Sunday, August 31, 2014

ತುಂಬಾ ಇಷ್ಟವಾಗುತ್ತದೆ

ತುಂಬಾ ಇಷ್ಟವಾಗುತ್ತದೆ

ಏನು???

ಈ ಭೂಮಿ, ನದಿಗಳು, ಈ ಇಳಿಸಂಜೆ

ಮತ್ತು ?

ಮತ್ತು ನೀನು.....

ತುಂಬಾ ಇಷ್ಟವಾಗುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......

!!ನಾವಿಬ್ಬರು ಎಷ್ಟು ಹತ್ತಿರದಲ್ಲಿ
ಎಷ್ಟು ದೂರದಲ್ಲಿದೆ
ಚಂದ್ರ ತಾರೆಗಳೆಲ್ಲ
ನಿಜ ಕೇಳುವೆಯೆಂದರೆ ಮನಸ್ಸಿಗೆ
ಸುಳ್ಳೆಂದು ಬಾಸವಾಗುತ್ತದೆ ಇದೆಲ್ಲಾ!!

ಆದರೆ ಸತ್ಯವೆನಿಸುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......


!!ನೀನಿದನ್ನೆಲ್ಲಾ ಬಿಟ್ಟು
ಹೇಗೆ ನಾಳೆ ಮುಂಜಾನೆ ಹೋಗುವೆ
ನನ್ನೊಟ್ಟಿಗೆ ಇವರಿಗೂ ಸಹ
ನೀನು ತುಂಬಾ ನೆನಪಾಗುವೆ!!-೨

ತುಂಬಾ ಇಷ್ಟವಾಗುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......-೨

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅಮಿತ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಬಾಲಿಕ ಬಧು

bade achchhe lagate hai
ye dharatee, ye nadiyaan, ye rainaa aaur tum

hum tum kitane paas hai, kitane door hain chaand sitaare
sach poochho to man ko zoothhe lagate hain ye saare
magar sachche lagate hai, ye dharatee...

tum in sab ko chhod ke kaise kal subah jaaogee
mere saath inhe bhee to tum  yaad bahot aaogee
bade achchhe lagate hain ...



Wednesday, August 27, 2014

ಮುಂಜಾನೆಯ ಸಂಜೀವನಿ

ಮುಂಜಾವು ಇಬ್ಬನಿ
ಪುಷ್ಪಗಳ ಮೇಲೆ ಹನಿ ಹನಿ
ಬೀಸುವ ತಂಗಾಳಿ
ತಾಜಾ ಉಸಿರಿನ ಸಂಜೀವನಿ
---
ಹೂವ ಮೇಲೆ ದುಂಬಿ
ಹಿಗ್ಗುತ್ತಿದೆ ತನ್ನೊಳಗೆ
ಬದುಕಿನ ರಸ ತುಂಬಿ
---
ಸೂರ್ಯನ ಕಿರಣ
ತುಂಬುತ್ತಿದೆ ಹೊಸ ಚೈತನ್ಯ
ತೇಜಸ್ಸು ಪಡೆಯುತ್ತಿದೆ ಕಣ ಕಣ
---
ಹಕ್ಕಿಗಳ ಚಿಲಿಪಿಲಿ
ಕೋಗಿಲೆಯ ಗಾನ
ಪ್ರಫುಲ್ಲಿತ ಮನಸ್ಸು
ನಿಸರ್ಗದ ಧ್ಯಾನ

by ಹರೀಶ್ ಶೆಟ್ಟಿ, ಶಿರ್ವ

ಮುಗ್ಧ ವ್ಯಾಮೋಹ

ಯಾವಗಲು ನೆನಪಾಗುತ್ತದೆ ಅವಳ
ಮುಂಜಾನೆ ಎದ್ದ ಕೂಡಲೇ
ಎದುರು ಮನೆಯ ಟೆರೇಸ್
ಮೇಲೆ ದೃಷ್ಟಿ ಹೋದಾಗ
ಬಟ್ಟೆ ಒಣಗಲು ಹಾಕುತ್ತಿರುವ
ಅವಳ ಮುಖ ಕಣ್ಣ ಮುಂದೆ ನಲಿಯುತ್ತದೆ

ಬಟ್ಟೆ ಒಣಗಿಸಲು ಬಂದಾಗ
ಮನೆಯ ಕಿಟಕಿಯಿಂದ ನಾನು
ಅವಳ ಹೆಸರು ಕರೆದು
ಅಡಗಿ ಕುಳಿತುಕೊಳ್ಳುವುದು
ಅವಳು ಹಿಂದೆ ಮುಂದೆ ನೋಡಿ
ಮತ್ತೆ ಕೋಪದಿಂದ
ಬಟ್ಟೆಯನ್ನು ಜೋರಿನಿಂದ ಹಿಂಡುವುದು
ನಾನು ಜೋರಿನಿಂದ ನಕ್ಕು
ಪುನಃ ಕರೆದು ಚಿಡಾಯಿಸುವುದು

ಮಧ್ಯಾಹ್ನ ನಾನು
ಕಿಟಕಿಯ ಬದಿಯಲಿ
ಕುಳಿತು ಓದುವಾಗ
ಅವಳು ತನ್ನ ಸಣ್ಣ ರೇಡಿಯೋ
ಜೊತೆಯಲ್ಲಿಟ್ಟು ಟೆರೇಸ್'ಗೆ
ಒಣ ಬಟ್ಟೆ ತೆಗೆಯಲು ಬಂದಾಗ
ನನ್ನನ್ನು ಓದುವುದನ್ನು ನೋಡಿ
ನನಗೆ ಸತಾಯಿಸಲೆಂದು
ರೇಡಿಯೋದ ದ್ವನಿ ಜೋರಾಗಿ ಇಡುವುದು
ನಾನು ಬಯ್ಯುವುದು
ಯಾವಗಲು ಆಗುವ
ನಮ್ಮ ಚಿಕ್ಕ ಪುಟ್ಟ ಜಗಳ

ಅವಳ ಮದುವೆ ನಿಶ್ಚಿತವಾದಾಗ
ನನ್ನನ್ನು ಎಷ್ಟು ರೇಗಿಸಿದರೂ
ನನ್ನ ಮೌನ ಕಂಡು
ಅವಳ ಪ್ರತಿ ಇದ್ದ
ನನ್ನ ಪ್ರೀತಿ ಅರಿತು
ಬೇಸರಿಸಿದ ಅವಳು
ಮನೆಗೆ ಬಂದು
ಅವಳಿಂದ ಪ್ರಾಯದಲ್ಲಿ
ಎಷ್ಟೋ ಚಿಕ್ಕ ಇದ್ದ ನನಗೆ
ಗಲ್ಲಕ್ಕೆ ಮುತ್ತು ನೀಡಿ
ಒಟ್ಟಿಗೆ ತಂದ ಉಡುಗೊರೆ ಕೊಟ್ಟು
ನನ್ನನ್ನು ರಮಿಸಿದ ಅವಳ ನೆನಾಪಾಗುತ್ತದೆ
ತುಂಬಾ ನೆನಪಾಗುತ್ತದೆ
ಯಾವಗಲು ನೆನಪಾಗುತ್ತದೆ

by ಹರೀಶ್ ಶೆಟ್ಟಿ, ಶಿರ್ವ 

Tuesday, August 26, 2014

ನಾಸ್ತಿಕ

ನಾಸ್ತಿಕನೆಂದು
ಪ್ರಸಿದ್ಧಿ ಪಡೆದ ಮಗ
ಅಮ್ಮ ಆಸ್ಪತ್ರೆಯಲ್ಲಿದ್ದಾಗ
ದೇವಸ್ಥಾನ ಹೋಗಿ
ದೇವರ ಮುಂದೆ ಅತ್ತು
ತನ್ನ ಮೊರೆ ಇಡುತ್ತಿದ್ದ

---

ಗಂಡ ನಾಸ್ತಿಕ
ಹೆಂಡತಿ ದೈವ ಭಕ್ತೆ,
ಪ್ರಸವ ವೇದನೆಯಲ್ಲಿದ್ದ
ಹೆಂಡತಿಯನ್ನು ನೋಡಿ
ತಳಮಳದಲ್ಲಿದ್ದ
ಗಂಡ ಓಡಿ ಹೋಗಿ
ಗಣಪತಿ ವಿಗ್ರಹದ
ಮುಂದೆ ಬೇಡಲಾರಂಭಿಸಿದ

---

ನಾವು ಅಷ್ಟೊಂದು ದೊಡ್ಡ
ದೈವ ಭಕ್ತರಲ್ಲ ಎಂದು
ಹೇಳುತ್ತಿದ್ದ ಕುಟುಂಬ
ಅವರಿಗೆ
ಸಂಕಟ ಒದಗಿದಾಗ
ನೆರೆಯ ದೈವ ಭಕ್ತ
ಕುಟುಂಬದವರ
ಒಟ್ಟಿಗೆ ಹೋಗಿ
ಧರ್ಮ ಸ್ಥಾನಗಳ ದರ್ಶನ
ಮಾಡಿ ಬಂದರು

by ಹರೀಶ್ ಶೆಟ್ಟಿ, ಶಿರ್ವ 

ಆಧುನಿಕತೆ

ಬೆಳಿಗ್ಗೆ ಎದ್ದಾಗ
ಕಂಡ ಕನಸನ್ನು ನೆನಪಿಸಿದೆ
ಸ್ವಲ್ಪ ಸ್ವಲ್ಪ ನೆನಪಾಯಿತು
ದೂಳು ತುಂಬಿದ ಪುಸ್ತಕಗಳು
ಹಾರುವ ಹಾಳೆಗಳು
ಮುರಿದ ಪೆನ್ನುಗಳು
ನಗುವ ಕಂಪ್ಯೂಟರ್

---
ಕಪಾಟು ತೆರೆದೇ
ಹಳೆ ಪತ್ರಗಳ ಗಂಟು ಬಿತ್ತು
ಸಂಬಂಧಗಳ ಕಟ್ಟು
ಅದೆಷ್ಟೋ ನೆನಪುಗಳು
ಜೋಪಾನವಾಗಿ ಇಟ್ಟೆ,
ಇದ್ದಕಿದ್ದಂತೆ ಮೊಬೈಲ್ ರಿಂಗಾಯಿಸಿತು
ಮಾತಾಯಿತು
ಮರೆತು ಸಹ ಹೋಯಿತು

---
ಫ್ರಿಜ್ ತೆರೆದೇ
ನೀರು ಕುಡಿಯಲೆಂದು,
ಅದರೊಳಗೆ ಮಾವಿನ ಹಣ್ಣುಗಳು
ಎಷ್ಟೋ ದಿನದಿಂದ ಬಿದ್ದಿತ್ತು
ನೆನಪಾಯಿತು
ಊರಿನ ಹಳೆ ಮಾವಿನ ಮರ
ಓಡಾಡುವ ಇಣಚಿ
ಅದು ತಿಂದ ಕೆಲವು ಅರ್ಧ ಹಣ್ಣುಗಳು
ಆ ಅರ್ಧ ಹಣ್ಣಿನ ರುಚಿ

---
ಮನೆಯಲ್ಲಿ
ಅದೆಷ್ಟೋ ಹೊಸ ಹೊಸ
ಕೈ ಗಡಿಯಾರ
ಆದರೆ ಸರಿಯಾದ ಸಮಯ
ನೋಡಬೇಕಾದರೆ
ಗಮನ ಮನೆಯ
ಆ ಹಳೆ ಗಡಿಯಾರದ ಮೇಲೆ

---
ಈಗ ರೇಡಿಯೋ ಅಂದರೆ
ಮೊಬೈಲಲ್ಲಿ
ಅದೆಷ್ಟೋ ಚಾನೆಲ್,
ಆದರೆ ನೆನಪಾಗುತ್ತದೆ
ಅಜ್ಜನ ಆ ಹಳೆ ರೇಡಿಯೋ ಮತ್ತು
ಸಂಜೆ ಬರುವ ಅವರ ಮೆಚ್ಚಿನ
ಆಟದ (ಯಕ್ಷಗಾನ)  ಕಾರ್ಯಕ್ರಮ ಹಾಗು
ಅದನ್ನು ಕೇಳಿ
ಮುಖದಲಿ ಅರಳುವ ಅವರ ನಗು

by ಹರೀಶ್ ಶೆಟ್ಟಿ, ಶಿರ್ವ



Monday, August 25, 2014

ನೋಡು ನಿನ್ನ ಜಗತ್ತಿನ

ನೋಡು ನಿನ್ನ ಜಗತ್ತಿನ
ಅವಸ್ಥೆ ಏನಾಗಿದೆ ದೇವ
ಎಷ್ಟು ಬದಲಾಗಿದ್ದಾನೆ ಮಾನವ
ಸೂರ್ಯ ಬದಲಾಗಲಿಲ್ಲ
ಚಂದ್ರ ಬದಲಾಗಲಿಲ್ಲ
ಬದಲಾಗಲಿಲ್ಲ ಅಂಬರ
ಎಷ್ಟು ಬದಲಾಗಿದ್ದಾನೆ ಮಾನವ

ಬಂದಿದೆ ಸಮಯ ತುಂಬಾ ವಿಕೃತ
ಇಂದು ಮಾನವನಾಗಿದ್ದಾನೆ ಧೂರ್ತ
ಎಲ್ಲೋ ಜಗಳ ಎಲ್ಲೋ ದಂಗೆ
ನಲಿಯುತ್ತಿದ್ದಾನೆ ನರ ಆಗಿ ನಗ್ನ
ಮೋಸ ಕಪಟದ ಕೈಯಿಂದ
ಮಾರುತ್ತಿದ್ದಾನೆ ತನ್ನ ಗೌರವ
ಎಷ್ಟು ಬದಲಾಗಿದ್ದಾನೆ ಮಾನವ...

