Tuesday, September 30, 2014

ಜನ್ಮಭೂಮಿ

ಹೇಳಲಿಕ್ಕೆ ಎಲ್ಲವೂ ಇದೆ ನನ್ನತ್ತಿರ
ಆದರೆ ಪಡೆಯಲಾಗಲಿಲ್ಲ ಅದನ್ನು
ಹಿಂದೆ ಬಿಟ್ಟು ಬಂದಿದ್ದನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಮರದ ನೆರಳು
ಆ ಹಣ್ಣಿನ ಪರಿಮಳ
ಆ ಮಾವಿನ ಹಣ್ಣಿನ ರುಚಿ
ಆ ಎಲ್ಲ ಸುಂದರ ಪರಿಸರ
ಹೇಳಲಿಕ್ಕೆ ಅದೆಷ್ಟೋ ಹಣ್ಣುಗಳು ಸಿಗುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ರುಚಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಗಲ್ಲಿಯ ಆಟ
ಆ ರಾತ್ರಿಗೆ ತಡವಾಗಿ ಕುಳಿತು
ಹರಟೆ ಹೊಡೆಯುವ ಚಟ
ಆ ನಕ್ಕು ಆ ನಲಿವು
ಹೇಳಲಿಕ್ಕೆ ಅದೆಷ್ಟೋ ವೈವಾಟ ನಡೆಯುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ಖುಷಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಉತ್ಸವ ಆ ವೈಭವ
ಆ ಹಬ್ಬ ಆಚರಣೆ
ಆ ತಡ ತನಕ ಹಬ್ಬಕ್ಕಾಗಿ
ನಡೆಯುವ ತಯಾರಿ
ಹೇಳಲಿಕ್ಕೆ ಹಬ್ಬ ಇಲ್ಲಿಯೂ ಆಚರಿಸುತ್ತಾರೆ
ಆದರೆ ಪಡೆಯಲಾಗಲಿಲ್ಲ ಅಂತಹ ಆನಂದವನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಅದೇಕೋ
ಹುಟ್ಟುವುದಿಲ್ಲ ಇಲ್ಲಿ ಅಂತಹ ಅತ್ಯಾಸಕ್ತಿ
ಕಾಡುತ್ತದೆ ಏನೋ ಒಂದು ಕೊರತೆ
ನಗು ಮೊಗದಲಿ ಕಣ್ಣೀರು ಅವಿತುಕೊಂಡಿರುತ್ತದೆ
ಪದೇ ಪದೇ ಮನಸ್ಸಲ್ಲಿ
ಜೀವನದ ಅತಿ ದೊಡ್ಡ ತಪ್ಪು ಮಾಡಿದೆಯೆಂಬ
ವಿಚಾರ ಬರುತ್ತದೆ
ಸುಖ ಹಣದಿಂದ ಹುಟ್ಟುವುದಿಲ್ಲ
ದುಡ್ಡು ನೀಡಿ ಹರ್ಷ ಪಡೆಯಲಾಗುವುದಿಲ್ಲ
ಮಣ್ಣಿನ ಋಣ ಉಳಿಯುತ್ತದೆ ಬಾಕಿ
ಈ ಹೊನ್ನುಕ್ಕಿಂತ ಅದೆಷ್ಟೋ ಉತ್ತಮ ನನ್ನ ದೇಶದ ಮಣ್ಣು
ಸದಾ ಎಳೆಯುತ್ತಿರುತ್ತದೆ ನನ್ನ ನಾಡು ನನ್ನನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

by ಹರೀಶ್ ಶೆಟ್ಟಿ, ಶಿರ್ವ 

ಲೋಪ ದೋಷ

ಎಷ್ಟೇ ಒಳ್ಳೆ ಕವಿತೆ ಬರೆದರು ಏನು
ತಪ್ಪು ಹುಡುಕುವವರಿಗೆ
ಲೋಪ ಕಾಣುತ್ತದೆ
ಎಷ್ಟೇ ಒಳ್ಳೆ ನುಡಿ ನುಡಿದರು ಏನು
ಮಾತನ್ನು ಮುರಿಯುವವರಿಗೆ
ದೋಷ ಕಾಣುತ್ತದೆ
by ಹರೀಶ್ ಶೆಟ್ಟಿ, ಶಿರ್ವ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಲೋಪ, ದೋಷ ಹುಡುಕುವ ತವಕದಲ್ಲಿ ಇರುವ ಜನರನ್ನು ನೋಡಿ ಹೊಳೆದದ್ದು.

Monday, September 29, 2014

ನಾಳೆಯ ದಿನವಾದರೂ ಶುಚಿಯಾಗಲಿ

ದ್ವೇಷ ತುಂಬಿದ ಎದೆಯಲ್ಲಿ ಹೆಮ್ಮೆ ಹೇಗೆ ನೆಲೆಸುವುದು
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು 
ಹರಿಯಲಿ ದ್ವೇಷ 
ಸ್ವಚ್ಚವಾಗಲಿ ಕಲ್ಮಶ 
ನಾಳೆಯ ದಿನವಾದರೂ ಶುಚಿಯಾಗಲಿ

by ಹರೀಶ್ ಶೆಟ್ಟಿ, ಶಿರ್ವ 

Saturday, September 27, 2014

ಬದುಕು

ಬದುಕು
ಸಿರಿವಂತರಿಗೆ
ಆಟ
ಬಡವರಿಗೆ
ಹೋರಾಟ
by ಹರೀಶ್ ಶೆಟ್ಟಿ, ಶಿರ್ವ

ಕಠಿಣ ಸಮಯ

ಕಠಿಣ
ಸಮಯ
ಇರಲಿ
ಸಂಯಮ
ಇರಲಿ
ಧೈರ್ಯ
ಇರಲಿ
ಭರವಸೆ
by ಹರೀಶ್ ಶೆಟ್ಟಿ, ಶಿರ್ವ

ಮಾತಲ್ಲಿ

ಮಾತಲ್ಲಿ
ನಮ್ರತೆ
ಮುತ್ತು
ಮಾತಲ್ಲಿ 
ಕಠೋರತೆ
ಆಪತ್ತು
by ಹರೀಶ್ ಶೆಟ್ಟಿ, ಶಿರ್ವ

ಸಹಾಯ ಹಸ್ತ

ನೀಡು
ಸಹಾಯ
ಹಸ್ತ
ಸಂತಸದ 
ಓಟ
ನಿನ್ನತ್ತ
by ಹರೀಶ್ ಶೆಟ್ಟಿ, ಶಿರ್ವ

Thursday, September 25, 2014

ಮಲ್ಲಿಗೆ

                                                                  ಚಿತ್ರಕೃಪೆ :ಅಂತರ್ಜಾಲ
ಮಲ್ಲಿಗೆ
-------

ಗಾಳಿಯಲಿ
ಮಲ್ಲಿಗೆಯ ಕಂಪು
ಇದು ಅವಳ ಆಗಮನವೆ?

---

ದಾರದಲಿ ಪೋಣಿಸಿದ
ಮಲ್ಲಿಗೆ ಹೂವು
ಉದುರಿ ಹೋಗಿದೆ
ದಾರ ಈಗಲೂ
ಘಮಘಮಿಸುತ್ತಿದೆ
---

ಮಲ್ಲಿಗೆಯ
ತೋಟದಲಿ
ಅವಳ ಉಪಸ್ಥಿತಿ
ಹೂಗಳು ಪ್ರಸನ್ನ ಅತಿ ಅತಿ
---

ಪುಸ್ತಕ
ತೆರೆದರೆ ಅದರಲಿ
ಅವಲ್ಲಿಟ್ಟಿದ್ದ
ಒಣಗಿದ ಮಲ್ಲಿಗೆ
ಪುಸ್ತಕದಲಿ ಈಗಲೂ
ಅವಳ ಸುವಾಸನೆ
---

ಪೇಟೆಯಲಿ
ತುಂಬಿದೆ
ಮಲ್ಲಿಗೆ ಹೂಗಳು
ಮುತ್ತಿತು ನನ್ನನ್ನು
ಅವಳ ನೆನಪುಗಳು

by ಹರೀಶ್ ಶೆಟ್ಟಿ, ಶಿರ್ವ 

Wednesday, September 24, 2014

ವನದ ಪ್ರಾಣಿ

ವನದ ಪ್ರಾಣಿ ಅದು
ಪಂಜರದಲಿ ಹೇಗೆ ತಾನೇ ವಾಸಿಸುವುದು
ಉಸಿರು ಕಟ್ಟುವುದು
ಕೋಪ ಏರುವುದು
ರಕ್ತ ಕುದಿಯುವುದು
ಮನುಜ ನಿನ್ನ ದುರದೃಷ್ಟ
ಇದು ನಿನ್ನ ಮೂರ್ಖತನವೇ
ಅಥವಾ ಬಾಲಿಶ ಧೈರ್ಯವೇ
ಅದು ಪ್ರಾಣಿ
ಅದರ ಈ ಕಾರ್ಯ ಸಹಜ
ನಿನ್ನ ನಡತೆ ಸರಿಯೇ
ಯಾಕೆ ಹೋದೆ ನೀನಲ್ಲಿಗೆ
ಕಾವಲು ಇಲ್ಲದ ಬಲೆಗೆ
ಏನಾಯಿತು ಇದರ ಫಲ
ಕಳೆದುಕೊಂಡೆ ನಿನ್ನ ಪ್ರಾಣ
ಸಿಕ್ಕಿತು ಪ್ರಾಣಿಗೆ ಭೋಜನ
by ಹರೀಶ್ ಶೆಟ್ಟಿ, ಶಿರ್ವ

Tuesday, September 23, 2014

ಅನನ್ಯ (ಇತ್ತೀಚಿಗೆ ಕೆಲವು ವಿಶಿಷ್ಟ ವೀಡಿಯೊ ನೋಡಿ ಪ್ರೇರಿತವಾಗಿ )

ಆತ
ಹೋಟೆಲಲ್ಲಿ
ಯಾರೋ
ಬಿಟ್ಟ
ಅನ್ನವನ್ನು
ಶ್ರದ್ಧೆಯಿಂದ ತಿಂದು
ಊಟದ ಹಣವನ್ನು
ದಾನದ ಪೆಟ್ಟಿಗೆಗೆ
ಹಾಕಿದ

---

ಬಲೂನು
ಮಾರುವ
ಮುದಕನಿಂದ
ಆತ
ಒಂದು
೫೦ ಪೈಸೆಯ
ಬಲೂನು
ಖರೀದಿ ಮಾಡಿ
ಮುದುಕನಿಗೆ
ಒಂದು ಸಾವಿರ ರೂಪಾಯಿ ನೀಡಿದ

