Saturday, April 5, 2014

ಅಶ್ವಥಾಮ


ದುರ್ಯೋಧನನ ತೊಡೆ ಭೀಮ ಮುರಿದಿದ್ದ. ಅಸಹನೀಯ ಶಾರೀರಿಕ ಹಾಗು ಮಾನಸಿಕ ಪೀಡೆಯಿಂದ ಬಳಲುತ್ತಿದ್ದ ದುರ್ಯೋಧನನಿಗೆ ಒಂದು ಯಕ್ಷಿಣಿ ಸಹಾನುಭೂತಿ ತೋರಿಸಿದ್ದರೂ, ಆ ಸಮಯ ಮೃತ್ಯು ಮುಖದಲ್ಲಿದ್ದ ದುರ್ಯೋಧನ ಅವಳ ಪ್ರೇಮ ನಿವೇದನೆ ತಿರಸ್ಕರಿಸಿದ್ದ. ಇದು ಆ ಯಕ್ಷಿಣಿಯ ತಪ್ಪಾಗಿತ್ತು, ಮೃತ್ಯು ಮುಖದಲ್ಲಿದ್ದವ ಹೇಗೆ ತಾನೇ ಪ್ರೀತಿ ಪ್ರೇಮ ಮಾಡುವನು.

ದುರ್ಯೋಧನನ ಪರಾಜಯದ ನಂತರ ಪಾಂಡವರ ವಿಜಯ ನಿಶ್ಚಿತವಾಗಿತ್ತು. ಎಲ್ಲ ಪಾಂಡವರು ವಿಜಯದ ಹರ್ಷದಲ್ಲಿದ್ದರು. ಯಾಕೆ ಇರಬಾರದು, ಕೊನೆಗೆ ಗೆಲುವು ಅಂದರೆ ಗೆಲುವೆ.

ಆಗ ದುರ್ಯೋಧನನ ಬಳಿ ಅಶ್ವಥಾಮ ಬರುತ್ತಾನೆ ಹಾಗು ಹೇಳುತ್ತಾನೆ "ಕುರು ಶ್ರೇಷ್ಠ , ನೀವು ಯುದ್ಧ ನಾವು ಸೋತೆವೆಂದು ತಿಳಿಯಬೇಡಿ, ನಾನು ಜೀವಂತ ಇರುವ ತನಕ ಇದು ಅಸಂಭವ, ನೀವು ನನ್ನನ್ನು ಸೇನಾಪತಿ ನಿಯುಕ್ತ ಮಾಡಿ, ನನಗೆ ಅಮರತ್ವದ ವರದಾನ ಪ್ರಾಪ್ತಿ ಇದೆ, ಈಗ ಯುದ್ಧದ ಸಂಚಲನೆ ನಾನು ಮಾಡುವೆ ಹಾಗು ನಿಮಗೆ ಜಯ ಗಳಿಸಿ ಕೊಡುವೆ."

ದುರ್ಯೋಧನನ ಕಣ್ಣಲ್ಲಿ ಕಾಂತಿ ಕಂಡು ಬಂತು ಹಾಗು ಅವನು ತನ್ನ ರಕ್ತದಿಂದ ಅಶ್ವಥಾಮನ ಲಲಾಟಕ್ಕೆ ತಿಲಕ ಮಾಡಿ ಅವನನ್ನು ಸೇನಾಪತಿ ನಿಯುಕ್ತ ಮಾಡುತ್ತಾನೆ. 

ಈಗ ಕೌರವರ ಸೇನಾಪತಿ ಅಶ್ವಥಾಮನಾಗಿದ್ದ, ಅವನು ಹೇಳಿದ " ಕುರು ರಾಜ, ಇಂದೇ ಐದು ಪಾಂಡವರ ಶಿರ ಕತ್ತರಿಸಿ ನಿಮ್ಮ ಕಾಲಿಗೆ ಅರ್ಪಿಸುವೆ." ದುರ್ಯೋಧನನ ಕಣ್ಣಲ್ಲಿ ಪುನಃ ಹೊಳಪು ಕಂಡು ಬಂತು.

