Wednesday, July 16, 2014

ಬೇಡಿಕೆ

ದೇವರೇ 
ನೀರಿನಂತೆ ಆಗಲಿ ನನ್ನ ಮನಸ್ಸು 
ಇತರರ ಬೇಡಿಕೆಯ ದಾಹ ತಣಿಸಲಿ
ನನ್ನಲ್ಲಿ ಸಮಾಜದ ಕೊಳಕನ್ನು ಶುಚಿ ಮಾಡುವ ಶಕ್ತಿ ಸಾಮರ್ಥ್ಯವಿರಲಿ
ನನ್ನಿಂದ ನಿರ್ಮಲವಾಗಲಿ ಈ ಜಗತ್ತು
ನೀರಿನಂತೆ ಆಗಲಿ ನನ್ನ ಮನಸ್ಸು 

by ಹರೀಶ್ ಶೆಟ್ಟಿ, ಶಿರ್ವ

---

ದೇವರೇ 
ಒಳ್ಳೆಯದನ್ನು ಕಾಪಾಡುವೆ 
ಕೆಟ್ಟದನ್ನು ನಿರ್ಲಕ್ಷಿಸುವೆ 
ನನ್ನಲ್ಲಿದ್ದ ಕೆಟ್ಟ ನಡೆಯನ್ನು ಪದೇ ಪದೇ ವಿರೋಧಿಸುವೆ 
ನನ್ನಲ್ಲಿದ್ದ ಕೆಟ್ಟತನವನ್ನು ಹೊರ ದೂಡಲು ಪ್ರಯತ್ನಿಸುವೆ 
ಜಗತ್ತಲ್ಲಿದ್ದ ಒಳ್ಳೆತನ ಹುಡುಕುವೆ 
ಒಳ್ಳೆತನದ ಹಾದಿಯಲಿ ನಡೆಯುವೆ
ಈ ಕಲ್ಮಶ ಮನಸ್ಸನ್ನು ದಿನ ಪ್ರತಿ ದಿನ 
ಶುಚಿಗೊಳಿಸಲು ಪ್ರಯತ್ನಿಸುವೆ 
ಒಳ್ಳೆಯವನಾಗಲು ಪ್ರಯತ್ನಿಸುವೆ ದೇವ 

ಒಳ್ಳೆಯವನಾಗಲು ಪ್ರಯತ್ನಿಸುವೆ

by ಹರೀಶ್ ಶೆಟ್ಟಿ, ಶಿರ್ವ


---

ನಾನೇ ದೇವರು
ಎನ್ನುವ ಮಾನವನೇ,
ನೀನು ತಯಾರಿಸಿದ ಭಕ್ಷ
ರುಚಿಸಲಿಲ್ಲ ಪ್ರಭುವೇ
ಅದರಲ್ಲಿ ಸತ್ಯದ ಸಿಹಿ ಪ್ರಮಾಣವಿರಲಿಲ್ಲ
ಸುಳ್ಳಿನ ಮಸಾಲೆ ತುಂಬಿತ್ತು

by ಹರೀಶ್ ಶೆಟ್ಟಿ, ಶಿರ್ವ


---

ಗುರುವೇ,
ನಿನ್ನ ಅನೇಕ ಉಪಕಾರ
ನನ್ನ ಮೇಲೆ
ನನ್ನನ್ನು ರಚಿಸಿದಕ್ಕೆ
ನಿನ್ನ ಚರಣ ತೊಳೆದು
ಚರಣಾಮೃತ ಕುಡಿದೆ
ಆದರೂ ಗುರುವೇ
ಇನ್ನೂ ಅಹಂ ದೂರವಾಗಲಿಲ್ಲ
ಕೋಪ ತಣಿಯಲಿಲ್ಲ
ಆಸೆ ಇಳಿಯಲಿಲ್ಲ 
ಆದರೆ ನಿನ್ನ ಕೃಪೆ ಗುರುವೇ
ಈ ತನಕ ಮನುಷ್ಯನಾಗಿ ಬದುಕುತ್ತಿದ್ದೇನೆ

by ಹರೀಶ್ ಶೆಟ್ಟಿ, ಶಿರ್ವ


2 comments:

  1. ಪ್ರಾರ್ಥನೆಯನ್ನೂ ಮೀರಿ ನಿಮ್ಮ ಸಾಲುಗಳ ಆಳದಲ್ಲಿ ಅಡಗಿರುವ ಪ್ರಾಮಾಣಿಕೆ ನೆಚ್ಚಿಗೆಯಾಯಿತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...