Sunday, July 13, 2014

ಕಣ್ಣೀರ ಮುತ್ತು

ನನ್ನ ಸನಿಹ ಬರದಿದ್ದರೂ
ಅಡ್ಡಿ ಇಲ್ಲ 
ಆದರೆ ಹೃದಯದಿಂದ ದೂರ 
ಹೋಗದಿರು 

ಮುನಿಸಿ ಮೌನ ತಾಳಿದರೂ
ಅಡ್ಡಿ ಇಲ್ಲ 
ಆದರೆ ಮನಸ್ಸ ಅಂತರ 
ಏರಿಸದಿರು 

ನೀನು ನೀಡಿದ ಸಜೆಯಿಂದ ನನಗ್ಯಾವುದೇ
ಅಡ್ಡಿ ಇಲ್ಲ
ಆದರೆ ನೀನು ಮನಸ್ಸಲ್ಲಿ ಪಶ್ಚಾತಾಪ
ಪಡದಿರು

ನನ್ನಿಂದ ಮಾತನಾಡದಿದ್ದರೂ
ಅಡ್ಡಿ ಇಲ್ಲ
ಆದರೆ ನಮ್ಮಲ್ಲಿದ್ದ ಪ್ರೀತಿ ಕಡಿಮೆ
ಮಾಡದಿರು

ನನ್ನ ಕಣ್ಣೀರ ತೊರೆ ಹರಿದರೂ
ಅಡ್ಡಿ ಇಲ್ಲ
ಆದರೆ ನಿನ್ನ ಕಣ್ಣೀರ ಮುತ್ತು
ವ್ಯಯ ಮಾಡದಿರು

by ಹರೀಶ್ ಶೆಟ್ಟಿ, ಶಿರ್ವ

2 comments:

  1. ತನ್ನ ಪ್ರೇಮಿಗೆ ಕವಿ ನಿವೇದನೆ, ಬುದ್ದಿಮಾತೂ ಒಟ್ಟಿಗೆ ನೀಡಿದಂತಿದೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...