Saturday, November 16, 2013

ಈ ಜಗವೆಲ್ಲ

!!ಈ ಜಗವೆಲ್ಲ
ಈ ಸಭೆಯೆಲ್ಲ
ನನಗೀಗ ನಿರರ್ಥಕವೆಲ್ಲ!!-೨

!!ಯಾರಿಗೇಳಲಿ
ಹಂಬಲಿಸುವ ಮನಸ್ಸಿನ ವ್ಯಥೆಯ
ನಂದಿ ಹೋಗುವ ದೀಪ ನಾನು
ನನ್ನದೇ ಗೋರಿಯ
ಬಯಸುವೆ ಮರೆಯಲೆಂದು
ಆದರೆ ಮರೆಯಲಾಗುವುದಿಲ್ಲ
ಎಷ್ಟು ಸಂಭ್ರಮದಿಂದ ನಡೆದಿತ್ತು
ಶವ ಯಾತ್ರೆ ವಸಂತದ!!
ಈ ಜಗವೆಲ್ಲ.......

!!ಅರಿವಿಲ್ಲ ನನ್ನ ಅವಸ್ಥೆಯ
ತಿಳಿದಿಲ್ಲ ಅವಳ ಸುದ್ಧಿ ಸ್ಥಿತಿಯ 
ವೈರಿಗೂ ಇಂತಹ ಶಿಕ್ಷೆ
ಸಿಗದಿರಲಿ ಪ್ರೀತಿಯ
ದೇವರು ಸಿಗುವರವರಿಗೆ
ದೇವರನ್ನು ಹುಡುಕುವವರಿಗೆ
ಕೇವಲ ಒಂದೇ ಒಂದು ನೋಟ
ನನ್ನ ಪ್ರೇಯಸಿಯ ಸಿಗಲಿ ನನಗೆ!!
ಈ ಜಗವೆಲ್ಲ.......

!!ಏಕಾಂತದಲಿ ಬಂದೂ
ನನಗೆ ಆಸರೆ ಸಿಗಲಿಲ್ಲ
ವೇದನೆಯನ್ನು ಮರೆಯಲು
ನನಗ್ಯಾವುದೇ ನೆಪ ಸಿಗಲಿಲ್ಲ
ಹೃದಯ ಬಯಸುವಾಗ ಪ್ರೀತಿಯನ್ನು
ಏನಂಥ ತಿಳಿಯಲಿ ಆ ಜಗತ್ತನ್ನು
ಗೆದ್ದ ಬಾಜಿಯನ್ನೂ ಸೋತು
ನಾನು ಹುಡುಕುತ್ತಿರುವೆ ಅಗಲಿದ ಪ್ರೀತಿಯನ್ನು!!
ಈ ಜಗವೆಲ್ಲ.......

!!ದೂರದಲ್ಲಿ ಕಣ್ಣಿಂದ ಕಣ್ಣೀರು
ಸುರಿಸುತ್ತಿದ್ದಾರೆ ಯಾರೋ
ಹೇಗೆ ತಿಳಿಯದಿರುವುದು ನಾನು
ನನ್ನನ್ನು ಕರೆಯುವಾಗ ಯಾರೋ
ಒಂದೇ ಮುರಿದ ಹೃದಯ ಜೋಡಿಸು
ಇಲ್ಲವಾದರೆ ಎಲ್ಲಾ ಬಂಧನಗಳನ್ನು ಮುರಿದು ಬಿಡು
ಹೇ ಪರ್ವತ ಹಾದಿ ನೀಡು ನನಗೆ
ಹೇ ಮುಳ್ಳುಗಳೇ ಬಿಟ್ಟು ಬಿಡಿ ನನ್ನ ಕಾಲನ್ನು!!
ಈ ಜಗವೆಲ್ಲ.......

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಹೀರ್ ರಾಂಜಾ
Ye duniyaa ye mahafil
mere kaam kii nahiin (2)

Kisako sunaauu.n haal-e-dil beqaraar kaa
bujhataa huaa charaag huu.n apane mazaar kaa
ai kaash bhuul jaauu.n magar bhuulataa nahii.n
kis dhuum se uthaa thaa janaazaa bahaar kaa
ye duniyaa...

Apanaa pataa mile na khabar yaar kii mile
dushman ko bhii naa aisii sazaa pyaar kii mile
unako khudaa mile hai khudaa kii jinhe talaash
mujhako bas ik jhalak mere diladaar kii mile
ye duniyaa...

Saharaa me.n aake bhii mujhako thikaanaa na milaa
gam ko bhuulaane kaa koii bahaanaa na milaa
dil tarase jis me.n pyaar ko kyaa samajhuu.n us sa.nsaar ko
ik jiitii baazii haarake mai.n dhuu.ndhuu.n bichha.de yaar ko
ye duniyaa...

Duur nigaaho.n se aa.nsuu bahaataa hai koii
kaise na jaauu.n mai.n mujhako bulaataa hai koii
yaa tuute dil ko jo.d do yaa saare ba.ndhan to.d do
ai parbat rastaa de mujhe ai kaa.nto.n daaman chho.d do
ye duniyaa.
http://www.youtube.com/watch?v=kHFyfcaBZqU

2 comments:

  1. ನಮಸ್ತೆ ಸರ್....ಬಹಳ ಹಳೆಯ ಬ್ಲಾಗೆಂದು ತೋರುತ್ತದೆ...ನಾನು ಇದೇ ಮೊದಲ ಸಲ ಬರುತ್ತಿರುವುದು....


    ಅಹ್ ಸರ್ ಮೂಲಗೀತೆಯನ್ನು ಕೇಳಿಲ್ಲ..ಆದರೆ ಈ ಗೀತೆಯ ಭಾವ ಇಷ್ಟವಾಯ್ತು..
    "ವೇದನೆಯನ್ನು ಮರೆಯಲು ನನಗ್ಯಾವುದೇ ನೆಪ ಸಿಗಲಿಲ್ಲ" ಎನ್ನುವ ಸಾಲುಗಳು ಹಿಡಿಸಿದವು

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...