Monday, August 11, 2014

ವೀರ ಬರ್ಬರಿಕ


ವೀರ ಬರ್ಬರಿಕ
-------------------
ಭೀಮನ ಮೊಮ್ಮಗ ಹಾಗು ಘಟೋತ್ಕಚನ ಮಗ ಬರ್ಬರಿಕನ ತಾಯಿಯ ಹೆಸರು  ಕಾಮಕಟಂಕಟಿ ಎಂದಿತ್ತು. ಅವರನ್ನು ಮೊರ್ವಿ ಎಂದು ಕರೆಯಲಾಗುತ್ತಿತ್ತು.  ಬರ್ಬರಿಕನನ್ನು ಮೊರ್ವಿನಂದನ್ ಎಂದೂ ಕರೆಯಲಾಗುತ್ತಿತ್ತು. ಅವನು ಯುದ್ಧ ಕಲೆ ತನ್ನ ತಾಯಿಯಿಂದ ಕಲಿತುಕೊಂಡಿದ್ದ. ಕಠಿನ ತಪಸ್ಸು ಮಾಡಿ ಬರ್ಬರಿಕ ದೇವ ಶಿವನನ್ನು ಒಲಿಸಿ ಅವರಿಂದ ಮೂರು ಅಮೋಘ ಬಾಣ ಪಡೆದಿದ್ದ, ಈ ಕಾರಣ ಅವನನ್ನು ಮೂರು ಬಾಣಧಾರಿ ಎಂದೂ ಕರೆಯಲಾಗುತ್ತಿತ್ತು. ಅಗ್ನಿ ದೇವರು ಪ್ರಸನ್ನವಾಗಿ ಅವನಿಗೆ ಬಿಲ್ಲು ನೀಡಿದ್ದರು. ಬರ್ಬರಿಕನಲ್ಲಿ ಮೂರು ಲೋಕ ಗೆಲ್ಲುವ ಸಾಮರ್ಥ್ಯ ಇತ್ತು.

ಕೌರವ ಮತ್ತು ಪಾಂಡವರ ಮಧ್ಯೆ ಯುದ್ಧದ ತಯಾರಿ ಜೋರಲ್ಲಿ ನಡೆದಿತ್ತು. ಎಲ್ಲ ಕಡೆ ಯುದ್ಧದ ಚರ್ಚೆ ನಡೆದಿತ್ತು. ಈ ಸುದ್ಧಿ ಬರ್ಬರಿಕನಿಗೆ ಸಿಕ್ಕಿದಾಗ ಅವನಿಗೂ ಯುದ್ಧದಲ್ಲಿ ಪಾಲ್ಗೊಳ್ಳುವ ಮನಸ್ಸಾಯಿತು. ಅವರು ತಾಯಿಯಿಂದ ಯುದ್ಧದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆಯಲು ಹೋದ. ಅವನು ತಾಯಿಯಿಂದ ಆಶೀರ್ವಾದ ಪಡೆದ ಹಾಗು ಕೇವಲ ದುರ್ಬಲ ಪಕ್ಷದವರ ಕಡೆಯಿಂದಲೇ ಯುದ್ಧ ಮಾಡುವೆಯೆಂದು ಅವರಿಗೆ ವಚನ ನೀಡಿದ.