----

ತನ್ನ ಹುಟ್ಟು ಹಬ್ಬ
ಆಚರಿಸಲು
ಆತ
ವೃದ್ಧಾಶ್ರಮ ಹೋಗಿ
ವೃದ್ಧರಿಗೆ
ಊಟ ಬಟ್ಟೆ ನೀಡಿ
ಅನೇಕ
ಅಮ್ಮ ಅಪ್ಪಂದಿರ
ಆಶೀರ್ವಾದ ಪಡೆದ

---

ಅಜ್ಜಿಯ
ಬಾಗಿಲಲಿ
ದಿನನಿತ್ಯ
ಬಾಳೆಹಣ್ಣು ಇಟ್ಟು
ಹೋಗುತ್ತಿದ್ದವನನ್ನು
ಅಜ್ಜಿ ಒಂದು
ದಿನ ನೋಡಿಯೇ ಬಿಟ್ಟಳು,
ಆಶೀರ್ವಾದದ ಸುರಿಮಳೆ
ಆಯಿತು ಆತನ ಮೇಲೆ

---

ಆತ ಅನಾಥ,
ಹೋಟಲಲ್ಲಿ ದುಡಿದು
ತಿಂಗಳಿಗೊಮ್ಮೆ
ಅನಾಥಾಲಯಕ್ಕೆ
ಅನಾಥ ಮಕ್ಕಳಿಗೋಸ್ಕರ
ತಿಂಡಿ ತಿನಿಸು
ಕೊಂಡು ಹೋಗುತ್ತಿದ್ದ

by ಹರೀಶ್ ಶೆಟ್ಟಿ, ಶಿರ್ವ

ಕದನ

ಕದನ
ನಿಲ್ಲಬಹುದು
ಮೈತ್ರಿಯ
ಸಂಧಾನದಿಂದ

by ಹರೀಶ್ ಶೆಟ್ಟಿ, ಶಿರ್ವ

ಹಸಿರು ಪ್ರಾಣ

ಉಸಿರು ಪ್ರಾಣ
ಬಸಿರು ಪ್ರಾಣ
ಹಸಿರು ಪ್ರಾಣ
ಉಳಿಸಿದರೆ ಜೀವನ
ಕಡಿದರೆ ಮರಣ

by ಹರೀಶ್ ಶೆಟ್ಟಿ, ಶಿರ್ವ 

ಸ್ನೇಹ

ಮಲಗಿಕೊಂಡಿರಲಿ
ದ್ವೇಷ
ಎಚ್ಚರದಲ್ಲಿರಲಿ
ಸ್ನೇಹ
by ಹರೀಶ್ ಶೆಟ್ಟಿ, ಶಿರ್ವ

ಪ್ರಾಣ ಹಕ್ಕಿ

ಪ್ರಾಣ
ಹಕ್ಕಿ
ಹಾರಬಹುದು
ಯಾವುದೇ
ಕ್ಷಣದಲಿ 
ಬದುಕು
ಹೀಗಿರಲಿ
ಅಂದರೆ
ತೆರಳಿದ
ನಂತರವೂ
ಜನರು
ಹೊಗಳಲಿ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಉಷ್ಣತೆ

ಕರಗಬಹುದು
ಮುನಿದ ಮನಸ್ಸ
ನೀರ್ಗಲ್ಲು
ಪ್ರೀತಿಯ
ಉಷ್ಣತೆ
ನೀಡಿದರೆ

by ಹರೀಶ್ ಶೆಟ್ಟಿ, ಶಿರ್ವ

Sunday, September 21, 2014

ರಹಸ್ಯ

ಅದೆಲ್ಲಿಗೂ ಹೋದರೂ
ಅದ್ಯಾವುದೋ ಬೆಳಕು ಸನಿಹ ಇರುತ್ತದೆ
ಅಲ್ಲಿ ಇಲ್ಲಿ ಎಲ್ಲಿ ಅಲೆದರೂ
ಅದ್ಯಾವುದೋ ಒಂದು ಗಮ್ಯ ಕರೆಯುತ್ತದೆ
ಕಲ್ಲು ಮುಳ್ಳು ಪಾದಕ್ಕೆ ಚುಚ್ಚಿದರೂ
ಅದ್ಯಾವುದೋ ಹಸ್ತಗಳ ಸ್ಪರ್ಶದ ಅನುಭವ ಆಗುತ್ತದೆ
ಏನದು ಎಂದು ತಿಳಿಯಲಾಗುವುದಿಲ್ಲ
ತಿಳಿಯಬೇಕೆಂಬ ಇಚ್ಛೆ ಸಹ ಇಲ್ಲ
ಅಜ್ಞಾತವಾಗಿರಲಿ
ಗುಪ್ತವಾಗಿರಲಿ
ಎಂದೂ ತಿಳಿಯದಿರಲಿ ಈ ರಹಸ್ಯ

by ಹರೀಶ್ ಶೆಟ್ಟಿ, ಶಿರ್ವ

Thursday, September 18, 2014

ನಿಲ್ಲು ರಾತ್ರಿಯೇ

ನಿಲ್ಲು ರಾತ್ರಿಯೇ
ಸ್ವಲ್ಪ ತಡೆ ಚಂದಿರ
ಕಳೆದೋಗದಿರಲಿ ಮಿಲನದ
ಈ ಸಮಯ
ಇಂದು ಹುಣ್ಣಿಮೆಯ ನಗರದಲಿ
ಸಂಭ್ರಮ ಬಯಕೆಗಳ ಜಾತ್ರೆಯ

ಪ್ರಥಮ ಮಿಲನದ
ನೆನಪು ತಂದಿದೆ
ಈ ರಾತ್ರಿ ಆಹ್ಲಾದ
ಪುನರಾವರ್ತಿಸುತ್ತಿದೆ
ಈ ತಾರೆಗಳು
ನಮ್ಮ ಕತೆ ಪ್ರೇಮದ
ನಿಲ್ಲು ರಾತ್ರಿಯೇ...

ನಾಳೆಯ ಭಯ
ಕಾಲದ ಚಿಂತೆ
ಎರಡು ದೇಹ
ಮನಸ್ಸು ಒಂದೇ ನಮ್ಮ
ಜೀವನ ಸೀಮೆಯ ಮುಂದೆಯೂ
ಬರುವೆ ನಾನು ಜೊತೆ ನಿನ್ನ
ನಿಲ್ಲು ರಾತ್ರಿಯೇ...

ಮೂಲ :ಶೈಲೇಂದ್ರ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ದಿಲ್ ಎಕ್ ಮಂದಿರ್

ruk ja raat
thehar ja re chanda
beete na milan ki bela
aaj chaandni ki nagari mein
armaano ka mela

ruk ja raat
thehar ja re chanda
beete na milan ki bela
aaj chaandni ki nagari mein
armaano ka mela
ruk ja raat
thehar ja re chanda

pehli milan ki yaadein le kar
aayi hai ye raat suhaani
pehli milan ki yaadein le kar
aayi hai ye raat suhaani

dohraate hain phir afsaane
meri tumhaari
prem kahaani
meri tumhaari
prem kahaani

ruk ja raat
thehar ja re chanda
beete na milan ki bela
aaj chaandni ki nagari mein
armaano ka mela
ruk ja raat
thehar ja re chanda

kal ka darna
kaal ki chinta
do tan hai
man ek hamaare

kal ka darna
kaal ki chinta
do tan hai
man ek hamaare

jeevan seema ke aage bhi
aaungi main
sang tumhaare
aaungi main
sang tumhaare

ruk ja raat
thehar ja re chanda
beete na milan ki bela
aaj chaandni ki nagari mein
armaano ka mela

ruk ja raat
thehar ja re chanda
beete na milan ki bela
aaj chaandni ki nagari mein
armaano ka mela

ruk ja raat
thehar ja re chanda
ruk ja raat
thehar ja re chanda

Wednesday, September 17, 2014

ಕ್ರಾಂತಿ


ಈ ಬದುಕ ಪಯಣದಲ್ಲಿ ನಮಗೆ ಕಾಕತಾಳೀಯವಾಗಿ ಅದೆಷ್ಟೋ ಅಪರಿಚಿತ ಜನರು ಸಿಗುತ್ತಾರೆ. ಅದರಲ್ಲಿ ಕೆಲವರು ಸದಾ ನೆನಪಿನಲ್ಲಿ ಉಳಿದು ಹೋಗುತ್ತಾರೆ, ಕೆಲವರು ಮರೆತು ಹೋಗುತ್ತಾರೆ.

ಹೀಗೆಯೇ ಬಾಲ್ಯದ ಒಂದು ಮರೆಯಲಾರದ ಘಟನೆ, ಚಿಕ್ಕವನಿದ್ದಾಗ ನನಗೆ ಹಿಂದಿ ಸಿನಿಮಾ ನೋಡುವುದೆಂದರೆ ತುಂಬಾ ಇಷ್ಟ, ದೊಡ್ಡವರು ಯಾರಾದರು ಸಿನಿಮಾದ ವಿಷಯ ಮಾತನಾಡಿದರೆ, ನಾನು ಅವರನ್ನು ತುಂಬ ಧ್ಯಾನದಿಂದ ಕೇಳುತ್ತಿದ್ದೆ. ಈ ಹುಚ್ಚು ದಿವಸ ದಿವಸ ಹೆಚ್ಚಾಗುತ್ತಲೇ ಹೋಯಿತು, ಮೇಲಿಂದ ನಮ್ಮ ವಸತಿಗೃಹದ ಬದಿಯಲ್ಲಿಯೇ ಮೂರು ಹೊಸ ಚಿತ್ರಮಂದಿರ ಪ್ರಾರಂಭವಾಯಿತು, ಹೆಸರು ಸಹ ಆಕಷಿ೯ತವಾಗಿತ್ತು, ಬಾದಲ್, ಬಿಜಲಿ, ಬರ್ಖಾ. 

ನನ್ನ ಈ ಸಿನಿಮಾ ಹುಚ್ಚುವಿನ ಬಗ್ಗೆ ನಮ್ಮ ಎಲ್ಲ ನೆರೆಹೊರೆಯವರಿಗೆ ತಿಳಿದಿತ್ತು, ಅದಕ್ಕೆ ನನ್ನ ನೆರೆಯವರು ಯಾವಗಲೊಮ್ಮೆ ಅವರ ಜೊತೆ ನನ್ನನ್ನು ಸಹ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು, ನನ್ನ ಈ ಸಿನಿಮಾ ಹುಚ್ಚು ಹೀಗೆಯೇ ಏರುತ್ತ ಹೋಯಿತು. ಚಿತ್ರಮಂದಿರ ಬದಿಯಲ್ಲಿಯೇ ನನ್ನ ತಂದೆಯ ಹೋಟೆಲ್ ಸಹ ಇತ್ತು, ಚಿತ್ರಮಂದಿರದಲ್ಲಿ ಟಿಕೆಟ್ ಬ್ಲಾಕ್ ಮಾಡುವವರು ಯಾವಗಲು ನನ್ನ ತಂದೆಯ ಹೋಟೆಲಿಗೆ ಬಂದು ಪಟ್ಟಂಗ ಹೊಡೆಯೋಕೆ ಬರುತ್ತಿದ್ದರು, ಅವರಲ್ಲಿ ಒಬ್ಬ ಬಂಡ್ಯ ಯಾವಗಲು ಬಂದು ನನ್ನನ್ನು ಮುದ್ದಿಸುತ್ತಿದ್ದ, ಹೀಗೆಯೇ ಅವನ ಪರಿಚಯ ನನ್ನ ಹತ್ತಿರ ಗಾಡವಾಯಿತು, ನಾನು ಅವನ ಹತ್ತಿರ ಒಂದೊಂದು ಗಂಟೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೆ.

