Wednesday, September 10, 2014

ಈದ್ ಜಾತ್ರೆ ಭಾಗ - ೨

ಭಾಗ - ೨


ಊರಿನಿಂದ ಹೊರಟಿತು ನಡೆದುಕೊಂಡು ಸವಾರಿ, ಮಕ್ಕಳ ಜೊತೆ ಹಮೀದ್ ಸಹ ಹೋಗುತ್ತಿದ್ದ, ಕೆಲವೊಮ್ಮೆ ಎಲ್ಲ ಮಕ್ಕಳು ಓಡಿ ಹೋಗಿ ಎಲ್ಲರಿಂದ ಮುಂದೆ ಬಂದು ಮತ್ತೆ ಜೊತೆಯಲ್ಲಿ ಬಂದವರನ್ನು ಕಾಯುತ ಯಾವುದೇ ಮರದ ಅಡಿಯಲ್ಲಿ ನಿಲ್ಲುತ್ತಿದ್ದರು, ಯಾಕೆ ಈ ಹಿರಿಯರು ಇಷ್ಟು ಮೆಲ್ಲ ನಡೆಯುತ್ತಾರೆ, ಹಮೀದನ ಮನಸ್ಸಲ್ಲಿ ತಳಮಳ, ಹಮೀದ್ ಕಾಲಲ್ಲಿ ರೆಕ್ಕೆ ಸೇರಿಸಿದಂತೆ ನಡೆಯುತ್ತಿದ್ದ. 

ನಗರದ ದ್ವಾರ ಬಂತು, ಹಾದಿಯ ಎರಡು ಬದಿಯಲ್ಲಿ ಶ್ರೀಮಂತರ ಸುಂದರ ತೋಟಗಳಿದ್ದವು, ಮರಗಳಲ್ಲಿ ಮಾವಿನ ಹಣ್ಣು, ಪೇರಳೆ ಹಣ್ಣು ತುಂಬಿದವು, ಕೆಲವು ಮಕ್ಕಳು ಸಣ್ಣ ಕಲ್ಲು ಎಸೆದು ಹಣ್ಣು ತುಂಡು ಮಾಡಲು ಪ್ರಯತ್ನಿಸಿದರು, ಆಗ ಒಳಗಿನಿಂದ ಮಾಲಿ ಬಂದು ಅವರ ಹಿಂದೆ ಬಿದ್ದ, ಮಕ್ಕಳು ನಗು ನಗುತ ಓಡಿದರು, ಮಾಲಿ ಸೋತು ನಿಂತ. ಮಕ್ಕಳಿಗೆ ಗಮ್ಮತ್ತು "ಹೇಗೆ ಮಾಲಿಗೆ ಸತಾಯಿಸಿದೆವು" ಎಂದು.

ದೊಡ್ಡ ದೊಡ್ಡ ಕಟ್ಟಡ ಬರಲಾರಂಭಿಸಿತು, ಕೋರ್ಟ್, ಕಾಲೇಜ್, ಕ್ಲಬ್. ಎಲ್ಲ ಮಕ್ಕಳಲ್ಲಿ ವಿವಿಧ ಜಿಜ್ಞಾಸೆ.

ಈ ಕಾಲೇಜಲ್ಲಿ ಎಷ್ಟು ಮಕ್ಕಳು ಕಲಿಯುತ್ತಿರಬಹುದು? ಎಲ್ಲ ಮಕ್ಕಳಲ್ಲ, ದೊಡ್ಡವರು ಕಲಿಯುವುತ್ತಾರೆ,ಅವರ ದೊಡ್ಡ ದೊಡ್ಡ ಮೀಸೆ ಇರುತ್ತದೆ, ಹೌದ! ಇಷ್ಟು ದೊಡ್ದವರಾಗಿಯೂ ಕಲಿಯುತ್ತಿದ್ದಾರ? ಯಾರಿಗೆ ಗೊತ್ತು ಯಾವಾಗ ತನಕ ಕಲಿಯುತ್ತಾರೆ ಎಂದು ಮತ್ತೆ ಅಷ್ಟು ಕಲಿತು ಏನು ಮಾಡುತ್ತಾರೆಂದು? ಹಮೀದನ ಮದ್ರಸದಲ್ಲಿ ಕೇವಲ ಮೂರು ನಾಲ್ಕು ಮಕ್ಕಲ್ಲಿದ್ದರು, ಅದು ಸಹ ಅವನಿಂದ ದೊಡ್ಡವರು, ಏನೂ ಪ್ರಯೋಜನದವರಲ್ಲ, ದಿನನಿತ್ಯ ಪೆಟ್ಟು ತಿನ್ನುತ್ತಿದ್ದರು, ಕೆಲಸ ಕಳ್ಳರು, ಇಲ್ಲಿ ಸಹ ಅವರಂತವರೆ ಇರಬಹುದ?