ಬರ್ಬರಿಕ ತನ್ನ ನೀಲವರ್ಣ ಕುದುರೆಯ ಮೇಲೆ ಕುಳಿತು ಮೂರು ಬಾಣ ಹಾಗು ಬಿಲ್ಲು ಒಟ್ಟಿಗೆ ಇಟ್ಟು ಹೊರಟ. ಮಾರ್ಗದಲ್ಲಿ ಅವನನ್ನು ಒಬ್ಬ ಬ್ರಾಹ್ಮಣ ತಡೆದು ಅವರ ಪರಿಚಯ ಕೇಳಿದ. ಈ ಬ್ರಾಹ್ಮಣ ಬೇರೆ ಯಾರೂ ಅಲ್ಲ, ನಮ್ಮ ಲೀಲಾಧರ ಶ್ರೀಕೃಷ್ಣನೆ ಆಗಿದ್ದ. ಕೇವಲ ಮೂರು ಬಾಣ ಜೊತೆಯಲ್ಲಿಟ್ಟು ಯುದ್ಧ ಮಾಡಲು ಹೊರಟೆಯಲ್ಲವೇ ಎಂದು ಶ್ರೀಕೃಷ್ಣ ಅವನಿಂದ ವ್ಯಂಗದಿಂದ ಕೇಳಿದ. ಇದನ್ನು ಕೇಳಿ ಬರ್ಬರಿಕ "ಶತ್ರು ಸೇನವನ್ನು ನೆಲಸಮಗೊಳಿಸಲು ನನಗೆ ನನ್ನ ಈ ಮೂರು ಬಾಣವೇ ಸಾಕು" ಎಂದು ಉತ್ತರಿಸಿದ ಹಾಗು "ಒಂದು ವೇಳೆ ನಾನು ಈ ಮೂರು ಬಾಣಗಳ ಪ್ರಯೋಗ ಮಾಡಿದ್ದರೆ ತ್ರಿಲೋಕದಲ್ಲಿ ಹಾಹಕಾರ ಉಂಟಾಗಬಹುದು" ಎಂದು ಹೇಳಿದ.

ಇದನ್ನು ಕೇಳಿ ಕೃಷ್ಣ ತನ್ನ ಮೋಹಕ ನಗು ಬೀರಿ ಎದುರಿದ್ದ ಅರಳೀ ಮರದ ಕಡೆ ಸಂಕೇತ ಮಾಡಿ ಅವನಿಗೆ  "ಹೌದೆ, ಹಾಗಾದರೆ ಈ ಮರದ ಎಲ್ಲಾ ಎಳೆಗಳ ಮೇಲೆ ತೂತು ಮಾಡಿ ತೋರಿಸಿದರೆ ನಾನು ನಂಬುವೆ ಇಲ್ಲಾದರೆ ಹೇಗೆ ನಂಬುವುದು" ಎಂದು ಸವಾಲೆಸೆದ. ಬರ್ಬರಿಕ ಸವಾಲನ್ನು ಸ್ವೀಕರಿಸಿ ತನ್ನ ಬತ್ತಳಿಕೆಯಿಂದ ಒಂದು ಬಾಣ ತೆಗೆದು ಎಳೆಗಳ ಮೇಲೆ ಬಿಟ್ಟ. ಒಂದೇ ಕ್ಷಣದಲ್ಲಿ ಬಿಟ್ಟ ಬಾಣ ಎಲ್ಲಾ ಎಳೆಗಳ ಮೇಲೆ ರಂಧ್ರ ಮಾಡಿ ಕೃಷ್ಣನ ಹಿಂದೆ ಮುಂದೆ ಸುಳಿಯಲಾರಂಭಿಸಿತು. ಯಾಕೆಂದರೆ ಲೀಲಾಧರ ಶ್ರೀಕೃಷ್ಣ ಒಂದು ಎಳೆಯನ್ನು ತನ್ನ ಪಾದದ ಅಡಿಯಲ್ಲಿ ಅಡಗಿಸಿಟ್ಟಿದ್ದ.

