Thursday, June 19, 2014

ಹಿಜಡಾ- ೨

ಹಿಜಡಾ- ೨
--------

ಎಲ್ಲರು ಹೊರಗೆ ಹೋದ ನಂತರ ಸಂಗಮ್ಮ ಮೋಹನನಿಗೆ "ಏನು ಮೋಹನ, ಏನು ವಿಷಯ"?

"ಅಮ್ಮ, ಹೇಗೆ ಹೇಳುವುದು" ಎಂದು ಹೇಳಿ ಮೋಹನ ಸ್ವಲ್ಪ ವ್ಯಾಕುಲನಾದ.

"ಏನಂತಹ ಪ್ತಾಮುಖ್ಯವಾದ ವಿಷಯ, ಹಣ ಬೇಕೇ?"

"ಇಲ್ಲಮ್ಮ, ಹಾಗೇನಿಲ್ಲ, ಅಮ್ಮ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತೇನೆ?"

"ಅಯ್ಯೋ ಹೌದೆ, ಸಂತೋಷದ ವಿಷಯ, ಯಾರವಳು?" ಎಂದು ಕೇಳಿದ ಸಂಗಮ್ಮನ ಮುಖ ಅರಳಿತು.

"ಅಮ್ಮ, ಅವಳ ಹೆಸರು ರಜನಿ ಹಾಗು ಅವಳು ನನ್ನೊಟ್ಟಿಗೆ ನನ್ನ ಆಫೀಸ್'ಲ್ಲಿ ಕೆಲಸ ಮಾಡುತ್ತಾಳೆ."

"ಹೌದೆ, ಹಾಗಾದರೆ ಏನು ಯೋಚಿಸಿದೆ ನೀನು?"

"ಅಮ್ಮ, ನಾನು ಅವಳೊಟ್ಟಿಗೆ ಮದುವೆ ಆಗ ಬೇಕೆಂದಿದ್ದೇನೆ."

"ಹೌದೆ ಸಂತೋಷ, ಹೇ ಜೋನಮ್ಮ, ಬಾನಮ್ಮ ಬೇಗ......"

"ಅಮ್ಮ, ಅಮ್ಮ ಅವರನ್ನು ಈಗ ಕರೆಯಬೇಡಿ , ಪ್ಲೀಸ್."

"ಯಾಕೋ ಇಷ್ಟು ಸಂತೋಷದ ವಿಷಯ, ಇನ್ನು ನಿನ್ನ ಮದುವೆಗೆ ಎಷ್ಟೆಲ್ಲ ಕೆಲಸ ಮಾಡಲಿಕ್ಕಿದೆ, ಅವರಿಗೆ ಈ ವಿಷಯ ಕೇಳಿ ತುಂಬಾ ಸಂತೋಷ ಆಗಬಹುದು"

"ಆದರೆ ಅಮ್ಮ...."

"ಏನು, ಆದರೆ?"

"ಅಮ್ಮ, ರಜನಿಗೆ ನಾನು ನನ್ನ ಎಲ್ಲ ವಿಷಯ ತಿಳಿಸಿದೆ, ನನ್ನ ವಿಷಯ ಕೇಳಿ ಅವಳು ಚಿಂತಿತಲಾದಳು, ಅವಳು ನಮ್ಮ ಮದುವೆಗೆ ಒಂದೇ ಸ್ಥಿತಿಯಲ್ಲಿ ಒಪ್ಪಿದ್ದಾಳೆ..... ಅದೇನಂದರೆ..... ಅದೇನಂದರೆ ನೀವೆಲ್ಲ ನಮ್ಮ ಮದುವೆಗೆ ಬರಬಾರದು ಹಾಗು ಮದುವೆಯ ನಂತರ ನಿಮ್ಮತ್ರ ಯಾವುದೇ ಸಂಬಂಧ ಇಡಬಾರದೆಂದು ". 

