ ಕಂದನೇ ಸೂರ್ಯೋದಯವಾಯಿತು 
ರಾತ್ರಿಯ ಆಟ ಮುಗಿದಾಯಿತು
ಕ್ಷೀರವನು ತುಂಬಿ ಮೊಲೆಯಲಿ
ಹಸು ಕರೆಯುತ್ತಿದೆ ಕೂಗಿ ಕೂಗಿ
ಹರೆಯ ಹಸಿದ ಕರುಗಳು
ಇಣುಕುತ್ತಿದೆ ಬಾಗಿ ಬಾಗಿ
ಸ್ತನಪಾನ ಮಾಡುವ ಹಂಬಲದಲಿ

ಸಂಧ್ಯಾ ಮರದಲಿ ಆಶ್ರಯ ಪಡೆದ ಹಕ್ಕಿಗಳೆಲ್ಲ
ಅರುಣೋದಯಾದಂತೆ
ಹೊಟ್ಟೆ ಪಾಡಿಗಾಗಿ ಹಾರಿ ಹೋಯಿತೆಲ್ಲ
ಜೀವನೋಪಾಯಗೋಸ್ಕರ
ಮುಂಜಾವ ಹಿಡಿದು ನೇಗಿಲನು
ಹೊಲವೆಂಬ ತಿರ್ಥಸ್ಥಾನಕ್ಕೆ  ನಡೆದರು ರೈತರೆಲ್ಲ
ಹರಟೆ ಹೊಡೆಯುತ ಗೋಪಿಯರೆಲ್ಲ 
ಸೊಂಟಸುತ್ತ ಮಡಕೆ ಹಿಡಿದು
ಭಕ್ಷಿಸಲು ಮೊಸರನ್ನ ಮುಕುಂದನಿಗೆ
ಯಮುನಾ ತೀರಕ್ಕೆ ನಡೆದರೆಲ್ಲ

ತೇಜಸ್ಸು ನಿನ್ನಲ್ಲಿ ಪ್ರಜ್ವಲಿಸುತ್ತಿದೆ
ಕೋಟಿ ಸೂರ್ಯನ
ಹೋನಾಜಿ ನಮಿಸುವನು ದಿನನಿತ್ಯ
ಹೃದಯದಿಂದ ನಿನ್ನನ

ಅನುವಾದ : ಹರೀಶ್ ಶೆಟ್ಟಿ, ಶಿರ್ವ


ಮೂಲ : ಹೋನಾಜಿ ಬಾಳ
ಹಾಡಿದವರು : ಪಂಡಿತರಾವ್ ನಾಗರ್ಕರ್ /ಲತಾ ಮಂಗೇಶ್ಕರ್
ಸಂಗೀತ : ವಸಂತ್ ದೇಸಾಯಿ
ಮರಾಠಿ ಚಿತ್ರ :ಅಮರ್ ಭೂಪಾಲಿ

घनश्याम सुंदरा श्रीधरा अरुणोदय झाला
उठिं लवकरि वनमाळी उदयाचळी मित्र आला

आनंदकंदा प्रभात झाली उठी सरली राती
काढी धार क्षीरपात्र घेउनी धेनु हंबरती
लक्षिताती वासुरें हरी धेनु स्तनपानाला

सायंकाळीं एके मेळीं द्विजगण अवघे वृक्षीं
अरुणोदय होताच उडाले चरावया पक्षी
प्रभातकाळी उठुनि कावडी तीर्थ पथ लक्षी
करुनि सडासंमार्जन गोपी कुंभ घेऊनी कुक्षीं
यमुनाजळासि जाति मुकुंदा दध्योदन भक्षी

कोटी रवीहून तेज आगळें तुझिया वदनाला
होनाजी हा नित्य ध्यातसे हृदयी नाम माला
https://www.youtube.com/watch?v=LQWSzQcOTGs



Sunday, May 10, 2015

"ಅಮ್ಮ"

ಚಿತ್ರ ಕೃಪೆ : ಗೂಗಲ್ 
"ಅಮ್ಮ"

ಹಿಟ್ಟಿನ ಶುದ್ಧ ರೊಟ್ಟಿಯ ಮೇಲೆ, ಹುಳಿ ಚಟ್ನಿಯ ಹಾಗೆ ಅಮ್ಮ
ನೆನಪಾಗುತ್ತದೆ ಆ ಒಲೆ, ಪಾತ್ರೆ, ಚಿಮ್ಮಟ, ಊದುಕೊಳವೆಯ ಹಾಗೆ ಅಮ್ಮ

ಬಿದಿರಿನ ಮಂಚದ ಮೇಲೆ, ಪ್ರತಿಯೊಂದು ಧ್ವನಿಗೆ ಕಿವಿ ಕೊಟ್ಟು ಕೇಳುವ
ಅರ್ಧ ನಿದ್ರೆಯಲಿ ಅರ್ಧ ಎಚ್ಚರ, ದಣಿದ ಮಧ್ಯಾಹ್ನದ ಹಾಗೆ ಅಮ್ಮ

ಹಕ್ಕಿಗಳ ಕಳರವದಲಿ ಪ್ರತಿಧ್ವನಿಸುವ ರಾಧೆ ಮೋಹನ ಅಲಿ ಅಲಿ
ಕೋಳಿಯ ಕೂಗಿಗೆದ್ದು, ಮನೆಯ ಬಾಗಿಲ ಚಿಲಕದ ಹಾಗೆ ಅಮ್ಮ

ಮಡದಿ,ಮಗಳು,ಸೋದರಿ,ನೆರೆಯವಳು, ಸ್ವಲ್ಪ ಸ್ವಲ್ಪ ಎಲ್ಲರಲ್ಲೂ
ಇಡೀ ದಿನ ಒಂದು ಹಗ್ಗದ ಮೇಲೆ, ನಡೆಯುವ ಪ್ರಬುದ್ಧ ಕಲಾವಿದೆಯಂತೆ ಅಮ್ಮ

ಹಂಚಿಕೊಂಡು ತನ್ನ ಚಹರೆ, ಹಣೆ, ಕಣ್ಣನ್ನು ಅದೆಲ್ಲಿಗೆ ಹೋಗಿ ಬಿಟ್ಟಳು
ಹರಿದು ಹೋದ ಹಳೆ ಒಂದು ಚಿತ್ರ ಪುಸ್ತಕದಲ್ಲಿ ಚಂಚಲ ಹುಡುಗಿಯ ಹಾಗೆ ಅಮ್ಮ

ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

" माँ "

बेसन की सोंधी रोटी पर, खट्टी चटनी जैसी माँ
याद आती है चौका, बासन, चिमटा, फूंकनी जैसी माँ

बांस की खुर्री खाट के ऊपर, हर आहट पर कान धरे
आधी सोई आधी जागी, थकी दोपहरी जैसी माँ

चिड़ियों के चहकार में गूंजे, राधा - मोहन  अली- अली
मुर्गी की आवाज़ से खुलती, घर की कुण्डी जैसी माँ

बीवी, बेटी, बहन, पड़ोसन, थोड़ी थोड़ी सब में
दिन भर इक रस्सी के ऊपर, चलती नटनी जैसी माँ

बाँट के अपना चेहरा, माथा, आँखें, जाने कहाँ गयी
फटे पुराने इक एलबम, में चंचल लड़की जैसी माँ...

निदा फ़ाज़ली 

Tuesday, April 28, 2015

ಪ್ರಕೃತಿ

ನಾಶವಾಯಿತು ನಗರ
ಅಲ್ಲಲ್ಲಿ ನಡೆಯುತ್ತಿದೆ ಶವ ಸಂಸ್ಕಾರ
ಬೆಂಕಿಯ ಜ್ವಾಲೆ ಏರಿದೆ ಆಕಾಶ ಎತ್ತರ
ಭೂಮಿಗೆ ಇಂದು ಬೂದಿ ಸಿಂಗಾರ
---
ಭಾವರಹಿತ ಮುಖ
ಸೋತು ಹೋದ ಕಂಗಳು
ಜೀವರಹಿತ ದೇಹ
ಹೋದರು ನನ್ನವರೆನ್ನುವವರೆಲ್ಲ
ಅಯ್ಯೋ
ಆದರೆ ಬದುಕು ಬಾಕಿ ಇದೆಯಲ್ಲ
---
ಅನಾಥ ನಯನ
ಏನಾಯಿತು ಎಂದು ಅರಿವಿಲ್ಲ
ಅಮ್ಮ ಇಲ್ಲ ಅಪ್ಪನೂ ಇಲ್ಲ
ಅಲ್ಲಲ್ಲಿ ಓಡುತ್ತಿದ್ದಾರೆ ಎಲ್ಲ
ಯಾರಿಗೂ ಮುದ್ದು ಕೂಸಿನ ಗೋಚರವಿಲ್ಲ
---
ಪ್ರಕೃತಿ ಮೌನವಾಗಿದೆ
ಅಲ್ಲೆಲ್ಲೋ ಹಕ್ಕಿಯ ಕಲರವ ಕೇಳುತ್ತಿದೆ
ಗಗನ ಕೆಂಪೇರಿದೆ
ಪುನಃ ಹೊಸ ಸೂರ್ಯ ಮೂಡಿ ಬಂದಿದೆ
by ಹರೀಶ್ ಶೆಟ್ಟಿ, ಶಿರ್ವ

Monday, April 27, 2015

ವಾಸ್ತವಿಕತೆ

ಮಂದಿರವೂ ಬಿತ್ತು
ಮಸೀದಿಯೂ ಬಿತ್ತು
ಆಚೆ ಈಚೆ ಶವಗಳು ಬಿದ್ದಿತ್ತು
ಎಲ್ಲೆಡೆ ಇಟ್ಟಿಗೆಯ ತುಂಡುಗಳ ರಾಶಿ ಇತ್ತು
ಮಂದಿರದ ಅವಶೇಷ  ಹಾಗು
ಮಸೀದಿಯ ಅವಶೇಷ ಒಟ್ಟಿಗೆ ಮಣ್ಣ ಪಾಲಾಯಿತು
ಪಂಡಿತ ಮೌಲವಿ ಇಬ್ಬರೂ
ಒಬ್ಬರನೊಬ್ಬರನ್ನು ಅಪ್ಪಿಕೊಂಡು ನಿಂತಿದ್ದರು ಅದರ ಮೇಲೆ
ಇಬ್ಬರ ಕಣ್ಣಿನಿಂದಲೂ ಧಾರಾಳವಾಗಿ ಅಶ್ರು ಹರಿಯುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ 

Sunday, April 26, 2015

ಪ್ರಕೃತಿಯ ವಿಕೋಪ

ಮನೆ ಕಟ್ಟಿದರು
ಅರಮನೆ ಕಟ್ಟಿದರು
ಪ್ರೀತಿಗೋಸ್ಕರ ತಾಜಾ ಮಹಲ್ ಕಟ್ಟಿದರು
ಕನಸು ಕಟ್ಟಿದರು
ನನಸು ಮಾಡಿ ಮೆರೆದರು 
ಅಹಂ ನೆತ್ತಿಗೇರಿ ದೇವರನ್ನೂ ಮರೆದರು
ಮನುಜರೆ ಮಾನವೀಯತೆಯ ವೈರಿಯಾದರು
ಆದರೆ ಪ್ರಕೃತಿಯ ವಿಕೋಪದ ಮುಂದೆ ನಡೆಯದು ಈ ಎಲ್ಲ ಆಟ
ನಾಲ್ಕು ದಿನದ ಜೀವನ ನಾಲ್ಕು ದಿನದ ವೈವಾಟ
ನಮ್ಮ ಕೈಯಲ್ಲಿಯೇ ಇದೆ ನಮ್ಮ ಕರ್ಮ ಧರ್ಮ
ಎಂದೂ ಮರೆಯದಿರಿ ಈ ಜೀವನದ ಮರ್ಮ
ಕೇವಲ ಕೆಲವೇ ಸೆಕೆಂಡ್ ಬೇಕು ಎಲ್ಲವೂ ಮುಗಿಯಲು
ಉಸಿರು ಉಳಿಯದು ನಂತರ ಪಶ್ಚಾತಾಪ ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

ಈ ಹೃದಯ ಈ ಮರುಳು ಹೃದಯ ನನ್ನ

ಚಿತ್ರ ಕೃಪೆ : Google 
ಘಝಲ್ ಕೊಂಡಿ : Dailymotion
!!ಈ ಹೃದಯ ಈ ಮರುಳು ಹೃದಯ ನನ್ನ
ಯಾಕೆ ಬಾಡಿ ಹೋಯಿತು ಏಕಾಂಗಿತನ
ಈ ಮರುಭೂಮಿಯಲಿ ಒಂದು ಶಹರ ಇತ್ತು
ಅದೇನಾಯಿತು ಏಕಾಂಗಿತನ!!
ಈ ಹೃದಯ...

!!ನಿನ್ನೆ ಇರುಳಲ್ಲಿ ನನ್ನನ್ನು
ಗುಪ್ತ ಸ್ವರವೊಂದು ಚಕಿತಗೊಳಿಸಿತು
ನಾನು ಕೇಳಿದೆ ನೀನ್ಯಾರೆಂದು
ಅದು ಹೇಳಿತು ಏಕಾಂಗಿತನ!!
ಈ ಹೃದಯ...

!!ಒಂದು ನೀನು
ಶತಮಾನಗಳಿಂದ ನನ್ನ
ಸಹಯಾತ್ರಿ ಹಾಗು ಅಪ್ತ ಸ್ನೇಹಿತೆ
ಒಂದು ನಾನು
ನಿನ್ನ ಉಪಸ್ಥಿತಿಯಿಂದಲೇ ಅಜ್ಞಾನಿ ಏಕಾಂಗಿತನ!!
ಈ ಹೃದಯ...

!!ಒಂದು ಅಪರಿಚಿತ ತಂಗಾಳಿ
ನನ್ನಲ್ಲಿ ಕೇಳಿದಾಗ
ನನ್ನ ಅಳಲಿನ ಕಾರಣ
ಒದ್ದೆ ಮರುಳಲಿ ನಾನು ಬರೆದೆ ಏಕಾಂಗಿತನ!!
ಈ ಹೃದಯ...

!!ಈ ವೇದನೆಯ ಏಕಾಂತತೆ
ಈ ಮರುಭೂಮಿಯ ನೀರಸ ಪ್ರವಾಸ
ನಾನಂತೂ ಸೋತೋದೆ
ತನ್ನ ಹೇಳು ಏಕಾಂಗಿತನ!!
ಈ ಹೃದಯ..

!!ಜನರೇ ನಾನೇಗೆ
ಆ ಶಹರದಲಿ ಬದುಕಲಿ
ಮುಕ್ತವಾಗಿ ಯೋಚಿಸುವುದು
ಅಪರಾಧವೆಂದು ಪರಿಗಣಿಸಿದಲ್ಲಿ
ಆದರೆ ಅದರ ಸಜೆ ಏಕಾಂಗಿತನ!!
ಈ ಹೃದಯ...

!!ನಿನ್ನೆ ರಾತ್ರಿ
ಏಕಾಂಗಿ ಚಂದಿರನನ್ನು ನೋಡಿದೆ
ನಾನು ಸ್ವಪ್ನದಲಿ
ಬಹುಶಃ ಇದು ನನಗೆ
ಇಷ್ಟವಾಗಬಹುದು ಸದಾ ಏಕಾಂಗಿತನ!!
ಈ ಹೃದಯ...
(ಏಕಾಂಗಿತನ = ಅಲೆಮಾರಿತನ )

ಮೂಲ : ಮೊಹಸಿನ್ ನಕ್ವಿ
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗುಲಾಮ್ ಅಲಿ
ಆಲ್ಬಮ್ : ಮಾಟಿ ಮಾಂಗೆ ಖೂನ್  

Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..

Kal shab mujhe beshakl ki awaaz ne chaunka diya,
Main ne kaha tu kaun hai, usne kaha aawaargi..

Ik tuu ki sadiyon se mere, hamraah bhi hamraaz bhi,
Ik main ki tere naam se naa aashnaa aawaargi..

Ek ajnabi jhaunke ne jab poocha mere gham ka sabab
sehera ki bheegi ret per, maine likha aawaargi..

Ye dard ki tanhaiyaan, ye dasht kaa viraan safar
hum log to ukta gaye apni suna, aawaargi..

Logon bhala us sheher mein kaise jiyenge hum jahaan
ho jurm tanhaa sochnaa, lekin sazaa aawaargi..

Kal raat tanha chaand ko dekha tha maine khwaab mein
“Mohsin” mujhe raas aayegii shaayad sada aawaargi..


Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..
http://www.dailymotion.com/video/x193b8a_yeh-dil-yeh-pagal-dil-mera-by-ghulam-ali_music

Saturday, April 25, 2015

ಅವಶ್ಯಕತೆ

ಗೆಳತಿ,
ಈ ಸಣ್ಣ ಪುಟ್ಟ ವಿಷಯಕ್ಕೆಲ್ಲ
ಮುನಿಸಿ ಕೂತು
ನಮ್ಮಲ್ಲಿ ಅಂತರ ಬೆಳಸದಿರು,
ನನಗೆಷ್ಟು ನಿನ್ನ 
ಅವಶ್ಯಕತೆ ಇದೆಯೋ,
ಅಷ್ಟೇ ನಿನಗೂ ನನ್ನ
ಅವಶ್ಯಕತೆ ಇದೆ ಎಂಬ ಸತ್ಯ ಮರೆಯದಿರು.
by ಹರೀಶ್ ಶೆಟ್ಟಿ, ಶಿರ್ವ

Thursday, April 23, 2015

ಒಬ್ಬ ರೈತ ಸಾಯುತ್ತಾನೆ

ಮಳೆ ಬರದಿದ್ದಾಗ
ಭೂಮಿ ಬಂಜರಾದಾಗ  
ಆಕಾಶವನ್ನು ಸತತ ದಿಟ್ಟಿಸಿ ನೋಡುವ ಕಣ್ಣುಗಳು ಸೋತು ತಗ್ಗಿದಾಗ
ಪರಿವಾರದ ಮಕ್ಕಳು ತುತ್ತು ಅನ್ನಕ್ಕಾಗಿ ಅತ್ತಾಗ
ಹೆಂಗಸರು ನೆರೆಹೊರೆಯಲಿ ಧಾನ್ಯಕ್ಕಾಗಿ ಓಡಾಡುವಾಗ
ಬ್ಯಾಂಕಿನ ಸಾಲದ ಕಂತು ತುಂಬಿಸದೆ
ಅವರಿಂದ ಬೆದರಿಕೆ ಬಂದಾಗ
ಒಬ್ಬ ರೈತ ಸಾಯುತ್ತಾನೆ

ಜಗಕ್ಕೆ ಅನ್ನ ನೀಡುವವನು
ದಿನ ರಾತ್ರಿ ದುಡಿಯುವವನು
ಯಾವುದೇ ಕಷ್ಟವನ್ನು ಸಹಿಸಿ
ತನ್ನ ನೋವು ದುಡಿಮೆಯಿಂದ ಭೂಮಿಗೆ ಅರ್ಪಿಸುವನು
ಇದ್ದಕ್ಕಿದ್ದಂತೆ ಆಪತ್ತು ಬಂದಾಗ
ಯಾವುದೇ ಹಾದಿ ಕಾಣದಾಗ
ಜೀವನದಿಂದ ಹತಾಶೆ ಉಂಟಾದಾಗ
ಒಬ್ಬ ರೈತ ಸಾಯುತ್ತಾನೆ

ಅನ್ನದಾತ ಅವನು
ಜಗತ್ತಿನ ಹೊಟ್ಟೆ ಕಾಪಾಡುವವನು
ಪುಷ್ಕಲ ನೀಡಿ ಸ್ವಲ್ಪ ಪಡೆಯುವವನು
ಯಾವುದೇ ಹಂಗಿಲ್ಲದೆ ಜೀವಿಸುವವನು
ಪರಿಶ್ರಮವೇ ಭಗವಂತ ಎನ್ನುವವನು
ಮಣ್ಣನ್ನು ಪೂಜಿಸುವವನು
ಮಣ್ಣೇ ಕಲ್ಲಾದಾಗ
ಒಬ್ಬ ರೈತ ಸಾಯುತ್ತಾನೆ

ನಮ್ಮನ್ನು ಕಾಪಾಡಿ ಎನ್ನುವನು ಅವನು
ನಮಗೋಸ್ಕರ ಹೋರಾಡಿ ಎನ್ನುವನು ಅವನು
ಕೇವಲ ಸಹಾಯ ಹಸ್ತ ನೀಡಿ ಎನ್ನುವನು ಅವನು
ಕೇವಲ ನಮ್ಮ ಶ್ರಮಕ್ಕೆ ತಕ್ಕ ಬೆಲೆ ಕೊಡಿ ಎನ್ನುವನು ಅವನು
ಇಲ್ಲವಾದರೆ
ದುಡಿಮೆ ವ್ಯರ್ಥವಾಯಿತೆಂದು ತಿಳಿದು ಬಂದಾಗ
ಬೆವರಿನ ಬೆಲೆ ಸಿಗದೇ ಇದ್ದಾಗ
ತಾನು ಮಾಡಿದ ಉತ್ಪನ್ನದಿಂದ
ಇನ್ಯಾರೋ ಹಣ ಸಂಪಾದಿಸುವುದನ್ನು ಕಂಡು
ಕಣ್ಣಿಂದ ಧಾರಾಳವಾಗಿ ಅಶ್ರು ಸುರಿದಾಗ
ಪ್ರತಿದಿನವೂ
ಒಬ್ಬ ರೈತ ಸಾಯುತ್ತಾನೆ

by ಹರೀಶ್ ಶೆಟ್ಟಿ, ಶಿರ್ವ 

Wednesday, April 22, 2015

ಜಗತ್ತನ್ನು ಸೃಷ್ಟಿಸಿದವನೆ

ಚಿತ್ರಕೃಪೆ : Google 
ಹಾಡಿನ ಕೊಂಡಿ :You Tube 
!!ಜಗತ್ತನ್ನು ಸೃಷ್ಟಿಸಿದವನೆ
ಮನಸ್ಸಲ್ಲಿ ನಿನ್ನ ಬಂತು ಅದೇನು
ಯಾಕೆ ಸೃಷ್ಟಿಸಿದೆ ಜಗತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ಯಾಕೆ ಸೃಷ್ಟಿಸಿದೆ ನೀನು ಮಣ್ಣಿನ ಗೊಂಬೆಗಳನ್ನು
ಧರತಿ ಇದು ಸುಂದರ ಸುಂದರ
ತೇಜಸ್ವಿ ಮುಖಗಳನ್ನು
ಯಾಕೆ ಸೃಷ್ಟಿಸಿದೆ ಜಗತ್ತಿನ ಆಟಗಳನ್ನು
ಅದರಲಿ ನಡೆಸಿದೆ ಯೌವನದ ಜಾತ್ರೆಗಳನ್ನು  
ಮೌನದಿ ತಮಾಷೆ ನೋಡುವೆ
ನಿನ್ನ ವಿಧಿಯ ಗಮ್ಮತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ನೀನೂ ನೋವನ್ನು ಅನುಭವಿಸಿರಬೇಕು ಮನಸ್ಸನ್ನು ನಿರ್ಮಿಸಿ
ಬಿರುಗಾಳಿ ಈ ಪ್ರೀತಿಯ ಮನಸ್ಸಲ್ಲಿ ಅಡಗಿಸಿ
ಯಾವುದಾದರು ಚಿತ್ರ ಇರಬೇಕು ಕಣ್ಣಲ್ಲಿ ನಿನ್ನ
ಕಣ್ಣೀರು  ಸುರಿದಿರಬೇಕು ಕಣ್ಣಿಂದ ನಿನ್ನ
ಹೇಳು ಏನು ಕಲ್ಪನೆ ಬಂತು ನಿನಗೆ
ಯಾಕೆ ಹುಟ್ಟಿಸಿದೆ ಪ್ರೀತಿಯನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ಪ್ರೀತಿ ಸೃಷ್ಟಿಸಿ ನೀನು ಬದುಕುವುದನ್ನು ಕಲಿಸಿದೆ
ನಗುವುದನ್ನು ಕಲಿಸಿದೆ, ಅಳುವುದನ್ನು ಕಲಿಸಿದೆ
ಜೀವನದ ಪಥದಲಿ ಸಂಗಾತಿ ನೀಡಿದೆ
ಸಂಗಾತಿ ನೀಡಿ ಕನಸು ಹುಟ್ಟಿಸಿದೆ
ಕನಸು ಹುಟ್ಟಿಸಿ ನೀನು
ಯಾಕೆ ನೀಡಿದೆ ಅಗಲಿಕೆಯ ನೋವನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ತೀಸ್ರಿ ಕಸಮ್

दुनियाँ बनाने वाले, क्या तेरे मन में समायी
काहे को दुनियाँ बनायी, तूने काहे को दुनियाँ बनायी

काहे बनाये तू ने माटी के पुतले
धरती ये प्यारी प्यारी, मुखड़े ये उजले
काहे बनाया तू ने दुनियाँ का खेला
जिस में लगाया जवानी का मेला
गुपचुप तमाशा देखे, वाह रे तेरी खुदाई

तू भी तो तड़पा होगा मन को बनाकर
तूफां ये प्यार का मन में छुपाकर
कोई छबी तो होगी आँखों में तेरी
आँसू भी छलके होंगे पलकों से तेरी
बोल क्या सूझी तुझ को, काहे को प्रीत जगाई

प्रीत बना के तू ने जीना सिखाया
हसना सिखाया, रोना सिखाया
जीवन के पथ पर मीत मिलाये
मीत मिला के तू ने सपने जगाये
सपने जगा के तू ने, काहे को दे दी जुदाई
https://www.youtube.com/watch?v=V2npO5E7IBM

Tuesday, April 21, 2015

ಫೇಸ್ಬುಕ್

ವಿಚಿತ್ರ ಈ ಫೇಸ್ಬುಕ್ ತಾಣ
ಅವರವರ ಮಟ್ಟಿಗೆ ಅವರೇ ಜಾಣ
ತಕ್ಷಣ ಕಳಿಸುತ್ತಾರೆ ಗೆಳೆತನದ ಆಮಂತ್ರಣ
ಕೆಲವು ದಿನ ನಮಸ್ಕಾರ ಪ್ರಣಾಮ
ಮತ್ತೊಂದು ದಿನ ಗೆಳೆತನದ ಪಟ್ಟಿಯಲ್ಲಿ ಅವರ ಇರುವುದಿಲ್ಲ ನಾಮ

ಆರಂಭದಲ್ಲಿ ಎಲ್ಲೆಲ್ಲಿಂದ ಒದಗಿ ಬರುತ್ತದೆ ನಂಟು
ಪ್ರೀತಿ ಮೋಹ ಗಮ್ಮತ್ತು
ಲೈಕುಗಳ ವರ್ಷ, ಕಮೆಂಟು ಬರುವುದಕ್ಕೆ ಇಲ್ಲ ಪುರುಸೊತ್ತು
ಜನ್ಮ ದಿನದಂದು ಕೇಕ್, ಉಪಹಾರ, ಜನ್ಮ ದಿನದ ಕವಿತೆ
ದಿನ ರಾತ್ರಿ ಸಂದೇಶ ಮಾತುಕತೆ

ನಂತರ ಕಾರಣವಿಲ್ಲದೆ ಅವರಾಗುತ್ತಾರೆ ದೂರ ದೂರ
ನಮ್ಮ ಸಂದೇಶಕ್ಕೂ ಅವರ ಇರುವುದಿಲ್ಲ ಉತ್ತರ
ನಮ್ಮ ಬರಹಕ್ಕೆ ಅವರ ಲೈಕು ಕಮೆಂಟುಗಳ ಬರಗಾಲ
ಜನ್ಮ ದಿನದಂದು ಸಾದಾ ಶುಭಾಶಯವೂ ಇಲ್ಲ
ವಿಚಿತ್ರ ಏನೆಂದರೆ ಗೆಳೆತನದ ಪಟ್ಟಿಯಲ್ಲಿ ಇದ್ದು ಸಹ ಅವರಿಲ್ಲ

ಕೆಲವು ಮಿತ್ರರ ವಿಚಿತ್ರ ನಡುವಳಿಕೆ
ನಂಬದ ವ್ಯಥೆ ನಂಬದ ಕಥೆ
ಕೆಲವರಿಗೆ ಬೇಕು ದಾನ
ಕೆಲವರು ಕೇಳುತ್ತಾರೆ ಸಾಲ
ನಾವು ಮೌನ ಧರಿಸಿದಾಗ ಸಿಗುತ್ತದೆ ಅವರ ಬೈಗುಳ

ಹಳೆಯಾದಂತೆ ಹತ್ತಿರದ ಗೆಳೆಯರು ಕಣ್ಮರೆ
ನಮ್ಮ ತಲೆಯಲ್ಲಿ ಎಂತೆಂತಹ ಯೋಚನೆ
ಇದೇ ಫೇಸ್ಬುಕ್ ಮಾಯೆ
ಇದೇ ಫೇಸ್ಬುಕ್ ಗೆಳೆತನದ ಅರ್ಥ
ಒಂದೊಂದು ವೇಳೆ ಅನಿಸುತ್ತದೆ ಇದು ಕೇವಲ ಸಮಯ ವ್ಯರ್ಥ

ಆದರೆ ಇದನ್ನು ಹೊರತು
ಇಲ್ಲಿ ಒಳ್ಳೆಯವರೂ ಇದ್ದಾರೆ
ಸ್ನೇಹದ  ಸಂಬಂಧದ ಅರ್ಥ ತಿಳಿದಿದ್ದಾರೆ
ಅವರಿಂದಲೇ ಈಗಲೂ ಫೇಸ್ಬುಕ್ ಆಗಿದೆ ಇಷ್ಟದ ಹವ್ಯಾಸ
ಹೊರಗಿನ ಜಗ ಹಾಗು ಫೇಸ್ಬುಕ್ ಇದರಲ್ಲಿ ಇಲ್ಲ ಹೆಚ್ಚು ವ್ಯತ್ಯಾಸ

by ಹರೀಶ್ ಶೆಟ್ಟಿ, ಶಿರ್ವ 

Saturday, April 18, 2015

ಒಂದು ಗೆರೆ ಎಳೆಯಿರಿ

ಒಂದು ಗೆರೆ ಎಳೆಯಿರಿ
ಎಲ್ಲವೂ ಬೇಕೆಂದು ಹೇಳದಿರಿ
ನಿಯಮ ಇರಲಿ
ನಿಯಂತ್ರಣವಿರಲಿ
ತನಗೆ ಅವಶ್ಯಕ ಏನೆಂದು ತಿಳಿದಿರಲಿ
ಒಂದು ಗೆರೆ ಎಳೆಯಿರಿ

ತನಗೆ ಏನು ಒಳ್ಳೆಯದು
ಏನು ಒಳ್ಳೆಯದಲ್ಲ
ಇದರ ಅರಿವಿರಲಿ
ಅನುಭವ ನುಡಿಯಲಿ
ನುರಿತ ಮೈಯಲ್ಲಿ ಯೌವನ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಹಾದಿಯಲ್ಲಿ ರೇಶಮಿ ಹಾಸಿಗೆಯೇನಿಲ್ಲ
ಕಲ್ಲು ಮುಳ್ಳುಗಳು ಅಧಿಕ
ಮುಂದಾಲೋಚಿಸಿ ಹೆಜ್ಜೆಯನ್ನಿಡಿ
ಒಂದು ವೇಳೆ ತಪ್ಪಿ ಬಿದ್ದರೂ
ಎದ್ದೇಳಲು ಶಕ್ತಿ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಜರ್ಜರ ಮನೆಯೆಂದು
ಕಲ್ಲು ಎಸೆಯುವವರ ಸಂಖ್ಯೆ ಹೆಚ್ಚು
ಕಿಟಕಿ ಗಾಜು ಮುರಿದರೆ ಹೆದರದಿರಿ
ಧೈರ್ಯದಿಂದಿರಿ
ಚೆನ್ನಾಗಿ ನಿರ್ವಹಿಸಲ್ಪಟ್ಟ ಇಟ್ಟಿಗೆ ಎಂದೂ ಮುರಿಯದು
ಸಲ್ಲದ ಮಾತಿಗೆ ಪ್ರತಿಕ್ರಿಯಿಸದಿರಿ
ಒಂದು ಗೆರೆ ಎಳೆಯಿರಿ

by ಹರೀಶ್ ಶೆಟ್ಟಿ, ಶಿರ್ವ 

Saturday, April 4, 2015

ಯಾರನ್ನು ಮರೆಯಲು ಬಯಸುತ್ತೇನೋ

!!ಯಾರನ್ನು ಮರೆಯಲು ಬಯಸುತ್ತೇನೋ
ಅವರ ಪದೇ ಪದೇ ನೆನಪಾಗುತ್ತದೆ
ಹಾಳಾಗಿ ಹೋಗಲಿ ಈ ಪ್ರೀತಿ
ಅವರ ಯಾಕೆಂದು ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಮರೆಯುವುದಾದರೆ ಮರೆಯುವುದು ಹೇಗೆ
ಅದೆಂದೋ ಕುಡಿದಿದ್ದೆ ಆ ಕಂಗಳಿಂದ
ಈ ಅಶ್ರು ಹರಿದು ಬಂದಾಗ
ಆ ಸಾಗರ ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಯಾರದ್ದೋ ಉರಿಯುವ ಅಧರವಾಗಿತ್ತೆ
ಅಥವಾ ಯಾವುದೇ ದೀಪ ಪ್ರಜ್ವಲಿಸುತ್ತಿತ್ತೆ
ಅದೆಂದೋ ಪೂಜಿಸುತ್ತಿದ್ದ ಆ ಸ್ಥಾನ
ಆ ದೃಶ್ಯ ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಹೇ ದೀಪವೆ ಬೆಳಗುತ್ತಿರು
ಬೇಡುತ್ತಿದೆ ಈ ಪತಂಗೆ
ಸುಡುವುದೇ ಯಾರ ಭಾಗ್ಯವೋ
ಸುಟ್ಟು ಸಹ ಅವರ ನೆನಪಾಗುತ್ತದೆ!!
ಯಾರನ್ನು ಮರೆಯಲು...