ರಾಮನ ಭಕ್ತರು
ರಹಿಮನ ಹಿಂಬಾಲಕರು
ಧರಿಸುತ್ತಿದ್ದಾರೆ ಇಂದು
ವಂಚನೆಯ ಜಾಲರು
ಎಷ್ಟು ಇವರು ಕುತಂತ್ರಿ ಗುಂಪು ಅಂಧರ
ನೋಡಿದ್ದೇನೆ ಇವರದ್ದು ವ್ಯಾಪಾರ
ಇವರದ್ದೆ ದುಷ್ಟ ಕಾರ್ಯದಿಂದ
ದೇಶ ಕಳೆದುಕೊಂಡಿದೆ ತನ್ನ ಮೌಲ್ಯವ
ಎಷ್ಟು ಬದಲಾಗಿದ್ದಾನೆ ಮಾನವ...

ನಾವು ಪರಸ್ಪರ ಜಗಳ
ಮಾಡದಿರುತ್ತಿದ್ದರೆ
ಯಾಕೆ ಈ ಸುಂದರ
ನಾಡು ಮುರಿಯುತ್ತಿತ್ತು
ಯಾಕೆ ಈ ಲಕ್ಷಗಟ್ಟಲೆ
ಮನೆ ನಾಶವಾಗುತ್ತಿತ್ತು
ಯಾಕೆ ತಾಯಿಯ ಮಮತೆ
ಮಕ್ಕಳಿಂದ ಕಸಿಯುತ್ತಿತ್ತು
ಯಾಕೆ ರೋಧಿಸುತ್ತಿರುತ್ತಿತ್ತು
ಪ್ರೀತಿಯ ಬಾಪು ಗಾಂಧಿಯ ಆತ್ಮವ
ಎಷ್ಟು ಬದಲಾಗಿದ್ದಾನೆ ಮಾನವ...

ಮೂಲ/ಹಾಡಿದವರು : ಕವಿ ಪ್ರದೀಪ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಸಂಗೀತ : ಸಿ. ರಾಮಚಂದ್ರ
ಚಿತ್ರ: ನಾಸ್ತಿಕ್

Dekh tere sansar ki haalat kya ho gayi bhagwaan
Dekh tere sansar ki haalat kya ho gayi bhagwaan
kitna badal gaya insaan kitna badal gaya insaan
sooraj na badlaa chaand na badlaa naa badlaa re aasmaan
kitnaa badal gayaa insaan kitnaa badal gayaa insaan

aayaa samay badaa bedhangaa
aaj aadmi banaa lafangaa
kahin pe jhagdaa kahin pe dangaa
naach rahaa nar ho kar nangaa
chhal aur kapat ke haathon apnaa
bech rahaa imaan,
kitna badal gaya insaan kitna badal gaya insaan
Dekh tere sansar ki haalat kya ho gayi bhagwaan
kitna badal gaya insaan kitna badal gaya insaan

raam ke bhakt rahim ke bande
rachte aaj fareb ke phande
raam ke bhakt rahim ke bande
rachte aaj fareb ke phande
kitne ye makkar ye andhe
dekh liye inke bhi dhandhe
inhin ki kaali kartooton se
huya ye mulk mashaan,
kitna badal gaya insaan kitna badal gaya insaan
Dekh tere sansar ki haalat kya ho gayi bhagwaan
kitna badal gaya insaan kitna badal gaya insaan

jo ham aapas mein na jhagadte
bane huye kyun khel bigadte
kaahe laakhon ghar ye ujadte
kyun ye bachche maan se bichhadte
phoot-phoot kar kyun rote
pyaare baapu ke praan,
kitna badal gaya insaan kitna badal gaya insaan
Dekh tere sansar ki haalat kya ho gayi bhagwaan
kitna badal gaya insaan kitna badal gaya insaan
http://www.youtube.com/watch?v=-KYJvunDW98

ಆಸಕ್ತಿ ಇಲ್ಲ ಗೆಳತಿ

ಆಸಕ್ತಿ ಇಲ್ಲ ಗೆಳತಿ ಈಗ 
ನಿನ್ನ ಸುಂದರತೆಯ ಹೊಗಳಲು
ನಿನ್ನ ಅಂದವನ್ನು ಬಣ್ಣಿಸಲು 
ನಿನ್ನ ಮೋಹಕ ರೂಪವನ್ನು ವಿವರಿಸಲು 
ಅದೆಲ್ಲ ಪುನಃ ಕವಿತೆಯಾಗಬಹುದು 
ಆ ಕವಿತೆಯ ಬಗ್ಗೆ ಪುನಃ 
ಚರ್ಚೆಯಾಗಬಹುದು 

by ಹರೀಶ್ ಶೆಟ್ಟಿ,ಶಿರ್ವ

Saturday, August 23, 2014

ಸಂಸಾರದಿಂದ ಓಡೋಡಿ ತಿರುಗುತ್ತಿರುವೆ

!!ಸಂಸಾರದಿಂದ ಓಡೋಡಿ ತಿರುಗುತ್ತಿರುವೆ
ದೇವರನ್ನು ನೀನೇನು ಪಡೆಯುವೆ
ಈ ಲೋಕವನ್ನೂ ಸ್ವೀಕರಿಸದವನು
ಆ ಲೋಕದಲ್ಲೂ ದುಃಖಿಸುವೆ!!
ಸಂಸಾರದಿಂದ......

!!ಈ ಪಾಪ ಏನು
ಈ ಪುಣ್ಯ ಏನು
ರೂಢಿಗಳ ಮೇಲೆ
ಧರ್ಮದ ಚಿಹ್ನೆಗಳು ಅಷ್ಟೇ
ಪ್ರತಿ ಯುಗದಲಿ ಬದಲಾಗುವ ಧರ್ಮಗಳನ್ನು
ಹೇಗೆ ತಾನೇ ಆದರ್ಶ ಮಾಡುವೆ!!
ಸಂಸಾರದಿಂದ....

!!ಈ ಭೋಗ ಸಹ
ಒಂದು ತಪಸ್ಸು
ನಿನ್ನಂತಹ ತ್ಯಜಿಸಿ ಹೋದವನಿಗೆ
ಹೇಗೆ ತಾನೇ ತಿಳಿಯುವುದು
ರಚಿಸಿದವನ ಅವಮಾನವಾಗಬಹುದು
ರಚನೆಯನ್ನು ಒಂದು ವೇಳೆ ಹೀಗೆ ತಿರಸ್ಕರಿಸಿದರೆ!!
ಸಂಸಾರದಿಂದ....

!!ನಾವು ಹೇಳುವುದು
ಈ ಜಗ ನಮ್ಮದೆಂದು
ನೀನು ಹೇಳುವೆ
ಅದು ಸುಳ್ಳು ಕನಸೆಂದು
ನಾವು ಜನ್ಮವನ್ನು ಸಾರ್ಥಕಗೊಳಿಸಿ ಹೋಗುವೆವು
ನೀನು ಜನ್ಮ ನಷ್ಟಗೊಳಿಸಿ ಹೋಗುವೆ!!
ಸಂಸಾರದಿಂದ....

ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ರೋಶನ್
ಚಿತ್ರ : ಚಿತ್ರಲೇಖ

संसारसे भागे फिरते हो, भगवान को तुम क्या पाओगे
इस लोक को भी अपना ना सके, उस लोक में भी पछताओगे

ये पाप हैं क्या, ये पुण्य हैं क्या, रीतोंपर धर्म की मुहरे हैं
हर युग में बदलते धर्मोंको कैसे आदर्श बनाओगे

ये भोग भी एक तपस्या हैं, तुम त्याग के मारे क्या जानो
अपमान रचेता का होगा, रचना को अगर ठुकराओगे

हम कहते हैं ये जग अपना हैं, तुम कहते हो झूठा सपना हैं
हम जनम बीताकर जाएंगे, तुम जनम गवाकर जाओगे
http://www.youtube.com/watch?v=pueoTXV6FLY

ವಿಶ್ವಾಸ

ಸಂದಿಗ್ಧ ಮನಸ್ಸಲ್ಲಿ 
ಹುಟ್ಟಿದ ವಿಚಾರಗಳಲ್ಲಿ 
ವಿಶ್ವಾಸದ ಕೊರತೆ 

ಅದು ಎಣ್ಣೆ ಬತ್ತಿ ಇದ್ದು 
ಉರಿಯದ ಹಣತೆ 

by ಹರೀಶ್ ಶೆಟ್ಟಿ, ಶಿರ್ವ

---

ದೂರ ಇದ್ದು 
ವಿಶ್ವಾಸ ಉಳಿಸಿ 
ಸಂಬಂಧವನ್ನು ಕಾಪಾಡಿದರೆ ಭಲೇ 

ಬಳಿ ಇದ್ದು 
ವಿಶ್ವಾಸ ಬೆಳೆಸಿ 
ಸಂಬಂಧವನ್ನು ಇನ್ನು ಸದೃಡಗೊಳಿಸಿದರೆ ಇನ್ನೂ ಭಲೇ 

ಆದರೆ ವಿಶ್ವಾಸ ಇಟ್ಟವರಿಗೆ
ಆಸೆ ನೀಡಿ
ಭಾಷೆ ಕೊಟ್ಟು
ಮರೆತು ಹೋದರೆ
ಅದು ವಿಶ್ವಾಸದ ಕೊಲೆ

by ಹರೀಶ್ ಶೆಟ್ಟಿ, ಶಿರ್ವ

Thursday, August 21, 2014

ಚಡಪಡಿಕೆ ಈ ದಿನ ರಾತ್ರಿಯ

!!ಚಡಪಡಿಕೆ ಈ ದಿನ ರಾತ್ರಿಯ
ಈ ನೋವು ವಿನಃ ವಿಷಯ
ಈ  ರೋಗ ಆದರೂ ಯಾವುದು
ಒಲವೇ ಈಗಾದರೂ ಹೇಳು!!
ಈಗಾದರೂ ಹೇಳು
ಹೇಳು....

!!ವಿನಾಃ ಕಾರಣ ಈ ಬೇಸರ ಯಾಕೆ
ಇದ್ದಕ್ಕಿದ್ದಂತೆ ಉದ್ಭವಿಸುತ್ತದೆ
ಆಯಾಸಗೊಳಿಸುತ್ತದೆ ಯಾಕೆ ನನ್ನನ್ನು
ಯಾಕೆ ಈ ದೇಹ ಮುರಿದಂತಾಗುತ್ತದೆ
ಯಾಕೆ ಈ ದೇಹ ಮುರಿದಂತಾಗುತ್ತದೆ!!
ಚಡಪಡಿಕೆ ಈ...

!!ಅದೆಂತಹ ಬಂಧನ
ಅಂದರೆ ನೀನು ನನ್ನ ಸನಿಹ ಬರುವುದಿಲ್ಲ
ಈ ಮೋಡ ವಿವಶತೆಯ
ಯಾಕೆ ಸುರಿದು ದೂರ ಹೋಗುವುದಿಲ್ಲ
ಯಾಕೆ ಸುರಿದು ದೂರ ಹೋಗುವುದಿಲ್ಲ!!
ಚಡಪಡಿಕೆ ಈ...

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅಮ್ರಪಾಲಿ

tadap yeh din raat ki, kasak yeh bin baat ki
bhala yeh rog hai kaisa, sajan abb toh bata de
abb toh bata de, bata de
abb toh bata de, bata de
tadap yeh din raat ki , kasak yeh bin baat ki
bhala yeh rog hai kaisa, sajan abb toh bata de

bina kaaran udaasi kyun achaanak ghir ke aati hai
thaka jaati hai kyun mujhko, badan kyun tod jaati hai
badan kyun tod jaati hai
tadap yeh din raat ki, kasak yeh bin baat ki
bhala yeh rog hai kaisa, sajan abb toh bata de
abb toh bata de, bata de
tadap yeh din raat ki

hai aakhir kaun se bandhan jo mujhase khul nahi paate
yeh baadal bebasi ke kyun baras kar dhul nahi jaate
baras kar dhul nahi jaate
tadap yeh din raat ki, kasak yeh bin baat ki
bhala yeh rog hai kaisa, sajan abb toh bata de
abb toh bata de, bata de
tadap yeh din raat ki, kasak yeh bin baat ki
bhala yeh rog hai kaisa, sajan abb toh bata de
abb toh bata de, bata de
tadap yeh din raat ki

http://www.youtube.com/watch?v=d_oRnqUxM5I

ಹೋಗು ನೀ ಜೋಗಿ

!!ಹೋಗು ನೀ 
ಜೋಗಿ, ಹೋಗು ನೀ 
ಇದು ಪ್ರೇಮಿಗಳ ನಗರ 
ಇಲ್ಲಿ ಪ್ರೇಮವೇ ಪೂಜೆ!! 
ಹೋಗು ನೀ 
ಜೋಗಿ , ಹೋಗು ನೀ 

!!ಪ್ರೇಮದ ಪೀಡೆಯಲ್ಲಿಯೇ
ನಿಜವಾದ ಸುಖವಿದೆ
ಪ್ರೇಮ ಇಲ್ಲದಿದ್ದರೆ 
ಈ ಜೀವನದಲಿ ದುಃಖವಿದೆ!!
ಹೋಗು ನೀ
ಜೋಗಿ , ಹೋಗು ನೀ

!!ಜೀವನದಿಂದ ಬಿಡುಗಡೆ
ಯಾವ ರೀತಿಯ
ಇದೆ ಕಿನಾರೆ
ಜೊತೆ ನದಿಯ!!
ಹೋಗು ನೀ
ಜೋಗಿ , ಹೋಗು ನೀ

!!ಜ್ಞಾನದ ಸೀಮೆ
ಯಾವ ರೀತಿಯ ಜ್ಞಾನಿಯೇ
ಅದು ಕೊಡದಲಿ
ಸಾಗರದ ನೀರಿದ್ದ ಹಾಗೆಯೇ!!
ಹೋಗು ನೀ
ಜೋಗಿ , ಹೋಗು ನೀ

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅಮ್ರಪಾಲಿ

जाओ रे जोगी तुम जाओ रे
ये है प्रेमिओं की नगरी, यहा प्रेम ही है पूजा

प्रेम की पीडा सच्चा सुख है
प्रेम बिना ये जीवन दुःख है, जाओ रे ...

