Tuesday, September 9, 2014

ಪ್ರಕೃತಿ

ಸೌಂದರ್ಯಕ್ಕೆ
ಸಾವಿಲ್ಲ ಅಂದರು
ಪ್ರಕೃತಿ
ಮುನಿಸಿಕೊಂಡಿತು
---
ಅಲ್ಲಿ ಇಲ್ಲಿ
ನೀರೆ ನೀರು
ಸಾವಿನಿಂದ ಪಾರದ
ಜನರ ಕಣ್ಣುಗಳಲ್ಲಿ
ಮುಗಿಯದ ದಾಹ
---
ಏನೂ ಉಳಿಯಲಿಲ್ಲ
ಅವನು ನೀಡಿದ
ಈ ದೇಹದ ಹೊರತು
ಅವನೇ ಕಾಪಾಡುವನು
ಅಂದಳು
ಆ ವೀರೆ
---
ಹೊಟ್ಟೆಯಲಿ
ಅನ್ನವಿಲ್ಲ
ಆದರೆ ಧೈರ್ಯ
ಕುಸಿಯಲಿಲ್ಲ
ಅಂದಳು
ಎರಡು ಮಕ್ಕಳ
ಆ ತಾಯಿ
---
ನಿಸರ್ಗವೇ
ಪುನಃ
ಚೆಲ್ಲು
ನಿನ್ನ ಸೌಂದರ್ಯವನ್ನ
ಪುನಃ ಅಂದಗೊಳಿಸು
ಈ ಧರೆಯ ಸ್ವರ್ಗವನ್ನ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಐದೂ ಹನಿಗಳು ಸಾದೃಶ.
    ತಾಯಿಯ ಉಲ್ಲೇಖ ಮತ್ತು ಜಲ ಪ್ರಳಯದ ಘೋರತೆ ಮನದಾಳಕೆ ಇಳಿಯುವ ಸಾಲುಗಳು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...