Thursday, September 11, 2014

ಈದ್ ಜಾತ್ರೆ ಭಾಗ - ೩


ಭಾಗ - ೩


ಇದು ಪೋಲಿಸ್ ಲೈನ್, ಇಲ್ಲಿ ಎಲ್ಲ ಪೊಲೀಸರು ಕವಾಯತು ಮಾಡುತ್ತಾರೆ, ರೈಟ್ ಟರ್ನ್, ಫಾಯರ್ ಫೋ ಫೋ, ರಾತ್ರಿಗೆ ತಿರುಗಿ ತಿರುಗಿ ಕಾವಲು ನೀಡುತ್ತಾರೆ, ಇಲ್ಲಾದರೆ ಕಳ್ಳತನ ಆದರೆ, ಮೋಹಸಿನ್ ವಿರೋಧಿಸಿದ "ಏನು, ಈ ಪೊಲೀಸರು ಕಾವಲು ನೀಡುತ್ತಾರ? ಹಾಗಾದರೆ ನಿನಗೆ ತುಂಬಾ ಗೊತ್ತಿದೆ, ಮೀಯಾ ಇವರು ಸ್ವತಃ ಕಳ್ಳತನ ಮಾಡುತ್ತಾರೆ, ನಗರದಲ್ಲಿ ಎಷ್ಟು ಕಳ್ಳ, ದರೋಡೆಕೋರರು ಇದ್ದಾರಲ್ಲ, ಎಲ್ಲರು ಬೀದಿಗೆ ಬಂದು ಇವರಿಗೆ "ಜಾಗರೂಕರಾಗಿರಿ, ನಮ್ಮನ್ನು ನೋಡಿಯೂ ನೋಡದೆ ಹಾಗೆ ಹೋಗುತ್ತಿರಿ" ಎಂದು ಹೇಳುತ್ತಾರೆ, ಅವಾಗ ತಾನೇ ಇವರ ಹತ್ತಿರ ಅಷ್ಟು ಹಣ ಬರುತ್ತದೆ. ನನ್ನ ಮಾವ ಒಂದು ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಇದ್ದಾರೆ, ೧೨ ರೂಪಾಯಿ ತಿಂಗಳು ಸಂಬಳ ಬರುತ್ತದೆ, ಆದರೂ ೫೦ ರೂಪಾಯಿ ಮನೆಗೆ ಕಳಿಸುತ್ತಾರೆ, ಅಲ್ಲಾ ಆಣೆ! ಒಂದು ಸಲ ನಾನು ಕೇಳಿದ್ದೆ "ಮಾವ, ನೀವು ಇಷ್ಟೆಲ್ಲಾ ಹಣ ಎಲ್ಲಿಂದ ಪಡೆಯುತ್ತೀರಿ?”  ನಗುತ್ತಲೇ ಉತ್ತರಿಸಿದರು "ಮಗ, ಅಲ್ಲಾ ನೀಡುತ್ತಾರೆ", ಮತ್ತೆ ಸ್ವತಃ ಮಣಮಣ ಹೇಳ್ಕೊಂಡರು "ನಾವು ಬಯಸಿದರೆ ಒಂದು ದಿನದಲ್ಲಿ ಲಕ್ಷಗಟ್ಟಲೆ ಸಂಪಾದಿಸಬಹುದು, ಆದರೆ ನಾವು ಅಷ್ಟೇ ತೆಗೆದುಕೊಳ್ಳುತ್ತೇವೆ ಅಂದರೆ ಅಪಕೀರ್ತಿಯೂ ಬರದಂತೆ ಹಾಗು ಕೆಲಸ ಸಹ ಹೋಗದಂತೆ."

ಹಮೀದ್ ಕೇಳಿದ "ಇವರು ಕಳ್ಳತನ ಮಾಡಿಸುತ್ತಾರೆ, ಹಾಗಾದರೆ ಇವರಿಗೆ ಯಾರು ಹಿಡಿಯುವುದಿಲ್ಲವೇ?"

