Saturday, April 12, 2014

ದಾನವೀರ ಕರ್ಣ


ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಸೂರ್ಯಾಸ್ತದ ನಂತರ ಎಲ್ಲರು ತಮ್ಮ ತಮ್ಮ ಶಿಬಿರದಲ್ಲಿ ಇದ್ದರು. ಆ ದಿವಸ ಅರ್ಜುನ ಕರ್ಣನನ್ನು ಸೋಲಿಸಿ ತುಂಬಾ ಅಹಂಕಾರದಲ್ಲಿದ್ದ. ಅವನು ತನ್ನ ಶೌರ್ಯದ ಪ್ರಶಂಸೆ ಮಾಡುತ ಕರ್ಣನನ್ನು ತೆಗಳತೊಡಗಿದ. ಇದನ್ನು ನೋಡಿ ಕೃಷ್ಣ "ಪಾರ್ಥ, ಕರ್ಣ ಸೂರ್ಯ ಪುತ್ರ, ಅವನ ಕವಚ ಹಾಗು ಕುಂಡಲ ಪಡೆದ ನಂತರವೇ ನಿನಗೆ ವಿಜಯ ಪಡೆಯಲು ಸಾಧ್ಯವಾಯಿತು ಇಲ್ಲಾದರೆ ಅವನನ್ನು ಪರಾಜಿತ ಮಾಡಲು ಯಾರಿಂದಲೂ ಸಾಧ್ಯವಿರಲಿಲ್ಲ, ವೀರೋಚಿತ ಜೊತೆಗೆ ಅವನು ದೊಡ್ಡ ದಾನವೀರ ಸಹ." ಕರ್ಣನ ದಾನವೀರತದ ಮಾತು ಕೇಳಿ ಅರ್ಜುನ ಕೆಲವು ಉದಾಹರಣೆ ನೀಡಿ ಕರ್ಣನ ಉಪೇಕ್ಷೆ ಮಾಡಲಾರಂಭಿಸಿದ. ಶ್ರೀಕೃಷನಿಗೆ ಅರ್ಜುನನ ಮನಸ್ಥಿತಿ ಅರ್ಥವಾಯಿತು. ಅವರು ಶಾಂತ ಸ್ವರದಲ್ಲಿ ಹೇಳಿದರು "ಪಾರ್ಥ, ಕರ್ಣ ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದಾನೆ. ನೀನು ಬೇಕಾದರೆ ಕರ್ಣನ ದಾನವೀರತೆಯ ಪರೀಕ್ಷೆ ತೆಗೆದುಕೊಳ್ಳಬಹುದು." ಅರ್ಜುನ ಶ್ರೀಕೃಷ್ಣನ ಮಾತು ಒಪ್ಪಿದ. 


ಇಬ್ಬರು ಬ್ರಾಹ್ಮಣರ ವೇಷ ಧರಿಸಿ ಕರ್ಣನಲ್ಲಿಗೆ ಬಂದರು. ಗಾಯಗೊಂಡಿದರೂ ಕರ್ಣ ಅವರಿಗೆ ಪ್ರಣಾಮ ಮಾಡಿ ಅವರು ಬರುವ ಉದ್ದೇಶ ಕೇಳಿದ. ಬ್ರಾಹ್ಮಣ ವೇಷದಲ್ಲಿದ ಶ್ರೀಕೃಷ್ಣ " ರಾಜನೇ, ನಿಮ್ಮ ಜಯವಾಗಲಿ,ನಾವು ಇಲ್ಲಿ ದಾನ ಪಡೆಯಲು ಬಂದಿದ್ದೇವೆ. ಕೃಪೆ ಮಾಡಿ ನಮ್ಮ ಇಚ್ಛೆ ಪೂರ್ಣಗೊಳಿಸಿ." ಕರ್ಣ ಸ್ವಲ್ಪ ಲಜ್ಜಿತನಾಗಿ "ಬ್ರಾಹ್ಮಣ ದೇವ, ನಾನು ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದೇನೆ, ನನ್ನೆಲ್ಲ ಸೈನಿಕರು ಸಾವನ್ನಪ್ಪಿದ್ದಾರೆ, ಮೃತ್ಯು ನನ್ನನ್ನು ಕಾಯುತ್ತಿದೆ, ಈ ಅವಸ್ಥೆಯಲ್ಲಿ ನಾನು ಏನನ್ನು ನಿಮಗೆ ನೀಡಲಿ."