जीवनसे कैसा छुटकारा
है नदिया के साथ किनारा, जाओ रे ...

ज्ञान की कैसी सीमा ज्ञानी
गागर में सागर का पानी, जाओ रे ...

http://www.youtube.com/watch?v=9e6rmVfDifo

ಅದೊಂದು

ನಿನ್ನ ಮನಸ್ಸಿನ ಸೌಮ್ಯತೆಯ
ಅರಿವಿದೆ ನನಗೆ
ಮುಂಗೋಪಿ ಆದರೂ
ನಿನ್ನ ಹೃದಯ ವೈಶಾಲ್ಯತೆಯ
ಬಗ್ಗೆಯೂ ಗೊತ್ತಿದೆ ನನಗೆ
ನನ್ನ ನೋವಿನಿಂದ
ನಿನಗೂ ವೇದನೆಯಾಗುತ್ತದೆಯೆಂದೂ
ತಿಳಿದಿದೆ ನನಗೆ
ಆದರೆ ಸ್ವಲ್ಪ "ಅದೊಂದು"
ನಿನ್ನಲ್ಲಿಯೂ ಇದೆ
ನನ್ನಲ್ಲಿಯೂ ಇದೆ
ಕೆಲವೊಮ್ಮೆ "ಅದನ್ನು" ಮುಂದೆ ಬಂದು ನೀನು ತೊರೆಯುವೆ
ಕೆಲವೊಮ್ಮೆ "ಅದನ್ನು" ಮುಂದೆ ಬಂದು ನಾನು ತೊರೆಯುವೆ
by ಹರೀಶ್ ಶೆಟ್ಟಿ, ಶಿರ್ವ

Wednesday, August 20, 2014

ಹೃದಯದ ಮಾತನ್ನೂ ಕೇಳು

!!ಹೃದಯದ ಮಾತನ್ನೂ ಕೇಳು
ಕಲ್ಪಿತ ಕತೆಗಳ ಬಲೆಗೆ ಬೀಳದಿರು
ನನ್ನ ಕಣ್ಣ ಕಡೆ ನೋಡು
ಜಗದವರ ಕೇಳದಿರು!!

!!ಒಂದು ದೃಷ್ಟಿ ನೋಡಿ ಬಿಡು
ಬದುಕುವ ಅನುಮತಿ ನೀಡು
ಮುನಿಸಿಕೊಂಡವಳೇ
ಆ ಮೊದಲಂತಹ ಪ್ರೀತಿ ನೀಡು
ಒಲವು ಮುಗ್ಧವಾಗಿದೆ
ಆರೋಪಣೆಯನ್ನು ಗಮನಿಸದಿರು!!
ನನ್ನ ಕಣ್ಣ ಕಡೆ ನೋಡು
ಜಗದವರ ಕೇಳದಿರು

!!ಮನುಷ್ಯನ ಮೇಲೆ ಕೆಲವೊಮ್ಮೆ
ಇಂತಹ ಸಮಯವೂ ಬರುತ್ತದೆ
ಹಾದಿಯಲಿ ಕೆಲವೊಮ್ಮೆ
ನೆರಳು ಸಹ ಬಿಟ್ಟು ಹೋಗುತ್ತದೆ
ಹಗಲ ಸೂರ್ಯ ಉದಯಿಸುವುದು
ರಾತ್ರಿಯ ಅಂಧಕಾರಕ್ಕೆ ಹೆದರದಿರು!!
ನನ್ನ ಕಣ್ಣ ಕಡೆ ನೋಡು
ಜಗದವರ ಕೇಳದಿರು

!!ನನ್ನ ವಾಸ್ತವಿಕತೆಯನ್ನು
ಒಂದು ದಿನ ತೋರಿಸುವೆ ನಿನಗೆ
ನಿರಪರಾಧಿಯೆಂದು ಸಾಭಿತು ಮಾಡಿ
ಪ್ರೀತಿಯ ಕಣ್ಣೀರ ಹರಿಸುವೆ ನಿನಗೆ
ಕಳಂಕ ಹೃದಯದ ಅಳಿಸಲಾಗದು
ನಾಶಗೊಳಿಸುವ ಗೋಷ್ಠಿಗೆ ಹೋಗದಿರು!!
ನನ್ನ ಕಣ್ಣ ಕಡೆ ನೋಡು
ಜಗದವರ ಕೇಳದಿರು


ಮೂಲ : ಶೆವಾನ್ ರಿಜ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಓ . ಪಿ. ನಯ್ಯರ್
ಚಿತ್ರ : ಹಂಸಾಯ

दिल की आवाज़ भी सुन
मेरे फ़साने पे न जा
मेरी नज़रों की तरफ़ देख
ज़माने पे न जा

इक नज़र फ़ेर ले जीने की इजाज़त दे दे
रूठने वाले वो पहली सी मुहब्बत दे दे
इश्क़ मासूम है
इलज़ाम लगाने पे न जा
मेरी नज़रों की...

वक़्त इनसान पे ऐसा भी कभी आता है
राह में छोड़ के साया भी चला जाता है
दिन भी निकलेगा कभी
रात के आने पे न जा
मेरी नज़रों की...

मैं हक़ीक़त हूँ ये इक रोज़ दिखाऊँगा तुझे
बेगुनाही पे मुहब्बत की रुलाऊँगा तुझे
दाग दिल के नहीं मिटते हैं
मिटाने पे न जा
मेरी नज़रों की...
http://www.youtube.com/watch?v=47uOmFWDCZU

Tuesday, August 19, 2014

ನಿನ್ನನ್ನು ನೆನಪು ಮಾಡಿ ಮಾಡಿ

ನಿನ್ನನ್ನು ನೆನೆದು ನೆನೆದು
ಸರಿದು ಹೋಗುತ್ತಿದೆ ಸಮಯ ವ್ಯರ್ಥದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ಮನಸ್ಸೋಗಿ ನೆಲೆಸಿದೆ
ಒಂದು ಅಪರಿಚಿತ ನಗರದಲಿ
ಏನೋ ಹುಡುಕುತ್ತಿದೆ ಮರುಳು
ಕಳೆದೋದ ರಸ್ತೆಯಲಿ
ಇಷ್ಟು ದೊಡ್ಡ ಮಹಲಲಿ
ನಾನಿದ್ದೇನೆ ಭಯದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ವಿರಹದ ಈ ಚಿತೆಯಿಂದ
ನೀನೆ ತೆಗೆ ನನ್ನನ್ನು
ನಿನಗೆ ಬರಲಾಗದಿದ್ದರೆ
ಕರೆ ನನ್ನನ್ನು ಸ್ವಪ್ನದಲಿ
ನನ್ನನ್ನು ಹೀಗೆ ಉರಿಸದಿರು
ನನ್ನ ಪ್ರೀತಿಯಿದೆ ಯೌವನದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅಮ್ರಪಾಲಿ

तुम्हें याद करते करते, जायेगी रैन सारी
तुम ले गये हो अपने संग नींद भी हमारी

मन हैं के जा बसा हैं, अन्जान एक नगर में
कुछ खोजता हैं पागल खोयी हुयी डगर में
इतने बड़े महल में, घबराऊ मैं बेचारी
तुम ले गये हो अपने संग नींद भी हमारी

बिरहा की इस चीता से, तुम ही मुझे निकालो
जो तुम ना आ सको तो, मुझे स्वप्न में बुला लो
मुझे ऐसे मत जलाओ, मेरी प्रीत हैं कुंवारी
तुम ले गये हो अपने संग नींद भी हमारी
http://www.youtube.com/watch?v=oMZ08gU9hfY

Monday, August 18, 2014

ಬರುವ ಕ್ಷಣ ಹೋಗಲಿದೆ

ಇಂದು ಗುಲ್ಜಾರ್ ಸಾಬ್ ಅವರ ಜನ್ಮ ದಿವಸ. ಗುಲ್ಜಾರ್, 1936 ರ ಆಗಸ್ಟ್ 18 ರಂದು ಜನಿಸಿದರು. ಅವರ ನಿಜ ಹೆಸರು ಸಂಪೂರ್ಣ್ ಸಿಂಗ್ ಕಾಲ್ರ ಎಂದು.

ನನ್ನ ತುಂಬಾ ಇಷ್ಟದ ಅವರ ಒಂದು ಹಿಂದಿ ಹಾಡು ಕನ್ನಡದಲಿ ನಿಮಗಾಗಿ.


ಬರುವ ಕ್ಷಣ ಹೋಗಲಿದೆ
ಬರುವ ಕ್ಷಣ ಹೋಗಲಿದೆ
ಸಾಧ್ಯವಾದರೆ ಇದರಲಿ
ಜೀವನ ಕಳೆಯಿರಿ
ಕ್ಷಣ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಒಂದು ಸಲ ಹೀಗೆ ಸಿಕ್ಕಿತು
ಮುದ್ದು ನಾಜೂಕು ಮೊಗ್ಗೊಂದು
ಅರಳುತ ನುಡಿಯಿತು
ನಾನು ಸಂತೋಷದಲ್ಲಿದ್ದೇನೆಯೆಂದು
ನೋಡಿದರೆ ಅಲ್ಲೇ ಇದೆ
ಹುಡುಕಿದರೆ ಅಲ್ಲಿಲ್ಲ
ಕ್ಷಣ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಒಂದು ಸಲ ಸಮಯದಿಂದ
ಕ್ಷಣ ಎಲ್ಲೋ ಬಿದ್ದೋಯಿತು
ಅಲ್ಲಿ ಕಥೆ ಸಿಕ್ಕಿತು
ಕ್ಷಣ ಎಲ್ಲೂ ಇಲ್ಲ
ಸ್ವಲ್ಪ ನಗು ನೀಡಿ
ಸ್ವಲ್ಪ ಅಳಲು ನೀಡಿ
ಸಮಯ ಇದು ಹೋಗಲಿದೆ
ಓ ಹೊ...
ಬರುವ ಕ್ಷಣ ಹೋಗಲಿದೆ...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ . ಡಿ. ಬರ್ಮನ್
ಚಿತ್ರ : ಗೋಲ್ ಮಾಲ್

o ho....
aanewala pal jaanewala hai
aanewala pal jaanewala hai
ho sake to is me zindagi bitado
pal jo ye jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai

ek baar yu mili masoom si kali
ek baar yu mili masoom si kali
ho khilte hue kaha kush pash mai chali
dekha to yahi hai dhundha to nahin hai
pal jo ye jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai

ek baar waqt se lamha gira kahi
ek baar waqt se lamha gira kahi
waha dastan mili lamha kahi nahi
thoda sa hasa ke thoda sa rula ke
pal ye bhi jaanewala hai
o ho
aanewala pal jaanewala hai
ho sake to is me zindagi bitado
pal jo ye jaanewala hai
o ho
aanewala pal jaanewala hai
aanewala pal jaanewala hai
http://www.youtube.com/watch?v=AFRAFHtU-PE

ಅಲ್ಲಿ ಇಲ್ಲಿ ಎಲ್ಲ ಕಡೆ ಗದ್ದಲ

ಅಲ್ಲಿ ಇಲ್ಲಿ ಎಲ್ಲ ಕಡೆ ಗದ್ದಲ
ಇದೇ ಗದ್ದಲ
ಬಂದ ಗೋಕುಲದ ರಾಜ
ಬಿಡಿ ನೀವು ಹಾದಿಗಳ

ನೋಡಿ ನೋಡಿ
ಎಲ್ಲೋ ಹೀಗೆ ಆಗದಿರಲಿ
ಬೆಣ್ಣೆ ಕದ್ದವನು
ಹೃದಯ ಕದಿಯದಿರಲಿ

ಬೇಡ ಬೇಡ ಹೆಣ್ಣೆ
ನೀನಿಗೆ ಹೇಳದಿರು ಹೆಣ್ಣೆ
ಎಸೆಯುವನು ಅವನು ರಂಗು ನೀರು
ಮುಚ್ಚಿ ನೀವು ನಿಮ್ಮ ಕಣ್ಣುಗಳ
ಅಲ್ಲಿ ಇಲ್ಲಿ.....

