Saturday, February 22, 2014

ವಿಪರ್ಯಾಸ

ಅಟ್ಟದಲ್ಲಿಟ್ಟ 
ಬೆಲ್ಲದ ಡಬ್ಬದಲ್ಲಿ
ಇರುವೆಗಳ ಸಾಮ್ರಾಜ್ಯ 
_______

ಕಹಿ ಬೇವಿನ 
ಕೃಪೆಯಿಂದ 
ಅವನಿಗೆ ಕಾಯಿಲೆಯಿಂದ ಮುಕ್ತಿ
ಈಗ ಅವನ ಮನೆ ಸುತ್ತ ಮುತ್ತ ಕಹಿ ಬೇವಿನ ಮರಗಳು 
_______

ಬೆರೆಸಿ
ಅದೆಷ್ಟೋ ಮಸಾಲೆಗಳನ್ನು
ಅವನು ಮಾಡಿದ ಸಾರು
ಆಸ್ಪತ್ರೆಗೆ ಸೇರಿದರು ಆ ಸಾರನ್ನು ತಿಂದ ಊರಿನ ಜನರು
_______

ಕತ್ತೆಯ ಕುತ್ತಿಗೆಯಲ್ಲಿ
ಮುತ್ತಿನ ಸರ
ಮನೆ ಒಡತಿಯ ಮೈಯಲ್ಲಿ ತಾಳಿ ಸಹ ಇಲ್ಲ
_______

ಮನೆ ಬಾವಿಯಲ್ಲಿ ನೀರಿಲ್ಲ
ತೆಂಗಿನ ಮರದಲ್ಲಿ
ಕುಳಿತು ಎಳನೀರು
ಕುಡಿಯುತ್ತಿತ್ತು ಮಂಗಗಳ ತಂಡ

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...