ಮೂಲ : ಜಿ. ಎಸ್. ರಾವಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ ; ಸೋನಿಕ್ ಓಮಿ
ಚಿತ್ರ : ಆರ್ಜೂ
Jinhe hum bhoolna chahen
Woh aksar yaad aate hain
Jinhe hum bhoolna chahen
Woh aksar yaad aate hain
Bura ho is mohabbat ka
Bura ho is mohabbat ka
Woh kyun kar yaad aate hain
Jinhe hum bhoolna chahen
Woh aksar yaad aate hain

Bhulayen kis tarah unko
Kabhi pee thi un aankhon se
Bhulayen kis tarah unko
Kabhi pee thi un aankhon se
Kabhi pee thi un aankhon se
Chhalak jaate hain jab aansu
Chhalak jaate hain jab aansu
Woh sagar yaad aate hain
Jinhe hum bhoolna chahen
Woh aksar yaad aate hain

Kisi ke surkh lab the ya
Diye ki lau machalati thi
Kisi ke surkh lab the ya
Diye ki lau machalati thi
Diye ki lau machalati thi
Jahan ki thi kabhi puja
Jahan ki thi kabhi puja
Woh manzar yaad aate hain
Jinhe hum bhoolna chahen
Woh aksar yaad aate hain

Rahe aye shamma tu roshan
Dua deta hai parwana
Rahe aye shamma tu roshan
Dua deta hai parwana
Jinhe kismat mein jalna hai
Jinhe kismat mein jalna hai
Woh jal kar yaad aate hain

Jinhe hum bhoolna chahen
Woh aksar yaad aate hain
Bura ho is mohabbat ka
Bura ho is mohabbat ka
Woh kyun kar yaad aate hain
Jinhe hum bhoolna chahen
Woh aksar yaad aate hain
Jinhe hum bhoolna chahen.
https://www.youtube.com/watch?v=OO4HEoV_5EI

Tuesday, March 31, 2015

ನಗು ನಗುತ್ತಲೇ ಈ ಪಯಣ ಕಳೆಯಲಿ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಗು ನಗುತ್ತಲೇ ಈ ಪಯಣ ಕಳೆಯಲಿ
ಜೀವನ ಹೀಗೆಯೇ ಸಾಗುತ್ತಿರಲಿ
ಸುಖ ಸಿಗಲಿ ಅಥವಾ ದುಃಖವೇ ಸಿಗಲಿ
ಬದಲಾಗುವುದಿಲ್ಲ ನಾವಿಲ್ಲಿ
ಜಗತ್ತು ಬೇಕಾದರೆ ಬದಲಾಗುತ್ತಿರಲಿ!!
ನಗು ನಗುತ್ತಲೇ...

!!ಕಿತ್ತೋದರೂ ಹೂವು ನಗುತ್ತಿರುತ್ತದೆ
ಉರಿಯುವ ಶಹರದಲ್ಲಿಯೂ ಜಲಪಾತ ಸಿಗುತ್ತದೆ
ಬಿರುಗಾಳಿ ಬಂದರೂ ದೀಪ ಅರಳುತ್ತಿರುತ್ತದೆ!!
ನಗು ನಗುತ್ತಲೇ...

!!ಒಪ್ಪಿದೆ ತೆರಳಿದವರು ಹಿಂತಿರುಗಿ ಎಲ್ಲಿ ಬರುತ್ತಾರೆ
ಮುಳುಗಿ ಸೂರ್ಯ ತಾರೆ ಪುನಃ ಜಗ ಬೆಳಗಿಸುತ್ತಾರೆ
ಪ್ರೀತಿ ನಿಜವಾಗಿದ್ದರೆ ಅಗಲಿದವರೂ ಪುನಃ ಸಿಗುತ್ತಾರೆ!!
ನಗು ನಗುತ್ತಲೇ...

ಮೂಲ : ಇಂದೀವರ್
ಅನುವಾದ  : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸಾಧನ ಸರ್ಗಮ್, ಸೊನಾಲಿ ಬಟ್ವಾಡೆಕರ್
ಸಂಗೀತ : ರಾಜೇಶ್ ರೋಶನ್
ಚಿತ್ರ : ಖೂನ್ ಭರಿ ಮಾಂಗ್

hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe

tode jane par bhi phul hansa karte hai
tapte shehrao me jharne mila karte hai
tufa aane par bhi dip jala karte hai
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe

mana jane wale lot ke kab aate hai
dub ke suraj tare phir se nikal aate hai
pyar agar sacha hai to bichhade mil jate hai
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe
https://www.youtube.com/watch?v=59iyoVvevmU

Monday, March 30, 2015

ಬದಲಾದರೂ ಮಾಲಿ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಬದಲಾದರೂ ಮಾಲಿ
ಹೂದೋಟ ಆಗುವುದಿಲ್ಲ ಖಾಲಿ
ವಸಂತ ಮತ್ತೊಮ್ಮೆ ಆಗಮಿಸುತ್ತದೆ
ವಸಂತ ಮತ್ತೊಮ್ಮೆ ಆಗಮಿಸುವುದು!!
ಬದಲಾದರೂ ಮಾಲಿ...

!!ಆಯಾಸ ಎಂತಹ, ದಣಿವು ಎಂತಹ
ತನ್ನದೇ ಗುಂಗಿನಲಿ ನಡೆ ನೀನಯ್ಯ
ಮುಳ್ಳಲಿ ಅರಳಿಸು ಹೂವನ್ನು
ಅಲಂಕರಿಸು ತನ್ನ ಏಕಾಂಗಿತನವನ್ನು
ಗಾಳಿಯು ತಾಪವನ್ನು ನೀಡಿದರೇನು
ಪರಿಸರ ವಿಷವನ್ನು ಸುರಿಸಿದರೇನು!!
ವಸಂತ ಮತ್ತೊಮ್ಮೆ...

!!ಕತ್ತಲೆಯೇನು, ಬೆಳಕೇನು
ಇದೂ ನಮ್ಮದಲ್ಲ, ಅದೂ ನಮ್ಮದಲ್ಲ
ನಿನ್ನ ಕೆಲಸಕ್ಕೆ ಬರುವುದು
ನಿನ್ನ ಬಯಕೆ, ನಿನ್ನ ಕನಸೇ ಕೇವಲ
ಜಗ ನಿನ್ನನ್ನು ನಿಂದಿಸಿದರೇನು
ವಾತಾವರಣ ಹಾದಿಯನ್ನು ತಡೆದರೇನು!!
ವಸಂತ ಮತ್ತೊಮ್ಮೆ...

ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ಓ . ಪಿ . ನಯ್ಯರ್
ಚಿತ್ರ : ಬಹಾರೆ ಫಿರ್ ಭಿ ಆಯೆಗಿ

badal jaye agar mali chaman hota nahi khali
bahare phir bhi ati hai bahare phir bhi ayegi
badal jaye agar mali chaman hota nahi khali

thakan kaisi ghutan kaisi chal apani dhun me diwane
thakan kaisi ghutan kaisi chal apani dhun me diwane
khila le phul kanto me saja le apane virane
khila le phul kanto me saja le apane virane
hawae ag bhadakae fizae zahar barasae
bahare phir bhi ati hai bahare phir bhi ayegi
badal jaye agar mali chaman hota nahi khali

adhere kya ujale kya na ye apane na wo apane
adhere kya ujale kya na ye apane na wo apane
tere kam ayege pyare tere arama tere sapane
tere kam ayege pyare tere arama tere sapane
zamana tujhase ho baraham na aye rah par mausam
bahare phir bhi ati hai bahare phir bhi ayegi
badal jaye agar mali chaman hota nahi khali
bahare phir bhi ati hai bahare phir bhi ayegi
badal jaye agar mali chaman hota nahi khali

https://www.youtube.com/watch?v=MwpaXBguDlw

Monday, March 23, 2015

ತ್ಯಾಗದ ಬಯಕೆ ಈಗ ನಮ್ಮ ಮನಸ್ಸಲ್ಲಿದೆ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಇಂದು ಶಹೀದ್ ದಿವಸ,  ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗು ದೇಶಕ್ಕಾಗಿ ಹುತಾತ್ಮರಾದ ಅನೇಕ ವೀರರಿಗೆ ಕೋಟಿ ಕೋಟಿ ನಮನ.
------------------------------------------------------------------------------


ಒಬ್ಬರಿಂದ ಯಾಕೆ ಇನ್ನೊಬ್ಬರು ಮಾತಾಡುವುದಿಲ್ಲ
ಯಾರಿಗೂ ನೋಡಿದರೂ ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ
ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ

ತ್ಯಾಗದ ಬಯಕೆ ಈಗ ನಮ್ಮ ಮನಸ್ಸಲ್ಲಿದೆ
ನೋಡ ಬೇಕಾಗಿದೆ ಎಷ್ಟು ಶಕ್ತಿ ಎದುರಾಳಿಯ ಬಾಹುಗಳಲ್ಲಿದೆ
ತ್ಯಾಗದ ಬಯಕೆ...

ಸಮಯ ಬಂದಾಗ ತಿಳಿಸುವೆ ನಿನಗೆ ಓ ಆಕಾಶವೆ
ಈಗಿಂದಲೇ ಏನನ್ನು ತಿಳಿಸಲಿ ಏನು ನಮ್ಮ ಮನಸ್ಸಲ್ಲಿದೆ
ತ್ಯಾಗದ ಬಯಕೆ...

ಎಳೆದು ತಂದಿದೆ ನಮ್ಮನ್ನು ಮಾತೃಭೂಮಿಗೋಸ್ಕರ ಹುತಾತ್ಮರಾಗುವ ಬಯಕೆ
ಹುತಾತ್ಮರಾಗಲು ದೇಶಪ್ರೇಮಿಯರ ಗುಂಪು ಎದುರಾಳಿಯ ಮನೆಯಲಿ ಸೇರಿದೆ
ತ್ಯಾಗದ ಬಯಕೆ...

ಮೂಲ : ರಾಮಪ್ರಸಾದ್ ಬಿಸ್ಮಿಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ, ರಾಜೇಂದ್ರ ಮೆಹತಾ
ಸಂಗೀತ : ಪ್ರೇಮ್ ಧವನ್
ಚಿತ್ರ : ಶಹೀದ್

ek se karta nahi kyo dusra kuchh baat chit
dekhta hu mai jise vo chup teri mehfil me hai
vo chup teri mehfil me hai
sarfaroshi ki tamanna ab hamare dil me hai
dekhna hai zor kitna bazu-e-qatil me hai
sarfaroshi ki tamanna ab hamare dil me hai

vaqt aane par bata dege tujhe o aasman
vaqt aane par bata dege tujhe o aasman
ham abhi se kya bataye kya hamare dil me hai
kya hamare dil me hai
sarfaroshi ki tamanna ab hamare dil me hai

khaich kar layi hai qatal hone ki ummid
khaich kar layi hai qatal hone ki ummid
aashiqo ka aaj jamaghat kucha-e-qatil me hai
kucha-e-qatil me hai
sarfaroshi ki tamanna ab hamare dil me hai
https://www.youtube.com/watch?v=_txCgY4c69g

Sunday, March 22, 2015

ಹಾರಿ ಹೋಗು ಓ ಹಕ್ಕಿಯೇ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಹಾರಿ ಹೋಗು ಓ ಹಕ್ಕಿಯೇ, 
ದೇಶ ಈ ಪರಕೀಯ ಇನ್ನು!!

!!ನೀನು ಕದಿರು ಕದಿರು ಒಟ್ಟುಗೂಡಿಸಿ 
ನಗರ ಈ ನೆಲೆಸಿದ್ದೆ,
ಮಳೆಯಲಿ ನಿನ್ನ ರೆಕ್ಕೆ ಒದ್ದೆಯಾದವು, 
ಬಿಸಿಲಿನ ತಾಪ ಸಹಿಸಿದೆ,
ದುಃಖಿಸದಿರು ನಿನ್ನ ದುಡಿಮೆ 
ನಿನ್ನ ಉಪಯೋಗಕ್ಕೆ
ಬರಲಿಲ್ಲವೆಂದು,
ಕೊಂಡೊಯ್ಯುವುದಕ್ಕಿಂತ 
ಕೊಟ್ಟೋಗುವುದೇ ಚೆನ್ನ ಇನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಮರೆ ಈಗ ಆ ತಂಗಾಳಿ
ಹಾರುವುದು ಶಾಖೆಯಿಂದ ಶಾಖೆಗೆ
ಜಗದ ಕಣ್ಣಿಗೆ ನೋಡಲಾಗಲಿಲ್ಲ
ನಿನ್ನ ಸುಂದರ ಆಕರ್ಷಕ ನಡಿಕೆ,
ಲೋಕ ಯಾಕೆ ತಲೆ ಕೆಡಿಸಿಕೊಳ್ಳುವರು
ಮಾಲಿಯೇ ಇಲ್ಲದ ಈ ತೋಟಕ್ಕೆ, 
ನಿನ್ನ ಹಣೆಯಲ್ಲಿಯೇ ಬರೆದಿದೆ, 
ಬದುಕಿನಲ್ಲೇ ಸಾಯುವುದನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಅಳುತ್ತಿದ್ದಾರೆ ಆ ಪಕ್ಷಿಗಳು ಈಗ,
ನಿನ್ನ ಜೊತೆಯಲ್ಲಿ ಆಡಿಕೊಂಡವರು,
ಅವರೊಂದಿಗೆ ಕಟ್ಟಿಕೊಂಡಿದೆ ನೀನು
ಅದೆಷ್ಟೋ ಬಯಕೆಗಳು,
ತೇವಗೊಂಡ ಕಣ್ಣಿಂದಲೇ ಇಂದು
ಅವರಿಗೆ ವಿದಾಯ ಹೇಳು ನೀನು,
ಯಾರಿಗೆ ತಿಳಿದಿದೆ ಇನ್ಯಾವಾಗ 
ಆಗಮನ ಆಗಲಿದೆ ನಿನ್ನ ಇನ್ನು!!  
ಹಾರಿ ಹೋಗು ಓ ಹಕ್ಕಿಯೇ..

ಮೂಲ : ರಾಜೇಂದ್ರ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ ರಫಿ
ಸಂಗೀತ : ಚಿತ್ರಗುಪ್ತ್
ಚಿತ್ರ : ಭಾಬಿ

चल उड़ जा रे पंछी, के अब ये देस हुआ बेगाना

तू ने तिनका तिनका चुनकर नगरी एक बसायी
बारीश में तेरी भीगी पाख़े, धूप में गर्मी खायी
ग़म ना कर जो तेरी मेहनत तेरे काम ना आई
अच्छा हैं कुछ ले जाने से दे कर ही कुछ जाना

भूल जा अब वो मस्त हवा, वो उड़ना डाली डाली
जग की आँख का कांटा बन गयी चाल तेरी मतवाली
कौन भला उस बाग को पूछे, हो ना जिसका माली
तेरी किस्मत में लिखा हैं, जीते जी मर जाना

रोते हैं वो पंख पखेरू, साथ तेरे जो खेले
जिनके साथ लगाये तू ने अरमानों के मेले
भीगी आखियों से ही उन की आज दूवायें ले ले
किस को पता अब इस नगरी में कब हो तेरा आना
https://www.youtube.com/watch?v=3OeBpYBDvig

Saturday, March 21, 2015

ನಿನಗೇಗೆ ಹೇಳಲಿ ವ್ಯಥೆ ನನ್ನ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಿನಗೇಗೆ ಹೇಳಲಿ ವ್ಯಥೆ ನನ್ನ
ಯಾವುದರಲ್ಲೂ ಮನಸ್ಸಿಲ್ಲ ವಿನಃ ನಿನ್ನ
ನಿನಗೇನು ತಿಳಿದಿದೆ ಪ್ರೀತಿ ನನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ...

!!ಆರಿಸಿದೆ ಹೃದಯ ನನ್ನ
ನಿನ್ನ ಹೃದಯದ ಪಥವನ್ನ
ನೀನೊಂದು ವೇಳೆ ಜೊತೆಯಲ್ಲಿದ್ದರೆ ನನ್ನ
ಸುಗಮವಾಗುತ್ತಿತ್ತು ಈ ನನ್ನ ಜೀವನ
ಓ ನನ್ನ ಜೀವನ..... ಈಗಂತೂ ನಿನ್ನ
ಮಾಡುವುದಾದರೂ ಏನು ಚಿನ್ನ
ನಂಬು ನೀನು ನನ್ನನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ...

!!ಈ ರೀತಿ ಮಾಡುವುದು ಸರಿಯಲ್ಲ ಚಿನ್ನ
ಹೀಗೆ ಮುರಿದು ಹೃದಯ ನನ್ನ
ಪಶ್ಚಾತಾಪ ಪಡುತ್ತಿದೆ ಕಂಗಳು ನನ್ನ
ನಿನ್ನ ಜೊತೆ ಮಾಡಿ ಪ್ರೀತಿಯನ್ನ
ಎಲ್ಲಿಗೆ ಹೋಗಲಿ ಬಿಟ್ಟು ನಿನ್ನನ್ನ
ನೆರಳಾಗಿರುವೆ ನೀನು ನನ್ನ
ಕೇವಲ ನಿನ್ನ ಮುಖದಲ್ಲೇ ಚಿನ್ನ
ನಾನು ಕಾಣುವೆ ನನ್ನ ದೇವರನ್ನ
ಬಯಕೆಯಾಗಿದೆ ಇದು ನನ್ನ
ಸದಾ ಪೂಜಿಸುವೆ ನಿನ್ನನ್ನ
ಸ್ವೀಕರಿಸು ನನ್ನ ಒಪ್ಪಿಗೆಯನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ..

ಮೂಲ : ಅಹ್ಮದ್ ಅನೀಸ್, ಕುಮಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಶ್ರೇಯಾ ಘೋಶಾಲ್ /ಅರ್ಜಿತ್ ಸಿಂಗ್
ಮೂಲ ಸಂಗೀತ ರಚನೆ : ಜಾವಾದ್ ಅಹ್ಮದ್, ಸಂಗೀತ ಪುನಾರಚನೆ  : ಶರಿಬ್ -ತೋಷಿ
ಚಿತ್ರ : ಹಂಪ್ಟಿ ಶರ್ಮ ಕಿ ದುಲನಿಯಾ
Main tenu samjhawan ki
Na tere bina lagda jee

Main tenu samjhawan ki
Na tere bina lagda jee

Tu ki jaane pyaar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee
Tu ki jaane pyaar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee

Mere dil ne chun laiya ne
Tere dil diyan rahaan
Tu jo mere naal tu rehnta
Turpe meriyaan saaha
Jeena mera haye
Hun hai tera, ki main karaan
Tu kar eitbaar mera
Main karoon intezar tera
Tu dil, tunhion jaan meri!

