Sunday, February 16, 2014

ಮಹತ್ವ


ಅಮ್ಮ ಅಪ್ಪ ಇಬ್ಬರಲ್ಲಿ 
ನನಗೆ ಅಮ್ಮ ಅಂದರೆ ಜೀವ 
ಎನ್ನುತ್ತಿದ್ದ ಆ ಹುಡುಗ 
ತಂದೆ ಹಿಂದೆ ನಿಂತು ನಗುತ್ತಿದ್ದ

-----------

ಮಾಲಿ 
ಗುಲಾಬಿ ಹೂವನ್ನು 
ಕಿತ್ತು ಜೋಪಾನವಾಗಿ ಇಟ್ಟ
ಅದರ ಮುಳ್ಳನ್ನು ಕಿತ್ತು ಎಸೆದ

----------

ಮರವೊಂದು ಬಿತ್ತು
ಜನರೆಲ್ಲಾ "ಮರ ಬಿತ್ತು, ಮರ ಬಿತ್ತು"
ಎಂದು ಕೂಗಿದರು,
ಮಣ್ಣಲ್ಲಿ ತುಂಡಾದ ಬೇರು
ಅಳುವುದನ್ನು ಯಾರೂ ಕಂಡಿಲ್ಲ

----------

ಅಂಗಿಯ ಬಟನ್
ತುಂಡಾಗಿ ಬಿತ್ತು
ದಾರ ಅಂಗಿಯಲಿ
ನೇಲುತ್ತಿತ್ತು

---------

ಮಂದಿರದಲ್ಲಿ ತುಂಬಿದ
ದೇಣಿಗೆ ಡಬ್ಬಿಯಲ್ಲಿ
ಅವನು ಬಲಯುತವಾಗಿ
ನೋಟು ತೂರುತ್ತಿದ್ದ
ಹೊರಗೆ ಕುಳಿತ ಭಿಕ್ಷುಕನಿಗೆ
ಒಂದಾಣೆ ಸಹ ನೀಡಲಿಲ್ಲ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...