ಯಾಕೋ ಇದನ್ನೆಲ್ಲಾ ಕೇಳಿ ಸಂಗಮ್ಮ ಆಶ್ಚರ್ಯ ಪಡಲಿಲ್ಲ, ಅವಳಿಗೆ ಭವಿಷ್ಯದಲ್ಲಿ ಇಂಥಹ ಸ್ಥಿತಿ ಬರಬಹುದು ಎಂದು ತಿಳಿದಿತ್ತೋ ಏನೋ, ಆದರೆ ಅವಳಿಗೆ ಮೋಹನನ ಮೇಲೆ ತುಂಬಾ ವಿಶ್ವಾಸವಿತ್ತು, ತುಂಬಾ ಧೈರ್ಯದಿಂದ ಎಲ್ಲವನ್ನು ಕೇಳಿ "ಹಾಗಾದರೆ ನೀನೇನು ವಿಚಾರ ಮಾಡಿದೆ?"

"ಅಮ್ಮ , ನಾನು ಅವಳನ್ನು ಮದುವೆ ಆಗ ಬೇಕೆಂದಿದ್ದೇನೆ."

ಸಂಗಮ್ಮ ಅವನ ಮಾತು ಕೇಳಿ ಬೆರಗಾದಳು, ಬೇಡವೆಂದರೂ ಕಣ್ಣ ಕೊನೆಯಿಂದ ಕಣ್ಣೀರು  ಹರಿದು ಬಿತ್ತು, ಈ ಆಘಾತ ಅವಳನ್ನು ೨೫ ವರ್ಷದ ಹಿಂದೆಗೆ ಕೊಂಡೊಯ್ಯಿತು.

ರಾತ್ರಿಯ ಸಮಯ, ಜೋರು ಮಳೆ.

೨೦ ವರ್ಷ ಹರೆಯದ ಸಂಗಮ್ಮ ತನ್ನ ಹಿಜಡಾ ಸಮುದಾಯದ ಹಿರಿಯ ಮುಖ್ಯಸ್ಥ ಮರಿಯಮ್ಮ ಹಾಗು ಇತರ ಸಂಗಡಿಗರ ಜೊತೆ ಆ ದಿವಸದ ಕಾರ್ಯಗಳನ್ನೆಲ್ಲ ಮುಗಿಸಿ ಬರುತ್ತಿದ್ದರು, ಮರಿಯಮ್ಮ ಮುಂದೆ ಮುಂದೆ ಅವಸರದಿಂದ ನಡೆಯುತ್ತಿದ್ದಳು, ಸಂಗಮ್ಮ ಸ್ವಲ್ಪ ಹಿಂದೆಯೇ ಇದ್ದಳು, ಹಾಗೆಯೇ ನಡೆಯುತ್ತಿದ್ದಾಗ ಸಂಗಮ್ಮನಿಗೆ ರಸ್ತೆಯ ಬದಿಯಲ್ಲಿ ಇಟ್ಟಿದ ಕಸದ ಬುಟ್ಟಿಯಲ್ಲಿ ಒಂದು ಮಗು ಕೂಗುವ ಶಬ್ದ ಕೇಳಿತು, ಅವಳು ಕಸದ ಬುಟ್ಟಿಯ ಬಳಿಗೆ ಹೋಗಿ ನೋಡಿದಳು "ಅಯ್ಯೋ ದೇವ, ಮರಿಯಮ್ಮ ನೋಡು ಮಗು ಇಲ್ಲಿ" ಎಂದು ಅದನ್ನು ಎತ್ತಿದಳು, ಎಲ್ಲರೂ ಬಳಿ ಬಂದು ಸೇರಿದರು.

ಮರಿಯಮ್ಮ "ಹೇ ಮುಂಡೆಬಿಡು ಇದನ್ನು ನಿನಗೇನೂ ಹುಚ್ಚು ಆಗಿದೆಯ ಏನು."

ಸಂಗಮ್ಮ " ಆದರೆ ಮರಿಯಮ್ಮ, ಚಿಕ್ಕ ನವ ಜನಿತ ಮಗು, ಪಾಪ".