ನೋಡಿ ನೋಡಿ
ಅಲ್ಲಿ ಎತ್ತರದಲ್ಲಿದೆ ಮೊಸರು ಮಡಿಕೆ
ನಮ್ಮನ್ನು ಪುಸಲಾಯಿಸಿ
ಮುರಿದೋಗುವನು ಅವನು ಮಡಿಕೆ

ಬರಲಿ ಬರಲಿ ಅವನು
ಮುರಿಯಲಿ ಮಡಿಕೆಯನ್ನು
ತೋರಿಸದಿರಿ ನಿಮ್ಮ
ಹುಸಿ ಕೋಪಗಳ
ಅಲ್ಲಿ ಇಲ್ಲಿ.....

by ಹರೀಶ್ ಶೆಟ್ಟಿ, ಶಿರ್ವ 

Sunday, August 17, 2014

ಕೈ ಬಿಟ್ಟೋದರೂ

ಕೈ ಬಿಟ್ಟೋದರೂ
ಸಂಬಂಧವನ್ನು ಬಿಡಬಾರದು
ಸಮಯದ ಶಾಖೆಯಿಂದ
ಕ್ಷಣಗಳನ್ನು ಕಿತ್ತುಕೊಳ್ಳಬಾರದು
ಕೈ ಬಿಟ್ಟೋದರೂ...

ಯಾರ ಸ್ವರದಲಿ ಬಿರುಕು
ದೃಷ್ಟಿಯಲಿ ಸುಕ್ಕಿದೆಯೋ
ಅಂತಹ ಚಿತ್ರಗಳ
ತುಂಡನ್ನು ಜೋಡಿಸಬಾರದು

ಜೇನು ಬದುಕಿನ ಸಿಗುತ್ತದೆ
ಸ್ವಲ್ಪ ಸ್ವಲ್ಪವೇ
ತೆರಳುವವರ ಗೋಸ್ಕರ
ಹೃದಯ ಮುರಿದುಕೊಳ್ಳಬಾರದು

ತೀರದಲ್ಲಿದ್ದು ಹರಿಯುತ್ತದೆ ಎಂದಾದರೆ
ಅದನ್ನು ಹರಿಯ ಬಿಡು
ಅಂತಹ ಸಾಗರದ ಎಂದೂ
ದಿಕ್ಕನ್ನು ತಿರುಗಿಸಬಾರದು

ಕೈ ಬಿಟ್ಟೋದರೂ
ಸಂಬಂಧವನ್ನು ಬಿಡಬಾರದು
ಸಮಯದ ಶಾಖೆಯಿಂದ
ಕ್ಷಣಗಳನ್ನು ಕಿತ್ತುಕೊಳ್ಳಬಾರದು

ಮೂಲ ರಚನೆ : ???
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಜಗಜಿತ್ ಸಿಂಗ್


 Haath chhute bhi toh rishte nahi chhoda karate - (2)
 Waqt ki shaakh se lamhe nahi toda karate
 Haath chhute bhi toh rishte nahi chhoda karate

 Jisaki aawaaz mein silwat ho nigaahon mein shikan - (2)
 Aisi tasweer ke tukade nahi joda karate - (2)

 Shehad jine ka mila karata hai thoda thoda - (2)
 Jaanewaalon ke liye dil nahi thoda karate - (2)

 Lagake saahil se jo behata hai, use behane do - (2)
 Aise dariyaan ka kabhi rukh nahi moda karate - (2)
 Waqt ki shaakh se lamhe nahi toda karate
 Haath chhute bhi toh rishte nahi chhoda karate
http://www.youtube.com/watch?v=8Pozanj_RSU

ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗದೊಳು ಇಟ್ಟ ಪಾದ ಮುಕುಂದ
ಮೂರು ಲೋಕದಲಿ ಹರುಷವ ತಂದ
ಜಗ ಕೃಷ್ಣಮಯ ಇಂದು

ಕೊಳಲ ಉದುತಾ
ಧರೆಯನು ಒಲಿಸುತ
ನವ ಚೈತನ್ಯ ತಂದ
ಜಗ ಕೃಷ್ಣಮಯ ಇಂದು

ತಾಯಿಯ ಮಮತೆ ಅಳುತ್ತಿತ್ತು
ತಂದೆಯ ವಾತ್ಸಲ್ಯ ಭಯದಲ್ಲಿತ್ತು
ಆದರೆ ನಗುತ್ತಿದ್ದ ವಾಸುದೇವ ದೇವಕಿಯ ಕಂದ
ಜಗ ಕೃಷ್ಣಮಯ ಇಂದು

ಧನ್ಯ ಯಶೋದೆ
ಧನ್ಯ ಧರತಿ
ಧನ್ಯ ಗೋಕುಲ ನಂದ
ಜಗ ಕೃಷ್ಣಮಯ ಇಂದು

ಹಸುಗಳ ಮೂಲೆಗಳಲ್ಲಿ ಹಾಲು ತುಂಬಿತು
ಕರುಗಳ ಮುಖದಲಿ ಹರ್ಷ ಹರಿಯಿತು
ಹಬ್ಬಿತು ಗೋಪ ಗೋಪಿಯರ ಮುಖದಲಿ ಆನಂದ
ಜಗ ಕೃಷ್ಣಮಯ ಇಂದು

ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು
ಜಗ ಕೃಷ್ಣಮಯ ಇಂದು

by ಹರೀಶ್ ಶೆಟ್ಟಿ, ಶಿರ್ವ

Saturday, August 16, 2014

ಅಮ್ಮ ನನ್ನ ನಾನು ಬೆಣ್ಣೆ ತಿಂದಿಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಮುಂಜಾವ ನಾನು ಮಧುಬನದಲಿ
ಹಸುಗಳನ್ನು ಮೇಯಿಸಿ ಬಂದೆ
ತದನಂತರ ನಾನು ಕೊಳಲನ್ನು
ಊದುತಾ ಹಾಡುತಾ ಅಲ್ಲಿಲ್ಲಿ ಅಲೆದೆ
ಸಂಜೆಯಾದಂತೆ ಮನೆಗೆ ಬಂದೆ

ಅಮ್ಮ
ನಾನ್ಯಾವಾಗ ಬೆಣ್ಣೆ  ತಿಂದೆ?

ನಾನು ಬಾಲಕ
ತುಂಬಾ ಸಣ್ಣವ
ಬೆಣ್ಣೆ ಭರಣಿ
ತುಂಬಾ ಎತ್ತರ
ಹೇಗೆ ತಾನೇ
ತಲುಪುವುದು ನನ್ನ ಕೈಗೆ ಅದೆಲ್ಲ?

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ಯಶೋದೆ :
ಹೀಗೆ ನೀನು ಮಾತನ್ನು ತಿರುಗಿಸಿ
ಒಲಿಸುವೆ ಎನ್ನದಿರು ನನ್ನನ್ನು ವಂಚಿಸಿ
ಕಾಣುತ್ತಿದೆ ಈಗಲೂ ಬೆಣ್ಣೆ
ನಿನ್ನ ತುಟಿಯಲಿ ಹಸಿ ಹಸಿ

ಗೋಪ ಗೋಪಿಯರು
ನನ್ನಿಂದ ಪಗೆ ಇಡುವರು
ಬೆಣ್ಣೆ ತುಪ್ಪ ತಿಂದು
ನನ್ನ ಮುಖಕ್ಕೆ ಹಚ್ಚಿ
ಓಡಿ ಹೋಗುವರು ಅವರೆಲ್ಲ

ಅಮ್ಮ ನನ್ನ
ನಾನು ಬೆಣ್ಣೆ ತಿಂದಿಲ್ಲ

ನೀನು ಜನನಿ
ತುಂಬಾ ಮುಗ್ದೆ
ಇತರರ ಮಾತು ಕೇಳಿ
ನನ್ನನ್ನು ತಪ್ಪಿತಸ್ತನೆಂದು ತಿಳಿದೇ
ತೆಗೋ ನಿನ್ನ ಬೆತ್ತ ಕಂಬಳಿ
ತುಂಬಾ ನನ್ನನ್ನು ನೀನು ನಲಿಸಿದೆ
ನಿನ್ನ ಹೃದಯದಲಿ ಭೇದ ಉದ್ಭವಿಸಿದೆ
ಸಾಕು ಮಗ ನಾನು
ನಿನಗೆ ಪ್ರೀತಿ ನನ್ನಲ್ಲಿಲ್ಲ
ನೀನು ಮಲತಾಯಿ
ನನ್ನಮ್ಮ ನೀನಲ್ಲ

ಯಶೋದೆ ನಕ್ಕು
ಮುದ್ದು ಕೃಷ್ಣನನ್ನು ಅಪ್ಪಿಕೊಂಡು
"ಹೌದು ಪುಟ್ಟ ನೀನು ಬೆಣ್ಣೆ ತಿಂದಿಲ್ಲ"

ಅಮ್ಮ ನನ್ನ
ನಾನು ಬೆಣ್ಣೆ ತಿನ್ನಲಿಲ್ಲ

ರಚನೆ : ಸೂರದಾಸ್

ಕನ್ನಡದಲ್ಲಿ : ಹರೀಶ್ ಶೆಟ್ಟಿ,ಶಿರ್ವ



मैया मोरी, मैं नही माखन खायो



भोर भयो गैयन के पाछे, मधुवन मोहि पठायो ।

चार पहर वंशीवट भटक्यो, सांझ परे घर आयो ॥

॥ मैया मोरी ………. १ ॥



मैं बालक बहियन को छोटो, छींको किहि विधि पायो .

ग्वाल-बाल सब बैर परे हैं, बरबस मुख लपटायो ..



॥ मैया मोरी ………. २ ॥



तू जननी मन की अति भोली, इनके कहे पतियायो .

यह ले अपनी लकुटि कम्बलिया, तुने बहुतहि नाच नचायो .

जिय तेते कछु भेद उपजिहै , जानि परायो जायो ..

“सूरदास” तब हँसी यशोदा, लै उर-कंठ लगायो ..

॥ मैया मोरी ……….
http://www.youtube.com/watch?v=5IBbP9CGZu8

Thursday, August 14, 2014

ತನ್ನ ಕೈಯ ಗೆರೆಗಳಲ್ಲಿ

!!ತನ್ನ ಕೈಯ ಗೆರೆಗಳಲ್ಲಿ
ನೆಲೆಸು ನನ್ನನ್ನು
ನಾನು ನಿನ್ನವೆಂದಾದರೆ
ಭಾಗ್ಯ ನಿನ್ನ ಮಾಡು ನನ್ನನ್ನು!!

!!ನನ್ನಲ್ಲಿ ನೀನು ಕೇಳಲು
ಬಂದಿರುವೆ ನಿಷ್ಠೆಯ ಅರ್ಥ
ನಿನ್ನ ಈ ಸರಳತೆ
ಎಲ್ಲೊ ಕೊಲ್ಲದಿರಲಿ ನನ್ನನ್ನು!!

!!ಸ್ವತಃ ನನ್ನನ್ನು ನಾನೆಲ್ಲೋ
ಹಂಚಿ ಬಿಡುವೆ ಅಲ್ಲಿಲ್ಲಿ
ಒಂದು ವೇಳೆ ನೀನು
ನನಗೆ ಒಪ್ಪಿಸಿ ಬಿಟ್ಟರೆ ನಿನ್ನನ್ನು!!

!!ಶರಾಬು ಏನಾದರೂ ಶರಾಬೆ
ನಾನು ವಿಷ ಕುಡಿಯಲು ಸಿದ್ಧ
ಯಾರಾದರೂ ತನ್ನ ಬಾಹುಗಳಲ್ಲಿ
ಬಂಧಿಸಿದರೆ ನನ್ನನ್ನು!!

ಮೂಲ : ಕತೀಲ್ ಶಿಫೈ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಜಗಜಿತ್ ಸಿಂಗ್

अपने हाथों की लकीरों में बसा ले मुझको
मैं हूँ तेरा तो नसीब अपना बना ले मुझको।

मुझसे तू पूछने आया है वफ़ा के माने
ये तेरी सादा-दिली मार ना डाले मुझको।

ख़ुद को मैं बाँट ना डालूँ कहीं दामन-दामन
कर दिया तूने अगर मेरे हवाले मुझको।

बादाह फिर बादाह है मैं ज़हर भी पी जाऊँ ‘क़तील’
शर्त ये है कोई बाहों में सम्भाले मुझको।
http://www.youtube.com/watch?v=6yc7pb1TCpQ

Tuesday, August 12, 2014

ಬದುಕಿರುವೆ ನಾನೀಗೆ ಅಂದರೆ

ಬದುಕಿರುವೆ ನಾನೀಗೆ ಅಂದರೆ 
ದುಃಖ ಜೀವನವೇ ನನ್ನಲ್ಲಿಲ್ಲ
ಉರಿಯುವ ದೀಪಕ ನಾನು
ಆದರೆ ಅದರಲ್ಲಿ ಬೆಳಕೇ ಇಲ್ಲ 
ಬದುಕಿರುವೆ...

ಯಾರಿಂದಲೂ ಅಗಲಿ
ಅದೆಷ್ಟೋ ಸಮಯ ಕಳೆಯಿತು
ಆದರೆ ಹೃದಯದ ಅಗ್ನಿ
ಈ ತನಕ ಆರಲಿಲ್ಲ
ಬದುಕಿರುವೆ...

