Monday, October 13, 2014

ಓ ಲೇಖನಿಯೆ

ಓ ಲೇಖನಿಯೆ
ನೀನೇಕೆ ಮುನಿಸಿಕೊಂಡಿರುವೆ
ಭಾವನೆಗಳ ಬರವೆನಿಲ್ಲ ಈ ಹೃದಯದಲಿ
ಆದರೆ ಯಾಕೋ
ಕಾಗದದ ಈ ಖಾಲಿ ಹಾಳೆ
ಹೊಸ ಕಥೆ ಬಯಸುವುದಿಲ್ಲ
ಅದು ಕೇವಲ ಹಿಂದಿನ
ಅದೆಷ್ಟೋ ಕಥೆಗಳ
ನೆನಪು ಹುಟ್ಟಿಸುತ್ತಿದೆ
ನನ್ನ ಮೌನದಿಂದ
ನಿನಗೆ ಕೋಪ ಬರುವುದು ಸ್ವಾಭಾವಿಕ
ದಿನ ನಿತ್ಯ ನಿನ್ನಿಂದ ಆಟವಾಡುತ್ತಿದ್ದ ನಾನು
ಅದೆಷ್ಟೋ ದಿನದಿಂದ ನಿನ್ನ
ಸನಿಹವೂ ಬರಲಿಲ್ಲ ಅಂದರೆ
ನಿನಗೆ ಚಿಂತೆಯಾಗುವುದು ಸಹಜವಲ್ಲವೇ
ಆದರೆ
ಸ್ವಲ್ಪ ಸಮಯ ಕಳೆಯಲಿ
ಶಾಂತವಾಗಲಿ ಮನಸ್ಸು
ನಿರ್ಮಲವಾಗಲಿ ಮನಸ್ಸು
ಹುಟ್ಟಲಿ ನವೀನ ವಿಚಾರ
ನಂತರ
ವಸ್ತು ಕಥೆಯಾಗಲಿ
ಘಟನೆ ಕವನವಾಗಲಿ
ನಿನ್ನ ಮೊಗದಿಂದ
ನಗುವಿನ ಶಾಯಿ ಹರಿಯಲಿ
ಕಾಗದದ ಹಾಳೆ ಪುನಃ ಅಲಂಕೃತವಾಗಲಿ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಇದೇ ಅಳಲೂ ನನ್ನದು ಬಹುಮುಖ ಪ್ರತಿಭಾವಂತ ಕವಿಯೇ! :(

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...