"ರಾಜನೇ, ಇದರ ಅರ್ಥ ನಾವು ಹೀಗೆಯೇ ಖಾಲಿ ಕೈ ಹೋಗಬೇಕೆಂದೇ? ಆದರೆ ಇದರಿಂದ ನಿಮ್ಮ ಕೀರ್ತಿಗೆ ಹಾನಿಯಾಗುತ್ತದೆ, ವಿಶ್ವ ನಿಮ್ಮನ್ನು ಧರ್ಮವಿಹೀನ ರಾಜನ ರೂಪದಲ್ಲಿ ನೆನಪಿಡುವರು." ಇದನ್ನು ಹೇಳಿ ಅವರು ಹಿಂತಿರುಗಿ ಹೋಗಲಾರಂಭಿಸಿದರು. ಆಗ ಕರ್ಣ ಹೇಳಿದ "ನಿಲ್ಲಿ ಬ್ರಾಹ್ಮಣ ದೇವ, ನನಗೆ ಯಶಸ್ಸು,ಕೀರ್ತಿಯ ಆಸೆ ಇಲ್ಲ, ಆದರೆ ನಾನು ಧರ್ಮದಿಂದ ವಿಮುಖವಾಗಿ ಸಾಯಲು ಬಯಸುವುದಿಲ್ಲ, ನಾನು ನಿಮ್ಮ ಇಚ್ಛೆ ಖಂಡಿತ ಪೂರ್ಣಗೊಳಿಸುವೆ." ಕರ್ಣನ ಎರಡು ಹಲ್ಲು ಚಿನ್ನದ ಇತ್ತು, ಅವನು ಬಳಿ ಬಿದ್ದ ಕಲ್ಲಿನಿಂದ ಆ ಚಿನ್ನದ ಹಲ್ಲನ್ನು ತುಂಡು ಮಾಡಿದ ಹಾಗು ಹೇಳಿದ "ಬ್ರಾಹ್ಮಣ ದೇವ, ನಾನು ಸದಾ ಚಿನ್ನದ ದಾನವೇ ಮಾಡಿದ್ದೇನೆ, ನೀವು ಈ ಚಿನ್ನದ ಹಲ್ಲನ್ನು ಸ್ವೀಕರಿಸಿ." ಶ್ರೀಕೃಷ್ಣ ದಾನ ಅಸ್ವೀಕರಿಸಿ "ರಾಜನೇ, ಈ ಹಲ್ಲುಗಳಲ್ಲಿ ರಕ್ತ ತಾಗಿದೆ ಹಾಗು ಇದನ್ನು ನೀವು ತನ್ನ ಮುಖದಿಂದ ತೆಗೆದಿದರಿಂದ ಇದು ಅಶುದ್ಧವಾಗಿದೆ, ನಾವು ಅಶುದ್ಧ ಸ್ವರ್ಣ ಸ್ವೀಕರಿಸಲಾರೆವು." ಆಗ ಕರ್ಣ ತನ್ನ ದೇಹವನ್ನು ಎಳೆದುಕೊಂಡು ಹೋಗಿ ತನ್ನ ಧನುಸ್ಸು ಇದ್ದಲ್ಲಿ ಹೋದ ಹಾಗು ಬಾಣ ಏರಿಸಿ ಗಂಗೆಯ ಸ್ಮರಣೆ ಮಾಡಿದ ನಂತರ ಬಾಣವನ್ನು ಭೂಮಿಗೆ ಬಿಟ್ಟ. ಭೂಮಿಗೆ ಬಾಣ ತಾಗಿದಂತೆ ಭೂಮಿಯಿಂದ ಗಂಗೆಯ ಜಲಧಾರೆ ಹರಿಯಲಾರಂಭಿಸಿತು, ಕರ್ಣ ಅದರಲ್ಲಿ ಆ ಹಲ್ಲುಗಳನ್ನು ತೊಳೆದು ಅವರಿಗೆ ಕೊಟ್ಟು "ಬ್ರಾಹ್ಮಣ ದೇವ, ಈಗ ಇದು ಶುದ್ಧವಾಗಿದೆ, ದಯಮಾಡಿ ಇದನ್ನು ಸ್ವೀಕರಿಸಿ." 