ಒಂದು ದಿವಸ ಬಂಡ್ಯ ಹಾಗು ಇತರ ಎರಡು ಮೂರು ಜನ ( ಎಲ್ಲಾ ಟಿಕೆಟ್ ಬ್ಲಾಕ್ ಮಾಡುವವರೇ) ತುಂಬಾ ಉದ್ವೇಗ ಹಾಗು ಬೇಸರದಿಂದ ಪಪ್ಪಾನ ಹೋಟೆಲಿಗೆ ಬಂದರು.

ಪಪ್ಪಾ ಅವರನ್ನು ನೋಡಿ "ಕಾಯ್ ಆಜ್ ಸರ್ವ ಖುಪ್ ವೈತಾಗ್ಲ ಸಾರ್ಕ ವಾಟತಯ್"(ಏನು ಎಲ್ಲರು ತುಂಬಾ ಬೇಸರದಲ್ಲಿದ್ದಂತೆ ಕಾಣುತ್ತದೆ).

ಅವರಲ್ಲಿ ಒಬ್ಬಾತ "ಕಾಯ್ ಸಾಂಗು ಸೆಟ್, ಯೇ ಬಗಾ ಕಿತಿ ಟಿಕೆಟ್ ಉರ್ಲಯ್" (ಏನು ಹೇಳಲಿ ಶೆಟ್ರೆ, ಎಷ್ಟು ಟಿಕೆಟ್ ಉಳಿದಿದ್ದೆ ನೋಡಿ) ಎಂದು ಅದೆಷ್ಟೋ ಟಿಕೆಟ್ ತೋರಿಸಿದ, ಅದು ಆ ಶೋವಿನ ಬಿಕ್ರಿ ಆಗದೆ ಉಳಿದ ಟಿಕೆಟ್.

ಪಪ್ಪಾ ನಗುತ "ಒಹ್ ಅಸಾ ಕಾಯ್" (ಒಹ್ ಹಾಗೇಯ) ಎಂದರು.

ಆಗ ಬಂಡ್ಯ ನನ್ನನ್ನು ಕುರಿತು "ಹೇ ಬಾರ್ಕಿಯ, ಪಿಕ್ಚರ್ ಬಗ್ನಾರ್" (ಹೇ ಪುಟ್ಟ, ಚಲನಚಿತ್ರ ನೋಡುತ್ತಿಯ).

ನಾನು ಪಪ್ಪಾನ ಕಡೆ ನೋಡಿದೆ, ನನ್ನ ತಂದೆಗೆ ನನ್ನ ಸಿನಿಮಾ ಹುಚ್ಚಿನ ಬಗ್ಗೆ ತಿಳಿದಿತ್ತು, ಆದರೆ ಅವರು ಅವರಿಗೆ "ನಕೊ ನಕೊ ಕಶಾಲ, ಏಕಟ ಕುಟೆ ಜಾನಾರ್" (ಬೇಡ ಬೇಡ, ಒಬ್ಬನೇ ಎಲ್ಲಿಗೆ ಹೋಗುವುದು).

ಬಂಡ್ಯ "ಜಾವು ದ್ಯ ಹೊ ಸೆಟ್, ಬಾಜುಲಚ್ ತರ್ ಹಯ್" (ಹೋಗಲಿ ಶೆಟ್ರೆ, ಬದಿಯಲ್ಲಿ ತಾನೇ ಇದೆ).

ಅವರೆಲ್ಲ ತುಂಬಾ ಹೇಳಿದ ನಂತರ, ಪಪ್ಪಾ ಒಪ್ಪಿಗೆ ನೀಡಿದರು. ನಾನು ಅವರಿಂದ ಟಿಕೆಟ್ ಪಡೆದು ಓಡಿದೆ, ಚಿತ್ರಮಂದಿರಕ್ಕೆ, ಶೋ ಶುರುವಾಗಿತ್ತು, ಆದರೆ ನನಗೆ ಎಲ್ಲಿಲ್ಲದ ಖುಷಿಯೇ ಖುಷಿ, ಬಹುಶಃ ಒಬ್ಬನೇ ನೋಡುತ್ತಿದ್ದೇನೆ ಅದಕ್ಕೆ ಏನೋ.

ಮೆಲ್ಲ ಮೆಲ್ಲ ಯಾವಾಗಲೊಮ್ಮೆ ಅಮ್ಮನಿಂದ ಬೇಡಿ ಬೇಡಿ ನಾನು ಒಬ್ಬನೇ ಸಹ ಸಿನಿಮಾ ನೋಡಲು ಪ್ರಾರಂಭಿಸಿದೆ.

ಆ ಸಮಯ ಮನೋಜ್ ಕುಮಾರ್ ಅವರ ‘ಕ್ರಾಂತಿ’ ಪಿಕ್ಚರ್ ರಿಲೀಸ್ ಆಯಿತು, ಬರ್ಖಾ ಚಿತ್ರಮಂದಿರದಲ್ಲಿ ಅದರ ಭವ್ಯ ಪೋಸ್ಟರ್ ನೋಡಿ ನಾನು ಮನಸ್ಸಲ್ಲಿ ಈ ಚಲನಚಿತ್ರ ನೋಡಲೇ ಬೇಕೆಂದು ಖಚಿತ ಮಾಡಿಕೊಂಡೆ.

ಮಧ್ಯಾಹ್ನ ನಾನು ಅಮ್ಮನಿಗೆ ಹೇಗಾದರೂ ಪುಸಲಾಯಿಸಿ ಹಣ ಪಡೆದು ಪಿಕ್ಚರ್ ನೋಡಲು ಹೊರಟೆ, ಆದರೆ ಅಲ್ಲಿ ಹೋಗಿ ಮನಸ್ಸಲ್ಲಿ ನಿರಾಸೆ ಮೂಡಿತು, ಶೋ ಹೌಸ್ ಫುಲ್ ಆಗಿತ್ತು, ನಾನು ಬಂಡ್ಯನನ್ನು ಹುಡುಕಿದೆ, ಆದರೆ ಅವನು ಎಲ್ಲಿಯೂ ಕಾಣಲಿಲ್ಲ.

ಹೀಗೆಯೇ ನಿರಾಸೆಯಲ್ಲಿ ನಿಂತಾಗ ಒಬ್ಬಾತ ನನ್ನಲ್ಲಿ ಬಂದು "ಟಿಕೆಟ್ ಬೇಕಾ?"

ನಾನು ಅತಿ ಉತ್ಸಾಹದಿಂದ "ಹೌದು ಬೇಕು, ಬೇಕು."

ಅವನು ಮೆಲ್ಲನೆ "ಬಾ ನನ್ನ ಹಿಂದೆ, ಇಲ್ಲಿ ಪೊಲೀಸರು ಇದ್ದಾರೆ."

ನಾನು ಕೂಡಲೇ ಅವನ ಹಿಂದೆ ಹೋದೆ, ಒಂದು ಮೂಲೆಯಲ್ಲಿ ಅವನು ನನಗೆ ಟಿಕೆಟ್ ಕೊಟ್ಟು "ತೆಗೋ, ಬೇಗ ಹಣ ಕೊಡು", ನಾನು ಕೂಡಲೇ ಅಮ್ಮನಿಂದ ಪಡೆದ ಹಣ ತೆಗೆದು ಅವನಿಗೆ ಕೊಟ್ಟೆ, ಅವನು ಒಂದು ವಿಚಿತ್ರ ನಗು ಬೀರಿ ನನ್ನತ್ತ ನೋಡಿದ, ಸಂತೋಷದಿಂದ ನನ್ನ ಹೃದಯ ದಡ ದಡ ಬಡಿಯುತ್ತಿತ್ತು.

ಶೋ ಶುರುವಾಗುವ ಸಮಯ ಆಯಿತು, ಎಲ್ಲರು ಚಿತ್ರಮಂದಿರದ ಒಳಗೆ ಹೋಗಲಾರಂಭಿಸಿದರು, ಗೇಟಿನಲ್ಲಿ ನಿಂತಿದ ಮನುಷ್ಯ ಎಲ್ಲರಿಗೆ ಟಿಕೆಟ್ ಹರಿದು ಅರ್ಧ ತುಂಡು ಅವರಿಗೆ ಕೊಡುತ್ತಿದ್ದ, ನಾನು ಟಿಕೆಟ್ ಕೊಟ್ಟೆ, ಅವನು ಗಡಿಬಿಡಿಯಲ್ಲಿ ಹರಿದು ಕೊಟ್ಟ, ನಾನು ಒಳಗೆ ನುಗ್ಗಿದೆ.

ಚಿತ್ರಮಂದಿರದ ಒಳಗೆ ಕತ್ತಲೆ ಇತ್ತು, ಒಬ್ಬ ಬ್ಯಾಟರಿಯಿಂದ ಟಿಕೆಟ್ ಚೆಕ್ ಮಾಡಿ ಜನರಿಗೆ ಅವರ ಸ್ಥಾನ ತೋರಿಸುತ್ತಿದ್ದ, ನಾನು ಅವನ ಬಳಿ ಹೋದೆ, ಅವನು ನನ್ನಿಂದ ಟಿಕೆಟ್ ಪಡೆದು ನೋಡಲಾರಂಭಿಸಿದ, ನೋಡಿದಂತೆ ಅವನು "ಎಲ್ಲಿಂದ ಪಡೆದೆ ಈ ಟಿಕೆಟ್?"

ನಾನು "ಒಂದು ಅಂಕಲ್ ಕೊಟ್ಟರು, ನಾನು ಅವರಿಗೆ ಹಣ ಕೊಟ್ಟೆ."

ಅವನು "ಅರೆ ಮೂರ್ಖ, ಅವನು ನಿನ್ನಿಂದ ಮೋಸ ಮಾಡಿದ್ದಾನೆ, ಇದು ಹಳೆಯ ಟಿಕೆಟ್, ಈಗ ನಿನಗೆ ಪಿಕ್ಚರ್ ನೋಡಲು ಸಾಧ್ಯವಿಲ್ಲ, ಹೋಗು ಇನ್ನು."