ಬರಲಿಕ್ಕೆ ಬಂದಿತ್ತು
ಕಿನಾರೆ ಸಹ ಎದುರಿಗೆ
ಆದರೆ ಅದರ ಸನಿಹ
ನನ್ನ ನಾವೆ ಹೋಗಲಿಲ್ಲ
ಬದುಕಿರುವೆ...

ತುಟಿಯಲಿ ಬರಲಿ ನಗು
ಅಷ್ಟು ಧೈರ್ಯ ಎಲ್ಲಿ
ಇದು ವಿಷಯ ಹೃದಯದ
ಯಾವುದೇ ಹಾಸ್ಯವೇನಲ್ಲ
ಬದುಕಿರುವೆ...

ಈ ಚಂದ್ರ ಈ ಗಾಳಿ ಈ ಪರಿಸರ
ಎಲ್ಲವೂ  ಚೆಲುವಾಗಿದೆ
ನೀನಿಲ್ಲವೆಂದರೆ ಇವುಗಳಲ್ಲಿ
ಯಾವುದೇ ಆಕರ್ಷಣೆ ಇಲ್ಲ
ಬದುಕಿರುವೆ...

ಮೂಲ :ಬೆಹಜದ್ ಲಕ್ನವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ರಾಮ್ ಗಾಂಗೂಲಿ
ಚಿತ್ರ :ಆಗ್


zindaa hun is tarah ki gam-e-zindagi nahi
jalataa huaa diyaa hun magar roshani nahi
zindaa hun

do muddate hui hai kisise judaa hue
lekin ye dil ki aag abhi tak bujhi nahi
zindaa hun

aane ko aa chukaa thaa kinaaraa bhi samane
khud usake paas meri hi nayyaa gai nahi
zindaa hun

hotho ke paas aae hansi, kyaa mazaal hai
dil kaa muaamalaa hai koi dillagi nahi
zindaa hun

ye chaand ye havaa ye fizaa, sab hai madmast
jo tu nahi to inase bhi koi dilakashi nahi
zindaa hun
http://www.youtube.com/watch?v=LHnSr82qQ34

Monday, August 11, 2014

ವೀರ ಬರ್ಬರಿಕ


ವೀರ ಬರ್ಬರಿಕ
-------------------
ಭೀಮನ ಮೊಮ್ಮಗ ಹಾಗು ಘಟೋತ್ಕಚನ ಮಗ ಬರ್ಬರಿಕನ ತಾಯಿಯ ಹೆಸರು  ಕಾಮಕಟಂಕಟಿ ಎಂದಿತ್ತು. ಅವರನ್ನು ಮೊರ್ವಿ ಎಂದು ಕರೆಯಲಾಗುತ್ತಿತ್ತು.  ಬರ್ಬರಿಕನನ್ನು ಮೊರ್ವಿನಂದನ್ ಎಂದೂ ಕರೆಯಲಾಗುತ್ತಿತ್ತು. ಅವನು ಯುದ್ಧ ಕಲೆ ತನ್ನ ತಾಯಿಯಿಂದ ಕಲಿತುಕೊಂಡಿದ್ದ. ಕಠಿನ ತಪಸ್ಸು ಮಾಡಿ ಬರ್ಬರಿಕ ದೇವ ಶಿವನನ್ನು ಒಲಿಸಿ ಅವರಿಂದ ಮೂರು ಅಮೋಘ ಬಾಣ ಪಡೆದಿದ್ದ, ಈ ಕಾರಣ ಅವನನ್ನು ಮೂರು ಬಾಣಧಾರಿ ಎಂದೂ ಕರೆಯಲಾಗುತ್ತಿತ್ತು. ಅಗ್ನಿ ದೇವರು ಪ್ರಸನ್ನವಾಗಿ ಅವನಿಗೆ ಬಿಲ್ಲು ನೀಡಿದ್ದರು. ಬರ್ಬರಿಕನಲ್ಲಿ ಮೂರು ಲೋಕ ಗೆಲ್ಲುವ ಸಾಮರ್ಥ್ಯ ಇತ್ತು.

ಕೌರವ ಮತ್ತು ಪಾಂಡವರ ಮಧ್ಯೆ ಯುದ್ಧದ ತಯಾರಿ ಜೋರಲ್ಲಿ ನಡೆದಿತ್ತು. ಎಲ್ಲ ಕಡೆ ಯುದ್ಧದ ಚರ್ಚೆ ನಡೆದಿತ್ತು. ಈ ಸುದ್ಧಿ ಬರ್ಬರಿಕನಿಗೆ ಸಿಕ್ಕಿದಾಗ ಅವನಿಗೂ ಯುದ್ಧದಲ್ಲಿ ಪಾಲ್ಗೊಳ್ಳುವ ಮನಸ್ಸಾಯಿತು. ಅವರು ತಾಯಿಯಿಂದ ಯುದ್ಧದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆಯಲು ಹೋದ. ಅವನು ತಾಯಿಯಿಂದ ಆಶೀರ್ವಾದ ಪಡೆದ ಹಾಗು ಕೇವಲ ದುರ್ಬಲ ಪಕ್ಷದವರ ಕಡೆಯಿಂದಲೇ ಯುದ್ಧ ಮಾಡುವೆಯೆಂದು ಅವರಿಗೆ ವಚನ ನೀಡಿದ.

ಬರ್ಬರಿಕ ತನ್ನ ನೀಲವರ್ಣ ಕುದುರೆಯ ಮೇಲೆ ಕುಳಿತು ಮೂರು ಬಾಣ ಹಾಗು ಬಿಲ್ಲು ಒಟ್ಟಿಗೆ ಇಟ್ಟು ಹೊರಟ. ಮಾರ್ಗದಲ್ಲಿ ಅವನನ್ನು ಒಬ್ಬ ಬ್ರಾಹ್ಮಣ ತಡೆದು ಅವರ ಪರಿಚಯ ಕೇಳಿದ. ಈ ಬ್ರಾಹ್ಮಣ ಬೇರೆ ಯಾರೂ ಅಲ್ಲ, ನಮ್ಮ ಲೀಲಾಧರ ಶ್ರೀಕೃಷ್ಣನೆ ಆಗಿದ್ದ. ಕೇವಲ ಮೂರು ಬಾಣ ಜೊತೆಯಲ್ಲಿಟ್ಟು ಯುದ್ಧ ಮಾಡಲು ಹೊರಟೆಯಲ್ಲವೇ ಎಂದು ಶ್ರೀಕೃಷ್ಣ ಅವನಿಂದ ವ್ಯಂಗದಿಂದ ಕೇಳಿದ. ಇದನ್ನು ಕೇಳಿ ಬರ್ಬರಿಕ "ಶತ್ರು ಸೇನವನ್ನು ನೆಲಸಮಗೊಳಿಸಲು ನನಗೆ ನನ್ನ ಈ ಮೂರು ಬಾಣವೇ ಸಾಕು" ಎಂದು ಉತ್ತರಿಸಿದ ಹಾಗು "ಒಂದು ವೇಳೆ ನಾನು ಈ ಮೂರು ಬಾಣಗಳ ಪ್ರಯೋಗ ಮಾಡಿದ್ದರೆ ತ್ರಿಲೋಕದಲ್ಲಿ ಹಾಹಕಾರ ಉಂಟಾಗಬಹುದು" ಎಂದು ಹೇಳಿದ.

ಇದನ್ನು ಕೇಳಿ ಕೃಷ್ಣ ತನ್ನ ಮೋಹಕ ನಗು ಬೀರಿ ಎದುರಿದ್ದ ಅರಳೀ ಮರದ ಕಡೆ ಸಂಕೇತ ಮಾಡಿ ಅವನಿಗೆ  "ಹೌದೆ, ಹಾಗಾದರೆ ಈ ಮರದ ಎಲ್ಲಾ ಎಳೆಗಳ ಮೇಲೆ ತೂತು ಮಾಡಿ ತೋರಿಸಿದರೆ ನಾನು ನಂಬುವೆ ಇಲ್ಲಾದರೆ ಹೇಗೆ ನಂಬುವುದು" ಎಂದು ಸವಾಲೆಸೆದ. ಬರ್ಬರಿಕ ಸವಾಲನ್ನು ಸ್ವೀಕರಿಸಿ ತನ್ನ ಬತ್ತಳಿಕೆಯಿಂದ ಒಂದು ಬಾಣ ತೆಗೆದು ಎಳೆಗಳ ಮೇಲೆ ಬಿಟ್ಟ. ಒಂದೇ ಕ್ಷಣದಲ್ಲಿ ಬಿಟ್ಟ ಬಾಣ ಎಲ್ಲಾ ಎಳೆಗಳ ಮೇಲೆ ರಂಧ್ರ ಮಾಡಿ ಕೃಷ್ಣನ ಹಿಂದೆ ಮುಂದೆ ಸುಳಿಯಲಾರಂಭಿಸಿತು. ಯಾಕೆಂದರೆ ಲೀಲಾಧರ ಶ್ರೀಕೃಷ್ಣ ಒಂದು ಎಳೆಯನ್ನು ತನ್ನ ಪಾದದ ಅಡಿಯಲ್ಲಿ ಅಡಗಿಸಿಟ್ಟಿದ್ದ.

ಬರ್ಬರಿಕ ಶ್ರೀಕ್ರಷ್ಣನಿಗೆ "ನಿಮ್ಮ ಕಾಲು ತೆಗೆಯಿರಿ ಇಲ್ಲಾದರೆ ಈ ಬಾಣ ನಿಮಗೂ ಗಾಯಗೊಳಿಸಬಹುದು" ಎಂದು ಹೇಳಿದ. ಎಲ್ಲ ಸ್ಥಿತಿ ಪರೀಕ್ಷಿಸಿ ಶ್ರೀಕೃಷ್ಣ ತನ್ನ ವಾಣಿಯ ಬಾಣ ಬಿಟ್ಟು ಬರ್ಬರಿಕನಿಗೆ ಕೇಳಿದ "ನೀನು ಯಾರ ಪಕ್ಷದಿಂದ ಯುದ್ಧ ಮಾಡುವೆ". ಬರ್ಬರಿಕ ತನ್ನ ತಾಯಿಗೆ ನೀಡಿದ ವಚನದ ಬಗ್ಗೆ ತಿಳಿಸಿ "ಯಾರು ಈ ಯುದ್ಧದಲ್ಲಿ ದುರ್ಬಲವಾಗಿರುವರೋ ನಾನು ಅವರ ಪರವಾಗಿ ಯುದ್ಧ ಮಾಡುವೆ" ಎಂದು ಹೇಳಿದ.
ಕೃಷ್ಣನಿಗೆ ತಿಳಿದಿತ್ತು ಒಂದು ವೇಳೆ ಬರ್ಬರಿಕ ಕೌರವರ ಪರವಾಗಿ ಯುದ್ಧ ಮಾಡಿದರೆ ಗೆದ್ದ ಬಾಜಿ ಸಹ ಅವನ ಕೈಯಿಂದ ಕಸಿಯಬಹುದು. ಬ್ರಾಹ್ಮಣ ವೇಷದಲ್ಲಿದ್ದ ಶ್ರೀಕೃಷ್ಣ ಬರ್ಬರಿಕನಿಂದ ವಚನ ಕೇಳಿ ಪಡೆದ ಹಾಗು ದಾನದಲ್ಲಿ ಅವನ ಶಿರ ಬೇಕೆಂದು ಕೇಳಿಕೊಂಡ. ಕ್ಷಣಕ್ಕಾಗಿ ಬರ್ಬರಿಕನಿಗೆ ಆಘಾತವಾಯಿತು, ಆದರೆ ಅವನು ವಚನ ಕೊಟ್ಟು ಬಿಟ್ಟಿದ್ದ. ವಚನದಿಂದ ನಿರಾಕರಿಸಲು ಅವನಿಗೆ ಇಷ್ಟವಿರಲಿಲ್ಲ. ಬರ್ಬರಿಕ ಯೋಚಿಸಿದ ಇವರು ಸಾಧಾರಣ ಬ್ರಾಹ್ಮಣ ಅಲ್ಲ, ಅದಕ್ಕೆ ಅವನು ಬ್ರಾಹ್ಮಣನಿಂದ ತನ್ನ ವಾಸ್ತವ ರೂಪಕ್ಕೆ ಬರಲು ವಿನಂತಿಸಿದ. ಶ್ರೀಕೃಷ್ಣ ಕೇವಲ ತನ್ನ ವಾಸ್ತವ ರೂಪವನ್ನೇ ಅಲ್ಲ ತನ್ನ ವಿರಾಟ ರೂಪದ ದರ್ಶನವನ್ನು ಬರ್ಬರಿಕನಿಗೆ ನೀಡಿದ.

