Wednesday, June 18, 2014

ಹಿಜಡಾ- ೧

ಹಿಜಡಾ- ೧
--------

"ಏಕೆ, ಏಕೆ ಇಂದಿಷ್ಟು ಕಡಿಮೆ ಕಲೆಕ್ಷನ್, ನೀನು ದಿನದಿಂದ ದಿನ ಸುಸ್ತು ಆಗುತ್ತ ಹೋಗುತ್ತಿದ್ದಿ ಜೋನಮ್ಮ" ಎಂದು ಸಂಗಮ್ಮ ರೇಗಿದಳು.

"ಏನು ಮಾಡಲಿ ಸಂಗಮ್ಮ, ಬೇರೆ ಏರಿಯದವರು ನಮ್ಮ ಏರಿಯಕ್ಕೆ ಬಂದು ಕಲೆಕ್ಷನ್ ಮಾಡಿ ಹೋಗುತ್ತಾರೆ, ನಾವು ಏರಿಯ ಕವರ್ ಮಾಡಲು ಹೋದಾಗ ಎಲ್ಲರೂ "ಈಗ ತಾನೇ ಕೊಂಡು ಹೋದರು ಎಂದು ಹೇಳುತ್ತಾರೆ" ಜೋನಮ್ಮ ಸಂಕಟದಿಂದ ಉತ್ತರಿಸಿದಳು.

"ಯಾರವರು ಮುಂಡೆ ಮಕ್ಕಳು?" ಸಂಗಮ್ಮ ಕಿರುಚಿದಳು.

"ಅವರೇ ಸಂಗಮ್ಮ, ಮಲ್ಲೇಶ್ವರ ಏರಿಯದ ಜಾನಮ್ಮ ಗ್ಯಾಂಗ್ ದವರು" ಎಂದು ಜೋನಮ್ಮ ಕೋಪದಿಂದ ಉಸಿರೆಲೆದಳು.

"ಅವರಿಗೆ ಒಳ್ಳೆ ಬುದ್ಧಿ ಕಲಿಸುವೆ, ಸ್ವಲ್ಪ ತಾಳು" ಎಂದಳು ಸಂಗಮ್ಮ.

ಅದೊಂದು ಹಿಜಡಾ ಸಮುದಾಯದವರ ಗುಂಪು, ಅಲ್ಲಿಯ ಮುಖ್ಯಸ್ಥೆ ಒಂದು ೪೫ ಹರೆಯದ ಸಂಗಮ್ಮ, ಇದು ದಿನದ ಹಣ ಸಂಗ್ರಹಣೆ ಅಂದರೆ ಅವರ ವ್ಯವಸಾಯದ ಲೆಕ್ಕಾಚಾರದ ಸಮಯ, ಅದಕ್ಕೆ ಅಲ್ಲಿ ೧೫/೨೦ ಹಿಜಡಾಗಳ ಉಪಸ್ಥಿತಿ ಇತ್ತು ಹಾಗು ಸಂಗಮ್ಮ ಎಲ್ಲರಿಂದ ಆ ದಿನದ ಲೆಕ್ಕಾಚಾರ ಕೇಳುತ್ತಿದ್ದಳು.

ಜೋಗಪ್ಪ, ಹಿಜಡಾ, ಖೋಜಾ ಮುಂತಾದ ಹೆಸರುಗಳಿಂದ ಕರೆಯಲ್ಪಡುವವರ ಬದುಕು ಹೀಗೆಯೇ, ಸಣ್ಣ ವಯಸ್ಸಿನಲ್ಲಿ ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಹೊಂದಿದವರು, ಮನೆ ಸಂಬಂಧಿಕರಿಂದ ದೂರವಾಗಿ ಈ ಸಮುದಾಯಕ್ಕೆ ಬಂದು ಸೇರುತ್ತಿದ್ದರು, ಅವರ ಭಾವಗಳೆಲ್ಲ ಸಹಜವಾದದ್ದು, ಆದರೆ ಯೋಗ್ಯ ಸಮಾಜದವರು ಎಂದೆನ್ನುವವರು ಅವರನ್ನು ಹೀನವಾಗಿ, ಅಸಹ್ಯವಾಗಿ ಹಾಗು ತಾತ್ಸಾರದಿಂದ ನೋಡುತ್ತಿದ್ದರು.