ನಾನು ಮೂಕವಿಸ್ಮಿತನಾಗಿ ಅವನನ್ನು ನೋಡಿದೆ, ಕಣ್ಣೀರು ರಭಸದಿಂದ ನನ್ನ ಕಣ್ಣಿಂದ ಹರಿಯಲಾರಂಭಿಸಿತು.

ನಾನು ಅಲ್ಲೇ ನಿಂತೇ, ಟಿಕೆಟ್ ಚೆಕ್ ಮಾಡುತ್ತಿದ್ದವ ಇತರರ ಟಿಕೆಟ್ ಚೆಕ್ ಮಾಡುತ್ತಿದ್ದ, ನನ್ನನ್ನು ಈಗಲೂ ನಿಂತಿದನ್ನು ನೋಡಿ "ಏನು ಇನ್ನು ಹೋಗಲಿಲ್ಲ, ಮತ್ತೆ ಯಾಕೆ ಹೀಗೆ ಟಿಕೆಟ್ ತೆಗೆದು ಕೊಂಡೆ, ಮೂರ್ಖ."

ನಾನು ಸ್ವಲ್ಪ ಹೊತ್ತು ಹೀಗೆಯೇ ಕಣ್ಣೀರಿಡುತ್ತಾ ನಿಂತುಕೊಂಡೆ, ಕೊನೆಗೆ ಹಿಂತಿರುಗಿ ಹೋಗುವೆ ಎಂದಾಗ, ಟಿಕೆಟ್ ಚೆಕ್ ಮಾಡುವವ "ಹೇ ನಿಲ್ಲು."

ನಾನು ನಿಂತೇ, ಅವನು ಮೆಲ್ಲನೆ "ನೋಡು, ನಿನ್ನನ್ನು ನೋಡಿ ಬೇಸರವಾಗುತ್ತದೆ, ಈಗ ಹೋಗಿ ಆ ಮೂಲೆಯಲ್ಲಿ ನಿಲ್ಲು, ನಂತರ ನಾನು ನಿನಗೆ ಕುರ್ಚಿ ತಂದು ಕೊಡುತ್ತೇನೆ" ಎಂದ, ನನಗೆ ದೇವರು ಒಲಿದಂತೆ ಆಯಿತು "ಆಯಿತು, ತೊಂದರೆ ಇಲ್ಲ, ನಾನು ನಿಂತುಕೊಂಡೆ ನೋಡುತ್ತೇನೆ."

ಅವನು "ನಿಂತುಕೊಂಡು! ನನ್ನ ಕೆಲಸದಿಂದ ಹೊರ ದೂಡಲಿಕ್ಕೆ ಇದೆಯೇನು ನಿನಗೆ, ಮೆಲ್ಲನೆ ಹೋಗಿ ನಿಲ್ಲು, ನಾನು ನಂತರ ಬರುತ್ತೇನೆ." ಎಂದ ಆ ದೇವತಾ ಮನುಷ್ಯ.

ಆ ಭವ್ಯ  ಚಲನಚಿತ್ರ ‘ಕ್ರಾಂತಿ’ ನೋಡುವಾಗ ನಾನು ಎಲ್ಲವನ್ನು ಮರೆತು ಹೋದೆ ಚಲನಚಿತ್ರ ಶುರು ಆದ ಸ್ವಲ್ಪ ಸಮಯದ ನಂತರ, ಆ ದೇವತಾ ಮನುಷ್ಯ ಎರಡು ಸಣ್ಣ ಕುರ್ಚಿ ತಂದ. ನಾವಿಬ್ಬರು ಅಲ್ಲೇ ಕುಳಿತುಕೊಂಡು ಆ ಪಿಕ್ಚರ್ ನೋಡಿದ್ದೆವು, ಆ ಒಳ್ಳೆಯ ಮನುಷ್ಯ ಇಂಟರ್ವಲ್ ಆದಾಗ ನನಗೆ ತಿನ್ನಲು ಸಮೋಸ ಹಾಗು ಐಸ್ ಕ್ರೀಂ ಸಹ ತಂದು ಕೊಟ್ಟ.

ಚಲನಚಿತ್ರ ಮುಗಿದ ನಂತರ ಅವನು ವ್ಯಸ್ತನಾದ, ನಾನು ಅವನಿಗೆ 'ತುಂಬಾ ಧನ್ಯವಾದ' ಹೇಳಿದೆ, ಅವನು ನಗುತ್ತಲೇ ನನ್ನ ಗಲ್ಲ ಹಿಡಿದ, ನಾನು ಭಾವುಕನಾಗಿ ಖುಷಿಯಿಂದ ಅಲ್ಲಿಂದ ಮನೆಗೆ ತೆರಳಿದೆ.

ಇಂದಿಗೂ ಸಹ ಆ ಅಪರಿಚಿತ ದೇವತಾ ಮನುಷ್ಯನ ನೆನಪಾಗುತ್ತದೆ.


by ಹರೀಶ್ ಶೆಟ್ಟಿ,ಶಿರ್ವ

ಸ್ವಲ್ಪ ನಿಧಾನ ಹೃದಯವೇ

ಸಂತೈಸುವುದು ಹೇಗೆ
ಈ ಹಂಬಲಿಸುವ ಹೃದಯವನ್ನು
ಪದೇ ಪದೇ
ಕೋರುತ್ತದೆ ಹೊಸ ಬಯಕೆಯನ್ನು

ತಾಳ್ಮೆಯಿಂದ ಸ್ವಲ್ಪ
ಕಾಯು ಎನ್ನುವೆ
ಆದರೆ ನೋಡಲಾಗುವುದಿಲ್ಲ
ಇದರ ಚಡಪಡಿಕೆಯನ್ನು

ಸ್ವಲ್ಪ ನಿಧಾನ ಹೃದಯವೇ
ಇಲ್ಲಾದರೆ ಸಂಯಮ ಇರಲಾರದು
ದರ್ಪಣದಂತಹ ನಾಜೂಕು ನಿನ್ನ ಕಾಯಕ್ಕೆ
ಕ್ಷಣ ಕ್ಷಣ ಬಿರುಕು ಬೀಳುವುದು

by ಹರೀಶ್ ಶೆಟ್ಟಿ,ಶಿರ್ವ 

Tuesday, September 16, 2014

ಅದು ನಾನೇನಲ್ಲ

ಹಗಲು ಸಂಜೆ
ನಿನ್ನ ನಾಮ ಜಪಿಸಿ
ನಿನ್ನ ಹಿಂದೆ ಮುಂದೆ
ಓಡಾಡುತ್ತಿದ್ದವನು
ಅದು ನಾನೇನಲ್ಲ

ಪತ್ರ ಬರೆದು
ಹತ್ತಿರ ಕರೆದು
ಪ್ರೀತಿಸುವೆಯೆಂದು ಹೇಳದೆ
ಮೂಕನಂತೆ ಸುಮ್ಮನೆ ನಿಂತವನು
ಅದು ನಾನೇನಲ್ಲ

ನನ್ನ ಮೌನ ಭಾಷೆ ಅರಿತು
ಪ್ರೀತಿಗೆ ನಿನ್ನ ಒಪ್ಪಿಗೆ
ಸಿಕ್ಕಿದ ನಂತರ
ಹರ್ಷದಿ ನಿನ್ನನ್ನು ಅಪ್ಪಿಕೊಂಡವನು
ಅದು ನಾನೇನಲ್ಲ

ನದಿಯ ಕಿನಾರೆ
ನಿನ್ನ ಮಡಿಲಲ್ಲಿ ಮಲಗಿ
ನಿನ್ನೊಟ್ಟಿಗೆ ಅದೆಷ್ಟೋ
ಹಗಲುಗನಸು ಕಟ್ಟಿದವನು
ಅದು ನಾನೇನಲ್ಲ

ಅವಸರದಿ ಬಂದು
ನಾವು ಈಗಲೇ
ಓಡಿ ಹೋಗಿ ಮದುವೆಯಾಗುವ
ಎಂದು ಹಠ ಹಿಡಿದರೂ ಕೇಳದವನು
ಅದು ನಾನೇನಲ್ಲ

ನಿನ್ನ ಮದುವೆಯಂದು
ಅತ್ತು ಅತ್ತು
ಊರ ಸುತ್ತು ಸುತ್ತು
ಹುಚ್ಚನಂತೆ ತಿರುಗುತ್ತಿದ್ದವನು
ಅದು ನಾನೇನಲ್ಲ

ಹೌದು
ಅದು ನಾನಲ್ಲ
ನನ್ನಲ್ಲಿದ್ದ ಒಬ್ಬ
ಗತಿಸಿದ ಪ್ರೇಮಿ
ಅದು ನಾನೇನಲ್ಲ

by ಹರೀಶ್ ಶೆಟ್ಟಿ, ಶಿರ್ವ

ವರ್ಷ

ಮತ್ತದೇ ಕತ್ತಲೆ ಆವರಿಸುತ್ತಿದೆ
ತರಣಿ ತುಸು ವಿಶ್ರಾಂತಿ ಪಡೆಯುತ್ತಿದೆ
ಮೇಘ ಮೈಮರೆಯುತ್ತಿದೆ
ವರ್ಷ ಹನಿಯಲು ಸಿದ್ಧವಾಗಿದೆ
ಧರೆ ನೀರ ಸವಿಯಲು ಕಾಯುತ್ತಿದೆ
ನವಿಲು ಗೆಜ್ಜೆ ಧರಿಸುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ 

ಸ್ವಲ್ಪವೇ

ಸ್ವಲ್ಪವೇ ನನಗೆ ನೀಡುತ್ತಿರುವೆ
ಸ್ವಲ್ಪವೇ ನನಗೆ ನೀಡುತ್ತಿರು
ಅತಿ ಆದರೆ ಕಹಿಯಾಗುವುದು
ಸ್ವಲ್ಪವೇ ಇದ್ದರೆ ಸಿಹಿ
ಈ ಸಿಹಿಯಲ್ಲಿಯೇ ನನಗಿರಲು ಬಿಡು

ಯಾಕೆ ಹಿಂಬಾಲಿಸುವುದು
ಲೋಕದ ರೀತಿ ನೀತಿಯನು
ಕುಂಟು ನಡಿಕೆಯನು
ಮಂದ ನನ್ನ ಚಲನೆ
ಈ ಗತಿಯಲ್ಲಿಯೇ ನನಗೆ ನಡೆಯಲು ಬಿಡು