ಅಶ್ವಥಾಮ ದ್ರೌಪದಿಯ ಶಿಬಿರಕ್ಕೆ ಬರುತ್ತಾನೆ, ರಾತ್ರಿಯಾಗಿತ್ತು ,ಶಿಬಿರದಲ್ಲಿ ವಿಜಯೋಲ್ಲಾಸ ನಡೆಯುತ್ತಿತ್ತು, ಅವನನ್ನು ಯಾರೂ ತಡೆಯಲಿಲ್ಲ, ಯಾಕೆಂದರೆ ಪಾಂಡವರ ಪ್ರಕಾರ ಯುದ್ಧ ಮುಗಿದಿತ್ತು ಹಾಗು ಕಾವಲು ನೀಡುವವರು ಸಹ ಅನಂದೊತ್ಸವದಲ್ಲಿ ಮಗ್ನರಾಗಿದ್ದರು. ಶಿಬಿರದ ಒಳಗೆ ದ್ರೌಪದಿಯ ಐದು ಕುಮಾರರು ಮಲಗಿದ್ದರು.

ದ್ರೌಪದಿಗೆ ಪ್ರತ್ಯೇಕ ಪಾಂಡವರಿಂದ ಒಂದೊಂದು ಪುತ್ರ ಸಂತಾನ ಪ್ರಾಪ್ತಿಯಾಗಿತ್ತು, ಅವರ ಹೆಸರು ಪ್ರತಿವಿಂಧ್ಯಾ(ಯುಧಿಷ್ಟರ ),ಶ್ರುತುಸೋಮ್ (ಭೀಮ ), ಶ್ರುತುಕರ್ಮ (ಅರ್ಜುನ ), ಶತಾನಿಕ್(ನಕುಲ್ ) ಹಾಗು ಶ್ರುತುಸೇನ್ (ಸಹದೇವ್) ಎಂದಿತ್ತು. ಪ್ರತಿಯೊಂದು ಪುತ್ರ ತನ್ನ ತಂದೆಯ ಹಾಗೆಯೇ ಕಾಣುತ್ತಿದ್ದರು. ಐದು ಪುತ್ರರು ಸಹ ಐದು ಪಾಂಡವರೇ ಎಂದು ಭ್ರಮೆ ಮೂಡುತ್ತಿತ್ತು, ಅಷ್ಟೊಂದು ಹೋಲಿಕೆ ಇತ್ತು. ತಂದೆ, ಪುತ್ರರನ್ನು ಗುರುತಿಸಲು ಕಷ್ಟವಾಗುತ್ತಿತ್ತು.

ಪ್ರತಿಕಾರದ ಅಗ್ನಿಯಲ್ಲಿ ಬೇಯ್ಯುತ್ತಿದ್ದ ಅಶ್ವಥಾಮ ಆ ಮಲಗಿದ್ದ ಕುಮಾರರ ಶಿರ ಕತ್ತರಿಸಿದ ಹಾಗು ಅಲ್ಲಿಂದ ಪಲಾಯನ ಮಾಡಿದ. ದ್ರೌಪದಿಯ ಶಿಬಿರದಲ್ಲಿ ಯಾರಿಗೂ ಇದರ ವಿಷಯ ತಿಳಿಯಲಿಲ್ಲ. ಅಶ್ವಥಾಮ ಆ ಐದು ಶಿರಗಳ ಸಮೇತ ತಳದಲ್ಲಿ ಅಡಗಿದ ದುರ್ಯೋಧನನ ಬಳಿಗೆ ಬಂದ.

ಅಶ್ವಥಾಮ ದುರ್ಯೋಧನನಿಗೆ "ಮಿತ್ರ, ಇಂದು ನನ್ನ ಹೃದಯಕ್ಕೆ ಶಾಂತಿ ಸಿಕ್ಕಿದೆ, ನಾನು ನನ್ನ ತಂದೆಯ ಹತ್ಯೆಯ ಸೇಡು ತಿರಿಸಿದೆ ಹಾಗು ನಿನ್ನ ಋಣ ಸಹ ತಿರಿಸಿದೆ" ಎಂದು ಹೇಳಿ ಆ ಐದು ಶಿರಗಳನ್ನು ದುರ್ಯೋಧನನ ಕಾಲಿಗೆ ಎಸೆದ.

ಅತ್ಯಂತ ಹರ್ಷದಿಂದ ದುರ್ಯೋಧನ ಭೀಮನ ಮಗನ ಶಿರವನ್ನು ಭೀಮನೆಂದು ಭಾವಿಸಿ ಎತ್ತಿ ಅಟ್ಟಹಾಸ ಮಾಡಲಾರಂಭಿಸಿದ. ಆವೇಶದಿಂದ ಅವನು ಆ ಶಿರವನ್ನು ತನ್ನ ಎರಡು ಕೈಯಿಂದ ಒತ್ತಿದ. ಆದರೆ ಇದೇನಾಯಿತು? ಆ ಶಿರ ಸ್ವಲ್ಪ ಒತ್ತಿದಾಗಲೇ ಹೊಡೆದೋಯಿತು, ಒಂದೇ ಕ್ಷಣದಲ್ಲಿ ಅವನಿಗೆ ಎಲ್ಲ ವಿಷಯ ತಿಳಿದು ಬಂತು.