ಬರ್ಬರಿಕ ಶ್ರೀಕ್ರಷ್ಣನಿಗೆ "ನಿಮ್ಮ ಕಾಲು ತೆಗೆಯಿರಿ ಇಲ್ಲಾದರೆ ಈ ಬಾಣ ನಿಮಗೂ ಗಾಯಗೊಳಿಸಬಹುದು" ಎಂದು ಹೇಳಿದ. ಎಲ್ಲ ಸ್ಥಿತಿ ಪರೀಕ್ಷಿಸಿ ಶ್ರೀಕೃಷ್ಣ ತನ್ನ ವಾಣಿಯ ಬಾಣ ಬಿಟ್ಟು ಬರ್ಬರಿಕನಿಗೆ ಕೇಳಿದ "ನೀನು ಯಾರ ಪಕ್ಷದಿಂದ ಯುದ್ಧ ಮಾಡುವೆ". ಬರ್ಬರಿಕ ತನ್ನ ತಾಯಿಗೆ ನೀಡಿದ ವಚನದ ಬಗ್ಗೆ ತಿಳಿಸಿ "ಯಾರು ಈ ಯುದ್ಧದಲ್ಲಿ ದುರ್ಬಲವಾಗಿರುವರೋ ನಾನು ಅವರ ಪರವಾಗಿ ಯುದ್ಧ ಮಾಡುವೆ" ಎಂದು ಹೇಳಿದ.
ಕೃಷ್ಣನಿಗೆ ತಿಳಿದಿತ್ತು ಒಂದು ವೇಳೆ ಬರ್ಬರಿಕ ಕೌರವರ ಪರವಾಗಿ ಯುದ್ಧ ಮಾಡಿದರೆ ಗೆದ್ದ ಬಾಜಿ ಸಹ ಅವನ ಕೈಯಿಂದ ಕಸಿಯಬಹುದು. ಬ್ರಾಹ್ಮಣ ವೇಷದಲ್ಲಿದ್ದ ಶ್ರೀಕೃಷ್ಣ ಬರ್ಬರಿಕನಿಂದ ವಚನ ಕೇಳಿ ಪಡೆದ ಹಾಗು ದಾನದಲ್ಲಿ ಅವನ ಶಿರ ಬೇಕೆಂದು ಕೇಳಿಕೊಂಡ. ಕ್ಷಣಕ್ಕಾಗಿ ಬರ್ಬರಿಕನಿಗೆ ಆಘಾತವಾಯಿತು, ಆದರೆ ಅವನು ವಚನ ಕೊಟ್ಟು ಬಿಟ್ಟಿದ್ದ. ವಚನದಿಂದ ನಿರಾಕರಿಸಲು ಅವನಿಗೆ ಇಷ್ಟವಿರಲಿಲ್ಲ. ಬರ್ಬರಿಕ ಯೋಚಿಸಿದ ಇವರು ಸಾಧಾರಣ ಬ್ರಾಹ್ಮಣ ಅಲ್ಲ, ಅದಕ್ಕೆ ಅವನು ಬ್ರಾಹ್ಮಣನಿಂದ ತನ್ನ ವಾಸ್ತವ ರೂಪಕ್ಕೆ ಬರಲು ವಿನಂತಿಸಿದ. ಶ್ರೀಕೃಷ್ಣ ಕೇವಲ ತನ್ನ ವಾಸ್ತವ ರೂಪವನ್ನೇ ಅಲ್ಲ ತನ್ನ ವಿರಾಟ ರೂಪದ ದರ್ಶನವನ್ನು ಬರ್ಬರಿಕನಿಗೆ ನೀಡಿದ.

ಬರ್ಬರಿಕ ಕೃಷ್ಣನಿಂದ ಅವನಿಗೆ ಕೊನೆ ತನಕ ಯುದ್ಧ ನೋಡಲ್ಲಿಕ್ಕೆ ಇದೆ ಎಂದು ಮನವಿ ಮಾಡಿದ. ಕೃಷ್ಣ ಅವನ ಈ ಮಾತನ್ನು ಸ್ವೀಕರಿಸಿದ. ಫಾಲ್ಗುಣ ಮಾಸದ ದ್ವಾದಶಿಯಂದು ಅವನು ತನ್ನ ಶಿರ ದಾನ ಮಾಡಿದ. ಶ್ರೀಕೃಷ್ಣ ಅವನ ಶಿರವನ್ನು ಅಮೃತದಿಂದ ತೊಯ್ದು ಯುದ್ಧದ ಸಮೀಪ ಒಂದು ಪರ್ವತದಲ್ಲಿ ಸ್ಥಾಪಿಸಿದ. ಅಲ್ಲಿಂದ ಬರ್ಬರಿಕ ಸಂಪೂರ್ಣ ಯುದ್ಧವನ್ನು ನೋಡಬಹುದಿತ್ತು.