ಅಬ್ಬಾ ಎಷ್ಟು ದೊಡ್ಡ ಕ್ಲಬ್, ಇಲ್ಲಿ ಏನು ಜಾದು ಆಗುತ್ತದ? ನಾನು ಕೇಳಿದ್ದೇನೆ, ಇಲ್ಲಿ ಸತ್ತವರ ತಲೆಬುರುಡೆ ಓಡುತ್ತದೆ, ದೊಡ್ಡ ದೊಡ್ಡ ಪ್ರದರ್ಶನ ಆಗುತ್ತದೆ, ಇಲ್ಲ, ಅಲ್ಲಿ ಎಲ್ಲರಿಗೆ ಪ್ರವೇಶ ಇಲ್ಲ, ಅಲ್ಲಿ ಸಂಜೆ ಸಾಹೇಬರು ಬಂದು ಆಡುತ್ತಾರೆ, ದೊಡ್ಡ ದೊಡ್ಡ ಸಾಹೇಬರು, ಮೀಸೆ ಗಡ್ಡದವರು ಮತ್ತು ಅವರ ಹೆಂಗಸರು ಕೂಡ ಆಡುತ್ತಾರೆ, ಹೌದ!  ನನ್ನ ಅಮ್ಮಿಗೆ ಇದನ್ನು ಕೊಟ್ಟರೆ, ಏನು ಹೇಳುತ್ತಾರೆ ಇದಕ್ಕೆ "ಬ್ಯಾಟ್" ಅವರಿಗೆ ಎತ್ತಲಿಕ್ಕೆ ಆಗಲಿಕ್ಕಿಲ್ಲ, ತಿರುಗಿಸಿದಾಗ ಬೀಳಬಹುದು.

ಮೆಹಮೂದ್ "ಅಲ್ಲಾ ಆಣೆ, ನಮ್ಮ ಅಮ್ಮಿಜಾನ್'ನವರಿಗೆ ಕೊಟ್ಟರೆ ಅವರ ಕೈ ಕಂಪಿಸಬಹುದು”.

ಮೋಹಸಿನ್ "ಅಷ್ಟೇನೂ ಕಷ್ಟ ಇಲ್ಲ, ಕೈಯಿಂದ ಕಲ್ಲು ತಿರುಗಿಸಿ ಅದೆಷ್ಟೋ ಕಿಲೋ ಗೋದಿ ಹಿಟ್ಟು ತೆಗೆಯುತ್ತಾರೆ, ಸ್ವಲ್ಪ ಬ್ಯಾಟ್ ಹಿಡಿದರೆ ಕೈ ಕಂಪಿಸುತ್ತದೇನು , ನೂರಾರು ಕೊಡ ನೀರು ದಿನನಿತ್ಯ ತೆಗೆಯುತ್ತಾರೆ, ಐದು ಕೊಡ ನಿನ್ನ ಎಮ್ಮೆಯೇ ಕುಡಿಯುತ್ತದೆ, ಈ ಸಾಹೇಬರ ಮ್ಯಾಡಂನವರಿಗೆ ಒಂದು ಕೊಡ ನೀರು ತೆಗೆಯಲಿಕ್ಕೆ ಹೇಳಿದರೆ, ಅವರ ಕಣ್ಣ ಮುಂದೆ ಕತ್ತಲು ಕವಿಯಬಹುದು".

