Sunday, March 30, 2014

ಮೌನ ರಾತ್ರಿ

ಕತ್ತಲು ರಾತ್ರಿ
ಎಲ್ಲೆಡೆ ನೀರವತೆ
ತಾಳಲಾರದ ಚಳಿ
ತಂಪು ನೆಲ
ಕಂಪಿಸುವ ದೀಪ
ಸುಸ್ತು ಉಸಿರು
ಬತ್ತಿದ ಕಂಗಳು
ವ್ಯಾಕುಲ ಮನಸ್ಸು
ಆತುರ ಹೃದಯ
ಬರುವನೆಂದು ಆಸೆ!
ಸುಳ್ಳು ನಿರೀಕ್ಷೆ
ಯಾಕೆ ಬರುತ್ತಾನೆ
ಈ ಹೃದಯದ ಗಾಯ ನೋಡಲು!
ಈ ವೇದನೆಯನ್ನು ಅರಿತುಕೊಳ್ಳುವವರು ಯಾರು?
ಭಯಭೀತ ಜೀವನ
ದಿನನಿತ್ಯ ಮರಣ
ಕ್ಷಣ ಎರಡು ಕ್ಷಣದ ತೃಪ್ತಿಯ ಆಸೆಯಲಿ
ಉಸಿರು ಉಳಿದಿದೆ ಈ ದೇಹದಲಿ

ಮೌನ ರಾತ್ರಿ
ಎಲ್ಲೆಡೆ ನೀರವತೆ...

by ಹರೀಶ್ ಶೆಟ್ಟಿ,ಶಿರ್ವ  

2 comments:

  1. ನನನ್ನೂ ಈ ಸಾಲುಗಳು ಕಾಡುತ್ತವೆ.
    ಮೌನ ರಾತ್ರಿ
    ಎಲ್ಲೆಡೆ ನೀರವತೆ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...