Sunday, May 25, 2014

ಬಂಧಿಸಿಟ್ಟ ಭಾವನೆಗಳು

ಗೆಳತಿ, 
ಹರಿಯ ಬಿಡು 
ಈ ಸಾಗರದಲಿ 
ನಿನ್ನ ಮನಸ್ಸಲ್ಲಿದ ಕಲ್ಮಷಗಳನ್ನು 
ಶುದ್ಧವಾಗಲಿ ಅಂತರಂಗ 
ಪುನಃ ಸ್ಥಾಪಿಸು 
ಮುರಿದ ನಂಟನ್ನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ಮನವೊಲಿಸುವುದು ಕಷ್ಟ 
ಅರಿವಿದೆ ನನಗೆ 
ಆದರೆ 
ಇದರ ಅಗತ್ಯವಿದೆ 
ಇದರ ಸಹ 
ಅರಿವಿದೆ ನನಗೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಬಿಟ್ಟು ಬಿಡುವೆ 
ಈ ಪ್ರಯತ್ನಗಳನ್ನೆಲ್ಲ
ಇನ್ನು ಹೆಚ್ಚು ಸಮಯ
ಈ 
ಹಗೆಯ ಜ್ವಾಲೆಯನ್ನು 
ಸಹಿಸಲಾರೆ ನಾನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಈ ಶರಧಿಯೂ 
ಈಗ ಶಾಂತತೆ ನೀಡುವುದಿಲ್ಲ 
ನನ್ನ ಮನಸ್ಸ ತಳಮಳದಿಂದ 
ಅದಕ್ಕೂ 
ನೆಮ್ಮದಿ ಇಲ್ಲದಾಗಿದೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ನೀ ನನಗೆ ನೀಡುವ 
ಪ್ರತಿಯೊಂದು ನೋವಿನ
ಮದ್ದು ನಿನ್ನ ಹತ್ತಿರವೇ ಇದೆ 
ನನ್ನ ಬಳಿ
ಪಶ್ಚಾತಾಪದ 
ಹೊರತು ಬೇರೇನಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

ಚಿತ್ರ ಕೃಪೆ : ಗೂಗಲ್ 

2 comments:

  1. "ಪ್ರತಿಯೊಂದು ನೋವಿನ
    ಮದ್ದು ನಿನ್ನ ಹತ್ತಿರವೇ ಇದೆ"
    ಅಲ್ಲವೇ ಮತ್ತೇ....

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್ :)

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...