Main tenu samjhawan ki
Na tere bina lagda jee

Ve changa nahion keeta beeba,
Ve changa nahion keeta beeba
Dil mera tod ke
Ve bada pachtaiyaan akhaan,
Ve bada pachtaiyaan akhaan
Naal tere jod ke

Tenu chadd ke kitthe jawaan tu mera parchanwa
Tere mukhde vich hi main taan
Rabb nu apni pawaan
Meri duya haye, sajda tera, karti sada
Tu sun ekraar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee

Tuesday, March 17, 2015

ರವಿ ಅಸ್ತನಾದ

ಬೆಳಕನು ಬೀರಲೆಂದು ಬಂದ
ಜಗಕೆ ಮುಖ ತೋರಿಸಿ ಹೋದ 
ಮಸುಕಾಯಿತು
ರವಿ ಅಸ್ತನಾದ
ಕರಿ ಮೋಡಗಳು
ಕ್ಷಣಿಕ ಸಮಯಕ್ಕಾಗಿ ಮುತ್ತಿಟ್ಟವು
ಅವರಿಗೆ ಅನಿಸಿತು
ರವಿ ಅಸ್ತನಾದ
ಪ್ರಕೃತಿಯ ನಿಯಮದ ಅರಿವಿಲ್ಲ ಅವರಿಗೆ
ಪುನಃ ಉದಯ ನಿಶ್ಚಿತವೆಂದು ಮರೆತರು
ತಿಳಿದರು
ರವಿ ಅಸ್ತನಾದ
ರವಿ ಎಂಬುದಕ್ಕೆ ಸಾವಿಲ್ಲ
ಪ್ರತಿ ನಿತ್ಯ ಜನ್ಮ ಅದರ
ಕೇವಲ ತುಸು ಸಮಯಕ್ಕಾಗಿ
ರವಿ ಅಸ್ತನಾದ
by ಹರೀಶ್ ಶೆಟ್ಟಿ, ಶಿರ್ವ

Monday, March 16, 2015

ವಾತಾವರಣ ಪ್ರೇಮಮಯವಾಗಿದೆ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
!!ವಾತಾವರಣ ಪ್ರೇಮಮಯವಾಗಿದೆ
ಹೇ ಮನಸ್ಸೇ ಎಲ್ಲಿಂದಲೂ ಅವರನ್ನು
ಇಂತಹದರಲ್ಲಿ ಹುಡುಕಿಕೊಂಡು ಬರಬೇಕಾಗಿದೆ!!
ವಾತಾವರಣ...

!!ಹೇಳು ಋತು ಯೌವನವಾಗಿದೆ
ಹಾಗು ಇದು ನನ್ನನ್ನು ಹಂಬಲಿಸುತ್ತಿದೆ
ಕರಿ ಮೇಘದ ನೆರಳು
ಅಗಲಿಕೆಯಲ್ಲಿದ್ದ ನನ್ನನ್ನು ಭಯ ಪಡಿಸುತ್ತಿದೆ
ಈ ಪರಿಸ್ಥಿತಿ ನನ್ನನ್ನು ಕೊಲ್ಲಬಹುದೆಂಬ
ಹೆದರಿಕೆ ನನ್ನನ್ನು ಸತಾಯಿಸುತ್ತಿದೆ
ವರ್ಷ ಋತುವಿನ ಎಲ್ಲಿ ಏನು ಭರವಸೆ?
ಯಾವುದೇ ಸಮಯವೂ ಆಗಮಿಸಲಿದೆ!!
ವಾತಾವರಣ...

!!ಸೂರ್ಯ ಎಲ್ಲಿಯೂ ಹೋಗಲಿ
ನಿನಗೆ ಸೋಕದಿರಲಿ ಬಿಸಿಲು
ನಿನ್ನನ್ನು ಕರೆಯುತ್ತಿದೆ
ಈ ಕೇಶಗಳ ನೆರಳು
ಬಂದೇ ಬಿಡು
ನಿನಗೆ ಛಾಯೆ ನೀಡಲು
ನನ್ನ ಕಣ್ರೆಪ್ಪೆ ತವಕದಲ್ಲಿದೆ!!
ವಾತಾವರಣ...

!!ತಿರುಗುತ್ತಿದ್ದೇನೆ ಒಬ್ಬಂಟಿ ನಾನಿಲ್ಲಿ
ಬಾಹುಗಳಲ್ಲಿ ಯಾರಾದರೂ ಬಂಧಿಸಲಿ
ಯಾರು ಎಷ್ಟು ಸಮಯ
ಈ ಏಕಾಂತದಲಿ ಕಳೆಯಲಿ
ಹಗಲು ದುಷ್ಟವಾಗಿದೆ
ರಾತ್ರಿ ಕೊಲ್ಲುತ್ತಿದೆ!!
ವಾತಾವರಣ...

!!ಈ ರಾತ್ರಿ ಈ ಮೌನ
ಈ ಸ್ವಪ್ನದ ನೋಟಗಳು
ಇದು ಮಿಂಚುಳುಗಳಾ?
ಅಥವಾ ಭೂಮಿಗೆ ಇಳಿದು ಬಂದಿದೆಯ ತಾರೆಗಳು
ನಿದ್ರೆಯಲಿ ನನ್ನ ಕಂಗಳು
ಅಮಲಲಿ ಎಲ್ಲ ಜಗತ್ತಿದೆ!!
ವಾತಾವರಣ...

ಮೂಲ : ಕಮಲ್ ಅಮ್ರೋಹಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ಪಾಕೀಜಾ

मौसम है आशिकाना
ऐ दिल कहीं से उनको ऐसे में ढूंढ लाना

कहना के रुत जवां है, और हम तरस रहे हैं
काली घटा के साये, बिरहन को डस रहे हैं
डर है ना मार डाले, सावन का क्या ठिकाना

सूरज कही भी जाये, तुम पर ना धूप आये
तुम को पुकारते हैं, इन गेसूओं के साये
आ जाओ मैं बना दू, पलकों का शामियाना

फिरते हैं हम अकेले, बाहों में कोई ले ले
आखिर कोई कहा तक तनहाईयों से खेले
दिन हो गये हैं ज़ालिम, राते हैं कातिलाना

ये रात ये खामोशी, ये ख्व़ाब से नज़ारें
जुगनू हैं या जमींपर उतरे हुये हैं तारें
बेख़ाब मेरी आँखे, मदहोश है ज़माना
https://www.youtube.com/watch?v=LXW6OEbx7GQ

Thursday, March 12, 2015

ನಿನ್ನ ಚಹರೆಯಲಿ ಆ ಜಾದೂ ಇದೆ

ನಿನ್ನ ಚಹರೆಯಲಿ ಆ ಜಾದೂ ಇದೆ
ಸತತ ನನ್ನನ್ನು ನಿನ್ನತ್ತ ಎಳೆಯುತ್ತದೆ
ಹೋಗಲಿರುತ್ತದೆ ಅದೆಲ್ಲಿಗೋ
ನಿನ್ನತ್ತಲೇ ಈ ಕಾಲು ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನ ವಜ್ರದ ಹಾಗೆ ಕಂಗಳು
ಕಣ್ಣಲ್ಲಿ ಲಕ್ಷಗಟ್ಟಲೆ ಮಾತುಗಳು
ಮಾತಿನಲಿ ಸಿಹಿ ರಸದ ಹನಿಗಳು
ನನ್ನಲ್ಲಿ ಪ್ರೀತಿಯ ದಾಹ ಎಬ್ಬಿಸುತ್ತದೆ
ಬಿದ್ದರೆ ನಿನ್ನ ಒಂದು ದೃಷ್ಟಿಯೂ
ಹೆಣವೂ ಜೀವವಾಗುತ್ತದೆ
ಅಮೃತ ಸೋರುವ ನಿನ್ನ ತುಟಿಯು
ಬದುಕುವ ಆಸೆ ಹುಟ್ಟಿಸುತ್ತದೆ
ನನಗೆ ತಡೆಯಲು ಸಾಧ್ಯವಾಗುವುದಿಲ್ಲ
ನಿನ್ನೊಟ್ಟಿಗೆ ನನ್ನೆಜ್ಜೆ ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನನ್ನು ನೋಡಿದ ಕ್ಷಣದಿಂದ
ನಾನು ದೇವರನು ನಂಬಲು ಆರಂಭಿಸಿದೆ
ಈ ಹೃದಯ ಪದೇ ಪದೇ ಹೇಳುತ್ತಿದೆ
ನನ್ನ ಖುಷಿಯ ಖಜಾನೆ ನಿನ್ನಲ್ಲಿಯೇ ಇದೆ
ಪ್ರೀತಿಯ ಒಪ್ಪಿಗೆ ನೀಡು ಇನ್ನು
ನನ್ನ ಕೊರತೆ ತೀರಿಸು ನೀನು
ನಿನ್ನಿಂದ ಸ್ವಲ್ಪವೂ ಅಂತರ ಇದ್ದರೆ
ನನಗೆ ಹುಚ್ಚು ಹಿಡಿದಂತೆ ಆಗುತ್ತದೆ
ನಿನ್ನನ್ನು ಪಡೆಯುವುದು ಕಷ್ಟವೇ ಆಗಲಿ
ಆದರೂ ಹೃದಯ ಪಡೆಯಲು ಹಾತೊರೆಯುತ್ತದೆ
ನಿನ್ನ ಚಹರೆಯಲಿ...
ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಧರ್ಮಾತ್ಮ
तेरे चेहरे में वो जादू है, बिन डोर खिंचा जाता हूँ
जाना होता है और कही, तेरी ओर चला आता हूँ
तेरी हीरे जैसी आँखें, आँखों में हैं लाखों बातें
बातों में रस की बरसातें, मुझ में प्यार की प्यास जगाये
तू जो एक नज़र डालें, जी उठे मरनेवाले
लब तेरे अमृत के प्याले, दिल में जीने की आस बढ़ाये
चल पड़ते हैं तेरे साथ कदम मैं रोक नही पाता हूँ
जब से तुझ को देखा है, देख के खुदा को माना है
मान के दिल ये कहता है, मेरी खुशियों का तू है खजाना
दे दे प्यार की मंज़ूरी, कर दे कमी मेरी पूरी
तुझ से थोड़ी भी दूरी, मुझ को करती है दीवाना
पाना तुझ को मुश्किल ही सही, पाने को मचल जाता हूँ

Tuesday, March 10, 2015

ಕೈಯ ಹಿಡಿಯದಿರು ಓ ಇನಿಯ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಕೈಯ ಹಿಡಿಯದಿರು ಓ ಇನಿಯ
ಮಾಡದಿರು ನನ್ನಿಂದ ಕಾದಾಟ!!
ಕೈಯ ಹಿಡಿಯದಿರು ಓ ಇನಿಯ

!!ಸರಿಯಬಹುದು ಸೆರಗು ದೇಹದಿಂದ
ನಗಬಹುದು ಬಳೆಗಳು ಅನಿರ್ಬಂಧ
ಆಗಬಹುದು ಶಬ್ದ ಝಣಝಣ!!
ಕೈಯ ಹಿಡಿಯದಿರು...

!!ನನ್ನನು ಬಿಟ್ಟು ಬಿಡು ಅಯ್ಯೋ ನಲ್ಲ
ಹೃದಯ ವೇದನೆಯಿಂದ ಕೂಗಿ ನಲ್ಲ
ನೋಡುತ್ತಿದೆ ನನ್ನನ್ನು!!
ಕೈಯ ಹಿಡಿಯದಿರು...

!!ಸ್ವತಃ ಅಮಲೇರಿದಂತಾಗಿದೆ ನನಗೆ
ನಡೆಯುತ್ತಿದ್ದೇನೆ ನಾನೀಗೆ
ಸುಗಂಧಿತ ಮಲ್ಲಿಗೆಯ ಲತೆಗಳ ಹಾಗೆ!!
ಕೈಯ ಹಿಡಿಯದಿರು...

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ದಸ್ತಕ್

बैयाँ ना धरो ओ बलमा
ना करो मोसे रार
बैयाँ ना धरो ओ बलमा

ढलेगी चुनरिया तन से
हँसेंगी रे चूड़ियाँ छन से
मचेगी झनकार
बैयाँ ना धरो..

मोहे छोड़ो हाय सजना
जिया सीस उठाये सजना
रहा मोहे निहार
बैयाँ ना धरो..

मैं तो आप बहकी
चलूँ जैसे महकी
चमेलिया की डार
बैयाँ ना धरो..
https://www.youtube.com/watch?v=VSERYQGm6fE

Sunday, March 8, 2015

ನಾನೊಂದು ಕನಸು

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಾನೊಂದು ಕನಸು
ಈ ಕನಸೊಂದಿಗೆ ನೀನು ಪ್ರೀತಿ ಮಾಡದಿರು
ಪ್ರೀತಿ ಆಗಿದ್ದರೆ ಈ ಪ್ರೀತಿಯನು ವ್ಯಕ್ತಪಡಿಸದಿರು!!
ನಾನೊಂದು ಕನಸು...

!!ಈ ಗಾಳಿಯೂ ಎಂದಾದರೂ ಸದ್ದಿಲ್ಲದೆ ತೆರಳುವುದು
ಮತ್ತೆಂದೂ ಅದು ಹಿಂತಿರುಗಿ ಎಂದಿಗೂ ಈ ಜಗಕ್ಕೆ ಬರಲಾರದು
ತನ್ನ ಕೈಯಲ್ಲಿ ಈ ಗಾಳಿಯನು ಬಂಧಿಸದಿರು!!
ನಾನೊಂದು ಕನಸು...

!!ನಿನ್ನ ಹೃದಯದಲ್ಲಿದೆ,ಪ್ರೀತಿಯ ಭುಗಿಲೇಳುವ ಜ್ವಾಲೆ
ತನ್ನ ಎದೆಯಲಿ ಅಡಗಿಸಿಡು ಈ ಸ್ಪಂದಿಸುವ ಜ್ವಾಲೆ
ಈ ರೀತಿ ಪ್ರೀತಿಯ ಅವಮಾನ ಎಲ್ಲೆಡೆ ಮಾಡದಿರು!!
ನಾನೊಂದು ಕನಸು...

!!ಶಾಖೆಯಿಂದ ಬಿದ್ದು ಹೂವು ಅರಳುತ್ತದೆಯೇನು?
ಹಗಲು ಮತ್ತು ರಾತ್ರಿಯ ಎಂದಾದರೂ ಜಗದಲಿ ಮಿಲನವಾಗುತ್ತದೆಯೇನು?
ಮರೆತು ಹೋಗು, ಹೋಗಲಿ ಬಿಡು, ವಿಧಿಯೊಂದಿಗೆ ವಾದ ಮಾಡದಿರು!!
ನಾನೊಂದು ಕನಸು...

ಮೂಲ : ಕಮರ್ ಜಲಲಾಬಾದಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಹಿಮಾಲಯ್ ಕಿ ಗೋದ್ ಮೇ

मैं तो एक ख्वाब हूँ, इस ख्वाब से तू प्यार ना कर
प्यार हो जाये तो फिर प्यार का इज़हार ना कर

ये हवायें कभी चुपचाप चली जायेंगी
लौट के फिर कभी गुलशन में नहीं आयेंगी
अपने हाथों में हवाओं को गिरफ्तार न कर

तेरे दिल में हैं, मोहब्बत के भड़कते शोले
अपने सीने में छुपा ले ये धड़कते शोले
इस तरह प्यार को रुसवा सर-ए-बाजार ना कर

शाख से टूट के गूंचे भी कही खिलते हैं
रात और दिन भी जमाने में कही मिलते हैं
भूल जा, जाने दे तकदीर से तकरार ना कर
https://www.youtube.com/watch?v=s_jJgXflpUg

Saturday, March 7, 2015

ಹೋಳಿ

ಹೋಳಿಯ ಈ ದಿನ
ಪ್ರತಿಯೊಂದು  ರಂಗು
ಏನಾದರೂ ನುಡಿಯುತ್ತದೆ
ಕೆಂಪು ಗುಲಾಬಿ ನೀಲಿ ಹಳದಿ
ಎಲ್ಲವೂ ಒಂದೊಂದು ಕಥೆ ಹೇಳುತ್ತದೆ
ರಂಗು ರಂಗು ಸೇರಿ
ಒಂದು ಹೊಸ ರಂಗು ನೀಡುತ್ತದೆ
ಆ ರಂಗು
ಅದು ತನ್ನದೇ ಮೋಜು ತೋರಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ರಂಗಿನ ಈ ಜಾದೂ
ವೈರಿಯ ಸಹ ಕೋಪ ಮುನಿಸು
ಮುಗಿಸುವಂತೆ ಮಾಡಿ
ಪ್ರೇಮದ ಪಾಠ ಕಲಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ದಿನ ಇಡೀ
ಹರ್ಷ ಉಲ್ಲಾಸ
ಆಟ ಓಡಾಟ
ತಿಂಡಿ ತಿನಿಸು ಮಿಠಾಯಿ
ಹೋಳಿಯ ಈ ದಿನ
ಈ ರಂಗಿನಲ್ಲಿ
ವರುಷದ ಆಯಾಸ ಮುಗಿಯುತ್ತದೆ
by ಹರೀಶ್ ಶೆಟ್ಟಿ, ಶಿರ್ವ

