Thursday, May 1, 2014

ಶಾಂತತೆಯಿಲ್ಲ ಈಗ ಸ್ಮಶಾನದಲ್ಲೂ

ಶಾಂತತೆಯಿಲ್ಲ ಈಗ
ಸ್ಮಶಾನದಲ್ಲೂ
ಸಭೆ,ಸಮಾರಂಭ
ಜರುಗುತ್ತಿದೆ
ಈಗ ಇಲ್ಲೂ

ಮೌನದಿ ಮಲಗಿದ
ಕವಿಯೊಬ್ಬನ
ಕೆಡವಿ ಶಾಶ್ವತ ನಿದ್ರೆಯನು
ಕೂತರು ಅವನ ಮೇಲೆ
ಯೋಚಿಸಿರಬಹುದು
ಅವನೆಲ್ಲಿ ಜೀವಂತ ಭಾರವಾಗಲು

ಗೌಜಿ ಗಲಾಟೆ
ಮಾತುಕತೆ ಸುದ್ಧಿ ಗಮ್ಮತ್ತು
ಆಹಾರ ತಿಂಡಿ
ಉಪಹಾರ ಸಹ
ನಡೆಯಿತು ಇಲ್ಲಿಯೇ
ಅವನಿಗೆಲ್ಲಿ ಗೋಚರ ಹಸಿವೆಯಾಗಲು

ಕವನ ಪಠಣ
ಪದಗಳ ತೋರಣ
ಮಿಡಿಯ ಬಹುದೇ
ಪುನಃ ಆತನ ಕವಿ ಹೃದಯ
ಒಂದು ಕವಿತೆ
ಹೊಳೆ ಬಹುದೆ
ಈ ಶಾಂತ ಚಿತ್ತ ನಿದ್ರೆಯಲ್ಲೂ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ನನ್ನ ಸ್ವಂತ ಅಳಲನ್ನು ತಾವು ಕವಿತೆಯಾಗಿಸಿಕೊಟ್ಟಿದ್ದೀರ.
    ಅಕ್ಷಯ ತೃತಿಯದ ಈ ಶುಭದಿನ ನನಗೂ ನಾಲ್ಕು ಅಕ್ಷರ ಹೊಳೆಯಲಿ!!

    ReplyDelete
  2. ಆಶ್ಚರ್ಯ ಅಳಲು ಸಹಿಸಲಾರದೆ ಈ ಕವನ ಮನಸ್ಸಲ್ಲಿ ಹುಟ್ಟಿತು.ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...