ಮೆಹಮೂದ್ "ಆದರೆ ಅವರು ಓಡುವುದಿಲ್ಲವಲ್ಲಜಿಗಿಯುವುದಿಲ್ಲವಲ್ಲ, ಕುಣಿಯುವುದಿಲ್ಲವಲ್ಲ".

ಮೋಹಸಿನ್ " ಹೌದು, ಅದು ಸಾಧ್ಯವಿಲ್ಲ, ಆದರೆ ಅಂದು ನನ್ನ ಹಸು ಸಾಹುಕಾರನ ಹೊಲದಲ್ಲಿ ಮೇಯುತ್ತಿತ್ತು, ನನ್ನ ಅಮ್ಮಿಜಾನ್ ಇಷ್ಟು ಜೋರಿನಿಂದ ಓಡಿದರು ಅಂದರೆ ನನಗೆ ಸಹ ಅವರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ, ಸತ್ಯ".

ಸವಾರಿ ಮುಂದೆ ಸಾಗಿತು, ಮಿಠಾಯಿಗಳ ಅಂಗಡಿ ಶುರುವಾಯಿತು, ಅದೆಷ್ಟು ಮಿಠಾಯಿ, ಇಷ್ಟೆಲ್ಲಾ ಮಿಠಾಯಿ ಯಾರು ತಿನ್ನುತ್ತಾರೆ? ನೋಡಲ್ಲ ಒಂದು ಒಂದು ಅಂಗಡಿಯಲ್ಲಿ ನೂರು ನೂರು ಕಿಲೋ ಮಿಠಾಯಿ ಇರಬಹುದು, ಕೇಳಿದ್ದೇನೆ ರಾತ್ರಿಗೆ ಭೂತ ಪ್ರೇತ ಬಂದು ಖರೀದಿ ಮಾಡುತ್ತದೆ ಅಂತ, ಅಬ್ಬಜಾನ್ ಹೇಳುತ್ತಿದ್ದರು ರಾತ್ರಿಗೆ ಒಂದು ಮನುಷ್ಯ ಎಲ್ಲ ಅಂಗಡಿಗೆ ಹೋಗುತ್ತಾರೆ ಹಾಗು ಎಷ್ಟು ಮಿಠಾಯಿ ಉಳಿದಿದ್ದೆಯೋ ಎಲ್ಲವನ್ನು ಖರೀದಿ ಮಾಡುತ್ತಾನೆ, ನಮ್ಮಂತೆ ಸತ್ಯದ ರೂಪಾಯಿ ಕೊಟ್ಟು.

ಹಮೀದನಿಗೆ ನಂಬಿಕೆ ಆಗಲಿಲ್ಲ "ಭೂತ ಪ್ರೇತರಿಗೆ ಇಂತಹ ರೂಪಾಯಿ ಎಲ್ಲಿಂದ ಸಿಗುತ್ತದೆ?"

ಮೋಹಸಿನ್ " ಭೂತ ಪ್ರೇತರಿಗೆ ರೂಪಾಯಿಯ ಏನು ಕೊರತೆ? ಯಾವ ಖಜಾನೆಯಲ್ಲಿ ಬೇಕಾದರೂ ಹೋಗಬಹುದು, ಯಾವ ಬಾಗಿಲು ಸಹ ಅವರನ್ನು ತಡೆಯಲು ಸಾಧ್ಯವಿಲ್ಲ, ವಜ್ರ ಬಂಗಾರ ಸಹ ಅವರ ಹತ್ತಿರ ಇರುತ್ತದೆ, ಯಾರಿಂದ ಅವರು ಪ್ರಸನ್ನವಾಗುತ್ತಾರೋ, ಅವರಿಗೆ ಎಷ್ಟು ಬೇಕಾದರೂ ಕೊಡುತ್ತಾರೆ, ಈಗ ಇಲ್ಲಿದ್ದರೆ ಐದು ನಿಮಿಷದಲ್ಲಿ ಕಲ್ಕತ್ತಾ ಮುಟ್ಟುತ್ತಾರೆ."