Tuesday, March 3, 2015

ವಸಂತ ಹೂವನ್ನು ಸುರಿಸು, ನನ್ನೊಲವು ಬಂದಿದ್ದಾಳೆ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ವಸಂತ ಹೂವನ್ನು ಸುರಿಸು, ನನ್ನೊಲವು ಬಂದಿದ್ದಾಳೆ
ಪವನ ರಾಗವನ್ನು ನುಡಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಓ ಕೆಂಪೆ ಹೂವಿನ ಮೆಹಂದಿ ರಚಿಸು ಈ ಶ್ವೇತ ಕೈಗಳಿಗೆ
ಇಳಿದು ಬಾ ಮೇಘವೇ ಕಜ್ಜಳ ಹಚ್ಚು ಈ ಮೋಹಕ ಕಂಗಳಿಗೆ
ತಾರೆಗಳೆ ಬೈತಲೆ ತುಂಬಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ನೋಟಗಳೆ ಎಲ್ಲೆಡೆ ಹರಡಿ ಬಿಡಿ ಇಂದು ಬೆಳಕಿನ ಓಜಸ್ಸಿ
ತುಂಬಾ ನಾಚಿಕೆ ನನ್ನವಳಿಗೆ ಹೋಗಿ ಬಿಡುವಳು ಲಜ್ಜಿಸಿ
ಸ್ವಲ್ಪ ನೀನು ಹೃದಯ ಚೈತನ್ಯಗೊಳಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಅಲಂಕರಿಸಿದ್ದಾರೆ ಎಲೆಮೊಗ್ಗುಗಳೀಗ ಈ ಪ್ರೀತಿಯ ಶಯನ
ಇವುಗಳಿಗೆ ತಿಳಿದಿತ್ತು ಬರುವುದೊಂದು ದಿನ ಋತು ಒಲವಿನ
ನಿಸರ್ಗವೇ ರಂಗನ್ನು ಚೆಲ್ಲು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸುರಜ್

बहारों फूल बरसाओ, मेरा मेहबूब आया है
हवाओं रागिनी गाओ, मेरा मेहबूब आया है

ओ लाली फूल की मेहंदी लगा इन गोरे हाथों में
उतर आ ऐ घटा काजल लगा इन प्यारी आँखों में
सितारों माँग भर जाओ, मेरा मेहबूब आया है

नज़ारो हर तरफ अब तान दो एक नूर की चादर
बड़ा शर्मिला दिलबर है चला जाए ना शरमा कर
ज़रा तुम दिल को बहलाओ, मेरा मेहबूब आया है

सजाई है जवां कलियों ने अब ये सेज उल्फ़त की
इन्हें मालूम था आएगी एक दिन रुत मोहब्बत की
फजाओं रंग बिखराओं, मेरा मेहबूब आया है
https://www.youtube.com/watch?v=dGuRNfJ1ys0

Thursday, February 26, 2015

ಇನಿಯ ವೈರಿಯಾಗಿದ್ದಾನೆ ನನ್ನ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಇನಿಯ ವೈರಿಯಾಗಿದ್ದಾನೆ ನನ್ನ
ಪತ್ರವಾದರೆ ಪ್ರತಿಯೊಬ್ಬರೂ ಓದಬಹುದು
ಭಾಗ್ಯ ಓದಲು ಯಾರಿಗೂ ಆಗದು
ವಿಧಿಯೂ ವೈರಿಯಾಗಿದೆ ನನ್ನ!!
ಇನಿಯ ವೈರಿಯಾಗಿದ್ದಾನೆ ನನ್ನ...

!!ಹೋಗಿ ನೆಲೆಸಿದ್ದಾನೆ
ಇನಿಯ ಪರದೇಶದಲಿ
ಪರ ಸ್ತ್ರೀಯ ಮೋಹದಲಿ
ಇಲ್ಲ ಸಂದೇಶ ಸುದ್ಧಿಯೂ ಇಲ್ಲದಾಗಿದೆ
ಋತು ಬರುತ್ತಿದೆ ಹೋಗುತ್ತಿದೆ
ಮುಳುಗುತ್ತಿದ್ದೇನೆ ನಾನು ಮಧ್ಯ ಸುಳಿಯಲಿ
ವಯಸ್ಸು ಮೀರಿ ಹೋಗುತ್ತಿದೆ ನನ್ನ!!
ಇನಿಯ ವೈರಿಯಾಗಿದ್ದಾನೆ ನನ್ನ...

!!ಖಾಲಿ ಶಯನ ಬಂಜೆ ತೊಟ್ಟಿಲು
ವೇದನೆ ಯಾರಿಗೂ ತಿಳಿಯದು
ಮುದ್ದು ಪ್ರೀತಿ ಹೊರಳಾಡುತ್ತಿದೆ
ಮಮತೆ ಕಣ್ಣೀರು ಸುರಿಸುತ್ತಿದೆ
ಯಾರಿಲ್ಲ ಈ ತೀರದಲಿ ನನ್ನ
ಯಾರಿಲ್ಲ ಆ ತೀರದಲ್ಲೂ!!
ಇನಿಯ ವೈರಿಯಾಗಿದ್ದಾನೆ ನನ್ನ...

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ತೀಸ್ರಿ ಕಸಮ್


सजनवा बैरी हो गये हमार
चिठियाँ हो तो, हर कोई बाचे, भाग ना बाचे कोई
करमवा बैरी हो गये हमार

जाये बसे परदेस सजनवा, सौतन के भरमाये
ना संदेस ना कोई खबरीया, रुत आये रुत जाये
डूब गये हम बीच भंवर में, कर के सोलाह पार
सजनवा बैरी हो गये हमार

सुनी सेज गोद मोरी सुनी, मरम ना जाने कोई
छटपट तड़पे प्रीत बिचारी, ममता आँसू रोये
ना कोई इस पार हमारा, ना कोई उस पार
सजनवा बैरी हो गये हमार
https://www.youtube.com/watch?v=HZfmdChsFnI

Wednesday, February 25, 2015

ಒಪ್ಪಿದೆ ನೀನು ಬಲು ಸುಂದರ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಒಪ್ಪಿದೆ ನೀನು ಬಲು ಸುಂದರ
ಅಷ್ಟೊಂದು ವಿರೂಪ ನಾನೂ ಅಲ್ಲ
ನೋಡು ಎಂದಾದರೂ ಪ್ರೀತಿಯಿಂದ
ಯಾಕೆ ಭಯ ಒಪ್ಪಿಗೆಯಿಂದ!!
ಒಪ್ಪಿದೆ ನೀನು...

!!ಅರಿವಾಗುವುದಿಲ್ಲ ಪ್ರಿಯೆ
ನೀ ನನ್ನಿಂದ ಖುಷಿಯಲ್ಲಿದೆಯೋ
ಅಥವಾ ಮುನಿಸಿಕೊಂಡಿದೆಯೋ
ತೀಕ್ಷ್ಣ ದೃಷ್ಟಿ, ಶೈಲಿ ಚಂದ
ಯಾಕೆ ಇರುವೆ ಬೇಸರದಿಂದ!!
ನೋಡು ಎಂದಾದರೂ...

!!ಒಂದೇ ವೇಳೆ ನಾಲ್ಕು ಹೆಜ್ಜೆ
ಜತೆ ನೀಡಿದರೆ ನೀನು ನನ್ನ
ಸುಲಭವಾಗುವುದು ಈ ಪಯಣ
ಬಿಟ್ಟು ಬಿಡು ಇನ್ನು ಜಗದ ಭಯ
ಮುರಿಯದಿರು ಹೃದಯ ತಿರಸ್ಕಾರದಿಂದ!!
ನೋಡು ಎಂದಾದರೂ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಟೂಟೆ ಖಿಲೋನೆ

माना हो तुम बेहद हसीं, ऐसे बुरे हम भी नही
देखो कभी तो प्यार से, डरते हो क्यो इकरार से

खुलता नहीं कुछ दिलरुबा, तुम हम से खुश हो या हो खफा
तिरछी नज़र, तीखी अदा, लगते हो क्यो बेजार से
देखो कभी तो प्यार से, डरते हो क्यो इकरार से

तुम दो कदम दो साथ अगर, आसान हो जाये सफ़र
छोड़ो भी ये दुनियाँ का ड़र, तोडो ना दिल इनकार से
देखो कभी तो प्यार से, डरते हो क्यो इकरार से
https://www.youtube.com/watch?v=Pu3c5WntSgo

Tuesday, February 24, 2015

ನಿನ್ನ ಸಣ್ಣದೊಂದು ತಪ್ಪಿನಿಂದಾಗಿ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
ನಿನ್ನ ಸಣ್ಣದೊಂದು ತಪ್ಪಿನಿಂದಾಗಿ
ಎಲ್ಲಾ ಉದ್ಯಾನ ನಾಶವಾಯಿತು!
ಇನ್ನು ಮತ್ತೊಮ್ಮೆ ಘಮಘಮಿಸಬಹುದೇ ಹೂವು?
ಇನ್ನು ಮತ್ತೊಮ್ಮೆ ವಸಂತ ಬರಬಹುದೇ?
ನಿನ್ನ ಸಣ್ಣದೊಂದು...

ಎಂಥ ಪದ್ಧತಿ ಇದು?  
ಯಾರೋ ಮಾಡುವುದು
ಯಾರೋ ಅನುಭವಿಸುವುದು
ನ್ಯಾಯ ಅಲ್ಲ ಅನ್ಯಾಯ ಇದು
ದೋಷಿ ಬದುಕಿಕೊಂಡಿರುವುದು
ನಿರ್ದೋಷಿ ಸಾಯುವುದು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಕತ್ತಲೆಯನ್ನು ನೀಡಿ
ನೀನು ಇವನಿಗೆ
ಕಸಿದುಕೊಂಡೆ ನಯನದ ನಗುವನ್ನು
ಸಂಧ್ಯಾ ಮುಂಜಾವು
ಹಗಲು ಇರುಳು
ಇವನಿಗೆ ಒಂದೇ ಸಮಾನ ಇನ್ನು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ನಿನ್ನ ಚಲನೆಯ
ಬಿರುಗಾಳಿಯಿಂದ
ನೋಡು ಎಷ್ಟು ಮನೆ ಕಸಿದೋಯಿತು
ಚೂರುಚೂರಾಯಿತು
ಸಂಬಂಧಗಳು
ಭಾಗಿ ಬದುಕಿನ ಬಿಟ್ಟೋಯಿತು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಮೂಲ : ಗೌಹರ್ ಕಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶಿಕ್ಷಾ
Teri Chhoti Si Ek Bhuul Ne Saaraa Gulshan Jalaa Diyaa
Kyaa MahakeNge Phir Phuul Kabhi, Kyaa Phir Se BahaareN AaeNgi
Jaane KahaaN Ki Rit Hai Ye, Koi Kare Aur Koi Bhare
Nyaaya NahiN Anyaaya Hai Ye, Doshi Ji_E, Nirdosh Mare
Sun Le Tuu Ai QaafilTujhase Kahe Teraa Dil
Teri Chhoti Si 
Tuune ANdhere De Ke Ise, Chhin Li NainoN Ki Muskaan
SaaNjh Savere, Raat Aur Din, Isake Lie Ek Samaan
Sun Le Tuu Ai Qaafil, Tujhase Kahe Teraa Dil
Teri Chhoti Si 
Tere Chalan Ki AaNdhi Ne, Dekh Le Kitane Ghar Luute
Bikhar Gae Rishte Naate, Jivan Ke Saathi Chhuute
Sun Le Tuu Ai Qaafil, Tujhase Kahe Teraa Dil
Teri Chhoti Si
https://www.youtube.com/watch?v=kwVlCrBGKKs

Monday, February 23, 2015

ಒಂದು ಮುದ್ದಾದ ಬಯಕೆ ಇದೆ ನನ್ನಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಹೃದಯದಲಿ ಪ್ರೀತಿಯ ಅಂಕುರ ಹುಟ್ಟಲಿ
ಮನಸ್ಸಲಿ ಒಲವಿನ ಸುಮಗಳು ಅರಳಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಸಮಯ ನನ್ನ ಮೋಹಕ ಕನಸಲಿ ಕಳೆಯಲಿ
ನಿನ್ನ ಕಂಗಳಲಿ ನನ್ನ ಚಿತ್ರ ಸದಾ ಹೊಳೆಯಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಮುಖದಲಿ ಲಜ್ಜೆ ಮಿಶ್ರಿತ ನಗು ತೇಲಿ ಬರಲಿ
ಅನುರಾಗದ ಹರ್ಷ ಧಾರೆ ಹಾಡಾಗಿ ಹರಿಯಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

ಭಾವನೆ ನನ್ನ ಕವಿತೆ ಬರೆಯಲು ಪ್ರೋತ್ಸಾಹಿಸಲಿ
ಭಾವಗಳ ಬೆಳಕು ಕಾಗದದ ಹಾಳೆಯಲಿ ಕಂಡು ಬರಲಿ

ಒಂದು ಮುದ್ದಾದ ಬಯಕೆ ಇದೆ ನನ್ನಲಿ
ನನ್ನ ಹೆಸರು ನಿನ್ನ ತುಟಿಯಲಿ ಮೆರೆಯಲಿ

by ಹರೀಶ್ ಶೆಟ್ಟಿ, ಶಿರ್ವ 

Thursday, February 19, 2015

ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಮನಸ್ಸು ಬಂದಾಗ ಹೊಸ ಪ್ರಪಂಚ ನೆಲೆಸುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಯಾರಿಗೆ ನೆನಪಿರುತ್ತದೆ
ಕಳೆದು ಹೋದ ಜಗತ್ತಿನ ಆಟ
ಜಡಗೊಳ್ಳುತ್ತದೆ ಒಲವು
ಸೋಲುತ್ತದೆ ನಿಷ್ಠ
ಈಗ ಪ್ರೀತಿ ಅಂದರೆ ಏನು
ಕೇವಲ ಒಂದು ವೈವಾಟ
ಕಳೆದೋದ ನೆನಪ ಶವವನ್ನು ಹೊತ್ತುಕೊಂಡು ತಿರುಗಿಕೊಂಡೆವು
ಇದು ನಮ್ಮದೇ ಮರುಳಾಟ
ಇಲ್ಲದಿದ್ದರೆ ಜೀವಿಸಲು ಎಲ್ಲವನ್ನೂ ಮರೆತು ಹೋಗುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಹೀಗೆಯೂ ಜನರಿದ್ದರು
ನಿಷ್ಠೆ ಅವರ ಸೊತ್ತಾಗಿತ್ತು
ಅನ್ಯರ ಮನಸ್ಸಿಗೆ ಬೇಜಾರವಾಗಬಹುದೆಂಬ
ಅರಿವು ಅವರಿಗಿತ್ತು
ಈಗಂತೂ ಕಲ್ಲಿನ ಮೂರತಿ ಎಲ್ಲವೂ
ಭಾವನೆ ಇಲ್ಲ, ಇಲ್ಲ ದುಃಖದ ಅರಿವು
ಜಗ ಈಗ ಎಲ್ಲಿ ಅಂತಹ
ಈ ಹೃದಯ ಮೆಚ್ಚುವಂತಹ
ಈಗ ಕೇವಲ ತನ್ನ ಉದ್ದೇಶಗೋಸ್ಕರ ಸಮರ್ಪಣೆ ನೀಡುತ್ತಾರೆ ಜನರು
ಒಂದು ಚಹರೆಯ ಮೇಲೆ ಹಲವು ಚಹರೆ ಧರಿಸಿಕೊಳ್ಳುತ್ತಾರೆ ಜನರು

ಮೂಲ :ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ದಾಗ್
jab bhi ji chahe nayi duniya basa lete hai log
jab bhi ji chahe nayi duniya basa lete hai log
ek chehre pe kayi chehre laga lete hai log
ek chehre pe kayi chehre laga lete hai log
jab bhi ji chahe nayi duniya basa lete hai log
yaad rahta hai kise guzre zamane ka chalan
ek chehre pe kayi chehre laga lete hai log
ek chehre pe kayi chehre laga lete hai log
varna jine ke liye sab kuchh bhula lete hai log
yaad rahta hai kise
sard pad jati hai chahat haar jati hai lagan
hum hi nadan the jo odha biti yaado ka kafan
ab mohabbat bhi hai kya ik tijarat ke siva
jane wo kya log the
varna jine ke liye sab kuchh bhula lete hai log ek chehre pe kayi chehre laga lete hai log jane wo kya log the jinko wafa ka paas tha dusre ke dil pe kya guzregi ye ehsaas tha
jab bhi ji chahe nayi duniya basa lete hai log
ab hai patthar ke sanam jinko ehsaas na ho wo zamana ab kaha jo ahal-e-dil ko raas tha ab to matlab ke liye naam-e-wafa lete hai log ab to matlab ke liye naam-e-wafa lete hai log
ek chehre pe kayi chehre laga lete hai log
ek chehre pe kayi chehre laga lete hai log

Tuesday, February 17, 2015

ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?
ನಮ್ಮದಾಗಿ ಇದ್ದವರು, ಅವರೇ ಇನ್ಯಾರ ಯಾಕೆ?
ಇದೇ ಪ್ರಪಂಚವೆಂದಾದರೆ ಹೀಗೆ ಈ ಪ್ರಪಂಚ ಯಾಕೆ ?
ಇದೇ ಆಗುತ್ತಿದೆಯೆಂದಾದರೆ ಇದೇ ಆಗುತ್ತಿದೆ ಯಾಕೆ ?

ಸ್ವಲ್ಪವೊಂದು ಕೈಯನ್ನು ನೀಡಿದರೆ, ಹಿಡಿಯುತ್ತಾರೆ ಸೆರಗನ್ನು
ಅವರ ಎದೆಯಲಿ ಸ್ಪಂದಿಸುತ್ತದೆ ಹೃದಯ ಮಿಡಿತ ನಮ್ಮದು
ಇಷ್ಟೊಂದು ನಂಟಿದ್ದರೆ ಈ ಅಂತರವಿದೆ ಯಾಕೆ?

ಪ್ರೀತಿಯ ಭಗ್ನತೆಯಿಂದ ಹೊರ ಬಂದಿಲ್ಲ ಈ ತನಕ ಯಾರೂ
ಒಂದು ಪಾಳು ಮನೆಯ ಕದ ತಟ್ಟುತ್ತಿರುತ್ತಾರೆ ಯಾರೋ
ಮುರಿದ ಆಸೆ ಪುನಃ ಜಾಗೃತವಾಗುತ್ತದೆ ಯಾಕೆ?