ಮರಿಯಮ್ಮ " ಹಾಗಾದರೆ ಏನು ಮಾಡುವೆ ನೀನು ಇದರ, ನಮಗೆಯೇ ಇಲ್ಲಿ ಗತಿ ಇಲ್ಲ, ಬಿಡು ಇದನ್ನು"

ಸಂಗಮ್ಮ "ಬೇಡ ಮರಿಯಮ್ಮ, ಮಳೆ ಜೋರಾಗಿದೆ, ಪಾಪ ಇಲ್ಲಿಯೇ ಇದ್ದರೆ ಇದು ಸತ್ತು ಹೋಗಬಹುದು, ನಾವು ಇದನ್ನು ನಮ್ಮ  ಠಿಕಾನೆಗೆ ಕರೆದುಕೊಂಡು ಹೋಗುವ".

ಮರಿಯಮ್ಮ ಕೋಪದಿಂದ "ಹೇ ಹುಚ್ಚೆ, ನಿನ್ನ ಸ್ವತಹದ್ದು ಠಿಕಾನೆ ಇಲ್ಲ, ಮೇಲಿಂದ ಈ ಮಗು, ಅದರ ಮೇಲೆ ಪೋಲಿಸರ ಭಯ, ಬಿಡು ಇದನ್ನು"

ಸಂಗಮ್ಮ " ಬೇಡ ಮರಿಯಮ್ಮ, ಜೋನಮ್ಮ, ಬಾನಮ್ಮ ನೀವು ಹೇಳಿರೋ ಈ ಮರಿಯಮ್ಮನಿಗೆ" ಎಂದು ಜೋರಿನಿಂದ ಅಳಲಾರಂಭಿಸಿದಳು.

ಸಂಗಮ್ಮನ ಜತೆಗಾರರಾದ ಜೋನಮ್ಮ, ಬಾನಮ್ಮ ಮುಂದೆ ಬಂದು "ಮರಿಯಮ್ಮ, ಹೋಗಲಿ ಬಿಡು ಅವಳ ಮನಸ್ಸಿದ್ದರೆ ಇರಲಿ ಈ ಮಗು ನಮ್ಮೊಟ್ಟಿಗೆ ". 

ಸಂಗಮ್ಮನನ್ನು ಅಳುವುದನ್ನು ನೋಡಿ ಮರಿಯಮ್ಮಳ ಹೃದಯ ಕರಗಿತು "ನೋಡು ಸಂಗಮ್ಮ ನೀನು ಈ ಮಗು ಸಾಕುವೆ ಅಂದರೆ ನನಗೇನು ಅಡ್ಡಿ ಇಲ್ಲ ಆದರೆ ಇದರ ಪೂರ್ಣ ಜವಾಬ್ದಾರಿ ನಿನ್ನದೇ, ಪೋಲಿಸ್'ದವರ ಏನು ತಂಟೆ ಇದ್ದರೆ ಅದನ್ನು ಕೇವಲ ನಾನು ನೋಡಿಕೊಳ್ಳುವೆ, ಬೇರೆ ಮಗುವನ್ನು ಸಾಕುವ ಎಲ್ಲ ಜವಾಬ್ದಾರಿ ನಿನ್ನದೇ ."

ಇದನ್ನು ಕೇಳಿ ಸಂಗಮ್ಮ, ಜೋನಮ್ಮ ಹಾಗು ಬಾನಮ್ಮನ ಮುಖ ಸಂತೋಷದಿಂದ ಅರಳಿತು.

ಸಂಗಮ್ಮ "ಆಯಿತು ಆಯಿತು ಮರಿಯಮ್ಮ" ಒಟ್ಟಿಗೆ  ಜೋನಮ್ಮ ಹಾಗು ಬಾನಮ್ಮ ಸಹ ಸಂತಸದಿಂದ ಸಂಗಮ್ಮನ ಜತೆ ಸ್ವರ ಸೇರಿಸಿದರು.

(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

1 comment:

  1. ರಜನಿಯ ಅಪ್ಪಣೆಯು ಸಂಗಮ್ಮನಲ್ಲಿ ನೋವು ತಂದರೂ ಅಚ್ಚರಿ ತರಿಸಲಿಲ್ಲ, ಏಕೆಂದರೆ ಆಕೆ ಮೊದಲೇ ಊಹಿಸಿದ್ದಳು. ತನ್ನ ಸಾಕು ಮಗ ಮದುವೆಗೆ ಮುಖಮಾಡಿದ್ದು ಆಕೆಗದೇ ಖುಷಿಯ ವಿಚಾರ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...