Wednesday, April 2, 2014

ದ್ರೌಪದಿ

ದ್ರೌಪದಿಯನ್ನು ಜೂಜಲ್ಲಿ ಸೋಲುವ ಪಾಪ ಕರ್ಮ ಮಾಡಿದ ನಂತರ ಕ್ಷೋಬೆ ಹಾಗು ನಾಚಿಗೆಯಿಂದ ಯುಧಿಷ್ಟರ ಮೌನವಾಗಿದ್ದ. ಧೃತರಾಷ್ಟ್ರ ಮತ್ತು ದುರ್ಯೋಧನರ ಸೇವೆಯ ವಚನದಲ್ಲಿ ಬಂದಿತ ಭೀಷ್ಮ ಹಾಗು ಗುರು ದ್ರೋಣ  ವ್ಯಾಕುಲ ಹಾಗು ಲಜ್ಜೆಯಿಂದ ತಲೆ ತಗ್ಗಿಸಿ ಮೌನ ಕುಳಿತ್ತಿದ್ದರು. 

ದ್ರೌಪದಿಯನ್ನು ಗೆದ್ದ ಮದದಲ್ಲಿ ದುರ್ಯೋಧನ ಮಹಾಮಂತ್ರಿ ವಿಧುರರಿಗೆ ದ್ರೌಪದಿಯನ್ನು ರಾಜ ಸಭೆಗೆ ಕರೆದುಕೊಂಡು ಬರಲು ಆದೇಶ ನೀಡಿದ. 

ಮಹಾತ್ಮ ವಿಧುರರಿಗೆ ಈ ಸ್ಥಿತಿ ಸಹಿಸಲಾಗಲಿಲ್ಲ, ಅವರು ಸಭೆಯನ್ನು ಕುರಿತು  "ಯುಧಿಷ್ಟರ ಸ್ವತಃ ತನ್ನನ್ನೆ ಜೂಜಲ್ಲಿ ಸೋತ ನಂತರ ದ್ರೌಪದಿಯನ್ನು ಪಣಕ್ಕಿಟ್ಟಿದ್ದ, ಸೋತ ಮನುಷ್ಯ ಬೇರೆ ಯಾರನ್ನು ಹೀಗೆ ಪಣಕ್ಕೆ ಇಡಬಹುದೇ?" ಎಂಬ ಸವಾಲೆಸೆದರು. ಅವರ ಸವಾಲಿಗೆ ಉತ್ತರವಿಲ್ಲದೆ ಎಲ್ಲರೂ ಮೌನವಾಗಿದ್ದರು.

ಆಗ ದುರ್ಯೋಧನ ಗಹಗಹಿಸಿ ನಕ್ಕ ಹಾಗು "ಮಹಾಮಂತ್ರಿ, ನೀವು ಹೇಳಿದಷ್ಟು ಕೆಲಸ ಮಾಡಿ, ನಿಮ್ಮ ಧರ್ಮ ಪಾಲನೆ ಮಾಡಿ". ವಿಧುರರು ಕೋಪದಿಂದ  ದುರ್ಯೋಧನನಿಗೆ  "ಅಧರ್ಮಿ ದುಷ್ಟನೇ ,ನಿನ್ನ ಪಾಪದ ಬಿಂದಿಗೆ ತುಂಬಿದೆ, ನಿನ್ನ ಕೊನೆ ನಿಶ್ಚಿತ" ಎಂದು ಹೇಳಿ ಸಭೆಯಿಂದ ತೆರಳಿದರು.

ವಿಧುರರು ಹೋದ ನಂತರ ದುರ್ಯೋಧನ ತನ್ನ ಧೂತ ಪ್ರತಿಕಾಮಿಯನ್ನು ದ್ರೌಪದಿಯನ್ನು ಕರೆದುಕೊಂಡು ಬರಲು ಹೇಳಿದ. ಪ್ರತಿಕಾಮಿ ಮೂರು ಸಲ ಹೋದ, ಆ ಮೂರು ಸಲ ಸಹ ದ್ರೌಪದಿ ಅವನಿಗೆ ಒಂದೊಂದೇ ಪ್ರಶ್ನೆ ಕೇಳಿ ಕಳಿಸಿದಳು.

ದ್ರೌಪದಿಗೆ ವಿಧುರ ಕೇಳಿದ ಪ್ರಶ್ನೆಯ ಅರಿವಿರಲಿಲ್ಲ, ಆದರೂ ಅವಳ ಸಹ ಮೊದಲ ಪ್ರಶ್ನೆ ಅದೇ ಆಗಿತ್ತು "ಹೋಗು, ಆ ಜೂಜುಗಾರ ಮಹಾರಾಜರಿಗೆ ಕೇಳು ಮೊದಲು ಅವರು ತನ್ನನ್ನು ಸೋತದ್ದ ಅಥವಾ ಮೊದಲು ನನ್ನನ್ನು ಸೋತದ್ದ?"

