Thursday, September 4, 2014

ಬಂದೆ ನೀನು

ಬಂದೆ ನೀನು
ಈ ವಿಚಾರ
ಈ ಅತೃಪ್ತ ಹೃದಯದಲಿ ಬಂತು
ಅದೆಷ್ಟೋ ಮರೆತೋದ
ಗಾಯಗಳ ನೆನಪು ಬಂತು
ಬಂದೆ ನೀನು...

ನಿನ್ನ ಅಧರದಲಿ ಅದೆಂದೋ
ನನ್ನ ಹೆಸರು ಬಂದಿತ್ತು
ಹೊಳೆಯುವ ಕಂಗಳಿಂದ
ಪ್ರೀತಿಯ ಪ್ರಸ್ತಾವ ಬಂದಿತ್ತು
ಜೀವಮಾನ ಪರ್ಯಂತ
ಜೊತೆ ನೀಡುವ ಸಂದೇಶ ಬಂದಿತ್ತು
ನಿನ್ನನ್ನು ನೋಡಿ
ಆ ನಿಷ್ಠೆಯ ನೆನಪು ಬಂತು
ಬಂದೆ ನೀನು...

ಅತ್ಮದಲಿ ಉರಿಯಲಾರಂಭಿಸಿತು
ನಂದಿ ಹೋದ ನೆನಪಿನ ದೀಪಗಳು
ಎಷ್ಟು ಮರುಳಾಗಿದ್ದೆ
ನಾ ನಿನ್ನನ್ನು ಪಡೆಯಲು
ಅದೇನು ಕಡಿಮೆಯಿರಲಿಲ್ಲ
ನೀ ಮಾಡಿದ ಉಪಕಾರಗಳು
ಆದರೆ ಕೇಳಿದನ್ನು ಪಡೆಯಲಿಲ್ಲ
ಆ ಪ್ರತಿಫಲ ನೆನಪು ಬಂತು
ಬಂದೆ ನೀನು...

ಇಂದು ಅಂತಹ ಮಾತೆನಿಲ್ಲ
ಆದರೂ ತೊಂದರೆ ಏನಿಲ್ಲ
ನನ್ನ ಪಾಲಲ್ಲಿ
ಈ ಕಿರು ಭೇಟಿಯಾದರು ಇದೆಯಲ್ಲ
ಅನ್ಯರ ಆಗಿ ಸಹ ಈ ಸುಂದರಿ
ನನ್ನ ಜೊತೆಯಾದರೂ ಇದ್ದಳಲ್ಲ
ಅಯ್ಯೋ ಎಂತಹ ಸಮಯ ನನಗೆ
ಇದೆಂದಿನ ಪೀಡೆ ನೆನಪು ಬಂತು
ಬಂದೆ ನೀನು...

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಗುಮ್ರಾಹ

आप आये तो खयाल-ए-दिला-ए -नाशाद आया
कितने भूले हुये जख्मों का पता याद आया

आप के लब पे कभी अपना भी नाम आया था
शौख नजरोंसे मोहब्बत का सलाम आया था
उम्रभर साथ निभाने का पयाम आया था
आप को देख के वो एहद-ए-वफ़ा याद आया

रूह में जल उठे, बुझती हुयी यादों के दिये
कैसे दीवाने थे, आप को पाने के लिये
यूँ तो कुछ कम नहीं जो आप ने एहसान किये
पर जो मांगे से ना पाया, वो सिला याद आया

आज वो बात नहीं फिर भी कोई बात तो हैं
मेरे हिस्से में ये हल्की से मुलाकात तो हैं
गैर का हो के भी ये हुस्न मेरे साथ तो हैं
हाय किस वक़्त मुझे कब का गिला याद आया
http://www.youtube.com/watch?v=CUI9pZwQucA

2 comments:

  1. ’ನನ್ನ ಪಾಲಲ್ಲಿ
    ಈ ಕಿರು ಭೇಟಿಯಾದರು ಇದೆಯಲ್ಲ’
    ವಾರೇವ್ಹಾ...

    ಸಾಹಿರ್ ಲುದ್ಯಾನ್ವಿ ಅವರ ಬಗ್ಗೆ ದೂಸರಾ ಮಾತಿಲ್ಲ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...