ಏನಾಗುವುದು ಹೆಚ್ಚು ಪಡೆದು
ತುಂಬಿ ತುಳುಕಿದರೆ ವ್ಯರ್ಥ ಹಾಳಾಗುವುದು
ಕಿಂಚಿತ ಪಡೆದರೆ ತೃಪ್ತಿ ಇರುವುದು
ಪ್ರಯಾಸ ಮಾಡುವುದು ನನ್ನ ಕರ್ತವ್ಯ
ಈ ಪರಿಶ್ರಮ ನಿಲ್ಲದಿರಲಿ ಎಂಬ ಆಶೀರ್ವಾದ ಕೊಡು

by ಹರೀಶ್ ಶೆಟ್ಟಿ, ಶಿರ್ವ

Monday, September 15, 2014

ಈದ್ ಜಾತ್ರೆ ಭಾಗ -೬ (ಅಂತಿಮ)

ಈದ್ ಜಾತ್ರೆ
ಭಾಗ -೬ (ಅಂತಿಮ)
ವಿಜೇತನಿಗೆ ಸೋತವರಿಂದ ಯಾವ ರೀತಿಯ ಸತ್ಕಾರ ಸಿಗಬೇಕೋ, ಅಂತಹದ್ದೇ ಸತ್ಕಾರ ಹಮೀದನಿಗೆ ಸಿಕ್ಕಿತು,ಇತರರಿಗೆ ಮೂರಾಣೆ, ನಾಲ್ಕಾಣೆ ಖರ್ಚು ಮಾಡಿ ಸಹ ಯಾವುದೇ ಉಪಯೋಗದ ವಸ್ತು ಖರೀದಿ ಮಾಡಲಾಗಲಿಲ್ಲ, ಹಮೀದ್ ಕೇವಲ ಮೂರು ಪೈಸೆಯಿಂದಲೇ ತನ್ನ ಶ್ರೇಷ್ಟತೆ ಸ್ಥಾಪಿಸಿದ, ಸತ್ಯ ಅಲ್ಲವೇ ಆಟಿಕೆಗಳ ಏನು ಭರವಸೆ? ಮುರಿಯುವುದು, ಆದರೆ ಹಮೀದನ ಚಿಮ್ಮಟಕ್ಕೆ ವರ್ಷಗಟ್ಟಲೆ ಏನೂ ಆಗದು.

ಒಪ್ಪಂದದ ಕುರಿತು ಬಗ್ಗೆ ಚರ್ಚೆ ನಡೆಯಿತು, ಮೋಹಸಿನ್ ಹೇಳಿದ "ಸ್ವಲ್ಪ ನಿನ್ನ ಚಿಮ್ಮಟ ಕೊಡು, ನಾವು ನೋಡುತ್ತೇವೆ, ನೀನು ನನ್ನ 'ನೀರು ವಾಹಕತೆಗೆದುಕೊಂಡು ನೋಡು."

ಮಹಮೂದ್, ನೂರೆ ಸಹ ತನ್ನ ತನ್ನ ಆಟಿಕೆಗಳನ್ನು ನೀಡಿದರು.

ಹಮೀದನಿಗೆ ಈ ಒಪ್ಪಂದದಿಂದ ಯಾವುದೇ ಆಕ್ಷೇಪಣೆ ಇರಲಿಲ್ಲ, ಚಿಮ್ಮಟ ಎಲ್ಲರ ಕೈಗೆ ಸಾಲು ಸಾಲಾಗಿ ಹೋಯಿತು ಹಾಗು ಅವರ ಆಟಿಕೆ ಹಮೀದನ ಕೈಗೆ ಬಂತು, ಎಷ್ಟು ಒಳ್ಳೆಯ ಆಟಿಕೆಗಳು.

ಹಮೀದ್ ಸೋತವರ ಕಣ್ಣೀರು ಒರೆಸಿದ "ನಾನು ನಿಮ್ಮ ಕೀಟಲೆ ಮಾಡುತ್ತಿದ್ದೆ ಹೌದು ಆದರೆ  ಸತ್ಯಯಂದರೆ  ಈ ಚಿಮ್ಮಟ, ಈ ಆಟಿಕೆಗಳ ಸಾಟಿಗೆ ಎಲ್ಲಿಯೂ ನಿಲ್ಲುವುದಿಲ್ಲ."

ಆದರೆ ಮೋಹಸಿನನಿಗೆ ಹಮೀದನ ಈ ಸಾಂತ್ವನೆಯಿಂದ ಸಂತೋಷವಾಗುವುದಿಲ್ಲ, ಅವನಿಗೆ ಇನ್ನು ಸಮಾಧಾನ ಪಡಿಸಲು ಹಮೀದ್ "ನೋಡು ಈ ಚಿಮ್ಮಟಕ್ಕೆ ಅಂಟಿದ ಕಾಗದ ನೀರಿನಿಂದಲೂ ಹೋಗುವುದಿಲ್ಲ, ಇದರ ಕಡೆ ಸಹ ಸರಿ ಇಲ್ಲ."

ಮೋಹಸಿನ್ "ಆದರೆ ನಮ್ಮ ಈ ಆಟಿಕೆಗಳಿಗೆ ಯಾರು ನಮ್ಮನ್ನು ಕೊಂಡಾಡುದಿಲ್ಲವಲ್ಲ."

ಮಹಮೂದ್ "ನೀನು ಕೊಂಡಾಡುವುದನ್ನು ಬಯಸುವೆ, ಪೆಟ್ಟೊಂದು ಸಿಗದಿದ್ದರೆ ಸಾಕು, ಅಮ್ಮ ಖಂಡಿತ ಹೇಳುವಳು "ಜಾತ್ರೆಯಲ್ಲಿ ನಿಮ ಈ ಮಣ್ಣಿನ ಆಟಿಕೆಯೇ ಸಿಕ್ಕಿತ್ತಾ ಎಂದು?"

ಈಗಂತೂ ಹಮೀದನಿಗೆ ಸಹ ಮಹಮೂದನ ಮಾತಿಗೆ ಒಪ್ಪಿಗೆ ನೀಡಬೇಕಾಯಿತು, ನನ್ನ ಚಿಮ್ಮಟ ನೋಡಿ ಅಮ್ಮನಿಗೆ ಆಗುವಷ್ಟು ಸಂತೋಷ, ಈ ಆಟಿಕೆಗಳನ್ನು ನೋಡಿ  ಯಾರ ತಾಯಿಗೆ ಸಹ ಅಷ್ಟು ಸಂತೋಷವಾಗದು, ಮೂರು ಪೈಸೆಯಲ್ಲಿ ಅವನಿಗೆ ಎಲ್ಲವೂ ಮಾಡಲಿಕ್ಕೆ ಇತ್ತು, ಆ ಪೈಸೆಯ ಉಪಯೋಗದ ಬಗ್ಗೆ ಪಶ್ಚಾತ್ತಾಪ ಪಡುವ ಇನ್ನು ಅಗತ್ಯವೇ ಇಲ್ಲ, ಈಗಂತೂ ಚಿಮ್ಮಟ ಭಾರತ ವೀರ, ಎಲ್ಲ ಆಟಿಕೆಗಳ ರಾಜ.

ರಸ್ತೆಯಲ್ಲಿ ಮಹಾಮೂದನಿಗೆ ಹಸಿವೆ ಆಯಿತು, ಅವನ ತಂದೆ ಅವನಿಗೆ ತಿನ್ನಲು ಬಾಳೆಹಣ್ಣು ಕೊಟ್ಟ, ಮಹಮೂದ್ ಅದನ್ನು ಕೇವಲ ಹಮೀದನೊಟ್ಟಿಗೆ ಹಂಚಿ ತಿಂದ, ಅವನ ಇತರ ಮಿತ್ರರು ಮುಖ ನೋಡುತ್ತಾ ನಿಂತರು, ಇದು ಚಿಮ್ಮಟದ ಪ್ರಸಾದವಾಗಿತ್ತು.

ಹನ್ನೊಂದು ಗಂಟೆಗೆ ಊರಿನಲ್ಲಿ ಕೋಲಾಹಲ ಶುರುವಾಯಿತು, ಜಾತ್ರೆಗೆ ಹೋದವರು ಬಂದರು, ಜಾತ್ರೆಗೆ ಹೋದವರು ಬಂದರೆಂದು.

ಮೋಹಸಿನನ ತಂಗಿ ಓಡಿ ಬಂದು ಅವನ ಕೈಯಿಂದ 'ನೀರು ವಾಹಕ' ಕಸಿದುಕೊಂಡಳು, ಖುಷಿಯಿಂದ ಓಡಾಡುವಾಗ ಅವಳ ಕೈಯಿಂದ 'ನೀರು ವಾಹಕ" ಕೆಳಗೆ ಬಿದ್ದು ಸ್ವರ್ಗಲೋಕಕ್ಕೆ ತೆರಳಿದ, ಇದಕ್ಕೆ ಅಣ್ಣ ತಂಗಿಯ ಮಧ್ಯೆ ಜಗಳವಾಯಿತು, ಇಬ್ಬರೂ ತುಂಬಾ ಅತ್ತರು, ಅವರ ಬೊಬ್ಬೆ ಕೇಳಿ ಅವರ ಅಮ್ಮ ಬಂದು ಮೇಲಿಂದ ಅವರಿಗೆ ಇನ್ನು ಎರಡು ಎರಡು ಏಟು ಬಾರಿಸಿ ಹೋದರು.