ಶಿರ ಹೊಡೆದು ಹೋದಂತೆಯೇ ದುರ್ಯೋಧನ ಕೋಪದಿಂದ ಕಿರುಚಿದ "ದುಷ್ಟ ಅಶ್ವಥಾಮ , ಇದೇನು ನೀನು ಮಾಡಿದೆ, ಇದು ಭೀಮನ ಶಿರ ಅಲ್ಲ , ಭೀಮನಾದರೆ ಹೀಗೆ ನನ್ನ ಕೈಯಿಂದ ಅವನ ಶಿರ ಇಷ್ಟು ಸುಲಭದಲ್ಲಿ ಹೊಡೆಯುತ್ತದೆಯೇ? ಇವನು ಭೀಮನಲ್ಲ , ಸತ್ಯ ಹೇಳು, ಇವನು ಭೀಮ ಹಾಗು ದ್ರೌಪದಿಯ ಕುಮಾರನಾಗಿರಬೇಕು."

ಈಗ ಅಶ್ವಥಾಮ ಹೇಳಿದ "ನಾನು ದ್ರೌಪದಿಯ ಶಿಬಿರಕ್ಕೆ ಹೋದೆ ಹಾಗು ಇವರನ್ನು ಪಾಂಡವರೆಂದು ತಿಳಿದು ಇವರ ಶಿರ ಕತ್ತರಿಸಿ ತಂದೆ."

ಈಗ ದುರ್ಯೋಧನ ಅಸಹನೀಯ ಪೀಡೆಯಿಂದ "ಅಯ್ಯೋ ,ದುಷ್ಟ ಅಶ್ವಥಾಮನೆ, ಇದೇನು ಮಾಡಿದೆ ನೀನು, ನಮ್ಮ ವಂಶವನ್ನೇ ನೀನು ಮುಗಿಸಿ ಬಿಟ್ಟೆಯಲ್ಲ, ಇವರು ನಮ್ಮ ವಂಶದ ಕೊನೆ ಚಿಹ್ನೆಯಾಗಿದ್ದರು ಹಾಗು ನಮ್ಮ ವಂಶವನ್ನು ಮುಂದೆ ಕೊಂಡೋಗಿ ಬೆಳೆಸಿಳಕ್ಕಿದ್ದರು, ನೀನು ಎಲ್ಲವನ್ನೂ ನಾಶಗೊಳಿಸಿ ಬಿಟ್ಟೆ."

"ಅಯ್ಯೋ ದುಷ್ಟ, ದೂರವಾಗು ನನ್ನ ಕಣ್ಣ ಮುಂದೆಯಿಂದ" ಎಂದು ಹೇಳಿದ ನಂತರ ತುಂಬಾ ಪೀಡೆಯಿಂದ ಮಹಾಶಕ್ತಿಶಾಲಿ ದುರ್ಯೋಧನ ತನ್ನ ಪ್ರಾಣ ಬಿಟ್ಟ.

ಅಲ್ಲಿ ದ್ರೌಪದಿಯ ಶಿಬಿರದಲ್ಲಿ ಶಿರವಿಲ್ಲದ ಐದು ಕುಮಾರರ ಶವವನ್ನು ಕಂಡು ಕೂಗಾಟ ನಡೆದಿತ್ತು, ದ್ರೌಪದಿ ವಿಲಾಪಿಸುತ್ತಿದ್ದಳು, ಕೃಷ್ಣ ಹಾಗು ಪಾಂಡವರು ಸ್ತಬ್ದರಾಗಿ ನಿಂತಿದ್ದರು.

ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ "ಇದನ್ನು ಮಾಡಿದವರು ಯಾರಿರಬಹುದೆಂದು?" 

(ಮಹಾಭಾರತದಿಂದ)

ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

2 comments:

  1. ಕುರುಕ್ಷೇತ್ರದ ಕಣ್ಣಿರ ಅಧ್ಯಾಯ!

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್, ತಮ್ಮ ದಿನನಿತ್ಯದ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...