ಬರ್ಬರಿಕ ಕೃಷ್ಣನಿಂದ ಅವನಿಗೆ ಕೊನೆ ತನಕ ಯುದ್ಧ ನೋಡಲ್ಲಿಕ್ಕೆ ಇದೆ ಎಂದು ಮನವಿ ಮಾಡಿದ. ಕೃಷ್ಣ ಅವನ ಈ ಮಾತನ್ನು ಸ್ವೀಕರಿಸಿದ. ಫಾಲ್ಗುಣ ಮಾಸದ ದ್ವಾದಶಿಯಂದು ಅವನು ತನ್ನ ಶಿರ ದಾನ ಮಾಡಿದ. ಶ್ರೀಕೃಷ್ಣ ಅವನ ಶಿರವನ್ನು ಅಮೃತದಿಂದ ತೊಯ್ದು ಯುದ್ಧದ ಸಮೀಪ ಒಂದು ಪರ್ವತದಲ್ಲಿ ಸ್ಥಾಪಿಸಿದ. ಅಲ್ಲಿಂದ ಬರ್ಬರಿಕ ಸಂಪೂರ್ಣ ಯುದ್ಧವನ್ನು ನೋಡಬಹುದಿತ್ತು.

ಯುದ್ಧ ಮುಗಿದಿತ್ತು. ಪಾಂಡವರಲ್ಲಿ ಯುದ್ಧದ ಗೆಲುವಿನ ಶ್ರೇಯ ಯಾರಿಗೆ ಸಲ್ಲಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಶ್ರೀಕೃಷ್ಣ "ಬರ್ಬರಿಕನ ಶಿರ ಸಂಪೂರ್ಣ ಯುದ್ಧದ ಸಾಕ್ಷಿ, ಅದಕ್ಕೆ ಅವನಿಂದ ಒಳ್ಳೆ ನಿರ್ಣಯಕ ಬೇರೆ ಯಾರೂ ಇಲ್ಲ" ಎಂದ. ಇದಕ್ಕೆ ಬರ್ಬರಿಕ ಶಿರ  "ನನಗೆ ಮಹಾಭಾರತದ ಯುದ್ಧದಲ್ಲಿ ಎಲ್ಲ ಕಡೆ ಕೇವಲ ಶ್ರೀಕೃಷ್ಣ ಕಂಡು ಬಂದರು, ಕೇವಲ ಅವರ ಸುದರ್ಶನ ಚಕ್ರ ತಿರುಗುವುದು ಕಂಡು ಬಂತು ಹಾಗು ಅವರ ಆದೇಶಕ್ಕೆ ದೇವಿ ಮಹಾಕಾಳಿ ಶತ್ರು ಸೇನೆಯ ರಕ್ತ ಸೇವನೆ ಮಾಡುವುದು ಕಂಡು ಬಂತು" ಎಂದು ಉತ್ತರಿಸಿತು.

ಶ್ರೀಕೃಷ್ಣ ಬರ್ಬರಿಕನ ಬಲಿದಾನದಿಂದ ತುಂಬಾ ಪ್ರಸನ್ನವಾಗಿದ್ದ ಹಾಗು ಅವನಿಗೆ "ಕಲಿಯುಗದಲ್ಲಿ ನಿನ್ನನ್ನು ಶ್ಯಾಮ ಎಂಬ ಹೆಸರಿನಿಂದ ಕರೆಯುವರು ಹಾಗು ಖಾಟು ಎಂಬ ನಗರದಲ್ಲಿ ನಿನ್ನ ಧಾಮ ನಿರ್ಮಾಣವಾಗುವುದು " ಎಂದು ವರದಾನ ನೀಡಿದ. ಅವನ ಶಿರ ಅಲ್ಲಿಯೇ ಧಫನ ಮಾಡಲಾಯಿತು.

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಖಾಟು ಎಂಬ ಊರಲ್ಲಿ  "ಖಾಟು ಶ್ಯಾಮ" ನವರ ಮುಖ್ಯ ದೇವಾಲಯ ಇದೆ.

ಆಧಾರ : ಮಹಾಭಾರತದಿಂದ


by ಹರೀಶ್ ಶೆಟ್ಟಿ ,ಶಿರ್ವ

Sunday, August 10, 2014

ಸನಿಹ ಇಲ್ಲ ಯಾರೂ

ಸನಿಹ ಇಲ್ಲ ಯಾರೂ
ಒಡಹುಟ್ಟಿದವರು
ಏಕಾಂತ
ಆದರೆ ಬಳಿ ಇದೆ
ಸ್ಮೃತಿ ಸಾಗರ
ನೆನಪ ಅಲೆಗಳು ತೇಲುತ್ತಿವೆ

ಬಾಲ್ಯ ಯೌವನ
ಪ್ರತ್ಯೇಕ ಸಂಸಾರ
ನಂತರ ಜಗಳ
ಕೆಲವಕ್ಕೆ ಕಾರಣ
ಕೆಲವು ವಿನಃ ಕಾರಣ

ಕೋಪ ದ್ವೇಷ
ಅಹಂ ಜನಿತ
ಸಂಬಂಧ ಕಹಿ
ಮಾತುಕತೆ ಅಂತ್ಯ
ಅಂತರ ವ್ಯಾಪಕ

ಅಗಲಿದ ಜನನಿ
ಸೀಮಿತ ಸಮಯದ
ಪುನರ್ಮಿಲನ
ಕೆಲವು ದಿನದ ಶಾಂತತೆ
ಅದರ ನಂತರ
ಪುನಃ ಉದ್ಭವಿಸಿದ ಗರ್ವ

ವಿಧಿಯ ಆಟ
ಪುನಃ ಅದೇ ಅಂತರ
ಅಲ್ಲೂ ಸುಖ
ಇಲ್ಲೂ ಆರಾಮ
ಆದರೆ ಹೃದಯದಲಿ ವೇದನೆ
ಅಲ್ಲೂ ಇಲ್ಲೂ

by ಹರೀಶ್ ಶೆಟ್ಟಿ, ಶಿರ್ವ

ಅಣ್ಣ ನನ್ನ ನಿಭಾಯಿಸು

ಅಣ್ಣ ನನ್ನ
ನಿಭಾಯಿಸು ರಾಖಿಯ ಬಂಧವನ್ನ
ಅಣ್ಣ ನನ್ನ
ಮರೆಯದಿರು ಈ ಪುಟ್ಟ ತಂಗಿಯನ್ನ
ನೋಡು ನಿಭಾಯಿಸು ಈ ಸಂಬಂಧವನ್ನ
ಸಂಬಂಧವನ್ನ
ಅಣ್ಣ ನನ್ನ....

ಈ ದಿನ ಈ ಉತ್ಸವ ಖುಷಿಯ
ನದಿಯ ನೀರಿನಂತೆ ಪಾವನ
ಅಣ್ಣನ ತೇಜಸ್ಸು ಹಣೆಗೆ
ಸೋದರಿ ಹಚ್ಚುವಳು ತಿಲಕವನ್ನ
ನೋಡಿ ಈ ಮಳೆಯ ಸೊಗಸನ್ನ
ಅಣ್ಣ ನನ್ನ....

ಕಟ್ಟಿ ಈ ರೇಶಮಿ ದಾರವನ್ನ
ಇಟ್ಟಿದ್ದೇನೆ ನಿನ್ನಿಂದ ಭರವಸೆಯನ್ನ
ನಾಜೂಕು ಇದು ಉಸಿರಿನಂತೆ
ಆದರೆ ಜೀವನ ಪರ್ಯಂತ
ಮುರಿಯಲಾಗದು ಇದನ್ನ
ಅರಿತ್ತಿದ್ದಾರೆ ಜಗವೆಲ್ಲ ಇದನ್ನ
ಅಣ್ಣ ನನ್ನ....

ಬಹುಶಃ ಅಂತಹ
ವರ್ಷ ಋತು ಸಹ ಬರಬಹುದು
ಮೊದಲಂತಹ ವರ್ಣಮಯ ಇರಲಾರದು
ಸೋದರಿ ಪರದೇಶದಲಿ ನೆಲೆಸಿರಬಹುದು
ಒಂದು ವೇಳೆ ಅವಳು ನಿನ್ನಲ್ಲಿಗೆ ಬರದಿದ್ದರೆ
ದೀಪಕ ಬೆಳಗಿಸು ನೆನಪಿನ
ಅಣ್ಣ ನನ್ನ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಶರ್ನ್ಕರ್ ಜೈ ಕಿಶನ್
ಚಿತ್ರ : ಚೋಟಿ ಬಹನ್

भैया मेरे, राखी के बंधन को निभाना
भैया मेरे, छोटी बहन को ना भुलाना
देखो ये नाता निभाना
भैया मेरे राखी...

ये दिन ये त्यौहार खुशी का, पावन जैसे नीर नदी का
भाई के उजले माथे पे, बहन लगाए मंगल टीका
झूमे ये सावन सुहाना
भैया मेरे राखी के बंधन...

बाँध के हमने रेशम डोरी, तुमसे वो उम्मीद है जोड़ी
नाज़ुक है जो सांस के जैसे, पर जीवन भर जाए न तोड़ी
जाने ये सारा ज़माना
भैया मेरे राखी के बंधन...

शायद वो सावन भी आए, जो पहला सा रंग न लाए
बहन पराए देश बसी हो, अगर वो तुम तक पहुँच न पाए
याद का दीपक जलाना
भैया मेरे राखी के बंधन.
http://www.youtube.com/watch?v=ItCxB6tRXJM

Saturday, August 9, 2014

ಬಣ್ಣ ಬಣ್ಣದ ರಾಖಿ

ಬಣ್ಣ ಬಣ್ಣದ ರಾಖಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ

ಬೆಳ್ಳಿ ಬಂಗಾರದ ಹಾರ
ಕೇಳುವುದಿಲ್ಲ ನಾನು
ನನ್ನಣ್ಣನ ಸ್ವಲ್ಪ ಪ್ರೀತಿ
ಕೇಳುವೆ ನಾನು
ಸ್ವಲ್ಪ ಪ್ರೀತಿ ಕೇಳುವೆ ನಾನು
ಈ ರಾಖಿಯಲಿ ಪ್ರೀತಿ ತುಂಬಿಸಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ನೀಲ ಆಕಾಶದಿಂದ
ತಾರೆ ತರಬೇಕೆ
ಅಥವಾ ಚಂದ್ರನ ಕಿರಣದ
ಹಾರ ತರಬೇಕೆ
ಕಿರಣದ ಹಾರ ತರಬೇಕೆ
ಪ್ರೀತಿಯ ಪಡೆದು
ನಲಿ ನಲಿಯುತ್ತಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಎಂದಾದರೂ ಅಣ್ಣ
ಈ ಸೋದರಿ ಇರಲಿಕ್ಕಿಲ್ಲ ಬಳಿ
ಎಲ್ಲೊ ಪರದೇಶದಲಿ
ಕುಳಿತಿರುವಳು ಬೇಸರದಲಿ
ಸೋದರಿ ಕುಳಿತಿರುವಳು ಬೇಸರದಲಿ
ಯಾರಿಗೊತ್ತು ಯಾವಾಗ
ಅಗಲುವರು ಈ ಸೋದರ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್

Lata:
Rang-Birangi Raakhi Leke Aai Bahena
O Raakhi Bandhavaa Le Mere Veer \-2

Chorus: Rang-Birangi Raakhi Leke Aai Bahena
O Raakhi Bandhava Le Mere Veer

Lata:
Main Na Chaandi, Na Sone Ke Haar Maangun
Chorus: Main Na Chaandi, Na Bhaiya Sone Ke Haar Maagun

Lata:
Apane Bhaiya Ka Thoda Sa Pyaar Maangn
Thoda Sa Pyaar Maangun
Is Raakhi Men Pyaar Chhupa Le Ke Aai Bahena

Chorus: O Raakhi Bandhava Le Mere Veer

Lata:
Neele Ambar Se Taare Utaar Laaun

Chorus: Neele Ambar Se Bhaiya Taare Utaar Laaun

Lata:
Yaa Main Chanda Ki Kiranon Ke Haar Laaun
Kiranon Ke Haar Laaun
Pyaar Ke Badale Ban Le Laharaai Bahena

Chorus: Raakhi Bandhavaale Mere Veer

Lata:kabhi Bhaiya Ye Bahana Na Paas Hogi

Chorus: Kabhi Bhaiya Ye Teri Bahena Na Paas Hogi

Lata:kahin Pardes Baithi Udaas Hogi, Bahena Udaas Hogi

Chorus: Milane Ki Aas Hogi

Lata:jaane Kab Bichhad Jaayen Bhaai-Bahena

Chorus: Raakhi Bandhavaale Mere Veer
http://www.youtube.com/watch?v=JMrx3RLxunY

Thursday, August 7, 2014

ಪತ್ರವಿಲ್ಲ

ಪತ್ರವಿಲ್ಲ
ಇಲ್ಲ ಯಾವುದೇ ಸಂದೇಶವೂ
ಯಾರಿಗೊತ್ತು ಅದ್ಯಾವುದು ದೇಶವೋ
ನೀನ್ಯಾಕೆ ಹೋದೆ ಅಲ್ಲಿಗೆ
ಈ ಹೃದಯಕ್ಕೆ ನೀಡಿ ನೋವು
ಯಾರಿಗೊತ್ತು ಅದ್ಯಾವುದು ದೇಶವೋ
ನೀನ್ಯಾಕೆ ಹೋದೆ ಅಲ್ಲಿಗೆ

ವೇದನೆಯಲಿ
ನಿಟ್ಟುಸಿರು ಬಿಟ್ಟಿರಬೇಕು ನೀನು
ಅದನ್ನು ಕೇಳಲಿಲ್ಲವೇನೋ ನಾನು
ತೆರಳುವಾಗ
ಅದೆಷ್ಟು ನನ್ನನ್ನು ಕರೆದಿಯೋ ನೀನು
ಎಲ್ಲ ಸಮಯ ಇದೇ ದುಃಖ
ಯಾಕೆ ನಾನಿರಲಿಲ್ಲ ನಿನ್ನ ಸಮ್ಮುಖ
ಹೋದೆ ನೀನೆಲ್ಲಿಗೆ