ನೂರೆ ತಂದ ವಕೀಲನ ಅ೦ತ್ಯ ಅದರ ಪ್ರತಿಷ್ಠೆಯ ಅನುಕೂಲ ತುಂಬಾ ಗೌರವದಿಂದ ಆಯಿತು, ವಕೀಲ ನೆಲದಲ್ಲಂತೂ ಕುಳಿತುಕೊಳ್ಳುವುದಿಲ್ಲ, ಅವನ ಮರ್ಯಾದೆಯ ಸಹ ವಿಚಾರ ಮಾಡಬೇಕಲ್ಲವೇ, ಗೋಡೆಗೆ ಮೊಳೆ ಹೊಡೆಯಲಾಯಿತು, ಅದರ ಮೇಲೆ ಒಂದು ಮರದ ತುಂಡು ಇಡಲಾಯಿತು, ಅದರ ಮೇಲೆ ಕಾಗದದ ಹಾಳೆ ಹಾಸಲಾಯಿತು, ವಕೀಲ ರಾಜ ಭೋಜನ ಹಾಗೆ ಸಿಂಹಾಸನದ ಮೇಲೆ ವಿರಾಜಿಸಿದ. ಮೂಲೆಯಲ್ಲಿ ಬಿದ್ದ ರಟ್ಟಿನಿಂದ ಫ್ಯಾನ್ ತಯಾರಿಸಲಾಯಿತು, ನೂರೆ ಅದರಿಂದ ವಕೀಲ ಸಾಹೇಬರಿಗೆ ಗಾಳಿ ಬೀಸಲಾರಂಭಿಸಿದ, ನ್ಯಾಯಾಲಯದಲ್ಲಂತೂ ವಿದ್ಯುತ್ ಫ್ಯಾನ್ ಇರುತ್ತದೆ, ಇಲ್ಲಿ ಮಾಮೂಲಿ ಫ್ಯಾನ್ ಆದರೂ ಬೇಕಲ್ಲವೇ, ಇಲ್ಲಾದರೆ ವಕೀಲ ಸಾಹೇಬರಿಂದ ಕಾನೂನಿನ ತಾಪ ಸಹಿಸಲಾಗದಿದ್ದರೆ, ನೂರೆ ತುಂಬಾ ರಭಸದಿಂದ ರಟ್ಟಿನ ಫ್ಯಾನ್ ಬೀಸಲಾರಂಭಿಸಿದ, ಹಠತ್ತಾನೆ ಫ್ಯಾನಿನ ಏಟು ತಾಗಿ ವಕೀಲ ಕೆಳಗೆ ಬಿದ್ದು ಮಣ್ಣು ಪಾಲಾಗಿ ಮೃತ್ಯುಲೋಕಕ್ಕೆ ಸೇರಿದ, ಅಲ್ಲಿಗೆ ವಕೀಲನ ಕಥೆ ಮುಗಿಯಿತು, ತುಂಬಾ ಜೋರಿನಿಂದ ಶೋಕಾಚರಣೆ ನಡೆಯಿತು, ಕಡೆಗೆ ವಕೀಲನ ಅಸ್ತಿಯನ್ನು ಕಸದ ಬುಟ್ಟಿಗೆ ಹಾಕಲಾಯಿತು.

ಈಗ ಉಳಿದ ಮಹಮೂದನ ಸಿಪಾಯಿ, ಅವನಿಗೆ ಕೂಡಲೇ ಊರಿನ ರಕ್ಷಣೆ ಭಾರ ವಹಿಸಲಾಯಿತು, ಪೋಲಿಸಿನ  ಸಿಪಾಯಿ ಅಂದರೆ ಮಾಮೂಲಿ ವ್ಯಕ್ತಿ ಏನಲ್ಲ, ನಡೆದುಕೊಂಡು ಹೋಗಲು, ಅವನಂತೂ ಪಾಲಕಿಯ ಮೇಲೆ ಕುಳಿತು ಹೋಗುವನು. ಒಂದು ಬುಟ್ಟಿ ತರಿಸಲಾಯಿತು, ಅದರ ಒಳಗೆ ಕೆಂಪು ಹರಿದ ಕೆಲವು ಚಿಂದಿ ಇಡಲಾಯಿತು, ಅದರ ಮೇಲೆ ಸಿಪಾಯಿ ಸಾಹೇಬರು ಆರಾಮದಿಂದ ಮಲಗಿದರು, ಮಹಮೂದ್ ಈ ಬುಟ್ಟಿಯನ್ನು ತಲೆಯ ಮೇಲೆ ಇಟ್ಟು ಮನೆಯ ಸುತ್ತು ತಿರುಗಲಾರಂಭಿಸಿದ, ಅವನ ಹಿಂದೆ ಅವನ ಎರಡು ಸಣ್ಣ ತಮ್ಮಂದಿರು ಸಿಪಾಯಿಯ ಹಾಗೆ "ಮಲಗಿದವರೇ, ಎಚ್ಚರಿಕೆಯಲ್ಲಿರಿ" ಎಂದು ಕರೆ ನೀಡುತ ನಡೆಯಲಾರಂಭಿಸಿದರು, ಆದರೆ ರಾತ್ರಿ ಅಂದರೆ ಕತ್ತಲೆ ಇರಬೇಕು, ಈ ಕತ್ತಲೆ ನಿರ್ಮಿಸುವ ಗಡಿಬಿಡಿಯಲ್ಲಿ ಮಹಮೂದನ ಕಾಲು ಕಲ್ಲಿಗೆ ತಾಗಿ ಅವನ ತಲೆಯಲ್ಲಿದ್ದ ಬುಟ್ಟಿ ಕೆಳಗೆ ಬಿತ್ತು, ಅದರಲ್ಲಿದ್ದ ಮೀಯಾ ಸಿಪಾಯಿ ತನ್ನ ಬಂದೂಕಿನ ಜೊತೆ ನೆಲದ ಮೇಲೆ ಬಿದ್ದ, ಪಾಪ ಅವನ ಒಂದು ಕಾಲು ತುಂಡಾಗಿ ವಿಕಾರ ಉಂಟಾಯಿತು. ಆದರೆ ಮಹಮೂದನಿಗೆ ಇಂದು ತಿಳಿಯಿತು ಅವನೊಬ್ಬ ಒಳ್ಳೆ ಡಾಕ್ಟರ ಎಂದು, ಅವನಿಗೆ ಅಂತಹ ಮುಲಾಮು ಗೊತ್ತಿದೆ ಅಂದರೆ ಅವನು ಅದರಿಂದ ಸಿಪಾಯಿಯ ಕಾಲನ್ನು ಜೋಡಿಸಬಹುದು, ಕೇವಲ ಅದಕ್ಕಾಗಿ ಸ್ಯ್ಕಾಮೊರ್ ವೃಕ್ಷದ ಹಾಲು ಬೇಕು ಅಷ್ಟೇ, ಆಯಿತು ಹಾಲೂ ಬಂತು, ಶಸ್ತ್ರಕ್ರಿಯೆ ಶುರುವಾಯಿತು, ಆದರೆ ಕಾಲು ಸರಿಯಾಗಲಿಲ್ಲ, ಇನ್ನೊಂದು ಕಾಲನ್ನು ತುಂಡು ಮಾಡಲಾಯಿತು, ಈಗ ಸರಿ ಆಯಿತು ಎರಡೂ ಕಾಲಿಲ್ಲ, ಈಗ ಸಿಪಾಯಿ ಸನ್ಯಾಸಿ ಆದ, ಈಗ ಅವನು ಕುಲಿತ್ತಲ್ಲೇ ಕಾವಲು ನೀಡುವನು. ಕೆಲವೊಮ್ಮೆ ಅವನು ದೇವರು ಆಗುತ್ತಾನೆ, ತಲೆಯನ್ನು ಸ್ವಲ್ಪ ಕೆತ್ತಲಾಯಿತು, ಆ ನಂತರ ಅವನ ಹಲವು ತರಹದ ರೂಪಾಂತರ ಮಾಡಲಾಯಿತು, ಕೆಲವೊಮ್ಮೆ ಅವನ್ನು ತೂಕದ ರೂಪದಲ್ಲಿಯೂ ಉಪಯೋಗಿಸಲಾಯಿತು.

ಇನ್ನು ಮೀಯಾ ಹಮೀದನ ಅವಸ್ಥೆ ಕೇಳಿ, ಅಮೀನಾ ಅವನ ಸ್ವರ ಕೇಳಿ ಓಡಿ ಬಂದು ಅವನನ್ನು ಅಪ್ಪಿಕೊಂಡು ಮುದ್ದಿಸ ತೊಡಗಿದಳು, ಇದ್ದಕ್ಕಿದ್ದಂತೆ ಅವನ ಕೈಯಲ್ಲಿ ಚಿಮ್ಮಟ ನೋಡಿ ಆಶ್ಚರ್ಯ ಗೊಂಡಳು.

"ಈ ಚಿಮ್ಮಟ ಎಲ್ಲಿಂದ?"

"ನಾನು ಖರೀದಿ ಮಾಡಿ ತಂದದ್ದು."

"ಎಷ್ಟಕ್ಕೆ?"

"ಮೂರು ಪೈಸೆಗೆ."

ಅಮೀನಾ ರೋಧಿಸಿದಳು "ಅಯ್ಯೋ ಅಲ್ಲಾ, ಎಂಥ ಅವಿವೇಕಿ ಮಗು ಅಂದರೆ ಮಧ್ಯಾಹ್ನ ಆಯಿತು ಏನು ತಿನ್ನಲಿಲ್ಲ, ಏನು ಕುಡಿಯಲಿಲ್ಲ, ತಂದ ಏನು ಚಿಮ್ಮಟ!"

"ಎಲ್ಲ ಜಾತ್ರೆಯಲ್ಲಿ ನಿನಗೆ ಬೇರೇನೂ ಸಿಗಲಿಲ್ಲ, ಈ ಚಿಮ್ಮಟ ಅಲ್ಲದೆ?"

ಹಮೀದ್ ಅಪರಾಧ ಭಾವದಲ್ಲಿ "ನಿನ್ನ ಬೆರಳು ತವೆಯಲ್ಲಿ ಸುಟ್ಟು ಹೋಗುತ್ತದೆ, ಅದಕ್ಕಾಗಿ ನಾನು ತಂದೆ."

ಅಮೀನಾಳ ಕೋಪ ಕೂಡಲೇ ಸ್ನೇಹದಲ್ಲಿ ಪರಿವರ್ತಿಸಿತು, ಸ್ನೇಹ ಸಹ ಅಂತಹ ಅಲ್ಲಸೂಕ್ಷ್ಮಮತಿಯ ಅಲ್ಲ, ಕೇವಲ ಶಬ್ದಗಳಲ್ಲಿ ಕಾಣುವಂತಹದಲ್ಲ, ಇದು ಮೂಕ ಸ್ನೇಹವಾಗಿತ್ತು, ತುಂಬಾ ವಿಶ್ವಸನೀಯರಸಮಯ, ರುಚಿಯಾದದ್ದು, ಮಗುವಿನಲ್ಲಿ ಎಷ್ಟು ತ್ಯಾಗ, ಎಷ್ಟು ಸದ್ಭಾವ, ಎಷ್ಟು ವಿವೇಕ ಇದೆ, ಇತರರನ್ನು ಮಿಠಾಯಿ ತಿನ್ನುವುದು, ಆಟಿಕೆ ಖರೀದಿ ಮಾಡುವುದನ್ನು ನೋಡಿ ಇವನ ಮನಸ್ಸಲ್ಲಿ ಎಷ್ಟು ಆಸೆ ಹುಟ್ಟಿರಬೇಕು, ಇವನಲ್ಲಿ ಇಷ್ಟು ನಿಯಂತ್ರಣಶಕ್ತಿ ಬಂತು ಎಲ್ಲಿಂದ? ಅಲ್ಲಿಯೂ ಈ ಮುದಿ ಅಜ್ಜಿಯ ನೆನಪು ಹೋಗಲಿಲ್ಲ, ಅಮೀನಾಳ ಹೃದಯದಲ್ಲಿ ಪ್ರೇಮ ಉಕ್ಕಿ ಬಂತು.