ನೀನು ಸುಖದ ಅಥವಾ ಇದನ್ನೇಳು ದುಃಖದ ನಂಟು
ಹೇಳುತ್ತಾರೆ ಪ್ರೀತಿಯ ನಂಟು ಅಂದರೆ ಅದು ಜನುಮದ ನಂಟು
ಜನುಮದ ನಂಟಾದರೆ ಇದು ಬದಲಾಗುವುದು ಯಾಕೆ ?

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಜಗಜಿತ್ ಸಿಂಗ್
ಸಂಗೀತ : ಕುಲ್ದಿಪ್ ಸಿಂಗ್
ಚಿತ್ರ : ಅರ್ಥ್

Koi Ye Kaise Bataaye Ke Wo Tanha KyooN Hai
Wo Jo Apna Thaa Wahi Aur Kisi Ka KyooN Hai
Yahi Duniya Hai To Phir Aisee Ye Duniya KyooN Hai
Yahi Hota Hai To Aakhir Yahi Hota KyooN Hai

Ik Zara Haath BaDha DeN To PakaD Le Daaman
Uske Seene MeiN Sama Jaaye Hamari DhaDkan
Itni Kurbat Hai To Phir Faaslaa Itna KyooN Hai

Dil-E-Barbaad Se Nikla NahiN Ab Tak Koi
Ik Loote Ghar Pe Diya Karta Hai Dastak Koi
Aas Jo TooT Gayee Phir Se Bandhaata KyooN Hai

Tum Asarrat Ka KahO Ya Ise Gham Ka Rishta
Kehte Hain Pyaar Ka Rishta Hai Janam Ka Rishta
Hai Janam Ka Jo Ye Rishta To Badalta KyooN Hai
https://www.youtube.com/watch?v=K-oUL81qe50

Saturday, February 14, 2015

ನನ್ನ ಪ್ರೀತಿಯೂ ಶಾಶ್ವತವಾಗಿರುವುದು

ಚಿತ್ರಕೃಪೆ:Google 
ಹಾಡಿನ ಕೊಂಡಿ : You Tube 
!!ನನ್ನ ಪ್ರೀತಿಯೂ ಶಾಶ್ವತವಾಗಿರುವುದು
ಸದಾ ಇತ್ತು ಸದಾ ಇರುವುದು
ಹಂಬಲಿಸಿ ಹಂಬಲಿಸಿ ಇದನ್ನೇ ನುಡಿಯುವುದು
ಸದಾ ಇತ್ತು ಸದಾ ಇರುವುದು!!

!!ನಿನ್ನಂತೆ ಯಾರಿಲ್ಲ ಇಡೀ ಜಗದಲೂ
ನಿನ್ನನ್ನೇ ಪ್ರೀತಿಸಿದೆ ನನ್ನ ಈ ದೃಷ್ಟಿಯೂ
ನಿನ್ನನ್ನು ಆರಿಸಿದೆ ನಿನ್ನನ್ನೇ ಆರಿಸುವುದು
ಸದಾ ಇತ್ತು ಸದಾ ಇರುವುದು!!

!!ಹೃದಯದಲಿ ಹತ್ತಿದ ಈ ಅಗ್ನಿಯೂ
ಇದುವೇ ಗಮ್ಯದ ಬೆಳಕಾಗಿರುವುದು
ಇದೆಂದೂ ಆರಲಿಲ್ಲ ಇದೆಂದೂ ಆರಲಾರದು
ಸದಾ ಇತ್ತು ಸದಾ ಇರುವುದು!!

!!ಒಂದು ವೇಳೆ ನಿನ್ನ ಮಡಿಲಲಿ ಜೀವ ಬಿಟ್ಟರೆ
ಆವಾಗ ಸಾವು ಎಷ್ಟು ಸುಂದರವಾಗಿರುವುದು
ಚಿತೆಯಲಿ ಉರಿದು ಸಹ ನಾಶವಾಗದು
ಸದಾ ಇತ್ತು ಸದಾ ಇರುವುದು!!

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಜಾನ್ವರ್

meri mohabbat jawan rahegi sada rahi hai sada rahegi meri mohabbat jawan rahegi sada rahi hai sada rahegi tadap tadap kar yahi kahegi sada rahi hai sada rahegi na tumsa koyi jamane bhar me o o o na tumsa koyi jamane bhar me tumhi ko chaha meri najar ne tumhi ko chaha meri najar ne tumhe chuna hai tumhe chunegi sada rahi hai sada rahegi meri mohabbat jawan rahegi sada rahi hai sada rahegi jo aag dil me lagi huyi hai o o o jo aag dil me lagi huyi hai yehi to manjil ki roshni hai yehi to manjil ki roshni hai na ye bujhi hai, na yeh bujhegi sada rahi hai sada rahegi meri mohabbat jawan rahegi sada rahi hai sada rahegi tumhare pahalu me gar mare ham ho o o tumhare pahalu me gar mare ham toh maut kitni hasin hogi toh maut kitni hasin hogi chitah me jal kar bhi na mitegi sada rahi hai sada rahegi meri mohabbat jawan rahegi sada rahi hai sada rahegi

Thursday, February 12, 2015

ನಲ್ಲ ಹೀಗೆ ನನ್ನ ಹೃದಯದಲಿ ನೆಲೆಸಿದ್ದಾರೆ ಅಂದರೆ

ಚಿತ್ರಕೃಪೆ ; Google
ಹಾಡಿನ ಕೊಂಡಿ : You Tube
!!ನಲ್ಲ ಹೀಗೆ ನನ್ನ ಹೃದಯದಲಿ ನೆಲೆಸಿದ್ದಾರೆ ಅಂದರೆ
ನಾ ನನ್ನ ಮೈ ಮನಸ್ಸಿನ ಅರಿವು ಕಳೆದುಕೊಂಡೆ
ಪ್ರತಿಯೊಂದು ಸದ್ದಿನಿಂದ ತಿಳಿದೆ ಅವರು ಬಂದರೆಂದು
ಬೇಗನೆ ಸೆರಗಿನಿಂದ ಮುಖವನ್ನು ಅಡಗಿಸಿಕೊಂಡೆ!!
ನಲ್ಲ ಹೀಗೆ ನನ್ನ...

!!ನನ್ನ ಅಂಗಳದಲಿ ಮೂಡಲ ಗಾಳಿ ಬೀಸಿದಾಗ
ನನ್ನ ಬಾಗಿಲ ಸಂಕಲೆ ತೆರೆದೋಯಿತು
ನಾನೆನಿಸಿದೆ ನನ್ನ ಇನಿಯ ಬಂದರೆಂದು
ಬೇಗನೆ ಹೂವಿನ ಹಾಸಿಗೆಯಲಿ ಕುಳಿತುಕೊಂಡೆ!!
ನಲ್ಲ ಹೀಗೆ ನನ್ನ...

!!ನಾ ಕುಂಕುಮದಿಂದ ನನ್ನ ಹಣೆ ತುಂಬಿಸಿಕೊಂಡೆ
ನಾ ಅವರಿಗೋಸ್ಕರ ಸಿಂಗಾರ ಮಾಡಿಕೊಂಡೆ
ಅವರ ದೃಷ್ಟಿ ಬೀಳುವುದೆಂಬ ಭಯದಿಂದ
ಬೇಗನೆ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೆ!!
ನಲ್ಲ ಹೀಗೆ ನನ್ನ...

ಮೂಲ : ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗೀತಾ ದತ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಸಾಹಿಬ್ ಬಿವಿ ಔರ್ ಗುಲಾಮ್


पिया ऐसो जिया में समाय गयो रे
के मैं तन मन की सूद बूद गवाँ बैठी
हर आहट पे समझी वो आय गयो रे
झट घूँघट में मुखड़ा छुपा बैठी

मोरे अंगना में जब पूरवय्या चली
मोरे द्वारे की खूल गयी किवाड़ियाँ
मैने जाना के आ गये सावारियाँ मोरे
झट फूलन की सजीया पे जा बैठी

मैने सेंदूर से माँग अपनी भरी
रूप सैय्या के कारण सजाया
इस दर से के पी की नज़र ना लगे
झट नैनन में कजरा लगा बैठी
https://www.youtube.com/watch?v=IoCZJqHeJMk

ಬಾ, ಪ್ರಿಯತಮೆ ಬಾ

ಚಿತ್ರಕೃಪೆ: Google
ಹಾಡಿನ ಕೊಂಡಿ : You Tube 

ರಫಿ :
!!ಬಾ, ಪ್ರಿಯತಮೆ ಬಾ
ಚಂದ್ರದ ಆಚೆಗೆ ಬಾ
ಲತಾ :
ನಾನು ಸಿದ್ಧವಾಗಿರುವೆ, ಬಾ!!-೨

ಲತಾ :
!!ಬಾ, ಮರೆಯಾಗುವ
ತಾರೆಗಳಲಿ ಎಲ್ಲೋ ನಾವು-೨
ಬಿಟ್ಟು ಬಿಡುವ ಇಂದು
ಈ ಜಗತ್ತನು ಈ ಭೂಮಿಯನು ನಾವು!!
ರಫಿ:
ಬಾ, ಪ್ರಿಯತಮೆ ಬಾ...

ಲತಾ:
!!ನಾನು ನಶೆಯಲ್ಲಿದ್ದೇನೆ
ಹಿಡಿದಿಡು ನನ್ನನ್ನು ನೀನು-೨
ನಿದ್ರೆ ಬರುತ್ತಿದೆ
ಎಬ್ಬಿಸು ನನ್ನನ್ನು ನೀನು !!
ರಫಿ:
ಬಾ, ಪ್ರಿಯತಮೆ ಬಾ...

ಲತಾ:
!!ಜೀವನ ಮುಗಿದರೂ
ಒಂದು ವೇಳೆ ನಮ್ಮ-೨
ಎಂದೂ ಮುಗಿಯದಿರಲಿ
ಪಯಣ ಒಲವಿನ ನಮ್ಮ!!
ರಫಿ:
ಬಾ, ಪ್ರಿಯತಮೆ ಬಾ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ಪಾಕೀಜಾ

(chalo dildaar chalo, chaand ke paar chalo
ham hai tayyaar chalo) - (2)

aao kho jaaye sitaaro me kahee - (2)
chhod de aaj yeh duniya yeh jamin, duniya yeh jamin

chalo dildaar chalo, chaand ke paar chalo
ham hai tayyaar chalo
ham nashe me hai sambhaalo hame tum - (2)
nind aatee hai jaga lo hame tum, jaga lo hame tum

chalo dildaar chalo, chaand ke paar chalo
ham hai tayyaar chalo
oh oh, oh oh, oh oh, oh oh oh
jindagee khatm bhee ho jaaye agar - (2)
naa kabhee khatm ho ulfat kaa safar, ulfat kaa safar

(chalo dildaar chalo, chaand ke paar chalo
ham hai tayyaar chalo) - (3)
https://www.youtube.com/watch?v=OPlruJiaAIE

Wednesday, February 11, 2015

ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ

ಚಿತ್ರಕೃಪೆ : GOOGLE 
ಹಾಡಿನ ಕೊಂಡಿ :  YOU TUBE

!!ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ
ಅದೇನು ನಾನು ಕಕೇಳಿದ್ದೇನೋ
ನೀನಂತೂ ಏನನ್ನು ಹೇಳಲಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ನಾನಿದು ಅರ್ಥೈಸಿದೆ ನನ್ನ ಮನಸ್ಸಿನ
ಯಾವುದೇ ಬಯಕೆ ಈಡೇರಿತೆಂದು
ನೀ ನನ್ನನೀಗೆ ನೋಡಿದೆ ಅಂದರೆ
ಮನಸ್ಸು ಚಂಚಲವಾಯಿತಂದು
ಅನ್ಯಥಾ ನಿನ್ನಾಣೆ
ನಾನಷ್ಟು ಕೆಟ್ಟ ಮನುಷ್ಯನಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ಅಸಭ್ಯ ನಾನು ಮರುಳು
ಅದೆಷ್ಟು ನಿನಗೆ ಅಸಮಧಾನವಾಯಿತು
ಸ್ಪರ್ಶಿಸಿದೆ ನಿನ್ನ ಮೈಯನ್ನು
ಅಯ್ಯೋ ಇದೆಂಥ ತಪ್ಪಾಯಿತು
ಇಡೀ ಜಗತ್ತಲ್ಲಿ ಇದಕ್ಕೆ
ಯಾವುದೇ ಯೋಗ್ಯ ಶಿಕ್ಷೆಯಿಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

!!ಹುಣ್ಣಿಮೆ ರಾತ್ರಿಯಲಿ
ಗುಲಾಬಿ ಚಹರೆಯ ಮೇಲೆ
ಕಿರಣ ಬಿದ್ದಂತಾಯಿತು
ಕಾರಣವಿಲ್ಲದೆ ಮುನಿಸಿಕೊಂಡು
ನಿನ್ನ ಹಣೆಯ ಮೇಲೆ
ಹೀಗೆ ಸುಕ್ಕು ಮೂಡಿತು
ನನ್ನೊಲವೆ ಇದು ನಿನ್ನ
ತಿರಸ್ಕಾರವೇ ನಡತೆಯಲ್ಲ!!
ನನ್ನ ಮರುಳುತನಕ್ಕೆ ಸಹ ಔಷದಿಯೆ ಇಲ್ಲ ...

ಮೂಲ : ಹರೀಶ್ ಶೆಟ್ಟಿ, ಶಿರ್ವ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮೆಹಬೂಬ್ ಕಿ ಮೆಹಂದಿ

मेरे दीवानेपन की भी दवां नहीं
मैने जाने क्या सुन लिया, तू ने तो कुछ कहा नहीं

मैं ये समझा मेरे दिल की कोई हसरत निकल गई
तूने देखा मुझे ऐसे के तबियत मचल गई
वर्ना तेरे सर की कसम आदमी मैं बुरा नही

बेअदब हूँ मैं दीवाना इस कदर तू खफा हुई
छू लिया क्यो बदन तेरा, तोबा कैसी ख़ता हुई
सारी दुनिया में कोई मेरे लायक सज़ा नही

चाँदनी रात में जैसे रूख-ये-गुल पे किरण पड़ी
बेसबब रूठकर तेरे माथेपर यूँ शिकंद पड़ी
मेरे मेहबूब ये तेरी बेरूख़ी है अदा नही

https://www.youtube.com/watch?v=ReBkow2X9yQ

Tuesday, February 10, 2015

ಇದು ಇಳಿಜಾರು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲೆ ಹೋದಂತೆ
ಹಿಂದಿನಿಂದ
ದೂಡುವವರ ಸಂಖ್ಯೆ ಹೆಚ್ಚು

ಇದು ಇಳಿಜಾರು
ಸ್ವಲ್ಪ ನಿಧಾನ
ಮೇಲ್ತುದಿ ಸೇರಿದ್ದು ನಿನ್ನ ಸಾಮರ್ಥ್ಯ ಇರಬಹುದು
ಅಥವಾ ಅದು ನಿನ್ನ ಅದೃಷ್ಟವೂ ಇರಬಹುದು
ಇನ್ನು ಈ ಸುಂದರ ಅವಕಾಶವನ್ನು ಕಳೆದುಕೊಳ್ಳದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಅವಸರ ಬೇಡ
ಗಡಿಬಿಡಿ ಬೇಡ
ಸಾವಕಾಶದಿಂದ ಮುಂದಿನ ಹೆಜ್ಜೆ ಇಡು

ಇದು ಇಳಿಜಾರು
ಸ್ವಲ್ಪ ನಿಧಾನ
ಜನರ ವಿಶ್ವಾಸದ ಏಣಿ
ಮೇಲೆ ಹತ್ತಲು ನಿನಗೆ ಸಹಾಯವಾಗಿದೆ
ಅವರ ನಂಬಿಕೆ ಕಳೆಯದಿರು

ಇದು ಇಳಿಜಾರು
ಸ್ವಲ್ಪ ನಿಧಾನ
ಮಾತು ಬೇಡ ಭರವಸೆ ಬೇಡ
ನಿನ್ನ ಕಾರ್ಯ ನುಡಿಯಲಿ
ಜನರ ನಂಬಿಕೆ ಫಲಿಸಲಿ

ಇದು ಇಳಿಜಾರು
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ
ಸ್ವಲ್ಪ ನಿಧಾನ...

by ಹರೀಶ್ ಶೆಟ್ಟಿ,ಶಿರ್ವ 

Monday, February 9, 2015

ನಿನ್ನನ್ನು ಪಡೆದು

                                                      ಚಿತ್ರಕೃಪೆ/ಹಾಡಿನ ಕೊಂಡಿ : Google

ನಿನ್ನನ್ನು ಪಡೆದು
ಹೀಗೆ ಅನಿಸಿತು ನಿನ್ನನ್ನು ಪಡೆದು
ಬಯಕೆ ಈಡೇರಿತು ಹೃದಯದ್ದು
ಓ ನನ್ನ ಪ್ರೀತಿಯೇ,
ನಿನ್ನ ನನ್ನ ನನ್ನ ನಿನ್ನ ಒಂದೇ ಜೀವ
ನಿನ್ನ ಜೊತೆ ಇರುವೆ ಸದಾ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನನ್ನೊಲವೆ ನಿನ್ನಾಣೆ
ಬಿಡಲಾರೆ ನಿನ್ನ ಈ ಕೈಯನ್ನು
ಈ ಜೀವನ ಕಳೆಯುವುದೀಗ
ಪ್ರಿಯತಮೆ ನಿನ್ನದೇ ಜೊತೆಯಲಿ ಇನ್ನು
ನೀಡುವೆ ವಚನದ ಬಂಧ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನಾ ಮಾಡಿದೆ ಹಗಲು ರಾತ್ರಿ
ಕೇವಲ ನಿರೀಕ್ಷೆ ನಿನ್ನದೇ
ನೀನಲ್ಲದೆ ಸಿಗುವುದಿಲ್ಲ
ಒಂದು ಕ್ಷಣವೂ ನೆಮ್ಮದಿ ನನಗೆ
ನನ್ನೊಲವು ಸಿಕ್ಕಿದಾಗಿದೆ ನನ್ನಿಂದ
ಈಗಂತೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ಮೂಲ : ಖುರ್ಷಿದ್ ಹಾಲೌರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಸುರೇಶ ವಾಡ್ಕರ್
ಸಂಗೀತ : ಆರ್. ಡೀ. ಬರ್ಮನ್
ಚಿತ್ರ : ಪರಿಂದಾ