ಮೇಲಿನ ಸಂಭಾಷಣೆ ನಡೆಯುತ್ತಿರುವಾಗಲೇ ಬಾನಮ್ಮ ಬಂದು "ಸಂಗಮ್ಮ, ನಿನ್ ಮಗ ಬಂದಿದ್ದಾನೆ ಕಣೋ" ಎಂದು ಜೊತೆಯಲಿ ಬಂದ ೨೩-೨೪ ಹರೆಯದ ಸುಂದರ ಯುವಕನನ್ನು ಪ್ರೀತಿಯಿಂದ ನೋಡಿದಳು, ಅಲ್ಲಿದ್ದ ಇತರ ಹಿಜಡಾಗಳ ಮುಖದಲ್ಲೂ ಸಂತೋಷದ ಭಾವ ಮೂಡಿತು. 

ಸಂಗಮ್ಮನ ಮುಖದಲಿ ಹರ್ಷ ಮೂಡಿತು  "ಏನೇ ಮೋಹನ, ತಿಳಿಸದೇ ಬಂದೆಯಲ್ಲ,  ಪತ್ರ ಗಿತ್ರ ಏನಿಲ್ಲ, ಕೆಲಸಕ್ಕೆ ರಜೆ ಹಾಕಿ ಬಂದೆಯ?”

ಮೋಹನ "ಹೌದಮ್ಮ , ರಜೆ ಹಾಕಿ ಬಂದೆ, ನಿಮ್ಮತ್ರ ಸ್ವಲ್ಪ ಮಾತಾಡ್ಲಿಕ್ಕಿತ್ತು".

ಸಂಗಮ್ಮ "ಏನು ವಿಷಯ?”

ಮೋಹನ್ "ಅಮ್ಮ ನನಗೆ ನಿಮ್ಮತ್ರ ಒಂಟಿಯಾಗಿ ಮಾತನಾಡಲಿಕ್ಕಿದೆ."

ಸಂಗಮ್ಮ "ಇಲ್ಲಿ ಎಲ್ಲ ನಮ್ಮವರೇ, ಹೇಳು"

ಮೋಹನ್ "ಇಲ್ಲಮ್ಮ ಪ್ಲೀಸ್"

ಸಂಗಮ್ಮ ಏನೋ ವಿಷಯ ಇರಬೇಕೆಂದು ತಿಳಿದು ಎಲ್ಲರಿಗೆ ಈಷಾರೆ ಮಾಡಿದ್ದಳು, ಅದನ್ನು ನೋಡಿ ಎಲ್ಲರೂ ಹೊರಗೆ ನಡೆದರು.

(ಮುಂದುವರಿಯುವುದು)

by ಹರೀಶ್ ಶೆಟ್ಟಿ, ಶಿರ್ವ 

4 comments:

  1. ಈ ಹೊಸ ಧಾರವಾಹಿ ಮಾನವೀಯ ಮುಖಿಯಾಗಿದೆ, ಮುಂದುವರೆಸಿರಿ.

    ReplyDelete
  2. This comment has been removed by a blog administrator.

    ReplyDelete
  3. ಮನ ಕಲಕುವ ವಸ್ತುಸ್ಥಿತಿಯ ಕಥಾ ಹಂದರ, 2 ನೆ ಭಾಗದ ನಿರೀಕ್ಷೆಯಲ್ಲಿ
    ಕಾಯುತ್ತಿರುವೆ.

    ReplyDelete
  4. ತುಂಬಾ ತುಂಬಾ ಧನ್ಯವಾದಗಳು ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...