ಪ್ರತಿ ವಸ್ತುವಿನಲಿ
ಕಣ್ಣೀರಿನಿಂದ ನಿನ್ನ ಹೆಸರು ಬರೆದಿದೆ
ನಿನಗೆ ವಿದಾಯ ನೀಡಲಿಲ್ಲ
ಎಂಬ ವ್ಯಥೆ
ಈ ರಸ್ತೆ ಮನೆ ಈ ಗಲ್ಲಿಗಳಲಿ ತುಂಬಿದೆ
ಮನಸ್ಸಲ್ಲಿ ಉಳಿಯಿತು ಮಾತೆಲ್ಲ
ಬೇಗನೆ ಬಿಟ್ಟು ಕೈಗಳ
ಹೋದೆ ನೀನೆಲ್ಲಿಗೆ

ಈಗ ನೆನಪ ಮುಳ್ಳುಗಳು
ಈ ಹೃದಯಕ್ಕೆ ಚುಚ್ಚುತ್ತಿವೆ
ವೇದನೆ ನಿಲ್ಲುವುದಿಲ್ಲ
ಅಶ್ರು ನಿಲ್ಲುವುದಿಲ್ಲ
ನಿನ್ನನ್ನು ಹುಡುಕುತ್ತಿದೆ ಪ್ರೀತಿ ಇಲ್ಲಿ
ನಾನೇಗೆ ಒಪ್ಪಲ್ಲಿ
ಅದೆಲ್ಲಿಗೆ ಹೋದೆ ನೀನೆಂದು

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಜಗಜಿತ್ ಸಿಂಗ್ /ಲತಾ ಮಂಗೇಶ್ಕರ್
ಸಂಗೀತ :ಉತ್ತಮ್ ಸಿಂಗ್
ಚಿತ್ರ : ದುಶ್ಮನ್

chitti na koi sandhesh jane vo kon sa desh
jaha tum chale gaye
chitti na koi sandhesh jane vo kon sa desh
jaha tum chale gaye
chitti na koi sandhesh jane vo kon sa desh
jaha tum chale gaye, jaha tum chale gaye
is dil pe laga ke tesh jane vo kon sa desh
jaha tum chale gaye, jaha tum chale gaye

ab yado ke kante is dil me chubate hai
na dard thahrta hai na aanshu rukhte hai
tumhe dund raha hai pyar
hum kaise kare ikrar kaha tum chale gaye

ek aah bari hogi humne na suni hogi
jate jate tumne aawaj to di hogi
har vaqt yahi hai gham us vaqt kaha the hum
kaha tum chale gaye
chitti na koi sandhesh jane vo kon sa desh
jaha tum chale gaye, jaha tum chale gaye
is dil pe laga ke tesh jane vo kon sa desh
jaha tum chale gaye
http://www.youtube.com/watch?v=GNRZ87FBT1g
http://www.youtube.com/watch?v=m41jtoWIl7A

Wednesday, August 6, 2014

ನನ್ನ ತೇವಗೊಂಡ

ನನ್ನ ತೇವಗೊಂಡ
ಕಣ್ರೆಪ್ಪೆಯಲಿ ಉಳಿಯಿತು
ನನ್ನ ಕನಸೆಲ್ಲ ಚೂರುಪಾರಾಗಿ ಹೀಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ನಿನ್ನ ಪರಿಚಯವಿಲ್ಲದೆ
ನಿನ್ನ ಗುರುತಿಲ್ಲದೆ
ನಿನ್ನನ್ನು ನಾನು ಹೃದಯದಲ್ಲಿಟ್ಟೆ
ಆದರೆ ನನ್ನ ಪ್ರೀತಿಯ ಬದಲು
ನೀನು ನನಗೆ ಈ ದಿನ ತೋರಿಸಿದೆ
ವಿರಹದ ದಿನ ನಾನು ಕಳೆದಂತೆ ವ್ಯಥೆಯಲಿ
ದುಃಖ ವೇದನೆಯಲಿ ಹೇಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಬೆಂಕಿಯಿಂದ ನಂಟು
ನಾರಿ ಜೊತೆ ಸಂಬಂಧ
ಯಾಕೆ ಮನಸ್ಸಿಗೆ ತಿಳಿಯಲಾಗಲಿಲ್ಲ
ನನಗೇನಾಗಿತ್ತು
ಒಂದು ನಿಷ್ಠೆ ಇಲ್ಲದವಳ ಜೊತೆ
ನನಗ್ಯಾಕೆ ಪ್ರೀತಿ ಉಕ್ಕಿ ಬಂತು
ನಿನ್ನ ನಿಷ್ಠೆ ದ್ರೋಹಕ್ಕೆ ಜಗವೆಲ್ಲ ನಗುವರು
ಹೋದಾಗ ನೀನ್ಯಾವುದೇ ಗಲ್ಲಿ ಹಾದಿಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ :ಆರ್ . ಡಿ. ಬರ್ಮನ್
ಚಿತ್ರ : ಅನಾಮಿಕ

 Meri bheegi bheegi si palkon pe reh gaye
 Jaise mere sapne bikhar ke
 Jale man tera bhi kisike milanko
 Anamika tu bhi tarse

 Tujhe bin jaane bin pehchane
 Maine hrudayse lagaya
 Par mere pyar ke badle mein toone
 Mujhko yeh din dikhlaya
 Jaise birha ki rut maine kaati tadapke
 Aahen bhar bharke
 Jale man tera bhi...

 Aag se naata naari se rishta
 Kaahe man samajh na paaya
 Mujhe kya hua tha ek bewafaa pe
 Hai mujhe kyon pyaar aaya
 Teri bewafaai pe hanse jag saara
 Gali gali guzre jidharse
 Jale man tera bhi...
http://www.youtube.com/watch?v=K0THyu8oNlw

Tuesday, August 5, 2014

ಲೋಕೆಟ್ ಚೈನ್

ಲೋಕೆಟ್ ಚೈನ್
------------------

ಕಣ್ಣು ತುಂಬಿ ಬಂತು ಪುನಃ ಅಲ್ಲಿಗೆ ಬಂದು, ಸ್ಮೃತಿಯಲ್ಲಿ ಬಾಲ್ಯದ ಕೆಲವು ಘಟನೆಗಳು ಚಲಚಿತ್ರದ ಹಾಗೆ   ಓಡಲಾರಂಭಿಸಿತು.

ಮೂರು ಮಹಡಿಯ ನಮ್ಮ ಆ ಬಿಲ್ಡಿಂಗ್ ಈಗ ಒಂದು ವಿಶಾಲ ಮಾಲಿನ ರೂಪದಲ್ಲಿ ನನ್ನ ಕಣ್ಣ ಮುಂದೆ ಇತ್ತು. ಯಾಕೋ ಹೃದಯ ವೇದನೆಯಿಂದ ಅಳಲಾರಂಭಿಸಿತು, ಎಷ್ಟೋ ಸುಂದರ ನೆನಪುಗಳು ಸುಟ್ಟು ಹೋದಂತೆ ಬಾಸವಾಯಿತು, ಆದರೆ ನೆನಪುಗಳು ಅಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ.

ಅಲ್ಲಿ ಈಗ ರಹಿಮ್ ಚಾಚನ ಜೀನಸ ಅಂಗಡಿ ಇರಲಿಲ್ಲ, ಬ್ರೆಡ್ ಬಿಸ್ಕೆಟ್ ಮಾರುತ್ತಿದ್ದ  ಶರ್ಮ ಅಂಕಲ್ ಅವರ ಅಂಗಡಿಯೂ ಇರಲಿಲ್ಲ, ಕಾಯಿ ಪಲ್ಯ, ತರಕಾರಿ ಮಾರುವ ಕುಶಾಬಾಯಿ ಸಹ ಇರಲಿಲ್ಲ.

ಕಣ್ಣಿಂದ ಕಣ್ಣೀರ ಧಾರೆ ಹರಿಯಿತು, ರಹಿಮ್ ಚಾಚನ ನೆನಪಾಗಿ ನನಗೆ ನೆನಪಾಯಿತು ಸಂತೆಯಿಂದ 
ಖರೀದಿಸಿದ ಆ ಲೋಕೆಟ್ ಚೈನ್, ಆಗ ಮಕ್ಕಳಲ್ಲಿ ಕುತ್ತಿಗೆಗೆ ದೊಡ್ಡ ದೊಡ್ಡ ಚೈನ್ ಧರಿಸುವ ಫ್ಯಾಷನ್ ಇತ್ತು, ನನಗೂ ಅಂತಹದೊಂದು ಚೈನ್ ಧರಿಸ ಬೇಕೆಂದು ಆಸೆಯಾಗಿತ್ತು, ಹೇಗೋ ಅಮ್ಮನಿಂದ ಹಣ ಪಡೆದು ಸಂತೆಯಿಂದ ಒಂದು ಲೋಕೆಟ್ ಚೈನ್ ಖರೀದಿ ಮಾಡಿ ತಂದೆ, ಲೋಕೆಟ್ ಮೇಲೆ ಒಂದು ಮಸೀದಿಯ ಚಿತ್ರವಿತ್ತು,  ಆ ಸಮಯ ನನಗೆ ದೇವಾಲಯ, ಮಸಿದಿ, ಚರ್ಚ್ ಇದರ ವ್ಯತ್ಯಾಸ ತಿಳಿದಿರಲಿಲ್ಲ, ನಮ್ಮ ಚಾಲ್ ಟೈಪ್ ಬಿಲ್ಡಿಂಗ'ಲ್ಲಿ ಎಲ್ಲ ಧರ್ಮದವರು ಇರುತ್ತಿದ್ದರು, ಆ ಸಮಯ ನನಗೆ ಅವರು ಇವರು ಹಿಂದೂ, ಇವರು ಮುಸ್ಲಿಂ, ಇವರು ಸಿಖ್ ಎಂಬ ಪಾಠ ಯಾರು ಕಲಿಸಿರಲಿಲ್ಲ, ಮನೆಯವರು ಆಗಲಿ, ನೆರೆಯವರು ಆಗಲಿ, ಯಾವಾಗಲೂ ಅವರಿಗೆ ಈ ಭೇದ ನಮಗೆ ತಿಳಿಸುವ ಸಂದರ್ಭವೇ ಬರಲಿಲ್ಲ, ಬಾಲ್ಯದಿಂದ ಅಲ್ಲೇ ಇದ್ದ ಕಾರಣ ನೆರೆಹೊರೆಯವರು ಎಲ್ಲ ನಮ್ಮವರೇ ಎಂಬ ಭಾವನೆ ಮನಸ್ಸಲ್ಲಿ ಗಟ್ಟಿಯಾಗಿತ್ತು. ಧರ್ಮ ಜಾತಿ ಇದರ ವ್ಯತ್ಯಾಸ ನನಗೆ ಹಾಗು ನನ್ನ ಪ್ರಾಯದ ಮಕ್ಕಳಿಗೆ ತಿಳಿದಿರಲಿಲ್ಲ, ಎಲ್ಲರೂ ಒಟ್ಟಿಗೆ ಸಂತೋಷದಿಂದ ಇರುತ್ತಿದ್ದರು.

ತುಂಬಾ ಖುಷಿಯಿಂದ ಆ ಲೋಕೆಟ್ ಚೈನ್ ಧರಿಸಿ ನಾನು ಮನೆಯಲ್ಲಿ ತೋರಿಸಿದೆ, ಮನೆಯಲ್ಲಿ ಅಮ್ಮ "ಉಂದು ವೋಲ್ತು ಈ ಬ್ಯಾರ್ಲೆನ ಲೋಕೆಟ್ ಕಂತಿನಿ, ಲಾಯಕ್ ಉಂಡು "(ಇದು ಎಲ್ಲಿಂದ ನೀನು ಮುಸ್ಲಿಮರ ಲೋಕೆಟ್ ತಂದೆ, ಚೆನ್ನಾಗಿದೆ) ಎಂದು ನಕ್ಕಿದರು.

ನಾನು ಅದನ್ನು ಧರಿಸಿ ಶರ್ಮ ಅಂಕಲ್ ಅವರ ಅಂಗಡಿಗೆ ಬಂದೆ " ಶರ್ಮ ಅಂಕಲ್  "ದೇಖೋ ಮೇರ ಚೈನ್" (ಶರ್ಮ ಅಂಕಲ್ "ನೋಡು ನನ್ನ ಚೈನ್").

ಶರ್ಮ ಅಂಕಲ್ " ಅರೆ , ಕಿದರ್ ಸೆ ಲಾಯ ಯೇ, ಯೇ ಮುಸ್ಲಿಂ ಲೋಗೋ ಕ ಹಯ್"(ಎಲ್ಲಿಂದ ತಂದೆ ಇದನ್ನು, ಇದು ಮುಸ್ಲಿಮರ).

ನಾನು "ಮತ್ಲಬ್"(ಇದರ ಅರ್ಥ).