ಯುದಿಷ್ಟರನಿಗೆ ಉತ್ತರಿಸಲಾಗಲಿಲ್ಲ.

ಪ್ರತಿಕಾಮಿ ಎರಡನೆ ಸಲ ಬಂದಾಗ ಅವಳು  "ಕುರು ವಂಶದವರಿಗೆ ಹೋಗಿ ಕೇಳು,ನಾನು ಏನು ಮಾಡಲಿ ಎಂದು, ಅವರ ಆದೇಶ ನನಗೆ ಮಾನ್ಯ?" ಅವಳ ಈ ಪ್ರಶ್ನೆ ನೇರ ಭೀಷ್ಮ ಹಾಗು ಧೃತರಾಷ್ಟ್ರರಿಗೆ ಇತ್ತು.  

ಮೂರನೇ ಸಲ ಪ್ರತಿಕಾಮಿ ಹೋದಾಗ ದುರ್ಯೋಧನ ಅವಸರದಿಂದ ದುಃಶಾಸನನನ್ನು ಅವಳನ್ನು ಕರೆದುಕೊಂಡು ಬರಲು ಹೇಳಿದ. ಅದರ ನಂತರ ಆದ ಘಟನೆ ಎಲ್ಲರಿಗೆ ತಿಳಿದದ್ದು.

ಇಲ್ಲಿ ಗಮನ ಕೊಡುವ ವಿಷಯವೆಂದರೆ ದ್ರೌಪದಿಯ ಧರ್ಮಾಚರಣೆ, ದುಃಶಾಸನ ಅವಳನ್ನು ಎಳೆದುಕೊಂಡು ಹೋಗುವಾಗ ತನ್ನ ಆ ದುರಾವಸ್ಥೆಯ ಮಧ್ಯೆ ಸಹ ಅವಳ ಪ್ರಶ್ನೆಗಳು ಧರ್ಮದ ಆಧಾರಿತವಾಗಿತ್ತು ಹಾಗು ಅದರ ಉತ್ತರ ಕೊಡುವ ಸಾಹಸ ಆ ಸಭೆಯಲ್ಲಿ ಯಾರಲ್ಲೂ ಇರಲಿಲ್ಲ. ಮಹಾಭಾರತದಲ್ಲಿ ಧರ್ಮರಾಜನೆಂದು ಹೆಸರು ಯುಧಿಷ್ಟರನಿಗೆ ನೀಡಿದ್ದಾರೆ, ಆದರೆ ಆಜೀವನ ನಿಷ್ಠೆಯಿಂದ ಧರ್ಮದ ನಿಖರವಾಗಿ ಪಾಲನೆ ಮಾಡಿದ ದ್ರೌಪದಿಯಂತ ಉದಾಹರಣೆ ನಮಗೆ ಇಡಿ ಮಹಾಭಾರತದಲ್ಲಿ  ಬೇರೆ ಯಾವುದೇ ಸಿಗುವುದಿಲ್ಲ.

ಐದು ಪಾಂಡವರ ಜೊತೆ ಮದುವೆ ಆಗಿ ಸಹ ಅವಳ ಪತ್ನಿ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆ, ಅದೆಷ್ಟೋ ಕಷ್ಟ ಸಹಿಸಿ ಸಹ ಧರ್ಮದ ಮಾರ್ಗ ಬಿಡದ ಈ ನಾರಿಯ ಚರಿತ್ರ ಅದೆಷ್ಟು ಪಾವನ. ಸಹನಶೀಲತೆ ಧೈರ್ಯ , ಸಾಹಸ  ತುಂಬಿದ ಈ ಅಸಾಧಾರಣ ಹೆಣ್ಣಿನ ಮೇಲೆ ಮನಸ್ಸಲ್ಲಿ  ಭಕ್ತಿ, ಗೌರವ, ಶ್ರದ್ಧೆ  ತುಂಬಿ ಬರುತ್ತದೆ.

(ಮಹಾಭಾರತದಿಂದ)

ವ್ಯಾಖ್ಯಾನ : ಹರೀಶ್ ಶೆಟ್ಟಿ,ಶಿರ್ವ

2 comments:

  1. ಅದಕಾಗಿಯೇ ಆಕೆ ಪತಿವ್ರತೆಯರ ಸಾಲಿನಲ್ಲಿ ಇರುವವಳು. ಒಳ್ಳೆಯ ವಿಮರ್ಷೆ.

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್, ತಮ್ಮ ದಿನನಿತ್ಯದ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...