ಹಮೀದ್ ಪುನಃ ಕೇಳಿದ " ಭೂತ ತುಂಬಾ ದೊಡ್ದದಿರುತ್ತದೆಯಾ?"

ಮೋಹಸಿನ್ "ಒಂದೊಂದು ತಲೆ ಆಕಾಶದಷ್ಟು ದೊಡ್ಡದಿರುತ್ತದೆ ಮಹಾಶಯ, ಏನಂತ ತಿಳಿದಿದ್ದಿ, ನೆಲದ ಮೇಲೆ ನಿಂತರೆ ತಲೆ ಆಕಾಶಕ್ಕೆ ತಾಗಬಹುದು, ಆದರೆ ಅವರ ಇಷ್ಟ ಬೇಕಾದರೆ ಒಂದು ಲೋಟೆಯಲ್ಲಿ ಧುಮುಕಿ ಕುಳಿತುಕೊಳ್ಳುತ್ತಾರೆ."

ಹಮೀದ್ "ಜನರು ಹೇಗೆ ಅವರನ್ನು ಸಂತೋಷಗೊಳಿಸುತ್ತಾರೆ, ನನಗೆ ಯಾರು ಆ ಮಂತ್ರ ತಿಳಿಸಿದರೆ ಒಂದು ಭೂತವನ್ನು ನಾನೂ ಸಂತೋಷಗೊಳಿಸುವೆ."

ಮೋಹಸಿನ್ "ಈಗ ಇದು ನನಗೆ ಗೊತ್ತಿಲ್ಲ, ಆದರೆ ಕೇಳಿದ್ದೇನೆ ಸಾಹುಕಾರನ ವಶದಲ್ಲಿ ಅದೆಷ್ಟೋ ಭೂತ ಪ್ರೇತಗಳಿವೆ, ಯಾವುದೇ ವಸ್ತು ಕದ್ದು ಹೋದರೆ, ಸಾಹುಕಾರ ಅದರ ಪತ್ತೆ ಹಚ್ಚಿ ಕಳ್ಳನ ಹೆಸರು ಹೇಳುತ್ತಾರೆ, ಜುಮರಾತಿಯ ಕರು ಆ ದಿನ ಕಳೆದು ಹೋಯಿತು, ಮೂರು ದಿನ ಆಘಾತದಲ್ಲಿದ್ದ, ಎಲ್ಲಿಯೂ ಸಿಗದಾಗ ಸಾಹುಕಾರನ ಬಳಿ ಹೋದ, ಸಾಹುಕಾರ ಕೂಡಲೇ ಹೇಳಿದ "ಅದು ಕೊಟ್ಟೆಯಲ್ಲಿ ಇದೆಯೆಂದು, ಅಲ್ಲೇ ಸಿಕ್ಕಿತ್ತು, ಭೂತ ಬಂದು ಎಲ್ಲ ಜಗತ್ತಿನ ಸುದ್ಧಿ ಅವರಿಗೆ ಕೊಡುತ್ತದೆ."

ಈಗ ಹಮೀದನಿಗೆ ತಿಳಿಯಿತು ಸಾಹುಕಾರನ ಬಳಿ ಹೇಗೆ ಅಷ್ಟು ಸಂಪತ್ತು ಹಾಗು ಹೇಗೆ ಅಷ್ಟು ಮಾನ ಇದೆಯೆಂದು.

ಸವಾರಿ ಮುಂದೆ ಸಾಗಿತು.

(ಮುಂದುವರಿಯುವುದು)

ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

1 comment:

  1. ಆಹಾ ಮಾವಿನ ತೋಪು ನೆನಪಾಯಿತು ಮತ್ತು ಗಡಿದಂ ಜಾತ್ರೆಯ ಬತ್ತಾಸೂ...

    ಈ ಮೆರವಣಿಗೆಯು ಸಾದೃಶವಾಗಿಸಿದ್ದಾರೆ.
    ಸಾಹುಕಾರನ ಅಧೀನ ಭೂತಗಳು, ಎಂತಹ ಮಕ್ಕಳ ಕಲ್ಪನೆ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...