ಮೋಹಸಿನ್ ಅವನ ಮುದ್ದುತನಕ್ಕೆ ದಯೆ ತೋರಿಸಿ ಹೇಳಿದ "ಅಯ್ಯೋ ಹುಚ್ಚ, ಇವರನ್ನು ಯಾರು ಹಿಡಿಯುತ್ತಾರೆ! ಹಿಡಿಯುವವರು ಇವರು ಸ್ವತಃ ತಾನೇ, ಆದರೆ ಅಲ್ಲಾ ಇವರಿಗೆ ತುಂಬಾ ಶಿಕ್ಷೆ ನೀಡುತ್ತಾನೆ, ಕಳ್ಳತನದ ಹಣ ನೀರು ಪಾಲಾಗುತ್ತದೆ, ಅತಿ ಆಸೆ ಗತಿ ಕೆಡಿಸಿತು ಅಂದ ಹಾಗೆ, ಸ್ವಲ್ಪ ದಿನದ ಮುಂಚೆಯೇ ಮಾವನ ಮನೆಗೆ ಬೆಂಕಿ ತಗುಲಿ ಅವರ ಎಲ್ಲ ಒಡವೆ ಮನೆಯಲ್ಲಿರುವ ದವಸ, ಧಾನ್ಯಗಳೆಲ್ಲವೂ ಸುಟ್ಟು ಹೋಯಿತು, ಒಂದು ಪಾತ್ರೆ ಸಹ ಉಳಿಯಲಿಲ್ಲ, ಎಷ್ಟೋ ದಿನ ಮರದ ಅಡಿಯಲ್ಲಿ ಮಲಗಿದರು, ಅಲ್ಲಾ ಆಣೆ, ಮರದ ಅಡಿಯಲ್ಲಿ! ಮತ್ತೆ ಅದೆಲ್ಲಿಂದಲೋ ಒಂದು ನೂರು ರೂಪಾಯಿ ಸಾಲ ಪಡೆದ ನಂತರವೇ ಪಾತ್ರೆ ಎಲ್ಲ ಬಂತು."

ಹಮೀದ್ "ನೂರು ಐವತ್ತರಿಂದ ಹೆಚ್ಚು ಇರುತ್ತದೆಯ?"

ಮೋಹಸಿನ್  "ಎಲ್ಲಿ ಐವತ್ತು ಎಲ್ಲಿ ಒಂದು ನೂರು, ಐವತ್ತು ಅಂದರೆ ಒಂದು ಚೀಲ ಅಷ್ಟೇ, ಆದರೆ ನೂರು ಎರಡು ಚೀಲದಲ್ಲೂ ಬಾರದು."

ಈಗ ಮಸೀದಿ ಹೋಗುವ ಜನಜಂಗುಳಿ ಕಾಣಲಾರಂಭಿಸಿತು. ಒಂದರಿಂದ ಒಂದು ಜನ ಹೊಳಪುಳ್ಳ ವಸ್ತ್ರಗಳನ್ನು ಧರಿಸಿದವರು. ಕೆಲವರು ಕುದುರೆ ಗಾಡಿಯಲ್ಲಿ, ಕೆಲವರು ಮೋಟರಲ್ಲಿ, ಎಲ್ಲ ಸುಗಂಧದ್ರವ್ಯದಿಂದ ಸುಗಂಧಿತ, ಎಲ್ಲರ ಮನಸ್ಸಲ್ಲೂ ಉತ್ಸಾಹ. ಗ್ರಾಮೀಣರ ಈ ತಂಡ ತಮ್ಮ ದಾರಿದ್ರ್ಯ ಮರೆತು ಸಂತೋಷ ಧೈರ್ಯದಿಂದ ಮಗ್ನ ನಡೆಯುತ್ತಿದ್ದರು, ಮಕ್ಕಳಿಗೆ ನಗರದ ಪ್ರತಿಯೊಂದು ವಸ್ತು ವಿಶಿಷ್ಟವಾಗಿತ್ತು, ಯಾವ ವಸ್ತುವನ್ನು ನೋಡಿದರೂ, ದುರುಗುಟ್ಟಿ ನೋಡುತ್ತಿರುತ್ತಿದ್ದರು, ಹಿಂದೆಯಿಂದ ಹಾರ್ನ್ ಬಾರಿಸುವ ಶಬ್ದ ಕೇಳಿದರೂ ಚೇತರಿಸುತ್ತಿರಲಿಲ್ಲ, ಹಮೀದ್ ಅಂತೂ ಮೋಟರಿನ ಕೆಳಗೆ ಬರುತ್ತಾ ಬರುತ್ತಾ ಬಚಾವಾದ.