तुम से मिल के, ऐसा लगा, तुम से मिल के
अरमां हुए पुरे दिल के, ए मेरी जान-ए-वफ़ा
तेरी मेरी, मेरी तेरी, एक जान है
साथ तेरे रहेंगे सदा, तुम से ना होंगे जुदा

मेरे सनम, तेरी कसम, छोड़ेंगे अब ना ये हाथ
ये जिन्दगी, गुजरेगी अब, हमदम तुम्हारे ही साथ
अपना ये वादा रहा, तुम से ना होंगे जुदा

मैंने किया, हैं रातदिन, बस तेरा ही इंतज़ार
तेरे बीना, आता नहीं, एक पल मुझे अब करार
हमदम मेरा मिल गया, हम तुम ना होंगे जुदा
हमदम मेरा मिल गया, अब हम ना होंगे जुदा
https://www.youtube.com/watch?v=ivVikjr7hIM

ಮರಳ ಮೇಲೆ ನಿನ್ನ ಸುಂದರ ಚಿತ್ರ


                                                        ಚಿತ್ರಕೃಪೆ : Google

ನೀನು ಬಾರದೆ ಇದ್ದ ಆ ಸಂಜೆ
ನಿನ್ನನ್ನು ಕಾಯುತ್ತಾ ನಾನು
ಕಡಲ ಮರಳ ಮೇಲೆ
ನಿನ್ನ ಒಂದು
ಸುಂದರ ಚಿತ್ರ ಬರೆದಿದ್ದೆ

ಕತ್ತಲು ಕವಿದರೂ
ನೀನು ಬಾರದಿದ್ದಾಗ
ಮರಳ ಮೇಲೆ ಬರೆದ
ನಿನ್ನ ಚಿತ್ರವನ್ನು
ಹೀಗೆಯೇ ಬಿಟ್ಟು ಹೋಗಲು
ಮನಸ್ಸು ಒಪ್ಪಿರಲಿಲ್ಲ

ಆದರೆ ಅಂದು ಕಡಲು
ತನ್ನ ರೌದ್ರ ರೂಪ ತಾಳಿ
ತನ್ನ  ಪ್ರವಾಹದಿಂದ
ನಾ ಬರೆದ ನಿನ್ನ
ಚಿತ್ರವನ್ನು ಕೊಚ್ಚಿಹೋದವು

ನನಗಾದ
ತೀವ್ರ ವೇದನೆಯಿಂದ
ಆಗಸಕ್ಕೂ ಬೇಸರವಾಯಿತೇನೋ
ಅದೂ ತನ್ನ ಕಣ್ಣೀರು ಸುರಿಸಿ
ತನ್ನ ಸಂವೇದನೆ ಸೂಚಿಸಿದವು

ಆ ನಂತರ ಹೇಗೋ
ಭಾರ ಹೃದಯದಿಂದ
ಮೆಲ್ಲ ಮೆಲ್ಲನೆ
ಹೆಜ್ಜೆ ಇಟ್ಟು
ಮನೆಯತ್ತ ನಡೆದಿದ್ದೆ

ನಾನು
ಪೂರ್ಣ ಒದ್ದೆಯಾಗಿದ್ದರಿಂದ
ನನ್ನ ಕಣ್ಣೀರು
ಮನೆಯಲ್ಲಿ
ಯಾರಿಗೂ ಕಂಡು ಬಂದಿರಲಿಲ್ಲ

by ಹರೀಶ್ ಶೆಟ್ಟಿ, ಶಿರ್ವ 

Saturday, February 7, 2015

ವಸಂತವೆ ನನ್ನ ಬದುಕನ್ನೂ ಸಿಂಗಾರಿಸು ನೀನು

                                                                ಚಿತ್ರಕೃಪೆ :Google



!!ವಸಂತವೆ ನನ್ನ ಬದುಕನ್ನೂ
ಸಿಂಗಾರಿಸು ನೀನು
ಯಾರೋ ಬರಲಿ ಎಲ್ಲಿಂದಲೂ-೨
ಹೀಗೆ ಕೂಗಿ ಕರೆ ನೀನು!!
ವಸಂತವೆ...

!!ನಿನ್ನಿಂದಲೇ ಹೃದಯ ಕಲಿತಿದೆ ಚಡಪಡಿಕೆಯನ್ನು-೨
ನಿನ್ನನ್ನೇ ದೂರುವೆ-೨
ನಿನ್ನನ್ನೇ ದೂರುವೆ
ಓ ಈ ಸುಂದರ ನೋಟಗಳನ್ನು!!
ವಸಂತವೆ...

!!ರಚಿಸು ಯಾವುದೇ ಕಜ್ಜಳ ತಾ ಹೂಮಾಲೆ-೨
ಬಳುಕುವ ಲತೆ ನೀನು
ಬಳುಕುವ ಲತೆ ನೀನು
ಅರಳಿದ ಹೂವನ್ನು ಚೆಲ್ಲು ನೀನು!!
ವಸಂತವೆ...

!!ಹಚ್ಚು ನನ್ನ ಈ ಕೈಗಳಿಗೆ ಮೆಹಂದಿ-೨
ಸಿಂಗರಿಸು ಕುಂಕುಮ ಹಣೆಗೆ
ಸಿಂಗರಿಸು ಕುಂಕುಮ ಹಣೆಗೆ
ಅಲ್ಲದೆ ಹೊರಟುಹೋಗು ನೀನು!!
ವಸಂತವೆ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ಆಖ್ರೀ ಖತ್

बहारों मेरा जीवन भी सवारों
कोई आये कही से, यूँ पुकारो

तुम ही से दिल ने सीखा हैं तड़पना
तुम ही को दोष देंगी , ऐ नज़ारों

रचाओ कोई कजरा, लाओ गजरा
लचकती डालियों तुम  फूल वारों

लगाओ मेरे इन हाथों में मेहंदी
सजाओ माँग मेरी, या सिधारो
http://www.dailymotion.com/video/xn2m3s_baharo-mera-jeevan-bhi-sanwaro-koi-aye-kahin-se-lata-mangeshkar-khayyam_music

Thursday, February 5, 2015

ಹೆಸರು

ಆ ಸಮಯ ಕಳೆದೋಯಿತು
ಈಗ ನಾನು ನಾನಾಗಿ ಉಳಿಯಲಿಲ್ಲ
ನೀನು ನೀನಾಗಿ ಉಳಿಯಲಿಲ್ಲ
ಆದರೆ ಆ ಸವಿ ಕಹಿ ನೆನಪು ಅದೇಕೋ ಉಳಿದೋಯಿತು

ವಿರಹ ಅಗ್ನಿಯ ಜ್ವಾಲೆಯೂ
ನಂದಿ ಹೋಯಿತು
ಕಿಡಿ ಸಹ ಉಳಿಯಲಿಲ್ಲ
ಆದರೆ ಪ್ರೀತಿಯ ಅವಶೇಷ ಉಳಿದೋಯಿತು

ಪ್ರೀತಿಯ ಮರಳ ಮನೆ
ಸಾಗರದ ತರಂಗಗಳು ಕೊಚ್ಚಿ ಹೋದವು
ಆದರೆ ತೀರದಲ್ಲಿದ್ದ ಬಂಡೆಗಳ ಮೇಲೆ ಬರೆದ
ನಮ್ಮಿಬ್ಬರ ಹೆಸರು ಉಳಿದೋಯಿತು

by ಹರೀಶ್ ಶೆಟ್ಟಿ, ಶಿರ್ವ 

Wednesday, February 4, 2015

ಮೌನ-ಧ್ಯಾನ

ಹೂವಿನ ಪಕಳೆಗಳು
ಒಂದೊಂದಾಗಿ ಬೀಳುತ್ತಿವೆ
ದುಂಬಿ ರಸ ಸವಿಯುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

ಆಧಾರ

ಆ ತೋಟದ ಅಂದಕ್ಕೆ
ನಾವು ಕಾರಣ ಎಂದು
ಹೂಗಳು ಮೆರೆಯುತ್ತಿದ್ದವು
ಮಾಲಿ ಗಿಡಗಳಿಗೆ ನೀರೆರೆಯುವುದರಲಿ ಮಗ್ನ!
---
ಧಾನ್ಯದ ಪಾಲಿಗೋಸ್ಕರ
ರೈತನ ಕುಟುಂಬದ ಮಧ್ಯೆ ಜಗಳ
ರೈತ ಹೊಲದಲ್ಲಿ ಶ್ರಮಿಸುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

Sunday, February 1, 2015

ಸಾಮರ್ಥ್ಯ ದೇಶದ ನಿಮ್ಮಿಂದ ಇದೆ

!!ಸಾಮರ್ಥ್ಯ ದೇಶದ ನಿಮ್ಮಿಂದ ಇದೆ
ಶೌರ್ಯತೆ ದೇಶದ ನಿಮ್ಮಿಂದ ಇದೆ
ಘನತೆ ದೇಶದ ನಿಮ್ಮಿಂದ ಇದೆ
ಮಾನವ ಕುಲದ ನೀವು ರಕ್ಷಕರು!!

!!ಸಾಮರ್ಥ್ಯ ದೇಶದ ನಮ್ಮಿಂದ ಇದೆ
ಶೌರ್ಯತೆ ದೇಶದ ನಮ್ಮಿಂದ ಇದೆ
ಘನತೆ ದೇಶದ ನಮ್ಮಿಂದ ಇದೆ
ಮಾನವ ಕುಲದ ನಾವು ರಕ್ಷಕರು!!

!!ಕಾವಲುಗಾರರು ಹಿಮಾಲಯದ
ಬಿರುಸು ನಾವು ಬಿರುಗಾಳಿಯ
ಘರ್ಜನೆ ಕೇಳಿ ನಮ್ಮದು
ಸೀಳಾಗುತ್ತದೆ ಎದೆ ಬಂಡೆಯ!!
ಸಾಮರ್ಥ್ಯ ದೇಶದ...

!!ಉಕ್ಕಿನ ಎದೆ ನಮ್ಮದು
ಹೂವಿನಂತಹ ಹೃದಯ
ದೇಹದಲಿ ಬಲವಿದೆ ಪರ್ವತದ
ಮನಸ್ಸಲಿ ಸೌದರ್ಯವಿದೆ ನದಿಯ!!
ಸಾಮರ್ಥ್ಯ ದೇಶದ...

!!ನೀಡಿ ನಮ್ಮ ರಕ್ತವನ್ನು
ದೇಶದ ಹೂ ಉಪವನವನ್ನು ರಕ್ಷಿಸುವವರು ನಾವು
ಕೊಳಲಿಂದ ಬಂದೂಕು ಮಾಡುವಂತಹ
ಪ್ರೇಮ ಪೂಜಾರಿಗಳು ನಾವು!!
ಸಾಮರ್ಥ್ಯ ದೇಶದ...

!!ಬಂದು ಸಹೋದರಿಯ ರಾಖಿ
ಕೊಟ್ಟು ಹೋದವು ನಮಗೆ ಆಣೆಯನ್ನು
ನೀಡುವೆವು ತನ್ನ ಶಿರವನ್ನು
ನೀಡಲಾರೆವು ದೇಶದ ಮಣ್ಣನ್ನು!!
ಸಾಮರ್ಥ್ಯ ದೇಶದ...

!!ಅಪಾಯದಲ್ಲಿದೆ ದೇಶ
ಆಗಂತೂ ಹೋರಾಡುವುದೇ ಕೇವಲ ಧರ್ಮ
ಸಾವಂದರೆ ಏನು ವಸ್ತು
ಮಾನವ ಪಡೆಯುವನು ಹೊಸ ಜನುಮ!!
ಸಾಮರ್ಥ್ಯ ದೇಶದ...

!!ಒಂದೇ ಜೀವ, ಒಂದೇ ಪ್ರಾಣ
ನಮ್ಮ ಎಲ್ಲಾ ದೇಶದವರು
ನದಿಗಳು ಸೋತು ಹೋದವು
ಆದರೆ ನಿಲ್ಲಲಿಲ್ಲ ಗಂಗೆಯ ನೀರು!!
ಸಾಮರ್ಥ್ಯ ದೇಶದ...

ಮೂಲ: ನೀರಜ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ ಇತರರು
ಸಂಗೀತ : ಎಸ್. ಡೀ , ಬರ್ಮನ್

ताकत वतन की हमसे है
हिम्मत वतन की हमसे है
इज्ज़त वतन की हमसे है
इंसान के हम रखवाले

पहरेदार हिमालय के हम, झोंके हैं तूफ़ान के
सुनकर गरज हमारी सीने फट जाते चट्टान के
ताकत वतन की हमसे है...

सीना है फौलाद का अपना, फूलों जैसा दिल है
तन में विन्ध्याजल का बल है, मन में ताजमहल है
ताक़त वतन की हमसे है...

देकर अपना खून सींचते देश की हम फुलवारी
बंसी से बन्दूक बनाते हम वो प्रेम पुजारी
ताकत वतन की हमसे है...

आकर हमको कसम दे गई, राखी किसी बहन की
देंगे अपना शीश, न देंगे मिट्टी मगर वतन की
ताक़त वतन की हमसे है...

खतरे में हो देश अरे तब लड़ना सिर्फ धरम है
मरना है क्या चीज़ आदमी लेता नया जनम है
ताकत वतन की हमसे है...

एक जान है, एक प्राण है सारा देश हमारा
नदियाँ चल कर थकी रुकी पर कभी न गंगा धरा
ताक़त वतन की हमसे है...
https://www.youtube.com/watch?v=-a641b2vjKc

Thursday, January 29, 2015

ಅನುಭೂತಿ

ಇಂದು ಸ್ವಲ್ಪ ಹೆಚ್ಚು ಸಮಯ
ನಾನಲ್ಲಿ ಕಳೆದೆ
ಆ ನೀಲ ಪರ್ವತ
ಅದೇಕೋ ಇಂದು ಬಹಳ ಸುಂದರವಾಗಿ ಕಂಡು ಬರುತ್ತಿತ್ತು
ಏಕಾಂತದಲಿ ಆ ತಂಪು ಪವನ
ಅದೇಕೋ ಇಂದು ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡುತ್ತಿತ್ತು
ಇದು ಅವಳ ಸ್ಪರ್ಶವೇ?
ಅಥವಾ ನನ್ನ ಭ್ರಮೆಯೆ?
ಏನಿದು?
ಏಕಾಂತದ ಅಭ್ಯಾಸ ಮಾಡಿಕೊಂಡಿದ
ನನಗೆ
ಇಂದು ಯಾಕೆ ಎಲ್ಲವೂ
ಸುಂದರವಾಗಿ ಕಾಣುತ್ತಿತ್ತು
ಒಹ್! ಹೌದು
ಇಂದು ಅವಳ ಮತ್ತು ನನ್ನ
ಮೊದಲ ಭೇಟಿಯ ದಿನ ತಾನೇ
ಅದಕ್ಕೆ ಈ ರೀತಿಯ ಅನುಭೂತಿ ಆಗುತ್ತಿದೆ
ಈ ಏಕಾಂತದಲ್ಲೂ
ನಾನು ಏಕಾಂಗಿಯಾಗಿ ಇರಲಿಲ್ಲ
ಎಂಬ ಸಂದೇಶ ನೀಡುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ  

Wednesday, January 28, 2015

ಒಂದು ಅಪಚರಿತ ಸುಂದರಿ ಜೊತೆ

ಒಂದು ಅಪರಿಚಿತ ಸುಂದರಿ ಜೊತೆ
ಹೀಗೆಯೇ ಭೇಟಿಯಾಯಿತು
ಮತ್ತೇನಾಯಿತು
ಇದು ಕೇಳದಿರಿ
ಹೀಗೊಂದು ಸಂಗತಿ ನಡೆಯಿತು
ಒಂದು ಅಪರಿಚಿತ....

ಅವಳು ಇದ್ದಕಿದ್ದಂತೆ ಬಂದಳು
ಹೀಗೆ ಕಣ್ಣ ಮುಂದೆ ಅಂದರೆ
ಮೇಘಗಳ ಮರೆಯಿಂದ ಚಂದಿರ ಬಂದಂತೆ
ಚಹರೆಯಲಿ ಕೇಶ ಹರಡಿಕೊಂಡಿತ್ತು
ಹಗಲಲಿ ರಾತ್ರಿಯಾಯಿತು
ಒಂದು ಅಪರಿಚಿತ....

ಓ ಪ್ರೀಯತೆಮೆ, ಓ ನನ್ನವಳೇ
ಕವಿಯಾಗಿದ್ದರೆ ನಾನೊಂದು ವೇಳೆ
ಹಾಡುತ್ತಿದ್ದೆ ಘಜಲ್ ನಿನ್ನ ಸೌಂದರ್ಯದ ಕುರಿತು
ನಾನಿದನ್ನು ಹೇಳಿದಾಗ ನನ್ನಿಂದ
ನನ್ನೊಲವು ಮುನಿಸಿಕೊಂಡಾಯಿತು
ಒಂದು ಅಪರಿಚಿತ....

