Wednesday, April 2, 2014

ಅನ್ನ

ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಭೀಷ್ಮ ಪಿತಾಮಹ ಅರ್ಜುನನ ಬಾಣದಿಂದ ಗಾಯಗೊಂಡು ಬಾಣದಿಂದ ನಿರ್ಮಿತ ಶಯ್ಯೆಯಲ್ಲಿ ಬಿದ್ದಿದ್ದರು. ಕೌರವರು ಹಾಗು ಪಾಂಡವರು ಪ್ರತಿ ದಿನ ಅವರನ್ನು ಕಾಣಲು ಬರುತ್ತಿದ್ದರು.

ಒಂದು ದಿನದ ಪ್ರಸಂಗ. 


ಪಾಂಡವರು ಮತ್ತು ದ್ರೌಪದಿ ಅವರ ಸುತ್ತ ಕುಳಿತುಕೊಂಡಿದ್ದರು ಹಾಗು ಭೀಷ್ಮ ಪಿತಾಮಹ ಅವರಿಗೆ ಉಪದೇಶ ನೀಡುತ್ತಿದ್ದರು. ಎಲ್ಲರು ಶ್ರದ್ಧೆಯಿಂದ ಅವರ ಉಪದೇಶ ಕೇಳುತ್ತಿದ್ದರು. ಇದ್ದಕ್ಕಿದಂತೆ ದ್ರೌಪದಿ ಜೋರಾಗಿ ನಗಲಾರಂಭಿಸಿದಳು. ಭೀಷ್ಮರಿಗೆ ಇದನ್ನು ನೋಡಿ ತುಂಬಾ ವೇದನೆ ಉಂಟಾಯಿತು ಹಾಗು ಅವರು ಉಪದೇಶ ಕೊಡುವುದನ್ನು ನಿಲ್ಲಿಸಿದರು. ಪಾಂಡವರು ಸಹ ಆಶ್ಚರ್ಯಚಕಿತರಾಗಿದ್ದರು, ಎಲ್ಲರೂ ಶಾಂತವಾದರು. ಸ್ವಲ್ಪ ಕ್ಷಣದ ನಂತರ ಪಿತಾಮಹ ಕೇಳಿದರು "ಮಗಳೇ , ನೀನೊಂದು ಉತ್ಕೃಷ್ಟ ಕುಲದ ಹೆಣ್ಣು, ನಿನ್ನ ಈ ನಗುವಿನ ಕಾರಣ ನಾನು ತಿಳಿಯಬಹುದೇ?"


ದ್ರೌಪದಿ "ಪಿತಾಮಹ, ಇಂದು ನೀವು ನಮಗೆ ಅನ್ಯಾಯದ ವಿರುದ್ಧ ಹೋರಾಡಲು ಉಪದೇಶ ನೀಡುತ್ತಿದ್ದಿರಿ, ಆದರೆ ತುಂಬು ಸಭೆಯಲ್ಲಿ ನನ್ನನ್ನು ನಿರ್ವಸ್ತ್ರ ಮಾಡುವ ಕೇಡುತನ ಮಾಡುತ್ತಿದ್ದಾಗ, ನಿಮ್ಮ ಈ ಎಲ್ಲ ಉಪದೇಶ ಎಲ್ಲಿ ಹೋಗಿತ್ತು, ಆ ಸಮಯ ನೀವೇಕೆ ಮೌನ ಧಾರಣೆ ಮಾಡಿದ್ದಿರಿ?

ಇದನ್ನು ಕೇಳಿ ಭೀಷ್ಮ ಪಿತಾಮಹರ ಕಣ್ಣಿಂದ ಕಣ್ಣೀರು ಸುರಿಯಲಾರಂಭಿಸಿತು. ಮೆಲ್ಲ ಸ್ವರದಿಂದ ಅವರು ಹೇಳಿದರು "ಪುತ್ರಿ, ನಿನಗೆ ಗೊತ್ತಿದೆ ಆ ಸಮಯ ನಾನು ದುರ್ಯೋಧನನ ಅನ್ನ ತಿನ್ನುತ್ತಿದ್ದೆ, ಆ ಅನ್ನ ಸಮಸ್ತ ಪ್ರಜೆಗೆ ದುಃಖ ನೀಡಿ ಸಂಪಾದಿಸಿದ್ದು, ಅಂತಹ ಅನ್ನ ತಿಂದು ನನ್ನ ಸಂಸ್ಕೃತಿ ಸಹ ಕ್ಷೀಣವಾಗಿತ್ತು, ಫಲಸ್ವರೂಪ ಆ ಸಮಯ ನನ್ನ ವಾಣಿ ನಿರ್ಬಂಧಿತವಾಯಿತು, ಆದರೆ ಈಗ ಆ ಅನ್ನದಿಂದ ನಿರ್ಮಿತ ರಕ್ತ ಈ ದೇಹದಿಂದ ಹರಿದು ಹೋಗಿ ನನ್ನ ಸ್ವಾಭಾವಿಕ ಸಂಸ್ಕೃತಿ ಪುನಃ ಹಿಂತಿರುಗಿ ಬಂದಿದೆ ಹಾಗು ತಾನಾಗಿಯೇ ನನ್ನ ಮುಖದಿಂದ ಉಪದೇಶ ಹೊರ ಬರುತ್ತಿದೆ, ಪುತ್ರಿ  ಯಾರೆಂತಹ ಅನ್ನ ತಿನ್ನುತ್ತಾರೋ ಅವರ ಮನಸ್ಸು ಸಹ ಹಾಗೆಯೇ ಆಗುತ್ತದೆ".

(ಮಹಾಭಾರತದಿಂದ)

2 comments:

  1. ಅನ್ನ ಮತ್ತು ಅದು ರಕ್ತವಾಗಿ ನಿಷ್ಠಾಪರತೆ ಬಗ್ಗೆ ಭೀಷ್ಮನ ವ್ಯಾಖ್ಯಾನ ಸರಿಯಾಗೇ ಇದೆ.

    ReplyDelete
  2. ಅನೇಕ ಧನ್ಯವಾದಗಳು ಬದರಿ ಸರ್, ತಮ್ಮ ದಿನನಿತ್ಯದ ಪ್ರೋತ್ಸಾಹಕ್ಕೆ ನಾನು ಚಿರಋಣಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...