Wednesday, August 27, 2014

ಮುಂಜಾನೆಯ ಸಂಜೀವನಿ

ಮುಂಜಾವು ಇಬ್ಬನಿ
ಪುಷ್ಪಗಳ ಮೇಲೆ ಹನಿ ಹನಿ
ಬೀಸುವ ತಂಗಾಳಿ
ತಾಜಾ ಉಸಿರಿನ ಸಂಜೀವನಿ
---
ಹೂವ ಮೇಲೆ ದುಂಬಿ
ಹಿಗ್ಗುತ್ತಿದೆ ತನ್ನೊಳಗೆ
ಬದುಕಿನ ರಸ ತುಂಬಿ
---
ಸೂರ್ಯನ ಕಿರಣ
ತುಂಬುತ್ತಿದೆ ಹೊಸ ಚೈತನ್ಯ
ತೇಜಸ್ಸು ಪಡೆಯುತ್ತಿದೆ ಕಣ ಕಣ
---
ಹಕ್ಕಿಗಳ ಚಿಲಿಪಿಲಿ
ಕೋಗಿಲೆಯ ಗಾನ
ಪ್ರಫುಲ್ಲಿತ ಮನಸ್ಸು
ನಿಸರ್ಗದ ಧ್ಯಾನ

by ಹರೀಶ್ ಶೆಟ್ಟಿ, ಶಿರ್ವ

1 comment:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...