ಸುಂದರ ವಿಷಯ ಇದು
ನಾಲ್ಕು ಕ್ಷಣದ ಜೊತೆ ಇದು
ಇಡೀ ಜೀವನ ನನ್ನ ನೆನಪಲ್ಲಿರುವುದು
ಏಕಾಂಗಿ ನಾನಿದ್ದೆ ಸಂಗಾತಿ ಅವಳಾದಳು
ಅವಳ ನನ್ನ ಜೊತೆಯಾಯಿತು
ಒಂದು ಅಪರಿಚಿತ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಜ್ನಬಿ

एक अजनबी हसीना से, यूँ मुलाक़ात हो गई
फिर क्या हुआ, ये ना पूछो, कुछ ऐसी बात हो गई

वो अचानक आ गई, यूँ नजर के सामने
जैसे निकल आया घटा से चाँद
चेहरे पे जुल्फे बिखरी हुई थी, दिन में रात हो गई

जान-ए-मन, जान-ए-जिगर, होता मैं शायर अगर
कहता गज़ल तेरी अदाओं पर
मैंने ये कहा तो, मुझको से खफा वो, जान-ए-हयात हो गई

खुबसूरत बात ये, चार पल का साथ ये
सारी उमर मुझको रहेगा याद
मैं अकेला था मगर, बन गई वो हमसफ़र, वो मेरे साथ हो गई
https://www.youtube.com/watch?v=QaXUGcJs8Mg

Saturday, January 24, 2015

ಮೊನಿಫಾ

ಮೊನಿಫಾ
-------------
ಇಲ್ಲ, ಅವಳು ಇಂದೂ ಕಾಣಲಿಲ್ಲ, ಮನಸ್ಸಿನಲ್ಲಿ ಕಳವಳ.
ಯಾಕೆ ಬರಲಿಲ್ಲ? ಅವಳಿಗೆ ಏನು ಆಗಲಿಲ್ಲ ತಾನೇ?
ಛೇ ಛೇ, ಬೇಡದ ವಿಷಯ ಯಾಕೆ ಈ ಹಾಳು ಮನಸ್ಸಿನಲ್ಲಿ ಬರುತ್ತದೆ.
ದಿನಾ ಜಾಗಿಂಗ್ ಮಾಡಲು ಬರುತ್ತಿದ ಅವಳು ನಾಲ್ಕು ದಿನದಿಂದ ಯಾಕೆ ಬರಲಿಲ್ಲ, ಚಿಂತೆ ಉಂಟಾಯಿತು, ಯಾಕೆ ಗೊತ್ತಿಲ್ಲ, ಛೇ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲು ಮರೆತು ಹೋದೆ.
ಇದ್ದಕಿದ್ದಂತೆ ಸ್ವಲ್ಪ ದಿವಸ ಮುಂಚೆ ನಡೆದ ಘಟನೆ ಮನಪಟಲದಲ್ಲಿ ಓಡಲಾರಂಭಿಸಿತು.
ಪತ್ನಿ ಸುಮಾಳ ಒತ್ತಾಯಕ್ಕೆ ದಿನಾ ೫ ಗಂಟೆಗೆ ಎದ್ದು ಬದಿಯ ಪಾರ್ಕಿಗೆ ಜಾಗಿಂಗ್ ಹೋಗುತ್ತಿದ್ದ ನಾನು ಒಂದು ದಿನ ಮನಸಿಲ್ಲದ್ದೆ ಓಟ ನಿಲ್ಲಿಸಿ ಹಾಗೆಯೇ ಪಾರ್ಕಲ್ಲಿ ಇದ್ದ ಬೆಂಚಲ್ಲಿ ಸುಸ್ತಾಯಿಸುತ್ತಿದ್ದೆ. ಆಗ ಓಡುತ್ತಿದ್ದ ಅವಳು......
ಅವಳು ೨೦/೨೧ ಹರೆಯದ ಆಫ್ರಿಕನ್ ಹುಡುಗಿ, ದಿನನಿತ್ಯ ಅದೇ ವೇಳೆಗೆ ಜಾಗಿಂಗ್ ಮಾಡಲು ಬರುವ ಅವಳ ಮತ್ತು ನನ್ನ ಸಮಾಗಮವಾಗುತ್ತಿತ್ತು, ಆದರೆ ನಾನಾಗಲಿ, ಅವಳಾಗಲಿ ಯಾವಾಗಲು ಪರಸ್ಪರ ಮಾತನಾಡಲಿಲ್ಲ.
ಆದರೆ ಅಂದು ನಾನು ಕುಳಿತ್ತಿದ್ದುದನ್ನು ನೋಡಿ ಅವಳು ಇಂಗ್ಲಿಷಲ್ಲಿ
"ಹ್ಯೇ ಅಂಕಲ್, ಟೈರ್ಡ್?" (ಹ್ಯೇ ಅಂಕಲ್ ಸುಸ್ತಾಯಿತಾ?).
ನಾನು ನಗು ಬೀರಿ "ನೋ, ಜಸ್ಟ್ ರಿಲೆಕ್ಷಿಂಗ್" (ಇಲ್ಲ, ಸ್ವಲ್ಪ ವಿಶ್ರಮಿಸುತ್ತಿದ್ದೇನೆ).
ಅವಳು ನಕ್ಕು "ಒಹ್, ಒಳ್ಳೆಯದು, ಆದರೆ ನಿಮಗೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಬಹುದಲ್ಲ?"
ನಾನು "ಬೇಗ ಮನೆಗೆ ಹೋದರೆ ಹೆಂಡತಿ ಮನೆಯೊಳಗೆ ನುಗ್ಗಲು ಬಿಡಲ್ಲಿಕ್ಕಿಲ್ಲ" ಎಂದು ತಮಾಷೆಯಿಂದ ಹೇಳಿದೆ.
ಅವಳು "ಒಹ್, ಹಾಗೆಯ" ಎಂದು ನಕ್ಕಳು, ಕರಿ ಬಣ್ಣದ ಆ ಮುದ್ದು ಹುಡುಗಿ ನಕ್ಕಾಗ ನನಗೆ ಸುಂದರ ದೇವದೂತೆಯಂತೆ ಕಂಡು ಬಂದಳು.
ಇದು ನನ್ನ ಮತ್ತು ಅವಳ ಮೊದಲ ಪರಿಚಯ, ಈ ಮೊದಲ ಪರಿಚಯದಲ್ಲಿ ಅವಳು ತನ್ನ ಹೆಸರು "ಮೊನಿಫಾ" ಅಂತ ಹಾಗು ಆಫ್ರಿಕಾದಿಂದ ಬಂದವರು, ಇಲ್ಲಿ ಅವಳು ತನ್ನ ತಂದೆಯ ಜೊತೆ ಇರುವುದು ಎಂದು ತಿಳಿಯಿತು.

ನಾನು ಅವಳ ಹೆಸರ ಅರ್ಥ ಕೇಳಿದಕ್ಕೆ ಅವಳು ಅದರ ಅರ್ಥ "ನಾನು ತುಂಬಾ ಭಾಗ್ಯಶಾಲಿ" ಎಂದು ಹೇಳಿ ನಕ್ಕಳು.
ಇದರ ನಂತರ ಹೀಗೆಯೇ ಏನಾದರು ಒಂದು ವಿಷಯದ ಬಗ್ಗೆ ನಾವು ಜಾಗಿಂಗ್ ಮಾಡುವ ಮಧ್ಯೆ ಸ್ವಲ್ಪ ಕುಳಿತು ಮಾತನಾಡುತ್ತಿದ್ದೆವು.
ಒಂದು ದಿನ ನನಗೆ ಅವಳು ಸ್ವಲ್ಪ ಬೇಸರದಲ್ಲಿ ಇದ್ದಂತೆ ಕಂಡು ಬಂತು, ನಾನು ಕೇಳಿದಕ್ಕೆ....
ಅವಳು " ನಿಮಗೆ ತಿಳಿದಿದೆಯ ಅಂಕಲ್, ನನಗೆ ನನ್ನ ಅಪ್ಪನ ಬಗ್ಗೆ ತುಂಬಾ ಬೇಜಾರಾಗುತ್ತಿದೆ."
ನಾನು "ಯಾಕೆ, ಏನಾಯಿತು, ಯಾಕೆ ನೀನಿಷ್ಟು ಅಸಮಾಧಾನದಲ್ಲಿ ಇರುವೆ?"
ಅವಳು "ನನ್ನ ಅಪ್ಪ ಏಕಾಂತದಲ್ಲಿ ತುಂಬಾ ಅಳುತ್ತಾರೆ, ನಾನು ಹಲವು ಸಲ ನೋಡಿದೆ ಅವರನ್ನು ಅವರ ಬೆಡ್ರೂಮಿನಲ್ಲಿ ಅಳುವುದನ್ನು".
ನಾನು ಆಶ್ಚರ್ಯದಿಂದ " ಆದರೆ ಯಾಕೆ? ಯಾಕೆ ಅವರು ಅಳುತ್ತಾರೆ?"
ಅವಳು ಸಹಜವಾಗಿ "ನನಗೆ ಕ್ಯಾನ್ಸರ್ ಕಾಯಿಲೆ ಇದೆಯಲ್ಲ, ಅದಕ್ಕೆ...."
ನನಗೆ ತೀವ್ರ ಆಘಾತವಾಯಿತು "ಏನು?"
ಅವಳು ನಿರಾಸೆಯಲ್ಲಿ "ಹೌದು ಅಂಕಲ್, ನನಗೆ ಕ್ಯಾನ್ಸರ್ ಆಗಿದೆ ಹಾಗು ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಡಾಕ್ಟರ ಹೇಳಿದ್ದಾರೆ."
ನಾನು ಸ್ತಬ್ದಗೊಂಡು ಅವಳನ್ನು ನೋಡಿದೆ.
ಅವಳು ಮುಂದುವರಿಸಿದಳು "ನನ್ನ ಮುಂದೆ ನನ್ನಪ್ಪ ತುಂಬಾ ಖುಷಿಯಲ್ಲಿರುತ್ತಾರೆ, ನನ್ನನ್ನು ಸಂತೋಷಗೊಳಿಸಲು ಯಾವಗಲು ನನ್ನ ಮುಂದೆ ನಗುತ್ತಲೇ ಇರುತ್ತಾರೆ, ಆದರೆ ಅವರು ಏಕಾಂತದಲ್ಲಿ ತುಂಬಾ ಅಳುತ್ತಾರೆ, ಅವರನ್ನು ನೋಡಿ ನನ್ನ ಹೃದಯಕ್ಕೆ ತುಂಬಾ ನೋವಾಗುತ್ತದೆ, ಪಾಪ, ಅಮ್ಮ ತೀರಿ ಹೋದ ನಂತರ ಎಷ್ಟು ಕಾಳಜಿಯಿಂದ ನನ್ನನ್ನು ಸಾಕಿದರು, ಆದರೆ ಈಗ ನಾನು ಕೇವಲ ಸ್ವಲ್ಪ ದಿನವೇ ಈ ಜಗದಲ್ಲಿ ಇರುವೆ ಎಂದು ಗೊತ್ತಾದ ನಂತರ ಅವರು ತುಂಬಾ ಅಶಕ್ತರಾಗಿದ್ದಾರೆ, ಕೇವಲ ನನ್ನ ಮುಂದೆ ನಗುತ ಇರುತ್ತಾರೆ, ಆದರೆ...."
ಇದನ್ನು ಕೇಳಿ ನನ್ನ ಅವಸ್ಥೆ ಹಾಳಾಯಿತು, ನನಗೆ ಅವಳಿಗೆ ಹೇಗೆ ಸಮಾಧಾನ ನೀಡುವುದು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಆಘಾತದಲ್ಲಿ ಕುಳಿತು ನಾನು ಅವಳಿಗೆ "ಚಿಂತಿಸ ಬೇಡ, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಅವಳ ಹತ್ತಿರ ಬೇರೆ ವಿಷಯ ಮಾತಾಡಿ ಅವಳನ್ನು ಸ್ವಲ್ಪ ನಗಿಸಿ ಅಂದು ಕಳಿಸಿದೆ.
ಮಾರನೆ ದಿವಸ ನಾನು ಅವಳಿಗೆ "ಡಿಯರ್, ನನ್ನ ಹೆಂಡತಿಯ ಊರಿನಲ್ಲಿ ಒಂದು ಸ್ವಾಮೀಜಿ ಇದ್ದಾರಂತೆ, ಅವರು ಈ ಕ್ಯಾನ್ಸರ್ ಕಾಯಿಲೆಗೆ ಮದ್ದು ಕೊಡುತ್ತಾರಂತೆ, ಆ ಮದ್ದಿನಿಂದ ತುಂಬಾ ಜನರ ಕಾಯಿಲೆ ನಿವಾರಣ ಆಗಿದೆಯಂತೆ".
ಅವಳು ಕ್ಷೀಣ ನಗು ಬೀರಿ "ನಿಜವಾಗಿಯೂ."
ನಾನು " ಎಸ್ ಡಿಯರ್, ಬಹುಶಃ ಆ ಮದ್ದಿನಲ್ಲಿ ದೈವಿಕ ಶಕ್ತಿ ಇರಬೇಕು, ನಾನು ನಾಳೆ ಇಂಡಿಯಾ ಹೋಗಿ ಊರಿನಿಂದ ನಿನಗೋಸ್ಕರ ಆ ಮದ್ದು ತರುತ್ತೇನೆ".
ಅವಳು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
ನಾನು ಕೋಪದಿಂದ "ನೋ, ನಥಿಂಗ್ ವಿಲ್ ಹ್ಯಾಪ್ಪೆನ್ ಟು ಯು" ("ಇಲ್ಲ, ನಿನಗೆ ಏನ್ ಆಗಲ್ಲ"), ನೀನು ಒಂದು ವಾರ ನನ್ನ ವೇಟ್ ಮಾಡು, ನಾನು ಬೇಗನೆ ಇಂಡಿಯಾ ಹೋಗಿ ಬರುತ್ತೇನೆ".
ಅವಳು "ನೋ ಅಂಕಲ್, ಯಾಕೆ ನೀವು ಇಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದಿರಿ, ಪ್ಲೀಸ್ ಡೊಂಟ್ ಗೋ"
ನಾನು " ನೋ , ಐ ವಿಲ್ ಗೋ, ಈ ವಾಂಟ್ ಯು ಟು ಬಿ ಪರ್ಫೆಕ್ಟ್" (ಇಲ್ಲ, ನಾನು ಹೋಗುವೆ, ನನಗೆ ನೀನು ಸರಿಯಾಗಬೇಕು)".
ಅವಳ ಕಣ್ಣಿಂದ ಕಣ್ಣೀರು ಹರಿಯಿತು "ಯು ಆರ್ ಲೈಕ್ ಏಂಜಲ್ ಫಾರ್ ಮಿ ಅಂಕಲ್" ( ನೀವು ನನಗೆ ದೇವದೂತರಂತೆ ಅಂಕಲ್").
ನಾನು "ನೋ ಡಿಯರ್, ಯು ಆರ್ ಅ ಏಂಜಲ್ ಬೇಬಿ, ವೇಟ್ ಫಾರ್ ಮಿ " (ಇಲ್ಲ ಡಿಯರ್, ನೀನು ದೇವದೂತೆ ಮಗು, ನನ್ನನ್ನು ಕಾಯು).
ಅಂದು ಅವಳು ಕಣ್ಣಲ್ಲಿ ಕಣ್ಣೀರು ತುಂಬಿ ನನಗೆ ವಿದಾಯ ಹೇಳಿದಳು.
ಆದರೆ ನಾನು ಹಿಂತಿರುಗಿ ನಾಲ್ಕು ದಿನವಾದರೂ ಅವಳು ಕಾಣದ ಕಾರಣ ನನಗೆ ಅವಳ ಬಗ್ಗೆ ಚಿಂತೆ ಮೂಡಿತು. ಅವಳಿಗೋಸ್ಕರ ತಂದ ಮದ್ದು ಕೈಯಲ್ಲಿ ಹಿಡಿದು ದಿನಾ ಬೆಳಿಗ್ಗೆ ಹುಚ್ಚನಂತೆ ಪಾರ್ಕಲ್ಲಿ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳು ಸಿಗಲಿಲ್ಲ. ಮನಸ್ಸಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿತು.
ಎಲ್ಲಿ ಹೋದಳು? ಮರಳಿ ಆಫ್ರಿಕಾ ಹೋದಳ? ಅಯ್ಯೋ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲಿಲ್ಲ.
ಹೇಗೋ ತನ್ನನು ತಾನು ಸಾವರಿಸಿದೆ, ಆದರೆ ದಿನನಿತ್ಯದ ಕೆಲಸದ ಮಧ್ಯೆ ಸಹ ಅವಳ ಯೋಚನೆ ಬರುತ್ತಿತ್ತು.
ಆ ದಿನ ಬೆಳಿಗ್ಗೆ ಆಫೀಸ್ ಬಂದು ಕೂತು ದಿನಪತ್ರಿಕೆ ನೋಡುತ್ತಿದ್ದಾಗ, ಹೀಗೆಯೇ ಒಂದು ಕಡೆ ನನ್ನ ಗಮನ ಹೋಯಿತು.
Sad demise (ದುಖಃ)
ಕೆಳಗೆ ಆ ಮುದ್ದು ಹುಡುಗಿಯ ಚಿತ್ರ ಇತ್ತು.
ನನ್ನ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿದು ಅವಳ ಚಿತ್ರದ ಮೇಲೆ ಬೀಳಲಾರಂಭಿಸಿತು, ದಿನಪತ್ರಿಕೆ ಹಿಡಿದು ಬ್ಯಾಗಲ್ಲಿ ಇಟ್ಟಿದ ಅವಳ ಮದ್ದು ಕಟ್ಟು ಕೈಯಿಂದ ತೆಗೆದೆ, ಅವಳು ಹೇಳಿದ ಮಾತು ನೆನಪಾಯಿತು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...