ಆಗ ಕರ್ಣನ ಮೇಲೆ ಪುಷ್ಪದ ವರ್ಷ ಬೀಳಲಾರಂಭಿಸಿತು ಹಾಗು ದೇವ ಶ್ರೀಕೃಷ್ಣ ಮತ್ತು ಅರ್ಜುನ ತನ್ನ ವಾಸ್ತವಿಕ ರೂಪದಲ್ಲಿ ಪ್ರಕಟವಾದರು. ವಿಸ್ಮಿತಗೊಂಡ ಕರ್ಣ ದೇವ ಶ್ರೀಕೃಷ್ಣನ ಮುಂದೆ ಶ್ರದ್ಧೆಯಿಂದ ಕೈ ಮುಗಿದು "ದೇವ, ನಿಮ್ಮ ದರ್ಶನ ಪಡೆದು ನಾನು ಧನ್ಯನಾದೆ, ನನ್ನ ಎಲ್ಲ ಪಾಪ ನಷ್ಟವಾಯಿತು ಪ್ರಭು, ನೀವು ಭಕ್ತರ ಕ್ಷೇಮ ಬಯಸುವವರು, ನನ್ನ ಮೇಲೆಯೂ ಕೃಪೆ ಮಾಡಿ." ಶ್ರೀಕೃಷ್ಣ ಕರ್ಣನಿಗೆ ಆಶಿರ್ವಾದ ನೀಡಿ ಹೇಳಿದರು "ಕರ್ಣ, ಸೂರ್ಯ, ಚಂದ್ರ, ತಾರೆ, ಪೃಥ್ವಿ ಇದ್ದ ತನಕ ನಿನ್ನ ದಾನವೀರತೆಯ ಗುಣಗಾನ ಮೂರು ಲೋಕದಲ್ಲಿಯೂ ನಡೆಯಲಿದೆ, ವಿಶ್ವದಲ್ಲಿ ನಿನ್ನಂತಹ ಮಹಾನ ದಾನವೀರ ಹುಟ್ಟಲಿಲ್ಲ , ಹುಟ್ಟಲಿಕ್ಕಿಲ್ಲ. ನಿನ್ನ ಈ ಬಾಣ ಗಂಗೆ ಯುಗ ಯುಗ ತನಕ ನಿನ್ನ ಗುಣಗಾನ ಮಾಡುತ್ತಿರುತ್ತದೆ. ಈಗ ನಿನಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಕರ್ಣ ದಾನವೀರತೆ ಹಾಗು ಧರ್ಮನಿಷ್ಠೆ ನೋಡಿ ಅರ್ಜುನ ಸಹ ಅವನ ಮುಂದೆ ಶರಣಾಗತನಾದ.

(ಮಹಾಭಾರತದಿಂದ)
ವ್ಯಾಖ್ಯಾನ : ಹರೀಶ್ ಶೆಟ್ಟಿ, ಶಿರ್ವ

1 comment:

  1. ತುಂಬ ಒಳ್ಳೆಯ ಬರಹ.
    ತಮ್ಮ ಈ ಬರಹ ಓದಿ ನನಗೆ ಮೊದಲು ನೆನಪಾದದ್ದು NTR ನಟಿಸಿ ನಿರ್ಧೇಶಿಸಿದ ತೆಲುಗಿನ 'ದಾನ ವೀರ ಶೂರ ಕರ್ಣ' ಯಾನೀ DVS ಕರ್ಣ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...