ಮತ್ತು ಈಗ ಇನ್ನೊಂದು ವಿಚಿತ್ರ ಮಾತಾಯಿತು, ಹಮೀದನ ಈ ಚಿಮ್ಮಟಕ್ಕಿಂತಲೂ ವಿಚಿತ್ರ, ಮಗು ಹಮೀದ್ ಈಗ ಮುದುಕನ ರೂಪ ತಾಳಿದ, ಅಮೀನಾ ಬಾಲಿಕೆಯಾದಳು, ಅವಳು ಅಳುತ್ತಿದ್ದಳು, ಹಮೀದ್ ಅವಳ ತಲೆ ಸವರುತ್ತಾ ಸಾಂತ್ವನ ನೀಡುತ್ತಿದ್ದ, ಕೈಯನ್ನು ಎತ್ತಿ ಅಮೀನಾ ಹಮೀದ್ ಗೋಸ್ಕರ ಅದೆಷ್ಟೋ ಆಶೀರ್ವಾದ ಬೇಡಿದಳು, ಕಣ್ಣೀರು ಹನಿ ಹನಿ ಹರಿಯುತ್ತಲೇ ಇತ್ತು, ಪಾಪ ಹಮೀದನಿಗೆ ಇದರ ರಹಸ್ಯ  ಹೇಗೆ ತಾನೇ ತಿಳಿಯುವುದು!

(ಮುಗಿಯಿತು)
ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Sunday, September 14, 2014

ಈದ್ ಜಾತ್ರೆ ಭಾಗ - ೫


ಈದ್ ಜಾತ್ರೆ
ಭಾಗ - ೫

ಎಷ್ಟು ಒಳ್ಳೆಯ ಹುಡುಗ, ಇವರ ಆಟಿಕೆಗಳಿಗೆ ಯಾರು ತಾನೇ ಇವರನ್ನು ಕೊಂಡಾಡುವರು? ದೊಡ್ಡವರ ಆಶಿರ್ವಾದ ನೇರ ಅಲ್ಲಾನಲ್ಲಿಗೆ ಹೋಗುತ್ತದೆ ಮತ್ತೆ ಬೇಗನೆ ನೆರವೇರುತ್ತದೆ, ನಾನು ಇವರ ದುಷ್ಟ ವರ್ತನೆ ಯಾಕೆ ಸಹಿಸಲಿ? ಬಡವನೇ ಆಗಲಿ ಆದರೆ ಯಾರಿಂದ ಏನನ್ನು ಕೇಳಲು ಹೋಗುವುದಿಲ್ಲ ಅಲ್ಲವೇ, ಒಂದಾನೊಂದು ದಿನ ಅಬ್ಬಜಾನ್ ಬರುವರು ತಾನೇ, ಅಮ್ಮಿಜಾನ್ ಸಹ ಬರುವಳು, ನಂತರ ಇವರ ಹತ್ತಿರ ಕೇಳುತ್ತೇನೆ, ಎಷ್ಟು ಆಟಿಕೆ ಬೇಕೆಂದು, ಒಬ್ಬೊಬ್ಬನಿಗೆ ಒಂದೊಂದು ಚೀಲ ಆಟಿಕೆ ಕೊಡುವೆ ಹಾಗು ತೋರಿಸುವೆ ಗೆಳೆಯರ ಒಟ್ಟಿಗೆ ಹೇಗೆ ವ್ಯವಹಾರ ಮಾಡಬೇಕೆಂದು, ಇದಲ್ಲ ಒಂದು ಪೈಸೆಯ ಪೇಡ ತೆಗೊಂಡು ತೋರಿಸಿ ತೋರಿಸಿ ತಿನ್ನುವುದು, ಈಗ ಎಲ್ಲರು ನಗುವರು ಹಮೀದ್ ಚಿಮ್ಮಟ ಖರೀದಿ ಮಾಡಿದ್ದಾನೆ ಎಂದು, ನಗಲಿ, ಅವರ ಬಾಯಾಗೆ ಹುಳ ಬೀಳಲಿ. 

ಅವನು ಅಂಗಡಿಯವನಿಗೆ ಕೇಳಿದ "ಈ ಚಿಮ್ಮಟ ಎಷ್ಟಕ್ಕೆ?"

ಅಂಗಡಿಯವನು ಅವನನ್ನು ನೋಡಿದ, ಅವನ ಒಟ್ಟಿಗೆ ಯಾರೂ ಇರದಿದ್ದನ್ನು ನೋಡಿ "ಇದು ನಿನ್ನ ಕೆಲಸದಲ್ಲ ಮಾರಾಯ!"

"ನಿನಗೆ ಇದು ಮಾರಲಿಕ್ಕೆದೆಯಾ, ಇಲ್ಲವ?"

"ಮಾರಲಿಕ್ಕೆ ಯಾಕೆ ಇಲ್ಲ, ಅದಕ್ಕೆ ತಾನೇ ಇಟ್ಟದ್ದು"

"ಮತ್ಯಾಕೆ ಹೇಳುವುದಿಲ್ಲ, ಇದಕ್ಕೆ ಎಷ್ಟು ಕ್ರಯ ಅಂತ?"

"ಆರು ಪೈಸೆ"

ಹಮೀದನಿಗೆ ನಿರಾಸೆ ಮೂಡಿತು.

ಅವನ ಮುಖ ನೋಡಿ ಅಂಗಡಿಯವನು "ಸರಿ, ಐದು ಪೈಸೆ ಕೊಡು, ಬೇಕಾದರೆ ಕೊಂಡೋಗು, ಇಲ್ಲಾದರೆ ಇರಲಿ."

ಹಮೀದ್ ಹೃದಯ ಗಟ್ಟಿ ಮಾಡಿ "ಮೂರು ಪೈಸೆಗೆ ಕೊಡುವೆಯ?"

ಹೀಗೆ ಹೇಳಿ ಅವನು ಈಗ ಅಂಗಡಿಯವನು ಬಯ್ಯುತ್ತಾನೆ ಎಂದು ಮುಂದೆ ಹೋಗಲಾರಂಭಿಸಿದ, ಆದರೆ ಅಂಗಡಿಯವನು ಏನು ಹೇಳಲಿಲ್ಲ, ಚಿಮ್ಮಟ ತೆಗೆದು ಅವನ ಕೈಯಲ್ಲಿ ಇಟ್ಟ, ಹಮೀದ್ ಬೇಗನೆ ತನ್ನಲ್ಲಿದ್ದ ಮೂರು ಪೈಸೆ ಅವನಿಗೆ ಕೊಟ್ಟ. ಹಮೀದ್ ಆ ಚಿಮ್ಮಟವನ್ನು ಹೀಗೆ ತನ್ನ ಭುಜದಲ್ಲಿ ಇಟ್ಟ ಅಂದರೆ ಯಾವುದೇ ಬಂದೂಕಿನ ಹಾಗೆ ಹಾಗು ತುಂಬಾ ಆಕರ್ಷಕವಾಗಿ ನಡೆದು ತನ್ನ ಸಂಗಡಿಗರು ಇದ್ದಲ್ಲಿ ಬಂದ, ಸ್ವಲ್ಪ ಕೇಳುವ ಈಗ ಇವರು ಏನು ಪ್ರತಿಕ್ರಿಯಿಸುತ್ತಾರೆ ಅಂತ.

ಮೋಹಸಿನ್ ನಗುತ್ತ "ಈ ಚಿಮ್ಮಟ ಯಾಕೆ ತಂದೆ ಮೂರ್ಖ, ಇದರ ಏನು ಮಾಡುವೆ?"

ಹಮೀದ್ " ಸ್ವಲ್ಪ ನಿನ್ನ 'ನೀರು ವಾಹಕ' ಕೆಳಗೆ ಬೀಳಿಸು, ಎಲ್ಲ ಅದರ ಎಲುಬು ಚೂರು ಚೂರಾಗುತ್ತದೆ, ಏನು ಉಳಿಯುತ್ತದೆ."

ಮೆಹಮೂದ್ "ಅಂದರೆ ಈ ಚಿಮ್ಮಟ ನಿನ್ನ ಆಟಿಕೆಯ?"

ಹಮೀದ್ "ಆಟಿಕೆ ಯಾಕೆ ಅಲ್ಲ, ಈಗ ಭುಜದ ಮೇಲೆ ಇಟ್ಟಿದ್ದೆ, ಬಂದೂಕು ಆಯಿತುಕೈಯಲ್ಲಿ ಇಟ್ಟೆ, ಸನ್ಯಾಸಿಯರ ಬಾರಿಸುವ ಚಿಮ್ಮಟ ಆಯಿತು, ಈ ಚಿಮ್ಮಟದಿಂದ ಒಂದು ಏಟು ಇಟ್ಟರೆ ನಿಮ್ಮ ಈ ಎಲ್ಲ ಆಟಿಕೆಗಳ ಜೀವ ಹೋಗಬಹುದು, ನಿಮ್ಮ ಆಟಿಕೆಯಿಂದ ಎಷ್ಟು ಬೇಕಾದರೂ ಪ್ರಯತ್ನಿಸಿ ನನ್ನ ಚಿಮ್ಮಟವನ್ನು ಏನು ಮಾಡಲಾಗದು, ನನ್ನ ವೀರ ಸಿಂಹ ಈ ಚಿಮ್ಮಟ."

ಸಮ್ಮಿ ಕಠಾರಿ ತೆಗೆದುಕೊಂಡಿದ್ದ, ಹಮೀದನಿಂದ ಪ್ರಭಾವಿತನಾಗಿ "ನನ್ನ ಕಠಾರಿಯಿಂದ ಬದಲಾಯಿಸುವೆಯ, ಇದು ಎರಡಾಣೆಯ?"

ಹಮೀದ್ ಅವನ ಕಠಾರಿಯನ್ನು ಉಪೇಕ್ಷೆಯಿಂದ ನೋಡಿದ "ನನ್ನ ಈ ಚಿಮ್ಮಟ ಬೇಕಾದರೆ ನಿನ್ನ ಕಠಾರಿಯ ಹೊಟ್ಟೆ ಹರಿದು ಬಿಡಬಹುದು, ಸ್ವಲ್ಪ ಚರ್ಮ ಸುತ್ತಿದೆ ಅಷ್ಟೇ, ಸ್ವಲ್ಪ ನೀರು ಬಿದ್ದರೆ ಮುಗಿಯುವುದು, ನನ್ನ ಚಿಮ್ಮಟ ಧೈರ್ಯವಂತ, ಬೆಂಕಿಯಲ್ಲಿ, ನೀರಲ್ಲಿ, ಬಿರುಗಾಳಿಯಲ್ಲಿ ಎಲ್ಲಿ ಬೇಕಾದರೂ ನಿಲ್ಲುವ ಸಾಮರ್ಥ್ಯ ಇದೆ ಇದರಲ್ಲಿ.