ಇದ್ದಕ್ಕಿದ್ದಂತೆ ಮಸೀದಿ ಕಾಣಲಾರಂಭಿಸಿತು, ಮೇಲೆ ಹುಣಿಸೆಹಣ್ಣಿನ ವೃಕ್ಷಗಳ ದಟ್ಟವಾದ ನೆರಳು, ಕೆಳಗೆ ಸುಸಜ್ಜಿತ ನೆಲ, ಅದರ ಮೇಲೆ ಹಾಸಿದ ಅಲಂಕರಿತ ವಸ್ತ್ರ ಹಾಗು ರೋಜ ಇಟ್ಟವರ ಸಾಲು ಒಂದರ ಹಿಂದೆ ಒಂದು ಎಂದು ಅದೆಷ್ಟೋ ದೂರ ತನಕ ಹೋಗಿದೆ ಅಂದರೆ ಹಾಸಿದ ವಸ್ತ್ರದ ಆಚೆ ಸಹ ಜನರು ಸಾಲಾಗಿ ನಿಲ್ಲಿದ್ದಾರೆ. ಹೊಸಬರು ಬಂದವರು ಹಿಂದೆ ಹಿಂದೆ ಸಾಲಾಗಿ ನಿಲ್ಲುತ ಹೋಗುತ್ತಾರೆ, ಮುಂದೆ ಜಾಗ ಇಲ್ಲ, ಇಲ್ಲಿ ಯಾರು ಸಂಪತ್ತು ಶ್ರೇಣಿ ನೋಡುವುದಿಲ್ಲ, ಇಸ್ಲಾಂನ ದೃಷ್ಟಿಯಲ್ಲಿ ಎಲ್ಲರು ಸಮಾನರೆ, ಈ ಗ್ರಾಮೀಣರು ವಜು ಮಾಡಿ (ಕೈ ಕಾಲು ತೊಳೆದು ಶುದ್ಧ ಆಗುವ ಕ್ರಮ) ಹಿಂದೆ ನಿಂತರು, ಎಷ್ಟು ಸುಂದರ ಕಾರ್ಯಾಚರಣೆ, ಎಷ್ಟು ಸುಂದರ ವ್ಯವಸ್ಥೆ, ಲಕ್ಷಗಟ್ಟಲೆ ತಲೆ ಒಟ್ಟಿಗೆ ಭಕ್ತಿಯಿಂದ ಬಾಗುತ್ತದೆ, ಮತ್ತೆ ಎಲ್ಲರು ಒಟ್ಟಿಗೆ ನಿಲ್ಲುತ್ತಾರೆ, ಒಟ್ಟಿಗೆ ತಲೆ ಬಾಗುತ್ತದೆ ಮತ್ತು ಒಟ್ಟಿಗೆ ನಿಲ್ಲುತ್ತಾರೆ, ಪುನಃ ಒಟ್ಟಿಗೆ ತಲೆ ಬಾಗುತ್ತದೆ ಮತ್ತು ಒಟ್ಟಿಗೆ ನಿಲ್ಲುತ್ತಾರೆ, ಈ ಕ್ರಿಯೆ ಎಷ್ಟೋ ಸಲ ಆಗುತ್ತದೆ, ಲಕ್ಷಗಟ್ಟಲೆ ವಿದ್ಯುತ್ತ್ ದೀಪಗಳು ಒಟ್ಟಿಗೆ ಪ್ರದೀಪ್ತವಾಗಿ ಮತ್ತೆ ನಂದುವ ಹಾಗೆ, ಈ ಕ್ರಮ ಹೀಗೆಯೇ ನಡೆಯುತ್ತಿರುತ್ತದೆ, ಎಷ್ಟು ಅಪೂರ್ವ ದೃಶ್ಯವಾಗಿತ್ತು, ಇದರ ಸಾಮೂಹಿಕ ಕಾರ್ಯವಿಸ್ತಾರಣೆ ಹಾಗು ಅಪರಿಮಿತತೆ ಹೃದಯದಲ್ಲಿ ಶ್ರದ್ಧೆ, ಹೆಮ್ಮೆ, ಆತ್ಮಾನಂದ ತುಂಬುತ್ತದೆ, ಅಂದರೆ ಸೋದರಿಕೆಯ ಈ ವಿಧಿ ಈ ಎಲ್ಲ ಆತ್ಮಗಳನ್ನು ಒಂದೇ ದಾರದಲ್ಲಿ ಪೋಣಿಸಿದಂತೆ.

(ಮುಂದುವರಿಯುವುದು)

ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

2 comments:

  1. ಇಲ್ಲಿ ಮನೆಗೆ ಐವತ್ತು ರೂಪಾಯಿ ಕಳಿಸುವ ಪೊಲೀಸಪ್ಪನ ಉಲ್ಲೇಖದ ಮುಖೇನ, ಅಂದಿಗೂ ಇಂದಿಗೂ ಲಂಚವೆಂಬುದು ಏಕಮಾದ್ವಿತೀಯ!

    ಸಾಮೂಹಿಕ ಪ್ರಾರ್ಥನೆಯು ಮೇಲು ಕೀಳುಗಳ ತೊಡೆದು ಹಾಕುವ ಆದರ್ಶಯುತ ಕಾರ್ಯಾಚರಣೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...