ಯುದ್ಧ ಮುಗಿದಿತ್ತು. ಪಾಂಡವರಲ್ಲಿ ಯುದ್ಧದ ಗೆಲುವಿನ ಶ್ರೇಯ ಯಾರಿಗೆ ಸಲ್ಲಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಶ್ರೀಕೃಷ್ಣ "ಬರ್ಬರಿಕನ ಶಿರ ಸಂಪೂರ್ಣ ಯುದ್ಧದ ಸಾಕ್ಷಿ, ಅದಕ್ಕೆ ಅವನಿಂದ ಒಳ್ಳೆ ನಿರ್ಣಯಕ ಬೇರೆ ಯಾರೂ ಇಲ್ಲ" ಎಂದ. ಇದಕ್ಕೆ ಬರ್ಬರಿಕ ಶಿರ  "ನನಗೆ ಮಹಾಭಾರತದ ಯುದ್ಧದಲ್ಲಿ ಎಲ್ಲ ಕಡೆ ಕೇವಲ ಶ್ರೀಕೃಷ್ಣ ಕಂಡು ಬಂದರು, ಕೇವಲ ಅವರ ಸುದರ್ಶನ ಚಕ್ರ ತಿರುಗುವುದು ಕಂಡು ಬಂತು ಹಾಗು ಅವರ ಆದೇಶಕ್ಕೆ ದೇವಿ ಮಹಾಕಾಳಿ ಶತ್ರು ಸೇನೆಯ ರಕ್ತ ಸೇವನೆ ಮಾಡುವುದು ಕಂಡು ಬಂತು" ಎಂದು ಉತ್ತರಿಸಿತು.

ಶ್ರೀಕೃಷ್ಣ ಬರ್ಬರಿಕನ ಬಲಿದಾನದಿಂದ ತುಂಬಾ ಪ್ರಸನ್ನವಾಗಿದ್ದ ಹಾಗು ಅವನಿಗೆ "ಕಲಿಯುಗದಲ್ಲಿ ನಿನ್ನನ್ನು ಶ್ಯಾಮ ಎಂಬ ಹೆಸರಿನಿಂದ ಕರೆಯುವರು ಹಾಗು ಖಾಟು ಎಂಬ ನಗರದಲ್ಲಿ ನಿನ್ನ ಧಾಮ ನಿರ್ಮಾಣವಾಗುವುದು " ಎಂದು ವರದಾನ ನೀಡಿದ. ಅವನ ಶಿರ ಅಲ್ಲಿಯೇ ಧಫನ ಮಾಡಲಾಯಿತು.

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಖಾಟು ಎಂಬ ಊರಲ್ಲಿ  "ಖಾಟು ಶ್ಯಾಮ" ನವರ ಮುಖ್ಯ ದೇವಾಲಯ ಇದೆ.

ಆಧಾರ : ಮಹಾಭಾರತದಿಂದ


by ಹರೀಶ್ ಶೆಟ್ಟಿ ,ಶಿರ್ವ

2 comments:

  1. ಮೋರ್ವೀ ನಂದನನ ಬಲಿದಾನ ಮತ್ತು ಖಾಟು ಶ್ಯಾಮ ದೇಗುಲದ ವಿವರ ಉಪಯುಕ್ತವಾಗಿದೆ.
    ತಾವು ಇಲ್ಲಿಗೆ ಭೇಟಿ ಕೊಟ್ಟಿದ್ದೀರಾ ಸಾರ್? ಅಲ್ಲಿಗೆ ತಲುಪಲು ಮಾರ್ಗ ಮತ್ತು ವಿಶೇಷಗಳನ್ನೂ ತಿಳಿಸಿರಿ.

    ReplyDelete
  2. ಇಲ್ಲ ಆದರೆ ದಿನ ನಿತ್ಯ ಫೇಸ್ ಬೂಕಲ್ಲಿ ಇವರ ಸೈಟ್ ನೋಡಿ ತಿಳಿಯುವ ಉತ್ಸುಕತೆ ಆಯಿತು, ಮಹಾಭಾರತದಲ್ಲಿ ಹುಡುಕಿದಾಗ ಇವರ ಕಥೆ ತಿಳಿಯಿತು, ಅದನ್ನು ನಿಮ್ಮ ಮುಂದೆ ಪ್ರಸ್ತುತ ಮಾಡಿದೆ.
    khatu shyam Mandir khatu
    Lachhmangarh Sikar, Rajasthan, India 332602
    Email gotoniru@gmail.com ,info@khatushyam.in
    Website http://www.KhatuShyam.in

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...