ಚಿಮ್ಮಟ ಎಲ್ಲರನ್ನೂ ಮೋಹಿಸಿತು, ಆದರೆ ಈ ಹಣ ಯಾರಲ್ಲಿ ಇತ್ತು? ಮತ್ತು ಈಗ ಜಾತ್ರೆಯಿಂದ ಎಷ್ಟೋ ದೂರ ಬಂದು ಆಗಿದೆ, ಯಾವಾಗ ತಾನೇ ಒಂಬತ್ತು ಗಂಟೆ ಆಗಿದೆ, ಈಗಂತೂ ಬಿಸಿಲು ಸಹ ಹೆಚ್ಚಾಗುತ್ತಿದೆ, ಮನೆಗೆ ಹೋಗುವ ಅವಸರ, ತಂದೆಯಿಂದ ಹೇಳಿದರೂ ಚಿಮ್ಮಟ ಸಿಗಲಿಕ್ಕಿಲ್ಲ, ಹಮೀದ್ ತುಂಬಾ ಚಾಣಾಕ್ಷ, ಅದಕ್ಕೆ ದುಷ್ಟ ತನ್ನ ಹಣ ಉಳಿಸಿ ಇಟ್ಟಿದ್ದ.

ಈಗ ಬಾಲಕರ ಎರಡು ತಂಡ ನಿರ್ಮಾಣವಾಯಿತು, ಒಂದರಲ್ಲಿ ಮೋಹಸಿನ್, ಮೆಹಮೂದ್, ನೂರೆ ಮತ್ತು ಸಮ್ಮಿ ಇದ್ದ, ಎರಡನೇ ತಂಡದಲ್ಲಿ ಕೇವಲ ಹಮೀದ್, ಸಶಸ್ತ್ರ, ಸಮ್ಮಿ ವಿದ್ರೋಹ ಮಾಡಿದ, ಬಂದು ಹಮೀದನ ತಂಡಕ್ಕೆ ಸೇರಿದ, ಆದರೆ ಮೋಹಸಿನ್, ಮಹಮೂದ್, ನೂರೆ ಹಮೀದಕ್ಕಿಂತ ಪ್ರಾಯದಲ್ಲಿ ಎರಡು ಎರಡು ವರ್ಷ ದೊಡ್ಡವರಾದರೂ ಹಮೀದನ ಆಕ್ರಮಣದಿಂದ ಭಯಭೀತರಾಗಿದ್ದರು, ಅವನ ಹತ್ತಿರ ನ್ಯಾಯದ ಬಲ ಇತ್ತು ಹಾಗು ನೀತಿಯ ಶಕ್ತಿ, ಒಂದು ಕಡೆ ಮಣ್ಣಿದೆ ಅಂದರೆ ಇನ್ನೊಂದು ಕಡೆ ಕಬ್ಬಿಣ ಹಾಗು ಅದು ತನ್ನನ್ನು ಶಕ್ತಿಶಾಲಿ ಎಂದು ಘೋಷಿಸುತ್ತಿದೆ, ಅದು ಅಜೇಯ, ಘಾತಕ. ಒಂದು ವೇಳೆ ಸಿಂಹ ಬಂದರೆ ನೀರು ವಾಹಕ ಮಹಾಶಯ  ಕಕ್ಕಬಿಕ್ಕಿಯಾಗುವನು, ಸಿಪಾಯಿ ಮಹಾಶಯ ಬಂದೂಕು ಬಿಟ್ಟು ಓಡಿ ಹೋಗುವನು, ವಕೀಲ ಸಾಹೇಬ ವಾದ ಬಿಟ್ಟು ಅದರ ಮುಂದೆ ಕುಣಿಯಲಾರಂಭಿಸುವನು, ಆದರೆ ಶಕ್ತಿಶಾಲಿ ಚಿಮ್ಮಟ, ಈ ಭಾರತ ವೀರ ಸಿಂಹದ ಕುತ್ತಿಗೆಯ ಮೇಲೆ ಸವಾರಿ ಮಾಡಿ ಅದರ ಕಣ್ಣು ಕಿತ್ತುಕೊಳ್ಳುವುದು.

ಆದರೂ ಮೋಹಸಿನ್ ಸ್ವಲ್ಪ ಮೆಲ್ಲ ಧ್ವನಿಯಲ್ಲಿ "ಆದರೆ ಅದಕ್ಕೆ ನೀರು ತುಂಬಿಸಲು ಸಾಧ್ಯವಿಲ್ಲವಲ್ಲ?"

ಹಮೀದ್ ಚಿಮ್ಮಟ ಎತ್ತಿಕೊಂಡು  "ನೀರು ವಾಹಕನಿಗೆ ಒಂದು ಸಲ ಬಯ್ದರೆ, ಅವನು ಓಡಿ ಹೋಗಿ ನೀರು ತಂದು ದ್ವಾರಕ್ಕೆ ಹಾಕಿ ಹೋಗುವನು."

ಮೋಹಸಿನ್ ಸೋಲನ್ನು ಒಪ್ಪಿಕೊಂಡ, ಆದರೆ ಮಹಮೂದ್ "ಒಂದು ವೇಳೆ ನಿಮ್ಮನ್ನು ಹಿಡಿದು ಬಿಟ್ಟರೆ, ನ್ಯಾಯಾಲಯದಲ್ಲಿ ವಕೀಲನ ಕಾಲ ಮುಂದೆ ಕುಳಿತು ಬೇಡುತ್ತಿರುವೆ."

ಹಮೀದನಿಗೆ ಮಹಮೂದನ ಪ್ರಬಲ ತರ್ಕಕ್ಕೆ ಉತ್ತರ ನೀಡಲಾಗಲಿಲ್ಲ, ಅವನು "ನಮ್ಮನ್ನು ಯಾರು ಹಿಡಿಯಲಿಕ್ಕೆ ಬರುತ್ತಾರೆ?"

ಮಹಮೂದ್ ದರ್ಪದಿಂದ "ನನ್ನ ಸಿಪಾಯಿ ಬಂದೂಕಧಾರಿ."

ಹಮೀದ್ "ಪಾಪ, ಈ ಸಿಪಾಯಿ ನಮ್ಮ ಭಾರತ ವೀರನನ್ನು ಹಿಡಿಯುವುದ, ಆಗಲಿ ಬನ್ನಿ, ಸ್ವಲ್ಪ ಕುಸ್ತಿ ಮಾಡೋಣ, ಇದರ ಮುಖ ನೋಡಿಯೇ ಓಡಿ ಹೋಗುವನು, ಹಿಡಿಯುವುದು ಹೇಗೆ."

ಮೋಹಸಿನನಿಗೆ ಹೊಸ ಏಟು ಹೊಳೆಯಿತು "ನಿನ್ನ ಚಿಮ್ಮಟದ ಮುಖ ದಿನಾಲೂ ಬೆಂಕಿಯಲ್ಲಿ ಸುಡುವುದು."

ಅವನು ಎನಿಸಿದ ಹಮೀದನಿಗೆ ಇದರ ಉತ್ತರ ಕೊಡಲು ಆಗದು ಎಂದು, ಆದರೆ ಅದಾಗಲಿಲ್ಲ "ಬೆಂಕಿಯಲ್ಲಿ ಧೈರ್ಯವಂತರೆ ಹಾರುವುದು ಮಹಾಶಯ, ನಿಮ್ಮ ಈ ವಕೀಲ, ಸಿಪಾಯಿ, ನೀರು ವಾಹಕ ಹೆಂಗಸರಂತೆ ಮನೆಯೊಳಗೇ ಅವಿತು ಕುಳಿತುಕೊಳ್ಳುವರು, ಬೆಂಕಿಯಲ್ಲಿ ಆ ಕೆಲಸ ಇದೆ ಅಂದರೆ ಅದನ್ನು ಕೇವಲ ಈ ಭಾರತ ವೀರನೆ ಮಾಡಬಲ್ಲ."

ಮಹಮೂದ್ ಇನ್ನೊಮ್ಮೆ ಪ್ರಯತ್ನಿಸಿದ "ವಕೀಲ ಸಾಹೇಬ ಕುರ್ಚಿಯಲ್ಲಿ ಕುಳಿತುಕೊಳ್ಳುವನು, ನಿನ್ನ ಈ ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು?"

ಮಹಮೂದನ ಈ ತರ್ಕ ನೂರೆ ಮತ್ತು ಸಮ್ಮಿಗೆ ಸಹ ಹಿಡಿಯಿತುಎಷ್ಟು ಸರಿ ಮಾತು ಹೇಳಿದ್ದಾನೆ ಮಹಮೂದ್ ಮೀಯಾ, ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು.

ಹಮೀದನಿಗೆ ಯಾವುದೇ ಸರಿಯಾದ ಉತ್ತರ ಸಿಗಲಿಲ್ಲ, ಅದಕ್ಕೆ ಅವನು ಒಟ್ಟಾರೆ ವಾದ ಮಾಡಲು ಶುರು ಮಾಡಿದ "ನನ್ನ ಚಿಮ್ಮಟ ಅಡುಗೆಮನೆಯಲ್ಲಿ ಇರಲಾರದು, ಅದು ವಕೀಲನ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಹಾಗು ಎಲ್ಲ ಕಾನೂನುಗಳನ್ನು ಆ ವಕೀಲನ ಹೊಟ್ಟೆಗೆ ಹಾಕಿ ಬಿಡುವುದು." ಮಾತು ಯಾರಿಗೂ ಹಿಡಿಯಲಿಲ್ಲ, ಆದರೆ ಕಾನೂನುಗಳನ್ನು ವಕೀಲನ ಹೊಟ್ಟೆಗೆ ಹಾಕುವ ಮಾತು ಕೇಳಿ ಆ ಎಲ್ಲ ಧೀರರು ಬೆರಗಾದರು. ಈ ಮಾತಿಗೆ  ಏನು ಅರ್ಥವಿರಲಿಲ್ಲ, ಆದರೆ ಒಂದು ಹೊಸತನ ಇತ್ತು, ಮಕ್ಕಳನ್ನು ಚಕಿತಗೊಳಿಸಿತು. ಅವರೆಲ್ಲ ಶರಣಾದರು, ಹಮೀದ್ ಗೆದ್ದಿದ, ಈಗ ಅವನ ಚಿಮ್ಮಟ ಭಾರತ ವೀರ ಎಂದು ಇದರಲ್ಲಿ ಮೋಹಸಿನ್, ಮಹಮೂದ್ , ನೂರೆ, ಸಮ್ಮಿ ಇವರಿಗೆ ಯಾವುದೇ ಆಕ್ಷೇಪಣೆ ಇರಲಿಲ್ಲ.


(ಮುಂದುವರಿಯುವುದು)

 ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...