Sunday, June 22, 2014

ಪರಿಣಾಮ

ಹಾದಿಯಲ್ಲಿರುವ 
ಮುಳ್ಳುಗಳು ಕಾಲಿಗೆ ಚುಚ್ಚುತ್ತಿವೆ 
ದೋಷ ನೀಡಲಾರೆ 
ನಿರ್ಲಕ್ಷಿಸಿದ ಫಲ ಅದು 
---
ಊದುಬತ್ತಿಯ ಸುಗಂಧ 
ಎಲ್ಲೆಡೆ 
ಅದರಡಿಯಲಿ
ಭಸ್ಮದ ರಾಶಿ 
---
ಅವನ
ಬಂಡಿ ವೇಗದಲಿ
ಧೂಳು
ರಸ್ತೆಯಲಿ ನಿಲ್ಲಿದ
ಜನರ ಮುಖದಲಿ
---
ಅವನು ಗಾಯಗೊಂಡ
ರಕ್ತ ಸೋರುತ್ತಿತ್ತು
ಮದ್ದಿನ ಬದಲು
ಸುತ್ತ ಮುತ್ತದ ಜನರೆಲ್ಲಾ
ಉಪದೇಶ ನೀಡುತ್ತಿದ್ದರು
---
ಇಟ್ಟ ಒಂದು ಹೆಜ್ಜೆ
ತಪ್ಪು ಬಿತ್ತೆಂದು
ಗಾಬರಿ ಯಾಕೆ
ಮುಂದೆ
ತಪ್ಪು ಸುಧಾರಿಸುವ
ಅನೇಕ ಅವಸರ ಬರುತ್ತದೆ
---
ರೋಗ ಗುಣವಾಗಬೇಕಾದರೆ
ಕಹಿ ಔಷದಿ
ನೀಡಲೇ ಬೇಕು
ಧೈರ್ಯ ಇಟ್ಟಿರಿ
ಬೇಗನೆ
ರೋಗ ಮುಕ್ತವಾಗುವಿರಿ

by ಹರೀಶ್ ಶೆಟ್ಟಿ, ಶಿರ್ವ

5 comments:

  1. ಮಾರ್ಮಿಕ ಹನಿಗಳ ಗುಚ್ಛ, ಮನೋ ಪರಿವರ್ತಕವಾಗಿದೆ.
    Best of best:
    'ಊದುಬತ್ತಿಯ ಸುಗಂಧ
    ಎಲ್ಲೆಡೆ
    ಅದರಡಿಯಲಿ
    ಭಸ್ಮದ ರಾಶಿ'

    ReplyDelete
  2. ಸುಂದರ ಹನಿಗಳು,,, ಬಹಳ ಇಷ್ಟ ಆಯಿತು
    -- ಜೀ ಕೇ ನವೀನ್

    ReplyDelete
  3. ಪರಿಣಾಮ ಬೀರುವ ಪ್ರತಿ ಸಾಲುಗಳು ಚಿಂತಿಸುವಂತೆ ಮಾಡುತ್ತವೆ.

    ReplyDelete
  4. "ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೆ"

    ReplyDelete
  5. "ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೆ"

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...