Sunday, September 14, 2014

ಶೂನ್ಯತೆ

ಪರಿಸ್ಥಿತಿ ಸ್ವಲ್ಪ
ಸುಧಾರಿಸಿದೆ ಅಷ್ಟೇ
ಆ ಮಟ್ಟಿಗೆ
ಬರಲಿಲ್ಲ ಇನ್ನು ಈ ಬದುಕು

ಮನೆ ಮಠ
ಹೊನ್ನು ಸಿಂಗಾರ
ಮೇಲಿಂದ ಅಚ್ಚುಕಟ್ಟು
ಒಳಗೆ ಗೋಡೆ ಬಿರುಕು

ಸಭೆ ಸತ್ಕಾರ
ಕರೆ ಉಡುಗೊರೆ
ಮೃಷ್ಟಾನ್ನ ಭೋಜನ
ಹೃದಯದಲಿ ಹುಡುಕು

ದಾನ ಬಕುತಿ
ತನ್ನದೇ ಮುಖಸ್ತುತಿ
ಸುಂದರ ಮೇಲ್ನೋಟ
ತ್ಯಜಿಸಲಾಗದ ಮನಸ್ಸ ಕೊಳಕು

ಜನಜಂಗುಳಿ ಸುತ್ತಮುತ್ತ
ಅನುಭೂತಿ ಏಕಾಂತ
ಗೋಚರಿಸದ ಶೂನ್ಯತೆ
ದಿನನಿತ್ಯ ಅಭಾವದ ಶೋಕು

by ಹರೀಶ್ ಶೆಟ್ಟಿ,ಶಿರ್ವ 

1 comment:

  1. ’ಹೃದಯದಲಿ ಹುಡುಕು’ ತಮ್ಮ ಈ ಮಾತು ನೈಜವಾಗಿದೆ.
    ’ತನ್ನದೇ ಮುಖಸ್ತುತಿ’ ಇದೇ ಅಸಲೀ ವಿಪರ್ಯಾಸ!
    ’ಅನುಭೂತಿ ಏಕಾಂತ’ ಲಭಿಸಲಿ ನನಗೂ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...