ಶರ್ಮ ಅಂಕಲ್ "ಕುಚ್ ನಹಿನ್ ಅಚ್ಚಾ ಹಯ್" (ಏನಿಲ್ಲ, ಚೆನ್ನಾಗಿದೆ) ಎಂದು ಹೇಳಿ ಸುಮ್ಮನಾದರು.

ನಾನು ಸಂತೋಷ ಪಟ್ಟೆ.

ನಾನು ರಹಿಮ್ ಚಾಚನ ಅಂಗಡಿಗೆ ಬಂದು ಅವರಿಗೆ ನನ್ನ ಹೊಸ ಚೈನ್ ತೋರಿಸಿದೆ. 

ರಹಿಮ್ ಚಾಚ " ಬೇಟಾ ಕಾಹ ಸೆ ಲಾಯ ಯೇ" (ಮಗ, ಎಲ್ಲಿಂದ ತಂದೆ ಇದನ್ನು).

"ವೋ ಮಾರ್ಕೆಟ್ ಸೆ, ಅಚ್ಚಾ ಹಾಯ್ ನಾ" (ಆ ಮಾರ್ಕೆಟಿಂದ, ಒಳ್ಳೆಯದಿದೆ ಅಲ್ಲ).

ರಹಿಮ್ ಚಾಚ ನನ್ನನ್ನು ನೋಡಿ " ಅಚ್ಚಾ ತೋ ಹಾಯ್ ಬೇಟಾ, ಇಸ್ಮೆ ಖುದಾ ಕಿ ರೆಹಮತ್ ಹಯ್, ಪರ್ ಬೇಟಾ, ಯೇ ಹುಮಾರೆ ಮಜ್ಹಬ್ ಕ ಹಯ್" (ಚೆನ್ನಾಗಿದೆ, ಇದರಲ್ಲಿ ದೇವರ ಆಶೀರ್ವಾದ ಇದೆ, ಆದರೆ ಮಗ ಇದು ನಮ್ಮ ಧರ್ಮದವರ".

ನಾನು " ಇಸ್ಕ ಕ್ಯಾ ಮತ್ಲಬ್ ಚಾಚ" (ಇದರ ಏನು ಅರ್ಥ ಚಾಚ).

ಚಾಚ ನನ್ನನ್ನು ನೋಡಿ "ಕುಚ್ ನಹಿ ಬೇಟಾ , ಬಹುತ್ ಅಚ್ಚಾ ಹಯ್"( ಏನಿಲ್ಲ ಬೇಟಾ, ತುಂಬಾ ಚೆನ್ನಾಗಿದೆ) ಎಂದು ಹೇಳಿ ನನ್ನನ್ನು ಮುದ್ದಿಸಿದರು.

ಆ ಸಮಯ ನನಗೆ ಅಮ್ಮ ಆಗಲಿ , ಶರ್ಮಅಂಕಲ್ ಆಗಲಿ, ರಹಿಮ್ ಚಾಚ ಆಗಲಿ ಯಾರೂ ನನಗೆ ಹಿಂದೂ ಮುಸ್ಲಿಂ ಎಂಬ ಭೇದ ತಿಳಿಸಲು ಪ್ರಯತ್ನಿಸಲಿಲ್ಲ. ಇಂದು ಇದನ್ನು ಯೋಚಿಸುವಾಗ ನನಗೆ ಧರ್ಮ ಜಾತಿಯ ಭೇದ ತಿಳಿಸದೆ ಅವರು ನನ್ನ ಮೇಲೆ ಎಷ್ಟೊಂದು ದೊಡ್ಡ ಉಪಾಕಾರ ಮಾಡಿದ್ದರು, ಆವಾಗ ಅವರು ಈ ಜಾತಿ ಧರ್ಮದ ವ್ಯತ್ಯಾಸದ ವಿಷ ಬೀಜ ನನ್ನಲ್ಲಿ ಬಿತ್ತುತ್ತಿದ್ದರೆ  ಇಂದು ನಾನು ನಾನಾಗಿ ಉಳಿಯುತ್ತಿರಲಿಲ್ಲ, ಬಹುಶ ಒಂದು ಬೇರೇನೆ ಮನುಷ್ಯನಾಗಿ ಬೆಳೆಯುತ್ತಿದ್ದೆ, ಕೇವಲ ನನ್ನದೇ ಧರ್ಮ ಉಪಸಕನಾಗಿ ಉಳಿಯುತ್ತಿದ್ದೆ, ಆದರೆ ಅವರ ಬಹು ದೊಡ್ಡ ಉಪಕಾರ ನನ್ನ ಮೇಲೆ, ಇಂದು ನನಗೆ ಎಲ್ಲ ಧರ್ಮದ ಬಗ್ಗೆ ಗೌರವ, ಮರ್ಯಾದೆ ಇದೆ, ಇದು ಅವರು ನನಗೆ ನೀಡಿದ ಅತಿ ಬಹುಮೂಲ್ಯ ಸಂಪತ್ತು.

by ಹರೀಶ್ ಶೆಟ್ಟಿ, ಶಿರ್ವ 

Monday, August 4, 2014

ಮಿತಿ ಮೀರಿ ಹೋಯಿತು

ಮಿತಿ ಮೀರಿ ಹೋಯಿತು
ಕಾಯುವಿಕೆಯ
ಯಾವುದೇ ಸುದ್ದಿ ಬರಲಿಲ್ಲ ನನ್ನವಳ
ಇದು ನನಗೆ ಖಂಡಿತ ತಿಳಿದಿದೆ
ನಿಷ್ಠೆ ದ್ರೋಹಿ ಅವಳಲ್ಲ
ಮತ್ತೆ ಕಾರಣ ಏನು
ಕಾಯುವಿಕೆಯ

ಅವಳಲ್ಲಿರುವ ಮಾತು
ಅದು ಇಲ್ಲಿ ಇಲ್ಲ ಯಾರಲ್ಲೂ
ಅವಳು ನನ್ನವಳು ಕೇವಲ ನನ್ನವಳು
ಇದೇ ಸುದ್ದಿ ಎಲ್ಲ ಗಲ್ಲಿ ಗಲ್ಲಿಯಲ್ಲೂ
ಜೊತೆ ಇರುವಳವಳು ನನ್ನ ದುಃಖದಲಿ
ನನ್ನೆಲ್ಲ ಸುಖದಲಿ
ಅವಳಿಲ್ಲದಿದ್ದರೆ ಜೀವನದಲಿ
ಬೇರೇನೂ ಇಲ್ಲ ನನ್ನ ಜೀವನದಲಿ

ನಂದದಿರಲಿ ಈ ದೀಪ ನಂಬಿಕೆಯ

ಮಿತಿ ಮೀರಿ ಹೋಯಿತು ಕಾಯುವಿಕೆಯ

ಮೂಲ : ಅಂಜಾನ್ /ಪ್ರಕಾಶ್ ಮೆಹರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶರಾಬಿ

Intaha ho gai, intazaar ki
Aai na kuchh khabar, mere yaar ki
Ye hamen hai yaqeen, bevafa vo nahin
Phir vajah kya hui, intazaar ki, intaha ho...

Baat jo hai us men, baat vo
Yahaan kahin nahin kisi men
Vo hai meri, bas hai meri
Shor hai yahi gali gali men
Saath saath vo hai mere gham
Men mere dil ki har khushi men
Zindagi men vo nahin to kuchh
Nahin hai meri zindagi men
Bujh na jaaye ye shama, aitabaar ki
Intaha ho...

Saturday, August 2, 2014

ಅದೇಕೆ ಜನರು ಪ್ರೀತಿ ಮಾಡುತ್ತಿರುತ್ತಾರೆ

ಈ ಜಗದಲಿ ಈ ಪ್ರೀತಿಯಲಿ
ಎಷ್ಟೋ ಹೃದಯ ಮುರಿಯಿತು
ಎಷ್ಟೋ ಮನೆ ಹಾಳಾಯಿತು

ಅದೇಕೆ ಜನರು ಪ್ರೀತಿ ಮಾಡುತ್ತಿರುತ್ತಾರೆ
ಹೃದಯದ ಬದಲು ನೋವನ್ನು ವರಿಸುತ್ತಾರೆ
ಅದೇಕೆ ಜನರು...

ಏಕಾಂತ ಸಿಗುತ್ತದೆ
ಸಭೆ ಸಮಾರಂಭ ಸಿಗುವುದಿಲ್ಲ
ಪ್ರೀತಿಯ ಹಾದಿಯಲಿ
ಎಂದೂ ಗಮ್ಯ ಸಿಗುವುದಿಲ್ಲ
ಹೃದಯ ಮುರಿಯುತ್ತದೆ
ಸೋಲಾಗುತ್ತದೆ
ಒಲವಲಿ ಜನರ ಇದೇ ಗತಿಯಾಗುತ್ತದೆ
ಯಾರಿಗೇನು ತಿಳಿದಿದೆ
ಈ ಪತಂಗಗಳು
ಯಾಕೆ ಹಂಬಲಿಸುತ್ತವೆ
ಯಾಕೆ ಸುಟ್ಟು ಹೋಗುತ್ತವೆ
ವೇದನೆಯಿಂದ ಬಳಲುತಾ
ಅಸಹಜ ಜೀವಿ ಬದುಕುತ್ತಿರುತ್ತವೆ  
ಅದೇಕೆ ಜನರು...

ವರ್ಷ ಋತುವಿನಲ್ಲಿ ಕಂಗಳಿಂದ
ಕಣ್ಣೀರು ಸುರಿಸುತ್ತದೆ ಅದೆಷ್ಟೋ
ವಿಯೋಗದಲಿ ಹೃದಯಕ್ಕೆ
ನೆನಪಾದಾಗ ಯಾರದ್ದೋ
ಈ ಜೀವನ ಹೀಗೆಯೇ
ಹಾಳಾಗುತ್ತದೆ
ಪ್ರತಿ ಕ್ಷಣ ತುಟಿಯಲಿ
ಯಾವುದೇ ಬೇಡಿಕೆ ಇರುತ್ತದೆ
ಮದ್ದಿನ ಪ್ರಭಾವ ಆಗುವುದಿಲ್ಲ
ಪ್ರಾರ್ಥನೆಯಿಂದಲೂ ಲಾಭ ಆಗುವುದಿಲ್ಲ
ಆದರೂ ಈ ವಿಷವನ್ನು ಎಲ್ಲರೂ
ಯಾಕೆ ಕುಡಿಯುತ್ತಿರುತ್ತಾರೆ
ಅದೇಕೆ ಜನರು...

ಪ್ರೀತಿಯಿಂದ ಎಲ್ಲ ಕಷ್ಟ
ಸಂಬಂಧಿತವಾಗಿರುತ್ತದೆ
ಹಗಲು ರಾತ್ರಿ ಪ್ರೀತಿಯಲಿ
ಅದೆಷ್ಟೋ ಪ್ರಧರ್ಶನೆಯಾಗುತ್ತದೆ
ರಾತ್ರಿಯಿಂದಲೂ ದೊಡ್ಡ
ಈ ಪ್ರೀತಿಯ ಕಥೆಗಳು
ಪ್ರೇಮಿಗಳು ಹೇಳುತ್ತಿರುತ್ತಾರೆ
ತನ್ನ ಪ್ರೀತಿ ದ್ರೋಹದ ಕಥೆಗಳು
ನಿಷ್ಕರುಣಿ
ನಿಷ್ಠೆವಿಲ್ಲದ
ಆ ನಿರ್ದಯಿಯ ತನ್ನ ಒಲವಿನ
ಹೆಸರು ಕರೆದು ಕರೆದು ಕೂಗಾಡುತ್ತಿರುತ್ತಾರೆ
ಅದೇಕೆ ಜನರು...

ಮೂಲ: ಹರೀಶ್ ಶೆಟ್ಟಿ, ಶಿರ್ವ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಮೆಹಬೂಬ್ ಕಿ ಮೆಹಂದಿ

Hmmm...
Is zamaane mein is mohabbat ne
Kitne dil tode kitne ghar phoonke

Jaane kyon log mohabbat kiya karte hain - 2
Dil ke badle dard-e-dil liya karte hain
Jaane kyon log mohabbat kiya karte hain
Hmmm...

Tanhaai milati hai, mehfil nahin milati
Raahen mohabbat mein kabhi manzil nahin milati
Dil tut jata hai, nakaam hota hai
Ulfat mein logon ka yahi anjaam hota hai
Koi kya jaane, kyon yeh paravaane,
Kyon machalate hain, gham mein jalate hain
Aahen bhar bhar ke divaane jiya karte hain - 2
Jaane kyon log mohabbat kiya karte hain

Savan mein aankhon ko, kitna rulaati hai
Furaqat mein jab dil ko kisi ki yaad aati hai
Yeh zindagi yoon hi barbad hoti hai
Har waqt honthon pe koi fariyaad hoti hai
Na davaaon ka naam chalta hai
Na duaaon se kaam chalta hai
Zehar yeh phir bhi sabhi kyon piya karaten hain - 2
Jaane kyon log mohabbat kiya karte hain

Mahaboob se har gham manasoob hota hai
Din raat ulfat mein tamaashaa khoob hota hai
Raaton se bhi lambe yeh pyaar ke kisse
Aashiq sunaate hain jafaa-e-yaar ke qisse
Bemuravvat hai, bewafa hai woh,
Us sitamagar ka apne dilbar ka,
Naam le le ke duhaai diya karte hain - 2
Jaane kyon log mohabbat kiya karte hain

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...